ಚಿನಕುರುಳಿ: ‘ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ, ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ…’ ಗಜಮುಖ, ಗಣನಾಯಕ, ಗಣಾಧಿಪತಿ, ವಿನಾಯಕ, ವಿಘ್ನೇಶ, ವಿಘ್ನ ನಿವಾರಕ, ಲಂಬೋದರ, ಮೂಷಿಕ ವಾಹನ, ವಕ್ರತುಂಡ, ಉಮಾಸುತ, ಏಕ ದಂತ, ಮೋದಕಪ್ರಿಯ, ಚಂದ್ರಶೇಖರ ತನಯ, ಪ್ರಥಮ ಪೂಜಿತ, ಸಿದ್ಧಿವಿನಾಯಕ, ಬುದ್ಧಿ ಪ್ರದಾಯಕ, ವಿದ್ಯಾಧಿಪತಿ, ಚಾಮರಕರ್ಣ, ಬೆನಕ, ಗಣಪ, ಕರಿ ಮುಖ, ಮೂಷಿಕಧ್ವಜ, ಪಾಶಾಂಕುಶ ಧರ, ಪ್ರಜಾಪತಿ, ವಿಘ್ನವಿನಾಶಕ, ವಿಘ್ನಹರ, ವಿಘ್ನರಾಜ, ಮೋದಕೇಶ್ವರ… ಎಂತೆಲ್ಲ ಕರೆಯಲ್ಪಡುವ ಶಿವ-ಪಾರ್ವತಿಯರ ಪುತ್ರನಾದ ಗಣಪತಿ ಯು ಮಕ್ಕಳಿಂದ ಹಿಡಿದು…
ಭಾರತ್ ಬಂದ್ಗೆ ಸಂಘಟನೆಗಳ ಬೆಂಬಲ
September 10, 2018ಮಂಡ್ಯ: ತೈಲಬೆಲೆ ಹೆಚ್ಚಳ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ಕರೆ ನೀಡಲಾಗಿರುವ ಭಾರತ್ ಬಂದ್ಗೆ ಮಂಡ್ಯದಲ್ಲಿ ಕಾಂಗ್ರೆಸ್, ಜೆಡಿಎಸ್, ಕೆಎಸ್ಆರ್ಟಿಸಿ, ಖಾಸಗಿ ಬಸ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದರೆ, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಬಸ್ ಸಂಚಾರ…
ಉದ್ಯೋಗಖಾತ್ರಿ ಯೋಜನೆಯಡಿ ನರಸಿಂಹ ತೀರ್ಥ ಸ್ವಚ್ಛ
September 10, 2018ಮೇಲುಕೋಟೆ: ಉದ್ಯೋಗ ಖಾತ್ರಿ ಯೋಜನೆಯಡಿ ಚೆಲುವನಾರಾಯಣಸ್ವಾಮಿ ಅಷ್ಠತೀರ್ಥಗಳಲ್ಲೊಂದಾದ ನರಸಿಂಹ ತೀರ್ಥವನ್ನು ಸ್ವಚ್ಛಗೊಳಿಸಿರುವ ಮೇಲುಕೋಟೆ ಗ್ರಾಪಂ ಕಾರ್ಯವನ್ನು ಜಿಪಂ ಸಿಇಓ ಯಾಲಕ್ಕಿಗೌಡ ಶ್ಲಾಘಿಸಿದರು. ಇಲ್ಲಿನ ಸರ್ಕಾರಿ ಬಾಲಕರ ಶಾಲೆಯ ಹಿಂಭಾಗದಲ್ಲಿರುವ ನರಸಿಂಹತೀರ್ಥ ಕೊಳ ಹಾಗೂ ನವೀಕರಣಗೊಳ್ಳುತ್ತಿರುವ ಇನ್ನಿತರ ಕೊಳಗಳನ್ನು ಪರಿಶೀಲಿಸಿ ಮಾತ ನಾಡಿದ ಜಿಪಂ ಸಿಇಓ ಯಾಲಕ್ಕಿಗೌಡ, ಕ್ಷೇತ್ರದ ಪುರಾತನ ಕೊಳಗಳನ್ನು ಉಳಿಸಿ ಕೊಳ್ಳಲು ಗ್ರಾಪಂ ಕೈಗೊಳ್ಳುವ ಎಲ್ಲಾ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿ ಸಹಕಾರ ನೀಡುವ ಭರವಸೆ ನೀಡಿದರು. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ನಿರ್ದೇಶಕ ಕೆಂಪೇಗೌಡ ಮಾತ…
ಶ್ರೀಮುತ್ತುರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
