ಮಂಡ್ಯ: ಒಂದಾನೊಂದು ಕಾಲದಲ್ಲಿ ಮಂಡ್ಯ ಜನರ ಎಲ್ಲಾ ರೀತಿಯ ವ್ಯವಹಾರಿಕ ಕೇಂದ್ರವಾಗಿದ್ದ ನಗರದ ಹಳೇ ತಾಲೂಕು ಕಚೇರಿ ಆವರಣ ಈಗ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮಂಡ್ಯ ನಗರದ ಹೃದಯ ಭಾಗದಲ್ಲಿ ರುವ ಈ ಜಾಗ ಈಗ ಪಾಳು ಬಿದ್ದ ಜಾಗವನ್ನೂ ನಾಚಿಸುವಂತಿದೆ. 1983ರ ಬಳಿಕ ತಾಲೂಕು ಆಡಳಿತದ ಎಲ್ಲ ವ್ಯವಹಾರಗಳು ಜಿಲ್ಲಾಧಿಕಾರಿ ಕಚೇರಿ ಸಮೀಪದ ಕಟ್ಟಡಗಳಿಗೆ ವರ್ಗಾವಣೆಯಾದ ನಂತರ ಈ ಜಾಗವೀಗ ಅನಾಥವಾಗಿ ಬಿದ್ದಿದ್ದು, ಅಕ್ರಮ ಚಟುವಟಿಕೆಯ ಆಶ್ರಯ ತಾಣವಾಗಿದೆ. ಅನೈರ್ಮಲ್ಯ ಮಲಮೂತ್ರ ವಿಸರ್ಜನೆಯ…
ಕಾಂಗ್ರೆಸ್ನಿಂದ ಹಿಂದುಳಿದವರಿಗೆ ಅನ್ಯಾಯ: ಕೆ.ಪಿ.ನಂಜುಂಡಿ ಆರೋಪ
August 29, 2018ಮಂಡ್ಯ: ಅಹಿಂದ ವರ್ಗವನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಅಧಿಕಾರಕ್ಕೆ ಬರುವ ಕಾಂಗ್ರೆಸ್ ಸರ್ಕಾರ, ಹಿಂದುಳಿದವರಿಗೆ ಹಿಂದಿನಿಂದಲೂ ಭಾರೀ ಅನ್ಯಾಯ ಮಾಡಿಕೊಂಡೆ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಗಂಭೀರ ಆರೋಪ ಮಾಡಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದವರನ್ನು ಕಾಲು ಕಸದಂತೆ ನಡೆಸಿಕೊಂಡಿತು. ಸಿದ್ದ ರಾಮಯ್ಯ ಕಾಯಕ (ವಿಶ್ವಕರ್ಮ) ಸಮಾಜವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದರು ಎಂದು ದೂರಿದರು. ಕಾಂಗ್ರೆಸ್ ಪಕ್ಷವನ್ನು ಮತದಾರರು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು. ಬಿಜೆಪಿಗೆ ಮತ…
ರಾಹುಲ್ ಗಾಂಧಿ ಹುಡುಗಾಟದ ಹುಡುಗ: ಆರ್.ಅಶೋಕ್
August 28, 2018ಮಂಡ್ಯ: ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಕೆಡವಲು ನಾವೇನು ಬೇಕಿಲ್ಲ. ಕಾಂಗ್ರೆಸ್ ನೊಳಗಿನ ಅತೃಪ್ತ ಆತ್ಮಗಳೇ ಸಾಕು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರೋದು ಎಡಬಿಡಂಗಿ ಸರ್ಕಾರ, ಎರಡು ನಾಲಿಗೆ ಸರ್ಕಾರ. ಒಂದು ಕಾಂಗ್ರೆಸ್, ಇನ್ನೊಂದು ಜೆಡಿಎಸ್ ನಾಲಿಗೆ. ಈ ಸರ್ಕಾರ ಗೋಮುಖ ವ್ಯಾಘ್ರವಾಗಿದೆ. ಕಾಂಗ್ರೆಸ್ನ ಇನ್ನೊಂದು ಮುಖ ಪರಿಚಯ ಮಾಡಿಕೊಡುತ್ತಿದೆ ಎಂದು ಲೇವಡಿ ಮಾಡಿದರು. ರಾಜ್ಯ ಸರ್ಕಾರವನ್ನು ಕೆಡವಲು ಕಾಂಗ್ರೆಸ್ನ ಅತೃಪ್ತ…
ಮೇಲುಕೋಟೆಯ ಕಲ್ಯಾಣಿ, ಕೊಳಗಳ ಸಮಗ್ರ ಜೀರ್ಣೋದ್ಧಾರಕ್ಕೆ ಸಚಿವರ ಸೂಚನೆ
August 28, 2018ಮೇಲುಕೋಟೆ: ಮೇಲುಕೋಟೆಯಲ್ಲಿರುವ ಐತಿಹಾಸಿಕ ಕಲ್ಯಾಣಿಗಳು ಮತ್ತು ಕೊಳಗಳನ್ನು ಸಮಗ್ರವಾಗಿ ಜೀರ್ಣೋದ್ಧಾರ ಮಾಡಲು ತಕ್ಷಣ ಮಾಸ್ಟರ್ ಪ್ಲಾನ್ ತಯಾರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಸಣ್ಣ ನೀರಾವರಿ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವಿವಿಧ ಕೆರೆಗಳು, ಪಿಕಪ್ ಡ್ಯಾಂ ನಿರ್ಮಾಣದ ಸ್ಥಳಗಳನ್ನು ಪರಿಶೀಲಿಸಿದ ಸಚಿವರು, ನಂತರ ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದರು. ತಿರುಪತಿ ಮಾದರಿಯಲ್ಲಿ ಕಲ್ಯಾಣಿ ಮತ್ತು ಕೊಳಗಳಲ್ಲಿ ಸಂಗ್ರಹವಾಗುವ ನೀರನ್ನು ಶುದ್ಧೀಕರಣ…
ಗ್ರಾಪಂ ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟಿಸಿದ ಸದಸ್ಯರು
August 28, 2018ಹಿರೇಮರಳಿ ಗ್ರಾಪಂ ಅಧ್ಯಕ್ಷೆ ವಿರುದ್ಧ ಭ್ರಷ್ಟಾಚಾರದ ಆರೋಪ ಪಾಂಡವಪುರ: ಹಿರೇಮರಳಿ ಗ್ರಾಪಂ ಅಧ್ಯಕ್ಷೆ ಹೇಮಾವತಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾನೂನು ಬಾಹಿರವಾಗಿ ವಸತಿ ಯೋಜನೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಹಿರೇಮರಳಿ ಗ್ರಾಪಂನಲ್ಲಿ ಸೋಮವಾರ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಹೇಮಾವತಿ ಅವರು ತಮ್ಮ ಕುಟುಂಬದ ಮೂವರಿಗೆ ವಸತಿ ಯೋಜನೆ ಹಂಚಿಕೆ ಮಾಡಿದ್ದಾರೆ. ಆದರೆ ಅಧ್ಯಕ್ಷೆ ಕುಟುಂಬದ ಮೂವರು ಒಂದೇ ಜಾಗವನ್ನು ತೋರಿಸಿ…
ವಯೋವೃದ್ಧೆ ಕೊಲೆ ಪ್ರಕರಣ: ಆರೋಪಿ ಬಂಧನ
August 28, 2018ಮದ್ದೂರು: ತಾಲೂಕಿನ ನಗರಕೆರೆಯಲ್ಲಿ ನಡೆದ ವಯೋವೃದ್ಧೆ ಬೆಟ್ಟಮ್ಮ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಮದ್ದೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರಕೆರೆ ನಿವಾಸಿ ಎಸ್.ಸಿ.ಅಶ್ವಥ್ ಬಿನ್ ಲೇ.ಚಿಕ್ಕಣ್ಣ ಬಂಧಿತ ಆರೋಪಿ. ಕಳೆದ ಮೇ.14ರಂದು ಮಧ್ಯಾಹ್ನ ಬೆಟ್ಟಮ್ಮ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಅಶ್ವಥ್ ಮನೆಗೆ ನುಗ್ಗಿ ಚಿನ್ನಾಭರಣ ಕದಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ವಿರೋಧ ವ್ಯಕ್ತಪಡಿಸಿದ ಬೆಟ್ಟಮ್ಮಳನ್ನು ಹತ್ಯೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ಕಳವು ಮಾಡಿ, ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಯಾವುದೋ ಎಣ್ಣೆ ಸುರಿದು ಬೆಂಕಿ…
ರಣರಂಗದಲ್ಲಿ ಹಾಲಿ, ಮಾಜಿ ಸದಸ್ಯರ ಜಿದ್ದಾಜಿದ್ದಿ
August 27, 2018ಮಂಡ್ಯ: ಈ ಹಿಂದಿಗಿಂತಲೂ ಈ ಬಾರಿಯ ಲೋಕಲ್ ಎಲೆಕ್ಷನ್ ಫೈಟ್ ಜೋರಾಗಿಯೇ ಇದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್, ಬಿಎಸ್ಪಿ ಸೇರಿದಂತೆ ಇತರೆ ಪ್ರಾದೇಶಿಕ ಪಕ್ಷ ಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹೇಳಿ ಕೇಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿ ರುವ ಮಂಡ್ಯ ನಗರಸಭೆಯಲ್ಲಿ ಈ ಬಾರಿ ಬಿಜೆಪಿಯೂ ಸಹ ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ನೀಡಿದೆ. ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರೂ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು…
