ಮೈಸೂರು: ನಡೆದಾಡುವ ದೇವರು ಡಾ.ಶಿವಕು ಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆ ಯಲ್ಲಿ ರಾಜ್ಯಾದ್ಯಂತ ಮೂರು ದಿನ ಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮಂಗಳ ವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಮಟ್ಟಕ್ಕೆ ಹಾರಿಸಿ ಸಿದ್ಧಗಂಗಾ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ರಾಷ್ಟ್ರಧ್ವಜ ಅರ್ಧ ಮಟ್ಟಕ್ಕೆ ಇಳಿಸಿ ಗೌರವಿಸಲಾಯಿತು. ಮೈಸೂರಿನ ಹಲವು ಚಿತ್ರಮಂದಿರ ಗಳಲ್ಲಿ ಎರಡು ಪ್ರದರ್ಶನಗಳನ್ನು ರದ್ದುಪಡಿಸಲಾಗಿತ್ತು. ಶೋಕಾಚರಣೆ ನಡುವೆಯೂ ಕೆಲವು ಚಿತ್ರಮಂದಿರ ಗಳಲ್ಲಿ ಚಿತ್ರ…
ಮೂರು ದಶಕದ ಹಿಂದೆಯೇ ಸಿದ್ದಲಿಂಗ ಸ್ವಾಮೀಜಿ ಸಿದ್ಧಗಂಗಾ ಪೀಠದ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿದ್ದರು
January 23, 2019ತುಮಕೂರು: ತುಮಕೂರು ಸಿದ್ಧಗಂಗಾ ಮಠದ ಹಿರಿಯ ಶ್ರೀಗಳು, ನಾಡಿನ ನಡೆದಾಡುವ ದೇವರು ಲಿಂಗೈಕ್ಯರಾಗುವ ಮುನ್ನವೇ ಶ್ರೀ ಮಠದ ಉತ್ತರಾಧಿಕಾರಿಯನ್ನಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿಗಳನ್ನು ನಿಯೋಜಿಸಿದ್ದರು ಎಂಬ ಸತ್ಯ ಇದೀಗ ಬಹಿರಂಗಗೊಂಡಿದೆ. ಡಾ.ಶಿವಕುಮಾರಸ್ವಾಮೀಜಿಯವರು ತಮ್ಮ 81ನೇ ವಯಸ್ಸಿನಲ್ಲೇ ತಮ್ಮ ಉತ್ತರಾಧಿಕಾರಿಯ ನ್ನಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ನಿಯೋಜಿಸಿದ್ದರಾದರೂ ಶ್ರೀ ಸಿದ್ದಲಿಂಗಸ್ವಾಮೀಜಿ ಸಹ ಇದನ್ನು ಎಲ್ಲೂ ಬಹಿರಂಗಪಡಿಸದೆ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಬೆನ್ನೆಲು ಬಾಗಿ ನಿಂತು ತಮ್ಮ ಸ್ವಾಮಿನಿಷ್ಠೆಯನ್ನು ತೋರಿ, ಹಿರಿಯ ಶ್ರೀಗಳ ಅನುಮತಿ ಇಲ್ಲದೆ ಯಾವ ತೀರ್ಮಾ…
ಉತ್ತರಾಧಿಕಾರಿ ಸಿದ್ದಲಿಂಗ ಸ್ವಾಮೀಜಿ ಅವರಿಗೆ ನಡೆದಾಡುವ ದೇವರ ಸಂದೇಶವಿದು…
January 23, 2019ತುಮಕೂರು: ಕಳೆದ 2011 ರಲ್ಲಿ ಕಿರಿಯ ಶ್ರಿಗಳಿಗೆ ಶ್ರೀ ಸಿದ್ಧಗಂಗಾ ಮಠದ ಅಧಿಕಾರ ಹಸ್ತಾಂ ತರಿಸಿದ ವೇಳೆ ಶ್ರೀ ಶಿವಕುಮಾರ ಸ್ವಾಮೀಜಿ ಅವರು ನೀಡಿದ ಆಶೀರ್ವಚನದ ಪೂರ್ಣ ಪಾಠವಿದು: “ಭಗವಂತನ ಸೃಷ್ಟಿಯಲ್ಲಿ ಮನುಷ್ಯನಿಗೆ ಶ್ರೇಷ್ಠವಾದ ಸ್ಥಾನವಿದೆ. ಅದನ್ನು ಅರಿತು ನಡೆದು ಕೊಂಡರೆ ಸಮಾಜ ದಲ್ಲಿ ಶಾಂತಿ ನೆಲೆಸುತ್ತದೆ. ಮನುಷ್ಯತ್ವ ಬೆಳೆಯಲು ಧರ್ಮ ಪೀಠಗಳು ನೆರವಾಗಬೇಕು. ಭಕ್ತರಲ್ಲಿ ಸಮಾಜಮುಖಿ ಭಾವನೆ ಬೆಳೆಸುವುದು ಧರ್ಮಪೀಠಗಳ ಕರ್ತವ್ಯ. ಭ್ರಷ್ಟಾಚಾರದ ಪಿಡುಗು ತೊಲಗಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ವಯಸ್ಸಿನಿಂದಲೇ…
ಸಿದ್ಧಗಂಗಾ ಶ್ರೀಗಳು ಮುಂದಿನ ಶತಮಾನಕ್ಕೂ ಆದರ್ಶ
January 23, 2019ಮೈಸೂರು: ಎಂಬತ್ತೆಂಟು ವರ್ಷ ಗಳ ಪರಿಶ್ರಮದಿಂದ ಸಿದ್ಧಗಂಗಾ ಮಠ ವಿಶ್ವದಲ್ಲಿ ಪ್ರಸಿದ್ಧಿ ಪಡೆಯುವಲ್ಲಿ ಶ್ರಮಿಸಿದ ಸಿದ್ಧಗಂಗಾ ಶ್ರೀಗಳ ನಿಧನ ದಿಂದ ಒಂದು ಯುಗಾಂತ್ಯವಾದಂತಾಗಿದೆ. ಆದರೂ ಅವರು ಜೀವಿಸಿದ್ದ ಈ ಶತಮಾನ ಮುಂದಿನ ಶತಮಾನಕ್ಕೂ ಆದರ್ಶವಾಗಿದೆ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಗನ್ಹೌಸ್ ಬಳಿ ಬಸವೇಶ್ವರ ಪ್ರತಿಮೆ ಎದುರು ಡಾ.ಶಿವಕುಮಾರಸ್ವಾಮೀಜಿ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಜಗಜ್ಯೋತಿ ಬಸವಣ್ಣನವರ ತತ್ವ, ಚಿಂತನೆ, ಆದರ್ಶ ಗಳ ಜೀವಂತ ರೂಪವಾಗಿದ್ದ ಶ್ರೀಗಳು, ಯಾವ ಭೇದ- ಭಾವವಿಲ್ಲದೆ…
ಕ್ಯಾನ್ವಾಸ್ ಬಟ್ಟೆ ಮೇಲೆ ಶ್ರೀಗಳ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಅರ್ಪಿಸಿದ ಕುಂಚ ಕಲಾವಿದರು
January 23, 2019ಮೈಸೂರು: ಎಲ್ಲೆಡೆ ಸಿದ್ಧಗಂಗಾ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಶ್ರದ್ಧಾಂಜಲಿ, ಸಂತಾಪ ಕಾರ್ಯಕ್ರಮ ಗಳು ನಡೆಯುತ್ತಿದ್ದರೆ, ಇತ್ತ ಕೆ.ಆರ್.ವೃತ್ತದಲ್ಲಿ ಕುಂಚ ಕಲಾವಿದರು ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಭಕ್ತಿ ಮೆರೆದರು. ಮೈಸೂರು ಜಿಲ್ಲಾ ಕುಂಚ ನಾಮಫಲಕ ಕಲಾವಿದರ ಸಂಘದ 20ಕ್ಕೂ ಹೆಚ್ಚು ಸದಸ್ಯರು ಕಾವಿ ಮತ್ತು ಕಪ್ಪು ಬಣ್ಣ ಬಳಸಿ ಕ್ಯಾನ್ ವಾಸ್ ಬಟ್ಟೆಯ ಮೇಲೆ ಸಿದ್ಧಗಂಗಾ ಶ್ರೀಗಳ ಬೃಹತ್ ಭಾವಚಿತ್ರಗಳನ್ನು ಕುಂಚದ ಮೂಲಕ ರಚಿಸಿದರು. ಸಂಘದ ಗೌರವಾಧ್ಯಕ್ಷ ಆರ್ಟಿಸ್ಟ್ ಅಬ್ಬಾಸ್, ಅಧ್ಯಕ್ಷ…
ಸುಲಿಗೆಕೋರ ನಕಲಿ ಸಬ್ಇನ್ಸ್ಪೆಕ್ಟರ್ ಸೆರೆ
January 23, 2019ಮೈಸೂರು: ಸಮವಸ್ತ್ರ ಧರಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ನನ್ನು ಮೈಸೂರಿನ ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಿವಾಸಿ, ಮೂಲತಃ ಹಾವೇರಿ ಜಿಲ್ಲೆ, ಶಿಗ್ಗಾಂವ್ ತಾಲೂಕಿನ ವನಹಳ್ಳಿ ಗ್ರಾಮದ ಸಿದ್ದಪ್ಪ ಚನ್ನಬಸಪ್ಪ ನ್ಯಾಮಕ್ಕ ನವರ್(27) ಬಂಧಿತ ನಕಲಿ ಸಬ್ ಇನ್ಸ್ಪೆಕ್ಟರ್. ಮೈಸೂರಿನ ಶಕ್ತಿನಗರ ಬಡಾವಣೆಯ ಮನೆಯೊಂದರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದ ಆತನನ್ನು ವಿಷಯ ತಿಳಿದ ಉದಯಗಿರಿ ಠಾಣೆ ಇನ್ಸ್ ಪೆಕ್ಟರ್ ಪಿ.ಪಿ.ಸಂತೋಷ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸು ವಲ್ಲಿ…
ಮೈಸೂರಲ್ಲೂ ಉಚಿತ ಪ್ರಸಾದಾಲಯ ಸ್ಥಾಪನೆಗೆ ಪ್ರೇರಣೆಯಾಗಿದ್ದ ಶ್ರೀಗಳು
January 23, 2019ಮೈಸೂರು: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಪ್ರೇರಣೆಯಿಂದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಭಾಗದಲ್ಲಿ ತಗಡೂರು ಸುಬ್ಬಣ್ಣ ಉಚಿತ ಪ್ರಸಾದ ನಿಲಯ ಹಾಗೂ ಸುತ್ತೂರು ಶ್ರೀ ಉಚಿತ ಪ್ರಸಾದ ನಿಲಯಗಳು ಸ್ಥಾಪನೆಯಾದವು. 70ರ ದಶಕದಲ್ಲಿ ತಾತಯ್ಯ ಅನಾಥಾ ಲಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಶ್ರೀಗಳು ಸಿದ್ಧಗಂಗಾ ಮಠದಲ್ಲಿ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿನ ಉಚಿತ ಅನಾಥಾಲಯಗಳಿಗೆ ಕಳುಹಿಸು ತ್ತಿದ್ದರು. ಪ್ರತಿವರ್ಷ 2 ರಿಂದ 3 ಮೂರು ವಿದ್ಯಾರ್ಥಿಗಳು…
ನಿವೇಶನಕ್ಕೆ ಅತಿಕ್ರಮ ಪ್ರವೇಶ: ಪ್ರಶ್ನಿಸಿದ ಮಾಲೀಕರಿಗೆ ಕೊಲೆ ಬೆದರಿಕೆ
January 23, 2019ಮೈಸೂರು: ಮೈಸೂರಲ್ಲಿ ಯಾರದೋ ನಿವೇಶನವನ್ನು ತಮ್ಮದೆಂದು ಹೇಳಿಕೊಂಡು ಅತಿಕ್ರಮಿಸಿಕೊಳ್ಳುವ ಭೂಗಳ್ಳರ ಹಾವಳಿ ನಡುವೆ ಈಗ ಆಸ್ತಿ ಮಾಲೀಕರಿಗೆ ಮತ್ತೊಂದು ಆತಂಕ ಎದುರಾಗಿದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದವರನ್ನು ಪ್ರಶ್ನಿಸಿದ ನಿವೇಶನ ಮಾಲೀಕರಿಗೆ ತಳ್ಳಾಡಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಸ್ಥಳಕ್ಕೆ ಬಂದ ಪೊಲೀಸ ರೊಂದಿಗೂ ಅನುಚಿತವಾಗಿ ವರ್ತಿಸಿರುವ ಘಟನೆ ಮಂಗಳವಾರ ನಡೆದಿದೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿ, ಜಾಮೀ ನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಮೈಸೂರಿನ ವಿಜಯನಗರ 2ನೇ ಹಂತದ ಮಹದೇಶ್ವರ ಬಡಾವಣೆಯಲ್ಲಿರುವ ದಯಾನಂದ್ ಎಂಬುವರಿಗೆ ಸೇರಿದ…
ಪ್ರಯಾಣಿಕರ ಆಟೋಗಳ ಮೇಲೆ ಪೊಲೀಸರ ಕಾರ್ಯಾಚರಣೆ
January 23, 2019ಮೈಸೂರು: ಸಂಚಾರ ನಿಯಮ ಉಲ್ಲಂಘಿಸುವ ಜೊತೆಗೆ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಆಟೋ ಚಾಲಕರ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ಪ್ರವಾಸಿ ತಾಣವಾಗಿರುವ ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಿದ್ದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಆಟೋಗಳನ್ನು ಅವಲಂಬಿಸುತ್ತಾರೆ. ಆ ವೇಳೆ ಕೆಲ ಆಟೋ ಚಾಲಕರು ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿ ತೊಂದರೆ ಕೊಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಪೊಲೀಸರಿಗೆ ಬಂದಿವೆ. ಅಂತಹ ವರ್ತನೆಗಳಿಗೆ ಬ್ರೇಕ್ ಹಾಕಲು ಮೈಸೂರು ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಂಚಾರ ನಿಯಮ…
ಸಾಹಸಿ ಬೈಕ್ ಸವಾರನ ದುರಂತ ಸಾವು
January 23, 2019ಮೈಸೂರು: ಆಯ ತಪ್ಪಿ ಬಿದ್ದು ಸಾಹಸಿ ಬೈಕ್ ಸವಾರ ರೊಬ್ಬರು ದುರಂತ ಸಾವಿಗೀಡಾಗಿದ್ದಾರೆ. ಮೈಸೂರಿನ ಹೆಬ್ಬಾಳು ಬಡಾವಣೆಯ ಅಭಿಷೇಕ್ ಸರ್ಕಲ್ ಬಳಿಯ ನಿವಾಸಿ ದೊರೈ ಜೋಸೆಫ್ ಸುನಂದರಾಜ್(65) ಸಾವನ್ನಪ್ಪಿದವರು. ಮೈಸೂರಿನ ಸದರನ್ ಸ್ಟಾರ್ ಹೋಟೆಲಿನ ಎಫ್ ಅಂಡ್ ಬಿ ಎಕ್ಸಿಕ್ಯೂಟಿವ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅವರು ಬೈಕ್ ಯಾತ್ರೆ ಹವ್ಯಾಸ ಹೊಂದಿದ್ದರು. ಪತ್ನಿಯನ್ನು ಮನೆಗೆ ಡ್ರಾಪ್ ಮಾಡಿ ತಮ್ಮ ರಾಯಲ್ ಎನ್ಫೀಲ್ಡ್ (ಕೆಎ-51,ಎಕ್ಸ್-49) ಬೈಕಿನಲ್ಲಿ ಜಯಲಕ್ಷ್ಮೀ ಪುರಂ ಕಡೆಯಿಂದ ಸದರನ್ಸ್ಟಾರ್ಗೆ ಬರುತ್ತಿದ್ದಾಗ ವಾಲ್ಮೀಕಿ ರಸ್ತೆ ಜಂಕ್ಷನ್…










