ಹೆದ್ದಾರಿಯಲ್ಲಿ ಸರಣ ಅಪಘಾತ
ಮಂಡ್ಯ

ಹೆದ್ದಾರಿಯಲ್ಲಿ ಸರಣ ಅಪಘಾತ

June 1, 2018

ಮಂಡ್ಯ:  ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿಂದು ಸರಣ ಅಪ ಘಾತ ಸಂಭವಿಸಿದ್ದು, ಯಾವುದೇ ಗಂಭೀರ ಸಾವು ನೋವು ಸಂಭವಿಸದೇ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿರುವ ಘಟನೆ ಶ್ರೀರಂಗ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಶೆಟ್ಟಹಳ್ಳಿ ಬಳಿ ಗುರುವಾರ ನಡೆದಿದೆ.

ಕೆ.ಶೆಟ್ಟಹಳ್ಳಿ ಬಳಿಯ ಹೆದ್ದಾರಿಯಲ್ಲಿ ಮೈಸೂರು ಕಡೆ ಚಲಿಸುತ್ತಿದ್ದ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಟ್ಯಾಂಕರ್, ಟಿಪ್ಪರ್, ಆಪೇ ಆಟೋ, ಕಾರು ಸೇರಿ ದಂತೆ ಹಲವು ವಾಹನಗಳು ಜಖಂ ಆಗಿವೆ. ಇನ್ನು ಕಾರಿನ ಮೇಲೆ ಮರಳು ತುಂಬಿದ ಟಿಪ್ಪರ್ ಲಾರಿ ಮಗುಚಿ ಬಿದ್ದಿದ್ದು, ಕಾರಿನಲ್ಲಿದ್ದವರು ಪವಾಡ ಸದೃಶ್ಯದಂತೆ ಪಾರಾಗಿದ್ದಾರೆ.
ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಈ ಭೀಕರ ಘಟನೆಯಿಂದಾಗಿ ಮೈಸೂರು ಕಡೆಗೆ ತೆರಳುವವರಿಗೆ ಸಂಚಾರದಲ್ಲಿ ಕೆಲಕಾಲ ಅಸ್ತವ್ಯಸ್ಥವಾಗಿತ್ತು. ಬಳಿಕ ಪೊಲೀಸ್ ಆಗ ಮನದ ಮೂಲಕ ಪರ್ಯಾಯ ರಸ್ತೆ ಮಾರ್ಗ ಕಲ್ಪಿಸಲಾಗಿದ್ದು, ಪೊಲೀಸರು ಪ್ರಯಾಣ ಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »