ಮಂಡ್ಯ: ಮಂಡ್ಯ ನಗರಸಭೆಯ 35 ವಾರ್ಡ್ಗಳ ಚುನಾವಣೆಗಾಗಿ ಸ್ವೀಕೃತವಾಗಿದ್ದ ಒಟ್ಟು 173 ಕ್ರಮಬದ್ಧ ನಾಮಪತ್ರಗಳ ಪೈಕಿ, 26 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 147 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 1ನೇ ವಾರ್ಡ್- ಎಂ.ಎಂ.ಆದರ್ಶಗೌಡ (ಕಾಂ), ಕೃಷ್ಣ (ಬಿಜೆಪಿ), ಎಂ.ವಿ.ಪ್ರಕಾಶ್ (ಜಾ.ದಳ), 2ನೇ ವಾರ್ಡ್- ಆರ್.ಪಲ್ಲವಿ(ಕಾಂ), ಜೈಮ್ಮಾ (ಬಿಜೆಪಿ), ಕೆ.ಜಿ.ಬಿಂದು (ಜಾ.ದಳ), ಮಂಜುಳ (ಪಕ್ಷೇತರರು), 3ನೇ ವಾರ್ಡ್- ಅಯೂಬ್ (ಬಿಜೆಪಿ), ತೌಸಿಪ್ ಅಹಮದ್ (ಜಾ.ದಳ), ಮಹಮದ್ ಅಪೆÇ್ರೀಜ್, ಜಾಕೀರ್ ಪಾಷಾ, ಶಲ್ಮಾ ಬಾನು, ಸಯ್ಯದ್ ಫೈಗರ್(ಪಕ್ಷೇತರ), 4ನೇ…
ಪುತ್ರನ ಬೀಗರ ಔತಣ ರದ್ದುಪಡಿಸಿ ಕೊಡಗು ಸಂತ್ರಸ್ತರಿಗೆ
August 23, 2018ಮಂಡ್ಯ: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಮ್ಮ ಪುತ್ರನ ಬೀಗರ ಔತಣಕೂಟ ರದ್ದುಪಡಿಸಿದ್ದಾರೆ. ಬುಧವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು. ಭೀಕರ ಮಳೆಯಿಂದಾಗಿ `ಕೊಡವರು’ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ನನ್ನ ಮಗನ ಬೀಗರ ಔತಣ ಕೂಟವನ್ನು ರದ್ದುಪಡಿಸಿದ್ದೇನೆ. ಈ ಔತಣಕ್ಕೆ ಖರ್ಚು ಮಾಡಲು ಉದ್ದೇಶಿಸಲಾಗಿದ್ದ ಸುಮಾರು 10 ಲಕ್ಷ ರೂ. ಗಳನ್ನು ಕೊಡಗು ನೆರೆ ಸಂತ್ರಸ್ತರ ನೆರವಿಗೆ ನೀಡುವುದಾಗಿ ಹೇಳಿ ದರು. ನೆರೆಯಿಂದಾಗಿ ಕೊಡಗು ಜನ…
ಜಿಲ್ಲಾದ್ಯಂತ ಸಂಭ್ರಮ-ಸಡಗರದ ಬಕ್ರೀದ್ ಆಚರಣೆ
August 23, 2018ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ ಪರಸ್ಪರ ಶುಭಾಶಯ ವಿನಿಮಯ ಕೊಡಗು ಸಂತ್ರಸ್ತರಿಗೆ ನೆರವಾಗಲು ಸಲಹೆ ಮಂಡ್ಯ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಬುಧ ವಾರ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು. ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ಸೇರಿದಂತೆ ವಿವಿಧೆಡೆ ಬಕ್ರೀದ್ ಆಚರಿಸಲಾಯಿತು. ಸಕ್ಕರೆ ನಾಡು ಮಂಡ್ಯದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿ ಎಲ್ಲರಿಗೂ ಶುಭ ಕೋರುತ್ತಿದ್ದ ದೃಶ್ಯ ಕಂಡು ಬಂತು. ಬೆಳಗಿನಿಂದಲೇ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಯಲ್ಲಿ…
ಕೊಡಗು ಸಂತ್ರಸ್ತರ ನೆರವಿಗೆ ಮುಂದಾದ ಮಂಡ್ಯ ಜನತೆ
