ಮಂಡ್ಯ

ಬೇಬಿ ಸರ್ಕಾರಿ ಫ್ರೌಡಶಾಲೆ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ
ಮಂಡ್ಯ

ಬೇಬಿ ಸರ್ಕಾರಿ ಫ್ರೌಡಶಾಲೆ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ

June 1, 2018

ಚಿನಕುರಳಿ: ಇಲ್ಲಿನ ಬೇಬಿ ಗ್ರಾಮದ ಸರ್ಕಾರಿ ಫ್ರೌಡಶಾಲೆ ಮುಖ್ಯ ಶಿಕ್ಷಕ ಕೃಷ್ಣಶೆಟ್ರು (ಕೆ.ಎಸ್) ಅವರು ಗುರುವಾರ ನಿವೃತ್ತರಾದರು. ಈ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ವೃಂದದ ವತಿಯಿಂದ ಮುಖ್ಯ ಶಿಕ್ಷಕ ಕೃಷ್ಣಶೆಟ್ಟರನ್ನು ಸನ್ಮಾನಿಸಿ, ಅವರ ಮುಂದಿನ ಜೀವನ ಸುಖಕರವಾಗಿರಲೀ ಎಂದು ಹಾರೈಸಿ ಬೀಳ್ಕೊಡಲಾಯಿತು. ಈ ವೇಳೆ ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಮು, ತಾಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಡಿ.ತಿಮ್ಮೇಗೌಡ, ಕೆ.ಆರ್.ಪೇಟೆ ತಾಲೂಕು ವೃತ್ತಿ ಶಿಕ್ಷಣ ನೌಕರರ ಸಂಘದ…

ಸೊಸೆ ಕಿರುಕುಳಕ್ಕೆ ಬೇಸತ್ತ ಮಾವ ಆತ್ಮಹತ್ಯೆ
ಮಂಡ್ಯ

ಸೊಸೆ ಕಿರುಕುಳಕ್ಕೆ ಬೇಸತ್ತ ಮಾವ ಆತ್ಮಹತ್ಯೆ

June 1, 2018

ಮಂಡ್ಯ: ಸೊಸೆಯ ಕಿರುಕುಳದಿಂದ ಮಾನಸಿಕವಾಗಿ ನೊಂದ ಮಾವ ರಸ್ತೆ ಮೇಲೆ ಬರೆದಿಟ್ಟು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಿರಗಸೂರು ಗ್ರಾಮದಲ್ಲಿ ನಡೆದಿದೆ. ಮಳವಳ್ಳಿ ತಾಲೂಕಿನ ಕಿರಗಸೂರು ಗ್ರಾಮದ ಮರಿಸ್ವಾಮಿ (60) ಮೃತಪಟ್ಟ ದುರ್ದೈವಿ. ಮರಿಸ್ವಾಮಿ ಅವರು 4 ವರ್ಷಗಳ ಹಿಂದೆ ತನ್ನ ಮಗ ಶಿವರಾಜು ಅವರಿಗೆ ಬೆಂಗಳೂರು ಮೂಲದ ಹೇಮಾ ಜೊತೆ ವಿವಾಹ ಮಾಡಿಸಿದ್ದರು. ಆದರೆ ಸೊಸೆ ಮಗನೊಂದಿಗೆ ಒಂದು ತಿಂಗಳು ಕೂಡ ಸಂಸಾರ ಮಾಡದೇ ಜಗಳ ವಾಡಿಕೊಂಡು ತವರು ಮನೆ ಸೇರಿದ್ದಳು. 4…