September 10, 2018ಕೆ.ಆರ್.ಪೇಟೆ: ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ ಶ್ರೀಮುತ್ತುರಾಯ ಸ್ವಾಮಿ ದೇವಾಲಯದಲ್ಲಿ ಕಡೇ ಶ್ರಾವಣ ಶನಿವಾರದ ಪ್ರಯುಕ್ತ ದೇವರಿಗೆ ಅಭಿಷೇಕ, ಪುಷ್ಪಾಲಂಕಾರ, ಅರ್ಚನೆ, ವಿಶೇಷ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಪ್ರಧಾನ ಅರ್ಚಕ ಮುತ್ತುರಾಜ್ ಪಟ್ಟಣದ ವಿವಿಧ ಬಡಾವಣೆಯಲ್ಲಿ ಜೋಳಿಗೆ ಹಿಡಿದು ಧವನ ಧಾನ್ಯ ಸಂಗ್ರಹಿಸಿ ಅದ ರಿಂದ ಪ್ರಸಾದ ತಯಾರಿಸಿ ಮುತ್ತುರಾಯ ಸ್ವಾಮಿಗೆ ನೈವೇದ್ಯ ಮಾಡಿದ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ಪಟ್ಟಣದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಸರದಿ ಸಾಲಿನಲ್ಲಿ…
ಮನ್ಮುಲ್ನಿಂದ ಸಿಗುವ ಸೌಲಭ್ಯ ಸದ್ಬಳಕೆಗೆ ಕರೆ
September 10, 2018ಭಾರತೀನಗರ: ಮನ್ಮುಲ್ ನಿಂದ ಸಿಗುವ ಸೌಲಭ್ಯಗಳನ್ನು ರೈತರು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳ ಬೇಕೆಂದು ಮನ್ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ ತಿಳಿಸಿದರು. ಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಕೃಷಿ ಪ್ರಧಾನ ಜಿಲ್ಲೆ ಯಾಗಿದ್ದರೂ, ಕಳೆದ 15 ವರ್ಷಗಳಿಂದ ಸತತ ಬರಗಾಲ ಎದುರಿಸುತ್ತಿದ್ದೇವೆ. ರೈತರು ಅಲ್ಪಮಟ್ಟಿಗೆ ನೆಮ್ಮದಿಯಿಂದ ಇದ್ದಾರೆ ಎಂದರೆ ಅದು ಪಶುಸಂಗೋಪನೆಯಿಂದ ಮಾತ್ರ ಎಂದರು. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹಾಲಿನ ಉತ್ಪಾದನೆ ಹೆಚ್ಚಾಗುತ್ತಿದ್ದು, ಇದರಿಂದ ರೈತರಿಗೂ…
ಚಿನಕುರಳಿ ಡೈರಿಯಲ್ಲಿ ಬಿಎಂಸಿ ಘಟಕಕ್ಕೆ ಶಂಕುಸ್ಥಾಪನೆ
September 10, 2018ಚಿನಕುರಳಿ: ಚಿನಕುರಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರದ ಸಂಘ ದಲ್ಲಿ 35 ಲಕ್ಷ ರೂ. ವೆಚ್ಚದ ಬಿಎಂಸಿ ಘಟಕ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಶಿಕ್ಷಣ ಸಚಿವ ಎನ್.ಮಹೇಶ್ ಶಂಕುಸ್ಥಾಪನೆ ನೆರವೇರಿಸಿದರು. ಸಚಿವ ಸಿ.ಎಸ್.ಪುಟ್ಟರಾಜು ಮಾತ ನಾಡಿ, ಹೈನುಗಾರಿಕೆ ಇಡೀ ರಾಜ್ಯದಲ್ಲೇ ಕ್ರಾಂತಿ ಮೂಡಿಸಿದೆ. ಅದೇ ರೀತಿ ಮಂಡ್ಯ ಹಾಲು ಒಕ್ಕೂಟವೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಗ್ರಾಮದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಬಿಎಂಸಿ ಘಟಕವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಚಿನಕುರಳಿ ಡೈರಿಯನ್ನು ಮಾದರಿ ಡೈರಿಯನ್ನಾಗಿ…
ಕೇಂದ್ರಿಯ ಮಾದರಿ 176 ಪಬ್ಲಿಕ್ ಸ್ಕೂಲ್ ಆರಂಭ
September 9, 2018ಚಿನಕುರಳಿ: ಕೇಂದ್ರಿಯ ವಿದ್ಯಾಲಯದ ಮಾದರಿ ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲಿ 176 ಕರ್ನಾಟಕ ಪಬ್ಲಿಕ್ ಸ್ಕೂಲ್ಗಳನ್ನು ಆರಂಭಿಸುತ್ತಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು. ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೆಚ್ಚುವರಿ 5 ಕೊಠಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳು 1ರಿಂದ 12 ತರಗತಿವರೆಗೆ ವ್ಯಾಸಂಗ ಮಾಡಲಿದ್ದಾರೆ. 176 ಶಾಲೆಗಳನ್ನು…
ಕಡೇ ಶ್ರಾವಣ ಶನಿವಾರ: ಮಂಡ್ಯ ಜಿಲ್ಲಾದ್ಯಂತ ವಿಶೇಷ ಪೂಜೆ
September 9, 2018ಮಂಡ್ಯ: ಕಡೇ ಶ್ರಾವಣ ಶನಿವಾರದ ಪ್ರಯುಕ್ತ ಜಿಲ್ಲಾದ್ಯಂತ ಶನಿ ದೇವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಮಂಡ್ಯ, ಮದ್ದೂರು, ನಾಗಮಂಗಲ, ಪಾಂಡವಪುರ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಮಳವಳ್ಳಿ ಸೇರಿದಂತೆ ವಿವಿಧೆಡೆ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರು ಭಕ್ತಿಭಾವ ಮೆರೆದ ಬಗ್ಗೆ ವರದಿಯಾಗಿದೆ. ಮಂಡ್ಯ: ಮಂಡ್ಯದ ಬನ್ನೂರು ರಸ್ತೆಯ ಶನೇಶ್ವರ, ಹೊಸಹಳ್ಳಿಯ ಶನೇಶ್ವರ ಸ್ವಾಮಿ, ಪೇಟೆ ಬೀದಿಯ ಲಕ್ಷ್ಮೀನರಸಿಂಹ, ಕಾಳಿಕಾಂಬ, ಮಂಡ್ಯ- ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಾಲಯ, ಸಾತನೂರಿನ ಕಂಬದ…
ಕವಿಯಾದವನಿಗೆ ನಾಡಿನ ಪರಂಪರೆಯ ಅರಿವಿರಲಿ
September 9, 2018ಪಾಂಡವಪುರ: ಕವಿಯಾದವನಿಗೆ ನಾಡಿನ ಪರಂಪರೆಯ ಅರಿವು ಇರಬೇಕು. ಆದರೆ ಇಂದಿನ ಕವಿಗಳ ಕಾವ್ಯಗಳನ್ನು ಗಮನಿಸಿದರೆ ಪರಂಪರೆ ಕೊರತೆ ಎದ್ದು ಕಾಣಿಸುತ್ತದೆ ಎಂದು ಮೈಸೂರು ಮಹಾ ಜನ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಎಚ್.ಆರ್.ತಿಮ್ಮೇಗೌಡ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಸಾಪ ಆಯೋ ಜಿಸಿದ್ದ ಯುವ ಕವಿಗೋಷ್ಠಿ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಂಪರೆ ಕವಿಗಳ ಮೇಲೆ ಪ್ರತ್ಯಕ್ಷ, ಪರೋಕ್ಷವಾಗಿ ಪ್ರಭಾವ ಬೀರುತ್ತವೆ. ಆದರೆ ಪರಂಪರೆ ಗೊತ್ತಿಲ್ಲದವನು ಕವಿಯಾಗಲಾರ…
ದೇಶದ ಅಭಿವೃದ್ಧಿಗೆ ಶಿಕ್ಷಕರೇ ಜೀವಾಳ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅಭಿಮತ
September 6, 2018ಮಂಡ್ಯ: ‘ದೇಶ ಅಭಿವೃದ್ಧಿ ಹೊಂದ ಬೇಕಾದರೆ ಅದಕ್ಕೆ ಶಿಕ್ಷಕರೇ ಜೀವಾಳ. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿ ಕೊಡುವಲ್ಲಿ ಗುರುವಿನ ಪಾತ್ರ ಅಪಾರವಾದದ್ದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಉಪರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 130ನೇ ಜನ್ಮದಿನವನ್ನು ಇಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ದೇವರ ರೂಪದ ಮಕ್ಕಳನ್ನು ರಾಷ್ಟ್ರದ ಸತ್ಪ್ರಜೆಯನ್ನಾಗಿಸುವ ನಿಟ್ಟಿನಲ್ಲಿ…