ಮೈಸೂರು

ಮೈಸೂರಿನ ಸ್ಕೌಟ್ಸ್ ಅಂಡ್ ಗೈಡ್ಸ್  ಮೈದಾನದಲ್ಲಿ `ಶ್ವಾನಗಳ ವೈಯ್ಯಾರ’
ಮೈಸೂರು

ಮೈಸೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ `ಶ್ವಾನಗಳ ವೈಯ್ಯಾರ’

January 14, 2019

ಮೈಸೂರು: ಅಲ್ಲಿ ಮುದ್ದು ಶ್ವಾನಗಳದ್ದೇ ಕಾರುಬಾರು. ಎಲ್ಲಿ ನೋಡಿದರೂ ಬಣ್ಣ ಬಣ್ಣದ ಶ್ವಾನಗಳು ತಮ್ಮ ಮೈಮಾಟ ಹಾಗೂ ಮುಗ್ಧತೆಯಿಂದ ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದವಲ್ಲದೆ, ತಮ್ಮ ಪ್ರಾಮಾಣಿಕತೆಯಿಂದ ಗಮನ ಸೆಳೆಯುತ್ತಿದ್ದವು. ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ `ಶ್ವಾನ ಪ್ರದರ್ಶನ’ದಲ್ಲಿ ಸುಮಾರು 22 ತಳಿಯ 250ಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡು ನೆರೆದಿದ್ದ ಅಪಾರ ಸಂಖ್ಯೆಯ ಪ್ರಾಣಿ ಪ್ರಿಯರ ಮನ ಗೆದ್ದವು. ಮೈಸೂರಿನ ವಿವಿಧ ಬಡಾವಣೆ ಗಳಲ್ಲದೆ, ಬೆಂಗಳೂರು, ಮಡಿಕೇರಿ, ಕೇರಳ,…

ವಾರಾಂತ್ಯ ಬಹುರೂಪಿಗೆ ರಂಗಪ್ರಿಯರಿಂದ ಬಹುಪರಾಕ್
ಮೈಸೂರು

ವಾರಾಂತ್ಯ ಬಹುರೂಪಿಗೆ ರಂಗಪ್ರಿಯರಿಂದ ಬಹುಪರಾಕ್

January 14, 2019

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾನು ವಾರ ಪ್ರದರ್ಶನಗೊಂಡ ನಾಟಕಗಳು, ಚಲನಚಿತ್ರಗಳು ಜನರಿಂದ ಮೆಚ್ಚುಗೆ ಪಡೆದವು. ಕಿರುರಂಗ ಮಂದಿರದಲ್ಲಿ ಪ್ರದರ್ಶನ ಗೊಂಡ ಮರಾಠಿ ಭಾಷೆಯ ಏಕ ಧೋತ ರಾಚಿ ಗೋಷ್ಟಾ’, ಭೂಮಿಗೀತ-ಕನ್ನಡದ ಶ್ರೀದೇವಿ ಮಹಾತ್ಮೆ, ವನರಂಗ- ಬೆಂಗಾಲಿ ಭಾಷೆಯ 1084’ಸ್ ಮದರ್, ಕಲಾಮಂದಿರದಲ್ಲಿ ಪ್ರದರ್ಶನಗೊಂಡ ಮಲಯಾಳಂನ ಮಹಾಸಾರಂಗಂ’ ನಾಟಕಗಳು ಜನರ ಮನಗೆದ್ದವು. ಡಾ.ಮಿಲಿಂದ್ ಇನಾಮ್‍ದಾರ್ ನಿರ್ದೇಶನದ ಏಕ ಧೋತರಾಚಿ ಕೋಷ್ಟಾ’ ನಾಟಕವು ಮಹಾರಾಷ್ಟ್ರದ ಜಾನಪದ ತಮಾಷಾ’ ಶೈಲಿಯಲ್ಲಿದ್ದು, ತಮಾಷಾ ಆಟಗಾರರಿಂದ ಏನೋ ಅಚಾತುರ್ಯ ನಡೆದುಬಿಡುತ್ತದೆ. ಈ ಕಾರಣಕ್ಕಾಗಿ…

ಪಿಎಸ್‍ಐ ಪರೀಕ್ಷೆ: 3602 ಮಂದಿ ಹಾಜರು, 387 ಜನ ಗೈರು!
ಮೈಸೂರು

ಪಿಎಸ್‍ಐ ಪರೀಕ್ಷೆ: 3602 ಮಂದಿ ಹಾಜರು, 387 ಜನ ಗೈರು!

January 14, 2019

ಮೈಸೂರು: ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್(ಸಿವಿಲ್) ಹುದ್ದೆಗಳ ನೇಮಕಾತಿ ಸಂಬಂಧ ಮೈಸೂರು ನಗರದಲ್ಲಿ ಭಾನುವಾರ ಲಿಖಿತ ಪರೀಕ್ಷೆ ನಡೆಯಿತು. ನಗರದ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 3989 ಅಭ್ಯರ್ಥಿಗಳು ಹಾಜರಾಗ ಬೇಕಿದ್ದು, ಬೆಳಗಿನ ಲಿಖಿತ ಪರೀಕ್ಷೆಗೆ 3653 ಮಂದಿ ಹಾಜರಾಗಿದ್ದು, 336 ಮಂದಿ ಮಾತ್ರ ಗೈರು ಹಾಜರಾಗಿದ್ದರು. ಮಧ್ಯಾಹ್ನ ನಡೆದ ಪರೀಕ್ಷೆಯಲ್ಲಿ 3602 ಮಂದಿ ಹಾಜರಾಗಿದ್ದರು. 387 ಮಂದಿ ಗೈರು ಹಾಜರಾದರು. ಕುವೆಂಪುನಗರದ ಜ್ಞಾನಗಂಗಾ ವಿದ್ಯಾಪೀಠ, ನಂಜು ಮಳಿಗೆಯ ಗೋಪಾಲಸ್ವಾಮಿ ಶಿಶುವಿಹಾರ, ವಿಜಯ ನಗರ 2 ನೇ…

ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ರೂಪಾ ಅಯ್ಯರ್ ನಿರ್ಧಾರ
ಮೈಸೂರು

ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ರೂಪಾ ಅಯ್ಯರ್ ನಿರ್ಧಾರ

January 14, 2019

ಮೈಸೂರು: ಮೈಸೂರು, ಬೆಂಗಳೂರು ಅಥವಾ ಮಂಗಳೂರು ಲೋಕಸಭಾ ಕ್ಷೇತ್ರ ದಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಚಿತ್ರ ನಿರ್ದೇಶಕಿ ರೂಪಾಅಯ್ಯರ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಎಲ್ಲ ಪಕ್ಷದ ವರೂ ಆಹ್ವಾನ ನೀಡಿದ್ದಾರೆ. ಎಲ್ಲ ಪಕ್ಷದ ವರೊಂದಿಗೂ ಸಂಪರ್ಕದಲ್ಲಿರುವ ನಾನು ಮಾತುಕತೆ ನಡೆಸಿದ್ದೇನೆ. ಆದರೆ ಯಾವ ಪಕ್ಷದಿಂದ ಸ್ಪರ್ಧೆ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಆದರೆ ಸಿದ್ದತೆ ಮಾಡಿಕೊಳ್ಳು ತ್ತಿದ್ದೇನೆ ಎಂದು ಹೇಳಿದರು. ಮೈಸೂರು ಕೆ.ಆರ್.ಕ್ಷೇತ್ರದಿಂದ ಸ್ಪರ್ಧಿ ಸಲು ಬಿಜೆಪಿ ಆಕಾಂಕ್ಷಿಯಾಗಿದ್ದ ರೂಪಾ ಅಯ್ಯರ್ ಕೊನೆ ಗಳಿಗೆಯಲ್ಲಿ…

ಸಾಹಸಸಿಂಹ ವಿಷ್ಣುವರ್ಧನ್ 10ನೇ ಪುಣ್ಯಸ್ಮರಣೆ
ಮೈಸೂರು

ಸಾಹಸಸಿಂಹ ವಿಷ್ಣುವರ್ಧನ್ 10ನೇ ಪುಣ್ಯಸ್ಮರಣೆ

January 14, 2019

ಮೈಸೂರು:ಸುಂದರ ಇಳಿ ಸಂಜೆಯಲಿ ಸಿಂಗಾರಗೊಂಡಿದ್ದ ವೇದಿಕೆ ಯಲ್ಲಿ ಡಾ.ವಿಷ್ಣುವರ್ಧನ್ ಅಭಿನಯದ ಜನಪ್ರಿಯ ಸುಮಧುರ ಕನ್ನಡ ಚಿತ್ರಗೀತೆಗಳ ಝೇಂಕಾರ ಮತ್ತು ಹಾಸ್ಯ ಕಲಾವಿದರ ಮೋಡಿ ಕಲಾರಸಿಕರ ಮನಗೆದ್ದಿತು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಪಾತಿ ಫೌಂಡೇಶನ್ ವತಿಯಿಂದ ಸಾಹಸಸಿಂಹ ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸ ಲಾಗಿದ್ದ ಸಂಗೀತ ರಸಸಂಜೆ ಕಾರ್ಯಕ್ರಮ ದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಪ್ರೇಕ್ಷಕರಿಂದ ಹಬ್ಬಿದ ವಿಷ್ಣು ಅಭಿಮಾನ. ಮೊದಲಿಗೆ ಗಾಯಕರಾದ ಶ್ರೀನಿವಾಸ್, ಚಂದನ ಶ್ರೀನಿವಾಸ್, ರಮೇಶ್ ಏಕದಂತ ಚಿತ್ರದ ‘ಏಕದಂತ ಕರುಣಾಮಯಿ’…

ವರಕೋಡು ಗೇಟ್ ಬಳಿ ಮಗುಚಿ ಬಿದ್ದ ಕಬ್ಬಿನ ಲಾರಿ
ಮೈಸೂರು

ವರಕೋಡು ಗೇಟ್ ಬಳಿ ಮಗುಚಿ ಬಿದ್ದ ಕಬ್ಬಿನ ಲಾರಿ

January 14, 2019

ಮೈಸೂರು:ಮೈಸೂರು-ಟಿ.ನರಸೀಪುರ ರಸ್ತೆಯ ವರಕೋಡು ಗೇಟ್ ಬಳಿ ಭಾನುವಾರ ಮಧ್ಯಾಹ್ನ ಕಬ್ಬಿನ ಲಾರಿಯೊಂದು ಮಗುಚಿ ಬಿದ್ದಿದೆ. ಸುದೈವವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ಶನಿವಾರ ಇದೇ ಸ್ಥಳದಲ್ಲಿ ಲಾರಿ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 10 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಅದೇ ಸ್ಥಳದಲ್ಲಿ ಕಬ್ಬಿನ ಲಾರಿ ಮಗುಚಿ ಬಿದ್ದಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ. ಆದರೆ, ಭಾನುವಾರದ ಅಪಘಾತ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

ಮತ್ತದೇ ‘ಮಾದರಿ’ ವಂಚನೆ  40 ಗ್ರಾಂ ಚಿನ್ನ ಕಳೆದುಕೊಂಡ ವೃದ್ಧ!
ಮೈಸೂರು

ಮತ್ತದೇ ‘ಮಾದರಿ’ ವಂಚನೆ 40 ಗ್ರಾಂ ಚಿನ್ನ ಕಳೆದುಕೊಂಡ ವೃದ್ಧ!

January 14, 2019

ಮೈಸೂರು: ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿ ಎಂದು ನಂಬಿಸಿ, ವ್ಯಕ್ತಿಯೋರ್ವನನ್ನು ಹಾಡಹಗಲೇ ವಂಚಿಸಿ ಚಿನ್ನಾಭರಣ ದೋಚಿರುವ ಘಟನೆ ಸಿದ್ದಾರ್ಥ ನಗರದಲ್ಲಿ ನಡೆದಿದೆ. ಸಿದ್ದಾರ್ಥನಗರ ನಿವಾಸಿ ಮಹದೇವ್(62) ಚಿನ್ನಾಭರಣ ಕಳೆದುಕೊಂಡವರು. ಇವರು ಜ.12 ರಂದು ಬೆಳಿಗ್ಗೆ ಸಿದ್ದಾರ್ಥ ನಗರದ ವಿನಯ ಮಾರ್ಗದ ಕಾಪೆರ್Ç ರೇಷನ್ ಬ್ಯಾಂಕ್‍ನ ಮುಂಭಾಗ ವಾಕಿಂಗ್ ಹೋಗುವಾಗ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ‘ಸರ್ ನೀವು ಈ ರೀತಿ ಚಿನ್ನ ಹಾಕಿಕೊಂಡು ಓಡಾಡಬಾರದು, ಚಿನ್ನಕ್ಕಾಗಿ ಕೊಲೆ ಮಾಡುತ್ತಾರೆ. ನಾನು ಕ್ರೈಂ ಬ್ರಾಂಚ್ ಪೆÇಲೀಸ್’ ಎಂದು ಹಿಂದಿಯಲ್ಲಿ…