ಹೆದ್ದಾರಿಯಲ್ಲಿ ಸರಣ ಅಪಘಾತ
ಮಂಡ್ಯ

ಹೆದ್ದಾರಿಯಲ್ಲಿ ಸರಣ ಅಪಘಾತ

June 1, 2018

ಮಂಡ್ಯ:  ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿಂದು ಸರಣ ಅಪ ಘಾತ ಸಂಭವಿಸಿದ್ದು, ಯಾವುದೇ ಗಂಭೀರ ಸಾವು ನೋವು ಸಂಭವಿಸದೇ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿರುವ ಘಟನೆ ಶ್ರೀರಂಗ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಶೆಟ್ಟಹಳ್ಳಿ ಬಳಿ ಗುರುವಾರ ನಡೆದಿದೆ. ಕೆ.ಶೆಟ್ಟಹಳ್ಳಿ ಬಳಿಯ ಹೆದ್ದಾರಿಯಲ್ಲಿ ಮೈಸೂರು ಕಡೆ ಚಲಿಸುತ್ತಿದ್ದ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಟ್ಯಾಂಕರ್, ಟಿಪ್ಪರ್, ಆಪೇ ಆಟೋ, ಕಾರು ಸೇರಿ ದಂತೆ ಹಲವು ವಾಹನಗಳು ಜಖಂ ಆಗಿವೆ. ಇನ್ನು ಕಾರಿನ ಮೇಲೆ ಮರಳು ತುಂಬಿದ ಟಿಪ್ಪರ್ ಲಾರಿ…

ಮನೆಗೋಡೆ ಕುಸಿದು ಮಹಿಳೆ ಸಾವು
ಮಂಡ್ಯ

ಮನೆಗೋಡೆ ಕುಸಿದು ಮಹಿಳೆ ಸಾವು

May 31, 2018

ಮಂಡ್ಯ:  ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಮೃತಪಟ್ಟು, ಆಕೆಯ ಪತಿ ತೀವ್ರ ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬೋರೆ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಮ್ಮ (55) ಮೃತ ಮಹಿಳೆ. ಈಕೆಯ ಪತಿ ಅಂಗವಿಕಲ ಸೋಮಾಚಾರಿ ತೀವ್ರ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ತಾಲೂಕಿನಲ್ಲಿ ಸುರಿಯು ತ್ತಿರುವ ಮಳೆಯಿಂದ ಮನೆಯ ಗೋಡೆಗಳು ಶೀತ ಹಿಡಿದು ಹಸಿಯಾಗಿದ್ದವು. ಸೋಮವಾರ ರಾತ್ರಿ 10.45ರಲ್ಲಿ ಒಂದು ಬದಿಯ ಗೋಡೆ ಜಂತಿ ಸಮೇತ…

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಸೂಚನೆ ತಪ್ಪಿದ್ದಲ್ಲಿ ದಾಸ್ತಾನು ಸಕ್ಕರೆ ವಶಕ್ಕೆ: ಡಿಸಿ ಎಚ್ಚರಿಕೆ
ಮಂಡ್ಯ

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಸೂಚನೆ ತಪ್ಪಿದ್ದಲ್ಲಿ ದಾಸ್ತಾನು ಸಕ್ಕರೆ ವಶಕ್ಕೆ: ಡಿಸಿ ಎಚ್ಚರಿಕೆ

May 31, 2018

ಮಂಡ್ಯ: ಸಕ್ಕರೆ ಕಾರ್ಖಾನೆ ಗಳಿಗೆ ಕಬ್ಬು ಪೂರೈಕೆ ಮಾಡಿರುವ ರೈತರಿಗೆ ಪಾವತಿಸಬೇಕಾದ ಬಾಕಿ ಹಣವನ್ನು ಜೂ.5 ರೊಳಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ತಪ್ಪದೇ ಪಾವತಿಸಬೇಕು. ಇಲ್ಲದಿದ್ದಲ್ಲಿ ಕಾರ್ಖಾನೆಗಳಲ್ಲಿ ಸಂಗ್ರಹ ವಾಗಿರುವ ಸಕ್ಕರೆಯನ್ನು ವಶಪಡಿಸಿ ಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಪತ್ರಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಸಾಕಷ್ಟು ಬಾರಿ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ತಿಳಿಸ…

ಬ್ಯಾಂಕ್ ನೌಕರರ ಮುಷ್ಕರ: ಗ್ರಾಹಕರ ಪರದಾಟ
ಮಂಡ್ಯ

ಬ್ಯಾಂಕ್ ನೌಕರರ ಮುಷ್ಕರ: ಗ್ರಾಹಕರ ಪರದಾಟ

May 31, 2018

ಮಂಡ್ಯ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸು ವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಇಂದು ಕರೆ ನೀಡಿದ್ದ ಅಖಿಲ ಭಾರತ ಬ್ಯಾಂಕ್ ಬಂದ್ ಯಶಸ್ವಿಯಾಗಿದ್ದು, ಗ್ರಾಹಕರು ಪರದಾಡುವಂತಾಯಿತು. ಅಖಿಲ ಭಾರತ ಬ್ಯಾಂಕ್ ಯೂನಿಯನ್ ನೀಡಿದ್ದ ಇಂದಿನ ಬಂದ್ ಕರೆಗೆ ಜಿಲ್ಲೆ ಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬ್ಯಾಂಕುಗಳ ವಹಿವಾಟು ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಆಂಧ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್, ಕೋಟೆಕ್ ಮಹಿಂದ್ರ…

ವಿಷವಿಕ್ಕಿ ಜೋಡೆತ್ತುಗಳ ಹತ್ಯೆ
ಮಂಡ್ಯ

ವಿಷವಿಕ್ಕಿ ಜೋಡೆತ್ತುಗಳ ಹತ್ಯೆ

May 31, 2018

ಮಂಡ್ಯ:  ದುಷ್ಕರ್ಮಿಗಳು ಲಕ್ಷಾಂತರ ರೂ. ಬೆಲೆಬಾಳುವ ಜೋಡಿ ಎತ್ತುಗಳಿಗೆ ವಿಷ ಉಣ ಸಿ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹಂಪಾಪುರದ ಬಳಿಯ ನೀಲಗಿರಿ ತೋಪಿನಲ್ಲಿ ನಡೆದಿದೆ. ಮೃತ ಎತ್ತುಗಳು ಯಾರಿಗೆ ಸೇರಿದ್ದಾಗಿವೆ. ಎಲ್ಲಿಂದ ತಂದು ಈ ಜೋಡೆತ್ತುಗಳನ್ನು ಇಲ್ಲಿ ಕೊಲ್ಲಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಜೋಡಿ ಎತ್ತುಗಳನ್ನು ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಬಳಸುತ್ತಿದ್ದು, ಉತ್ತರ ಕರ್ನಾಟಕದ ಕಡೆಯವರು ಈ ದುಷ್ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬೆಳಗ್ಗೆ ಹಂಪಾಪುರ…

ಬೈಕ್‍ನಿಂದ ಬಿದ್ದು ಸವಾರ ಸಾವು
ಮಂಡ್ಯ

ಬೈಕ್‍ನಿಂದ ಬಿದ್ದು ಸವಾರ ಸಾವು

May 31, 2018

ಮಂಡ್ಯ: ಬೈಕ್‍ನಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದೇಗೌಡ ಎಂಬುವರ ಪುತ್ರ ಶಿವರಾಮು(35) ಮೃತಪಟ್ಟ ವರು. ಮಂಗಳವಾರ ರಾತ್ರಿ 8 ಗಂಟೆಯಲ್ಲಿ ಶಿವರಾಮು ಅವರು ತಮ್ಮ ಬೈಕ್‍ನಲ್ಲಿ ಆಲದಹಳ್ಳಿ ಗ್ರಾಮ ದಿಂದ ಹಿಟ್ಟನಹಳ್ಳಿಕೊಪ್ಪಲು ಗ್ರಾಮಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಮಾರ್ಗ ಮಧ್ಯೆ ಬೈಕ್‍ನಿಂದ ಆಯತಪ್ಪಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿ ದ್ದಾನೆ ಎನ್ನಲಾಗಿದೆ. ಈ ಸಂಬಂಧ ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ.

ಸಾಧನೆಗೆ ಅಡ್ಡಿಯಾಗದ ಅಂಗವಿಕಲತೆ
ಮಂಡ್ಯ

ಸಾಧನೆಗೆ ಅಡ್ಡಿಯಾಗದ ಅಂಗವಿಕಲತೆ

May 30, 2018

ಭಾರತೀನಗರ:  ಸಾಧನೆ ಎಂಬುದು ಉಳ್ಳವರ ಸ್ವತ್ತಲ್ಲ. ಅದು ಸಾಧಕನ ಸ್ವತ್ತು ಎಂಬ ನಾಣ್ನುಡಿಯಂತೆ ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗ್ರಾಮದ ಯುವಕ ಬಿ.ಬೋರೇಗೌಡ ಅವರು ಸಾಧನೆಯ ಶಿಖರವೇರಿ ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹೌದು ಬೋರೇಗೌಡ ಅವರು 4 ವರ್ಷ ದವರಾಗಿದ್ದಾಗಲೇ ಪೊಲೀಯೊ ಪೀಡಿತ ರಾಗಿ ಬಲಗಾಲಿನ ಸ್ವಾಧೀನ ಕಳೆದುಕೊಂಡರು. ಕ್ರೀಡೆಯಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡ ಅವರು ಇತ್ತೀಚೆಗೆ ಥೈಲ್ಯಾಂಡ್‍ನ ಬ್ಯಾಂಕಾಕ್ ನಲ್ಲಿ ನಡೆದ ಏಷಿಯನ್ ಟ್ಯ್ರಾಂಕ್ ಅಂಡ್ ಟರ್ಫ್ ಫೆಡರೇಷನ್(ಎಟಿಟಿಎಫ್) ಇಂಟರ್ ನ್ಯಾಷನಲ್ ಫ್ಯಾರ ಅಥ್ಲೆಟಿಕ್ಸ್ ಚಾಂಪಿಯನ್…

ಹಳ್ಳಕ್ಕೆ ಉರುಳಿದ ಟ್ರಾಕ್ಟರ್: ಮೂವರ ಸಾವು
ಮಂಡ್ಯ

ಹಳ್ಳಕ್ಕೆ ಉರುಳಿದ ಟ್ರಾಕ್ಟರ್: ಮೂವರ ಸಾವು

May 30, 2018

ಮಂಡ್ಯ: ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಶ್ರೀರಂಗ ಪಟ್ಟಣ ತಾಲೂಕಿನ ನೇರಳೆಕೆರೆ ಗ್ರಾಮದ ಬಳಿ ಇಂದು ನಡೆದಿದೆ.ಟ್ರಾಕ್ಟರ್ ಚಾಲಕ ಪ್ರಸನ್ನ, ದೊಡ್ಡಪಾಳ್ಯ ಗ್ರಾಮದ ನಾಥೇಗೌಡರ ಮಗ ಪ್ರವೀಣ್(32) ಮತ್ತು ಹಂಗರಹಳ್ಳಿ ಗ್ರಾಮದ ಮಟ್ಟಿಗೌಡರ ಪುತ್ರ ನಿಖಿಲ್(34) ಮೃತ ದುರ್ದೈವಿಗಳು. ಘಟನೆ ಹಿನ್ನೆಲೆ: ಇಂದು ಮಧ್ಯಾಹ್ನ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಕ್ವಾರಿಯಿಂದ ಯಾಚೇನಹಳ್ಳಿ ಗ್ರಾಮಕ್ಕೆ ಕಲ್ಲುಗಳನ್ನು ತುಂಬಿಕೊಂಡು ಟ್ರಾಕ್ಟರ್ (ಕೆಎ 11, ಟಿ…

1 103 104 105 106 107 108
Translate »