ಲೋಕಲ್ ಚುನಾವಣೆ: 3 ಪುರಸಭೆ ಅಂತಿಮ ಕಣದಲ್ಲಿ 235 ಅಭ್ಯರ್ಥಿಗಳು
August 27, 2018ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು, ಪಾಂಡವ ಪುರ, ನಾಗಮಂಗಲ ಸ್ಥಳೀಯ ಸಂಸ್ಥೆ ಚುನಾವಣೆಯ ಅಂತಿಮ ಕಣದಲ್ಲಿ 235 ಅಭ್ಯರ್ಥಿಗಳು ಉಳಿದಿದ್ದಾರೆ. ಮದ್ದೂರು ಪುರಸಭೆಯಲ್ಲಿ 85, ಪಾಂಡವಪುರ ಪುರಸಭೆ ಯಲ್ಲಿ 79, ನಾಗಮಂಗಲ ಪುರಸಭೆಯಲ್ಲಿ 71 ಅಭ್ಯರ್ಥಿ ಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಪಾಂಡವಪುರ ಪುರಸಭೆ: ವಾರ್ಡ್ 1: ಎಂ.ಜಯಲಕ್ಷ್ಮಿ (ಕಾಂ), ಪ್ರಮೀಳ (ಜೆಡಿಎಸ್), ವಾರ್ಡ್ 2: ಚಿಕ್ಕತಮ್ಮೇಗೌಡ ಸಿ (ಜೆಡಿಎಸ್), ಬಾಲಮುರುಗ (ಬಿಜೆಪಿ), ಆರ್.ರಾಜೇಂದ್ರ (ರೈತ ಸಂಘ), ಸಿ.ಜವರೇಗೌಡ, ಸಿದ್ದೇಗೌಡ (ಪಕ್ಷೇತರ), ವಾರ್ಡ್ 3: ನರಸಿಂಹಚಾರಿ (ಬಿಜೆಪಿ), ಪಿ.ಮಂಜುನಾಥ…
ಬೇಸಾಯದ ಜೊತೆಗೆ ಉಪಕಸುಬು ಅಳವಡಿಸಿಕೊಳ್ಳಿ
August 27, 2018ಕೆ.ಆರ್.ಪೇಟೆ: ರೈತ ಬಾಂಧವರು ಬೇಸಾಯದ ಜೊತೆಗೆ ಉಪ ಕಸುಬುಗಳನ್ನು ರೂಢಿಸಿಕೊಳ್ಳುವ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು ಎಂದು ಶಾಸಕ ಡಾ.ಕೆ.ಸಿ.ನಾರಾಯಣಗೌಡ ಸಲಹೆ ನೀಡಿದರು. ತಾಲೂಕಿನ ಹೇಮಗಿರಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಜಮೀನಿನಲ್ಲಿ ಹಮ್ಮಿ ಕೊಂಡಿದ್ದ ಭತ್ತ ನಾಟಿ ಕಾರ್ಯಕ್ರಮದಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ರೈತರು ಹಾಗೂ ನಾಟಿ ಹಾಕುವ ಮಹಿಳೆಯರೊಂದಿಗೆ ಕೆಸರು ಗದ್ದೆಯಲ್ಲಿ ಪಂಚೆ ತೊಟ್ಟು ಸುಮಾರು 1 ಗಂಟೆ ಕಾಲ ಭತ್ತದ ಪೈರುಗಳನ್ನು ನಾಟಿ ಮಾಡಿ ನಂತರ ನೆರೆದಿದ್ದ ರೈತರನ್ನು ಉದ್ದೇಶಿಸಿ ಅವರು…
ಸ್ಥಳೀಯ ಸಂಸ್ಥೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಹತ್ವದ್ದು
August 25, 2018ಮಂಡ್ಯ: ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಹತ್ವದ್ದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಎ.ಸಿ. ಮಾದೇಗೌಡ ಕಲ್ಯಾಣ ಮಂಟಪದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿಗಳ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗದವರಿಗೂ ನ್ಯಾಯ ನೀಡುವ ಮೂಲಕ ಗಮನ ಸೆಳೆದಿತ್ತು. ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿತ್ತು. ಆದರೂ ಸಹ ಚುನಾವಣೆಯಲ್ಲಿ ಸೋಲು ಅನುಭವಿಸ…