ಸಿಐಎಸ್‍ಎಫ್ ಸುವರ್ಣ ಮಹೋತ್ಸವ  ಅಂಗವಾಗಿ ಸಿಬ್ಬಂದಿಯಿಂದ ಸಂಭ್ರಮದ ನಡಿಗೆ
ಮೈಸೂರು

ಸಿಐಎಸ್‍ಎಫ್ ಸುವರ್ಣ ಮಹೋತ್ಸವ ಅಂಗವಾಗಿ ಸಿಬ್ಬಂದಿಯಿಂದ ಸಂಭ್ರಮದ ನಡಿಗೆ

January 14, 2019

ಮೈಸೂರು: `ನಾವು ದೈಹಿಕವಾಗಿ ಸದೃಢರಾಗಿದ್ದರೆ, ಭಾರತವೂ ಸದೃಢವಾಗಿರುತ್ತದೆ’ ಎಂಬ ಸಂದೇಶ ದೊಂದಿಗೆ ಸಿಐಎಸ್‍ಎಫ್ (ಸೆಂಟ್ರಲ್ ಇಂಡ ಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್)ನ ನೂರಾರು ಸಿಬ್ಬಂದಿ ಭಾನುವಾರ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಆರ್‍ಬಿಐ ನೋಟು ಮುದ್ರಣಾಲಯ ಘಟಕದ ಬಳಿ ವಾಕಥಾನ್ (ನಡಿಗೆ) ಕೈಗೊಂಡರು. ಸಿಐಎಸ್‍ಎಫ್‍ನ ಸಂಸ್ಥಾಪನಾ ದಿನ ಹಾಗೂ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ಅಂಗ ವಾಗಿ ಏರ್ಪಡಿಸಿದ್ದ ನಡಿಗೆ ಕಾರ್ಯಕ್ರಮ ದಲ್ಲಿ ಮೈಸೂರಿನ ಸಿಐಎಸ್‍ಎಫ್‍ನ ಬಿಆರ್ ಬಿಎನ್‍ಎಂಪಿಎಲ್ (ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣಾಲಯ ಪ್ರೈವೇಟ್ ಲಿಮಿಟೆಡ್),…

ವಾಟಾಳ್ ನಾಗರಾಜ್ ತಮಟೆ ಚಳುವಳಿ
ಮೈಸೂರು

ವಾಟಾಳ್ ನಾಗರಾಜ್ ತಮಟೆ ಚಳುವಳಿ

January 14, 2019

ಮೈಸೂರು: ಕೆಆರ್‍ಎಸ್ ಉದ್ಯಾನವನವನ್ನು ಡಿಸ್ನಿ ಲ್ಯಾಂಡ್ ಆಗಿ ಮಾರ್ಪಡಿಸದಂತೆ ಒತ್ತಾ ಯಿಸಿ ಭಾನುವಾರ ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದ ಬಳಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ತಮಟೆ ಚಳವಳಿ ನಡೆಸಿದರು. ರೈಲ್ವೆ ನಿಲ್ದಾಣದ ಮುಂಭಾಗವಿರುವ ಬಾಬು ಜಗಜೀವನರಾಮ್ ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವÀದಲ್ಲಿ ತಮಟೆ ಚಳು ವಳಿ ಆರಂಭಿಸಿದ ಪ್ರತಿಭಟನಾಕಾರರು ಕೆಆರ್‍ಎಸ್ ಉದ್ಯಾನವನಕ್ಕೆ ತನ್ನದೇ ಆದ ಮಹತ್ವವಿದೆ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಹೆಸರಿನಲ್ಲಿ ಉದ್ಯಾನವನದ ಪಾರಂಪರಿಕತೆಯನ್ನು ಹಾಳು ಮಾಡ…

ಮೈಸೂರಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆ ಸ್ಥಾಪನೆಗೆ ಒತ್ತಾಯ
ಮೈಸೂರು

ಮೈಸೂರಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆ ಸ್ಥಾಪನೆಗೆ ಒತ್ತಾಯ

January 14, 2019

ಮೈಸೂರು: ಮೈಸೂರಿ ನಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆ ಸ್ಥಾಪಿಸಲು ಮೈಸೂರು ಮಹಾನಗರ ಪಾಲಿಕೆ ಕ್ರಮ ವಹಿಸಬೇಕೆಂದು ವಿಶ್ವ ಕರ್ಮ ಸಮು ದಾಯದ ಮುಖಂಡರು ಒತ್ತಾಯಿಸಿದರು. ಮೈಸೂರಿನ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಅಮರಶಿಲ್ಪಿ ವೇದಿಕೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 5ನೇ ವರ್ಷದ ಅಮರಶಿಲ್ಪಿ ಸಂಸ್ಮರಣಾ ದಿನಾಚರಣೆ ಹಾಗೂ ಕ್ಯಾಲೆಂಡರ್ ಬಿಡು ಗಡೆ ಸಮಾರಂಭದಲ್ಲಿ ಮೈಸೂರಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆ ಸ್ಥಾಪಿಸ ಬೇಕೆಂದು ವಿಶ್ವಕರ್ಮ ಸಮುದಾಯದ ಮುಖಂಡರೂ ಆದ ಮೈಸೂರು ಮಹಾ ನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ…

1 1,177 1,178 1,179 1,180 1,181 1,611
Translate »