August 23, 2018ಮಂಡ್ಯ: ನೆರೆ ಹಾವಳಿಯಿಂದ ನಲುಗಿರುವ ಕೊಡಗು ಜಿಲ್ಲೆಯ ಜನರ ನೆರವಿಗೆ ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳು, ಸಾರ್ವಜನಿಕರು ಮುಂದಾಗಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ವಸ್ತಗಳು ಹಾಗೂ ನಗದುಗಳನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಬಿಎಲ್ಎಸ್ಇ ಅಂಡ್ ಸಿ ಟ್ರಸ್ಟ್ನಿಂದ ನೆರವು: ಜಿಲ್ಲೆಯ ಬಿಎಲ್ ಎಸ್ಇ ಅಂಡ್ ಸಿ ಟ್ರಸ್ಟ್ ವತಿಯಿಂದ ಕೊಡಗು ಸಂತ್ರಸ್ತರಿಗೆ ಸುಮಾರು 60 ಸಾವಿರ ರೂ. ಮೌಲ್ಯದ ಅಗತ್ಯ ವಸ್ತುಗಳನ್ನು ಖರೀದಿಸಿ ಪ್ರವಾಹ ಪೀಡಿತರಿಗೆ ಕಳುಹಿಸಿಕೊಡಲಾಗಿದೆ. ಟ್ರಸ್ಟ್ನ ಅಧ್ಯಕ್ಷ ಶಿವಲಿಂಗಯ್ಯ ನೇತೃತ್ವದಲ್ಲಿ ಶಾಲಾ-ಕಾಲೇಜು ಶಿಕ್ಷಕರು,…
ಕೌಟುಂಬಿಕ ಕಲಹ: ತಂದೆಯಿಂದಲೇ ಮಗನ ಹತ್ಯೆ
August 23, 2018ಮಂಡ್ಯ: ಕೌಟುಂಬಿಕ ಕಲಹದಿಂದ ತಂದೆಯೇ ಮಗನನ್ನು ಹತ್ಯೆ ಮಾಡಿ ಮನೆ ಮುಂದೆ ಬಿಸಾಡಿದ ಘಟನೆ ತಾಲೂಕಿನ ಕೋಣನಹಳ್ಳಿ ತಿಟ್ಟು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಗ್ರಾಮದ ನಿವಾಸಿ ವಾಸು(26), ತನ್ನ ತಂದೆ ಕೃಷ್ಣಪ್ಪ (56) ಅವರಿಂದ ಹತ್ಯೆಯಾದವನು. ಘಟನೆ ಹಿನ್ನೆಲೆ: ಗ್ರಾಮದಲ್ಲಿ ಕೂಲಿ ಮಾಡಿ ಕೊಂಡು ಜೀವನ ನಿರ್ವಹಿಸುತ್ತಿದ್ದ ಕೃಷ್ಣಪ್ಪನಿಗೆ ಮಗ ವಾಸು ನಿತ್ಯವೂ ಮದ್ಯ ಸೇವನೆ ಮಾಡಿ ಬಂದು ಕಿರುಕುಳ ನೀಡುತ್ತಿದ್ದನಂತೆ. ಎಂದಿನಂತೆಯೇ ಮಂಗಳವಾರ ರಾತ್ರಿಯೂ ವಾಸು ಕುಡಿದು ಬಂದು ತಂದೆಯೊಂದಿಗೆ ಗಲಾಟೆ ಮಾಡಿದ್ದಾನೆ. ಇಬ್ಬರ…
ಬದುಕಿದ್ದಾಗಲೇ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿದ ಉಪ ತಹಸೀಲ್ದಾರ್!
August 23, 2018ಮಂಡ್ಯ: ಬದುಕಿರುವಾಗಲೇ ವ್ಯಕ್ತಿಯೋರ್ವನಿಗೆ ಸಾವ ನ್ನಪ್ಪಿದ್ದಾನೆಂದು ಮರಣ ಪ್ರಮಾಣಪತ್ರ ನೀಡಿರುವ ವಿಚಿತ್ರ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕ ಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ರಾಮೇಗೌಡ ಎಂಬ ವ್ಯಕ್ತಿಗೆ ಅರಕೆರೆ ಗ್ರಾಮದ ನಾಡ ಕಚೇರಿಯ ಉಪ ತಹಶೀಲ್ದಾರ್ ಅವರು ಜೀವಂತ ವಿರುವಾಗಲೇ ಮರಣ ಪ್ರಮಾಣಪತ್ರ ನೀಡಿದ್ದಾರೆ. ಏನಿದು ಪ್ರಕರಣ?: ಶ್ರೀರಂಗಪಟ್ಟನ ತಾಲೂಕು ಅರಕೆರೆ ಹೋಬಳಿ ವ್ಯಾಪ್ತಿಯ ಚಿಕ್ಕಹಾರೋಹಳ್ಳಿ ನಿವಾಸಿ ರಾಮೇಗೌಡ ತನ್ನ ತಂದೆ ತಿಮ್ಮೇಗೌಡ ಮೃತ ಪಟ್ಟಿದ್ದಾರೆಂದು ಮರಣ ಪ್ರಮಾಣಪತ್ರ ನೀಡುವಂತೆ ಅರಕೆರೆ ನಾಡ ಕಚೇರಿಗೆ ಅರ್ಜಿ…
ಕಾರು ಅಪಘಾತ: ಮೂವರು ಸಾವು, ಐವರಿಗೆ ಗಾಯ
August 23, 2018ಮಂಡ್ಯ: ಕಾರು ಅಪಘಾತದಿಂದ ಇಬ್ಬರು ಸಾವನ್ನಪ್ಪಿ 5ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ. ಬೆಂಗಳೂರಿನ ದರ್ಶನ್, ಉಜ್ವಲ್, ಹರೀಶ್ ಸಾವಿ ಗೀಡಾದವರಾಗಿದ್ದು 5 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆ: ಬೆಂಗಳೂರಿನ ದರ್ಶನ್ ಮತ್ತು ಉಜ್ವಲ್ ಸೇರಿದಂತೆ ಏಳೆಂಟು ಮಂದಿ ಬುಧವಾರ ಮಧ್ಯಾಹ್ನ ಬೆಂಗ ಳೂರು ಕಡೆಯಿಂದ ಹಾಸನಕ್ಕೆ ಸ್ಕಾರ್ಪಿಯೋ ಕಾರ್ನಲ್ಲಿ ಹೊರಟಿ ದ್ದರು….
ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಭೇಟಿ
August 17, 2018ಮಂಡ್ಯ: ಕಾವೇರಿ ನದಿ ಪ್ರವಾಹ ದಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಕೃಷ್ಣರಾಜಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವ ಕಾರಣ, ಜಲಾಶಯದಿಂದ 1.25 ಲಕ್ಷ ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಿ ರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕಿನ ಪ್ರವಾಹ ಭೀತಿ ಎದುರಿಸುತ್ತಿರುವ ಗ್ರಾಮಗಳಲ್ಲಿ ಒಂದಾದ ಎಣ್ಣೆಹೊಳೆಕೊಪ್ಪಲಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ…
ಸಾಲದಿಂದ ಅನ್ನದಾತನನ್ನು ಮುಕ್ತಗೊಳಿಸಲು ಬದ್ಧ: ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು
August 17, 2018ಜಿಲ್ಲೆಯಾದ್ಯಂತ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮಂಡ್ಯ: ಅನ್ನದಾತನನ್ನು ಸಾಲದ ಶೂಲದಿಂದ ಮುಕ್ತನನ್ನಾಗಿಸಲು ಸರ್ಕಾರ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ಹಾದಿ ಹಿಡಿಯಬೇಡಿ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಮನವಿ ಮಾಡಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂ ಗಣದಲ್ಲಿ ನಡೆದ 72ನೇ ಸ್ವಾತಂತ್ರೋ ತ್ಸವದ ಸಂದೇಶ ನೀಡಿ ಮಾತನಾಡಿದ ಅವರು, ವರುಣನ ಕೃಪೆಯಿಂದ ಜಿಲ್ಲೆಯಲ್ಲಿ ಬರಗಾಲ ದೂರವಾಗಿದೆ. ಎಲ್ಲ ನದಿಗಳು ಉಕ್ಕಿ ಹರಿಯುತ್ತಿವೆ. ಜಲಾಶಯಗಳಿಂದಲೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ತಗ್ಗು ಪ್ರದೇಶದಲ್ಲಿರುವವರು ಪ್ರವಾಹ…
ಬೆಂಗಳೂರು ರೌಡಿಶೀಟರ್ ಅರಸಯ್ಯ ಕೊಲೆ ಪ್ರಕರಣ 9 ಮಂದಿ ಆರೋಪಿಗಳ ಬಂಧನ
August 17, 2018ಮಂಡ್ಯ: ಬೆಂಗಳೂರಿನ ರೌಡಿಶೀಟರ್ ಅರಸಯ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಪಳನಿ, ಮಹೇಂದ್ರ, ಮುನಿರಾಜ, ಬಾಬು, ಪೆರುಮಾಳ್, ಮಹೇಶ್, ಮಂಜುನಾಥ್, ಅರುಣ, ರಾಮದಾಸ ಬಂಧಿತರು. ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಎಎಸ್ಪಿ ಲಾವಣ್ಯ, ಶ್ರೀರಂಗ ಪಟ್ಟಣ ಡಿವೈಎಸ್ಪಿ ವಿಶ್ವನಾಥ್ ಮಾರ್ಗದರ್ಶನದಲ್ಲಿ ಸಿಪಿಐ ರವೀಂದ್ರ ಹಾಗೂ ಎಸ್ಐ ಪುನೀತ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು ಆ.15ರಂದು ರಾತ್ರಿ ಟಿ.ನರಸೀ ಪುರ ತಾಲೂಕಿನ ಗರ್ಗೇಶ್ವರಿ…