ಮೈಸೂರು: ಮೈಸೂರು ನಗರ ಈ ಬಾರಿಯೂ ಸ್ವಚ್ಛತೆಯಲ್ಲಿ 3ನೇ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪ್ರಥಮ ಸ್ಥಾನಕ್ಕೇರಲು ಶ್ರಮಿಸಲಾಗುವುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು. ನಗರಪಾಲಿಕೆ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014-15ನೇ ಸಾಲಿನಿಂದ ಸ್ವಚ್ಛ ನಗರ ಪ್ರಶಸ್ತಿ ನೀಡಲಾಗುತ್ತಿದ್ದು, ಸತತ 2 ಬಾರಿ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ, 2016-17ನೇ ಸಾಲಿನಲ್ಲಿ 5 ಹಾಗೂ 2017- 18ನೇ ಸಾಲಿನಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಇಂದು…
ಮೋದಿಯವರ ಭ್ರಷ್ಟಾಚಾರ ರಹಿತ ಆಡಳಿತ ಮುಂದಿಟ್ಟು ಮತ ಯಾಚಿಸಿ
March 7, 2019ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರಂತರ ಕಠಿಣ ಪರಿಶ್ರಮ, ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸಿ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮೈಸೂರಿನ ಜೆ.ಕೆ. ಮೈದಾನದಲ್ಲಿ ಇಂದು ನಡೆದ ಬಿಜೆಪಿ ಶಕ್ತಿ ಕೇಂದ್ರಗಳ ಪ್ರಮುಖರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾ ಡುತ್ತಿದ್ದ ಅವರು, ಮೋದಿ ಅವರು ಶ್ರಮಜೀವಿ, ದೇಶಕ್ಕಾಗಿ ನಿರಂತರ ವಾಗಿ ದುಡಿಯುತ್ತಿದ್ದಾರೆ. ಅವರ ವೇಗಕ್ಕೆ ಹೆಜ್ಜೆ ಹಾಕುವುದು ನಮಗೇ ಸವಾಲಾಗಿದೆ….
ಮೈಸೂರು ದೇಶದ ಮೂರನೇ ಸ್ವಚ್ಛ ನಗರ
March 7, 2019ಮೈಸೂರು: ಸತತ ಎರಡು ಬಾರಿ ‘ದೇಶದ ನಂ.1 ಸ್ವಚ್ಛ ನಗರಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರು, ಈ ಬಾರಿ ದೇಶದ ಮೂರನೇ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ. ಇಂದು ಮಧ್ಯಾಹ್ನ ನವದೆಹಲಿಯಲ್ಲಿ ನಡೆದ ಸ್ವಚ್ಛತಾ ಸರ್ವೇಕ್ಷಣ್-2019 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂದೋರ್ ಸತತ ಮೂರನೇ ಬಾರಿ ಮೊದಲ ಸ್ಥಾನ ಪಡೆದುಕೊಂಡಿದೆ. ಛತ್ತೀಸ್ಗಢದ ಅಂಬಿಕಾಪುರ ಎರಡನೇ ಸ್ಥಾನದಲ್ಲಿದೆ. ಒಟ್ಟು 5000 ಅಂಕಗಳಲ್ಲಿ ಮೈಸೂರು 4,379 ಅಂಕ ಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ….
2008ರಲ್ಲೇ `ಕ್ರಮ’ ಕೈಗೊಂಡಿದ್ದರೆ ಪುಲ್ವಾಮಾ ದಾಳಿ ನಡೆಯುತ್ತಿರಲಿಲ್ಲ
March 7, 2019ಮೈಸೂರು: 2008ರಲ್ಲಿ ಮುಂಬೈ ಮೇಲೆ ದಾಳಿಯಾ ದಾಗಲೇ ಅಂದು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದರೆ ಇಂದು ಪುಲ್ವಾಮಾ ದಾಳಿ ನಡೆಯುತ್ತಿರಲಿಲ್ಲವೇನೋ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್ ಅಭಿಪ್ರಾಯಪಟ್ಟರು. ನಗರದ ಖಾಸಗಿ ಹೋಟೆಲ್ನಲ್ಲಿ ಬುಧ ವಾರ ಆಯೋಜಿಸಿದ್ದ `ಪ್ರಬುದ್ಧರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014ರ ನಂತರ ಪುಲ್ವಾಮಾ ದಾಳಿ ಮಾತ್ರ ಆಗಿದೆ. ಬೇರೆ ಭಯೋತ್ಪಾದಕ ದಾಳಿಗಳು ಆಗಿರಲಿಲ್ಲ. ಮುಂಬೈ ದಾಳಿ ಯಾದಾಗ ಅಂದಿನ ಸರ್ಕಾರ ಕ್ರಮ ತೆಗೆದು ಕೊಂಡಿದ್ದರೆ ಇಂದು ಇಂತಹ ಪರಿಸ್ಥಿತಿ…
ಮೈಸೂರಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವ ಸಂಭ್ರಮ
March 7, 2019ಮೈಸೂರು: ಅಲ್ಲಿ ಮಹಿಳೆಯರದ್ದೇ ಕಾರುಬಾರು. ಚಿತ್ರಕಲೆ, ಸಾಂಸ್ಕೃತಿಕ ಚಟುವಟಿಕೆ, ನಾಟಕ, ನೃತ್ಯ, ರಂಗೋಲಿ ಸೇರಿದಂತೆ ತಮ್ಮಲ್ಲಿರುವ ವಿವಿಧ ಪ್ರತಿಭೆ ಅನಾವರಣ ಮಾಡಿ, ಸಂಭ್ರಮಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧ ವಾರ ಆಯೋಜಿಸಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವ-2019 ಸಂದರ್ಭದಲ್ಲಿ ಮಹಿಳೆಯರು, ಯುವತಿಯರು ಹಾಡಿ, ಕುಣಿದು, ನಾಟಕ ಪ್ರದರ್ಶಿಸಿ, ಚಿತ್ರ ಬರೆದು ರಂಗೋಲಿ ಹಾಕಿ ಸಂಭ್ರಮಿಸಿದರು. ಮಹಿಳಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ಪ್ರತಿಭಾನ್ವಿತ ಮಹಿಳೆಯರು, ಯುವತಿ ಯರು ಕಾರ್ಯಕ್ರಮದಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿದರು….
ಮೈಸೂರು ಜಿಪಂ ಮಾಜಿ ಸದಸ್ಯ ವಿಜಯಕುಮಾರ್ ಮುಡಾ ಅಧ್ಯಕ್ಷ?
March 7, 2019ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ಲಾ ಮೈಸೂರು: ಜಾತ್ಯಾತೀತ ಜನತಾ ದಳ ತನ್ನ ಪಾಲಿನ ಸ್ಥಳೀಯ ನಿಗಮ ಮಂಡಳಿಗಳಿಗೆ ನೇಮಕಾತಿ ಆರಂಭಿಸಿದೆ. ಮೈಸೂರು ಪ್ರತಿಷ್ಠಿತ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷರಾಗಿ ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್.ಎನ್.ವಿಜಯ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಹಾಗೆಯೇ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಜೆಡಿಎಸ್ ಮುಖಂಡ ಅಬ್ದುಲ್ ಅಜೀಜ್ (ಅಬ್ದುಲ್ಲಾ) ಅವರನ್ನು ನೇಮಕ ಮಾಡಲಾಗಿದೆ ಎಂದು ನಂಬಲರ್ಹ ಮೂಲಗಳು ಹೇಳಿವೆ….
ಮೈಸೂರು ಟ್ರಾಫಿಕ್ ಸಿಗ್ನಲ್ ಮುಕ್ತವಾಗಿದೆಯೇ!
March 7, 2019ಮೈಸೂರು: ಮೈಸೂರು ನಗರದ ಕೆಲ ವೃತ್ತಗಳೀಗ ಟ್ರಾಫಿಕ್ ಸಿಗ್ನಲ್ ಫ್ರೀ…! ಏಕೆಂದರೆ ಕೆಟ್ಟು ನಿಂತ ಸಿಗ್ನಲ್ ಗಳಿಗೆ ದುರಸ್ತಿ ಭಾಗ್ಯವಿಲ್ಲದೆ ಸುರಕ್ಷತೆ ಇಲ್ಲದ ಸರಾಗ ಸಂಚಾರಕ್ಕೆ ಇವು ತೆರೆದುಕೊಂಡಿವೆ. ಸುರಕ್ಷತೆಯನ್ನೂ ಲೆಕ್ಕಿಸದೇ ಸರಾಗವಾಗಿ ಮುಂದೆ ಸಾಗುವ ವಾಹನ ಸವಾರರು ಪರಸ್ಪರ ನಡೆಸುವ ಪೈಪೋಟಿ ಅನಾಹುತ ದಲ್ಲಿ ಅಂತ್ಯ ಕಾಣುವ ಆತಂಕವೂ ಎದು ರಾಗಿದೆ. ಹೌದು, ಈ ರೀತಿಯ ದೃಶ್ಯಾ ವಳಿಗೆ ನಗರದ ಹುಣಸೂರು-ವಾಲ್ಮೀಕಿ ರಸ್ತೆ ಜಂಕ್ಷನ್ ಹಾಗೂ ಕೆಆರ್ಎಸ್ ರಸ್ತೆಯ ಆಕಾಶವಾಣಿ ವೃತ್ತ ನಿತ್ಯ ಸಾಕ್ಷಿಯಾಗು ತ್ತಿವೆ….
ಕುಕ್ಕರಹಳ್ಳಿ ಕೆರೆಯಲ್ಲಿ ಎನ್ಸಿಸಿ ಕೆಡೆಟ್ಗಳಿಂದ ಸ್ವಚ್ಛತಾ ಅಭಿಯಾನ
March 7, 2019ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬುಧವಾರ ಸ್ವಚ್ಛತಾ ಅಭಿಯಾನ ಕೈಗೊಂಡ ಎನ್ಸಿಸಿ ಕೆಡೆಟ್ಗಳು ಅಪಾರ ಪ್ರಮಾಣದ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡಿದರು. ಸಮಾಜ ಸೇವಾ ಕಾರ್ಯದ ಹಿನ್ನೆಲೆ ಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಎನ್ಸಿಸಿ ಕೆಡೆಟ್ಗಳು ಕೆರೆ ದಡ, ಕೆರೆ ಏರಿ ಹಾಗೂ ಆವರಣದಲ್ಲಿ ಸಾರ್ವಜನಿಕರು ಬಿಸಾಡಿದ್ದ ಕಸವನ್ನು ಸಂಗ್ರಹಿಸಿದರು. ಪ್ಲಾಸ್ಟಿಕ್ ಪೇಪರ್, ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಹೊದಿಕೆಗಳನ್ನು ಸಂಗ್ರಹಿಸಿದರು. ಬೆಳಿಗ್ಗೆ 6.45ರಿಂದ 9.30ರವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ವಿದ್ಯಾರ್ಥಿಗಳ ಈ…
ಸಂವಿಧಾನದ 370ನೇ ವಿಧಿ ರದ್ದುಪಡಿಸಲು ತಜ್ಞರ ಒತ್ತಾಯ
March 7, 2019ಮೈಸೂರು: ಸವ ಲತ್ತು ದುರುಪಯೋಗ ಮತ್ತು ದೇಶ ವಿರೋಧಿ ಮನೋಭಾವನೆಯನ್ನು ಬೆಳೆ ಯುತ್ತಿರುವ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಭಾರತ ಸಂವಿ ಧಾನದ 370 ಹಾಗೂ 35ಂ ವಿಧಿಯನ್ನು ರದ್ದುಪಡಿಸಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ `370ನೇ ವಿಧಿಯ ರದ್ಧತಿ ಆಯಾಮ ಗಳು ಮತ್ತು ಪರಾಮರ್ಶೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ತಜ್ಞರು ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾ ರಣಾ ಸಮಿತಿ, ಶೇಷಾದ್ರಿಪುರಂ ಪದವಿ ಪೂರ್ವ…
ದೇವರಿಗೆ ಕನ್ನಡ ಕಲಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ
March 7, 2019ಮೈಸೂರು: ಸಂಸ್ಕøತ ಮಾತನಾಡುತ್ತಿದ್ದ ದೇವರಿಗೆ ಕನ್ನಡ ಕಲಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿ ಯಿಂದ ನಡೆದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ವಚನಕಾರರ ಕಾಲಕ್ಕಿಂತ ಮೊದಲು ದೇವತೆಗಳು ಸಂಸ್ಕøತದಲ್ಲಿಯೇ ಮಾತನಾಡುತ್ತಿದ್ದರು. ಅವರು ಪ್ರವರ್ಧ ಮಾನಕ್ಕೆ ಬಂದ ಬಳಿಕವಷ್ಟೇ ದೇವರಿಗೆ ಕನ್ನಡ ಕಲಿಸಿದರು. ಇದರಿಂದ ಸಂಸ್ಕøತ ಮಾತನಾಡುವುದನ್ನು ದೇವರು ಕಾಲ…










