ತಿ.ನರಸೀಪುರ: ತಾಲೂಕಿನ ಬನ್ನಹಳ್ಳಿಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಕೆ ಸಂದರ್ಭ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಪ್ರಕರಣ ಇಂದು ಬೆಳ ಕಿಗೆ ಬಂದಿದೆ. ಬಿಸಿಯೂಟ ಯೋಜ ನೆಗೆ ಆಹಾರ ಮತ್ತು ನಾಗರಿಕ ಸರಬ ರಾಜು ಇಲಾಖೆ ಪೂರೈಕೆ ಮಾಡುವ ಅಕ್ಕಿಯ ಮೂಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿ ಆತಂಕ ಮೂಡಿಸಿದೆ. ಎಂದಿ ನಂತೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಮೂಟೆಯಿಂದ ಅಕ್ಕಿ ತೆಗೆದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದ ಗಾಬರಿಗೊಂಡ…
ಸಿಬಿಐ, ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ವೃದ್ಧರ ವಂಚಿಸಿ ಚಿನ್ನಾಭರಣ ದೋಚಿದ ಖದೀಮರು
January 14, 2019ಮೈಸೂರು: ಸಿಬಿಐ ಮತ್ತು ಸಿಐಡಿ ಅಧಿ ಕಾರಿಗಳ ಸೋಗಿನಲ್ಲಿ ಕಳ್ಳರು ಹಾಡಹಗಲೇ ಇಬ್ಬರು ವೃದ್ಧ ರನ್ನು ವಂಚಿಸಿ ಚಿನ್ನಾಭರಣ ದೋಚಿರುವ ಘಟನೆ ಶನಿವಾರ ಬೆಳಿಗ್ಗೆ ಮೈಸೂರಿನ ವಿವಿಪುರಂನಲ್ಲಿ ನಡೆದಿದೆ. ಮೈಸೂರಿನ ಗೋಕುಲಂ ನಿವಾಸಿ ಕೃಷ್ಣ ಪ್ರಸಾದ್(80) ಮತ್ತು ಕೆ.ಜಿ.ಕೊಪ್ಪಲು ನಿವಾಸಿ ಶಿವಲಿಂಗು(74) ಎಂಬುವರೇ ಪ್ರತ್ಯೇಕ ಸ್ಥಳದಲ್ಲಿ ನಕಲಿ ಪೊಲೀಸರ ಬೆಣ್ಣೆ ಮಾತಿಗೆ ಮರು ಳಾಗಿ ಚಿನ್ನಾಭರಣ ಕಳೆದುಕೊಂಡವರಾಗಿದ್ದಾರೆ. ಈ ಪ್ರಕರಣ ದಿಂದ ವೃದ್ಧರನ್ನೇ ಗುರಿಯಾಗಿಸಿಕೊಂಡು ವಂಚನೆ ನಡೆಸುತ್ತಿ ರುವ ಜಾಲವೊಂದು ಮೈಸೂರಲ್ಲಿ ಕಾರ್ಯಾಚರಣೆ ನಡೆಸು ತ್ತಿರುವ ಅನುಮಾನ…
ಇದು ಸಾಮಾಜಿಕ ವ್ಯವಸ್ಥೆ ವಿರುದ್ಧ ನಡೆದ ಯುದ್ಧ
January 14, 2019ಮೈಸೂರು: ಇಡೀ ವಿಶ್ವಕ್ಕೆ ಅಚ್ಚರಿ ಮೂಡಿಸಿರುವ 18ನೇ ಶತ ಮಾನದ ಭೀಮಾ ಕೋರೆಗಾಂವ್ ಯುದ್ಧ, ಇದು ಸಾಮ್ರಾಜ್ಯವನ್ನು ಗೆದ್ದ ಯುದ್ಧವಲ್ಲ. ಸ್ವಾಭಿಮಾನಕ್ಕಾಗಿ ವ್ಯವಸ್ಥೆ ವಿರುದ್ಧ ಹೋರಾಡಿದ ಯುದ್ಧ ಎಂದು ಚಿಂತಕ ವಿಠ್ಠಲ್ ವಗ್ಗನ್ ಇಂದಿಲ್ಲಿ ತಿಳಿಸಿದರು. ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಮೈಸೂರು ಜಿಲ್ಲಾ ಸಮಿತಿ ಆಶ್ರಯದಲ್ಲಿ ಭಾನುವಾರ ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ `200ನೇ ಭೀಮಾ ಕೋರೆಗಾಂವ್ ವಿಜಯೋತ್ಸವ – ಬಚ್ಚಿಟ್ಟ ಭಾರತದ ನಿಜವಾದ ಇತಿಹಾಸ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಕೋರೆಗಾಂವ್ ಯುದ್ಧದ…
ಗಮನ ಸೆಳೆದ ನಾನಾ ನಮೂನೆಯ ಸಕ್ಕರೆ ಅಚ್ಚುಗಳ ಪ್ರದರ್ಶನ
January 14, 2019ಮೈಸೂರು: ಮೈಸೂರಿನ ಅಗ್ರಹಾರದ ಶಾರದಾ ಪ್ರಸಾದ ಭವನದಲ್ಲಿ ಭಾನುವಾರ ನಾನಾ ಮಾದರಿಯ, ವಿವಿಧ ಆಕಾರದ ಸಕ್ಕರೆ ಅಚ್ಚುಗಳ ಪ್ರದರ್ಶನ ನಡೆಯಿತು. ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅರಿವು ಸಂಸ್ಥೆ ಸಕ್ಕರೆ ಅಚ್ಚುಗಳ ಪ್ರದರ್ಶನ ಸ್ಪರ್ಧೆ ಏರ್ಪಡಿಸಿತ್ತು. ನಗರದ ಅರಿವು ಸಂಸ್ಥೆಯ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಕ್ಕರೆ ಅಚ್ಚು ತಯಾರಿಸುವ ಸ್ಪರ್ಧೆ ನಡೆಯಿತು. ಬಣ್ಣ, ಬಣ್ಣದ ನಾನಾ ನಮೂನೆಯ ಸಕ್ಕರೆ ಅಚ್ಚುಗಳನ್ನು ಮೈಸೂರಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಿಗಳು ತಂದು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ 32 ಮಂದಿ ಭಾಗವಹಿಸಿದ್ದರು….
ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ
January 14, 2019ಮೈಸೂರು: ಯೋಗದಿಂದ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಲು ಸಾಧ್ಯವಿದೆ. ಆದ್ದರಿಂದ ಪ್ರತಿ ಯೊಬ್ಬರೂ ಯೋಗ ಕಲಿಕೆಗೆ ಆಸಕ್ತಿ ವಹಿಸ ಬೇಕು ಎಂದು ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಕುವೆಂಪುನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ ಟ್ರಸ್ಟ್ ಮತ್ತು ಶ್ರೀ ರಮಣ ಜ್ಞಾನಕೇಂದ್ರದ ಸಹಯೋಗ ದೊಂದಿಗೆ ಆಯೋಜಿಸಿದ್ದ 25ನೇ ವರ್ಷದ ಅಂಗವಾಗಿ ಅಂತರ ಶಾಲಾ ಮತ್ತು ಕಾಲೇಜು ಮಟ್ಟದ `ಮುಕ್ತ ಯೋಗಾಸನ ಸ್ಪರ್ಧೆ-2019’ಕ್ಕೆ ಚಾಲನೆ ನೀಡಿ,…
ಕಲಾ ಕೌಶಲ್ಯದಲ್ಲಿ ಅರಳಿದ ಸಾಂಪ್ರದಾಯಿಕ ವೈಭವ
January 14, 2019ಮೈಸೂರು: ಬಹುಬಗೆಯ ಬಣ್ಣ ಗಳ ಚಿತ್ತಾರ… ಎತ್ತ ನೋಡಿದರೂ ಕಲಾ ತ್ಮಕತೆಯ ವೈಯ್ಯಾರ… ಮಾದಕ ಚೆಲುವೆ ನೋಟ-ಮೈ ಮಾಟ… ಐತಿಹಾಸಿಕ ಸ್ಮಾರಕಗಳ ಸೊಗಸಾದ ದರ್ಶನ… ನಿಸರ್ಗದ ರಮಣೀಯ ತಾಣಗಳ ಮೆರುಗು… ಕಲಾ ಕೌಶಲ್ಯದಲ್ಲಿ ಅರಳಿದ ನಾಡಿನ ಸಾಂಪ್ರದಾಯಿಕ ವೈಭವ… ಇಂತಹ ಬಗೆಬಗೆಯ ಚಿತ್ರ ಕಲಾಕೃತಿ ಗಳ ಮನಮೋಹಕ ತಾಣವಾಗಿದೆ ಮೈಸೂರಿನ ರಂಗಾಯಣದ ಆವರಣ. ಹೌದು, ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಇಲ್ಲಿನ ಅಂಗಳ ವೀಗ ಕಲೆಯ ಕಲರವದಲ್ಲಿ ಕಂಗೊಳಿಸುತ್ತಿದೆ. ಇದೇ ಮೊದಲ ಬಾರಿಗೆ ಕಲಾ…
ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ತಹಸೀಲ್ದಾರ್
January 14, 2019ಪಿರಿಯಾಪಟ್ಟಣ: ಕಳೆದ ಆರು ತಿಂಗಳಿಂದ ಪತಿ ನಾಪತ್ತೆ ಯಾದ ಕಾರಣ ಕಂಗಾಲಾಗಿ ದಯಾಮರಣ ಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ತಾಲೂಕಿನ ರಾವಂದೂರು ಮಹಿಳೆಯ ಮನೆಗೆ ಇಂದು ತಾಲೂಕು ತಹಸೀಲ್ದಾರ್ ಕುಂಜಿ ಮಹಮ್ಮದ್ ಭೇಟಿ ನೀಡಿ ಧೈರ್ಯ ತುಂಬಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ನನ್ನ ಪತಿಗೆ ವಂಚನೆ ಮಾಡಿರುವ ವ್ಯಕ್ತಿಯ ನಡುವಿನ ಹೊಂದಾಣಿಕೆಯೇ ನನ್ನ ಮತ್ತು ನನ್ನ ಮಕ್ಕಳ ದುಸ್ಥಿತಿಗೆ ಕಾರಣ ಎಂದು ತಹಸೀಲ್ದಾರ್ ಮುಂದೆ ನೊಂದ ಮಹಿಳೆ ಸುನೀತ ಕಣ್ಣೀರಿಟ್ಟರು. ತಾಲೂಕಿನ ರಾವಂದೂರು ಗ್ರಾಮದ…
ನಂಜನಗೂಡು ಪತ್ರಕರ್ತರ ಸಂಘದ ದಿನದರ್ಶಿ ಬಿಡುಗಡೆ
January 14, 2019ನಂಜನಗೂಡು: ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮಹತ್ವವಾಗಿದ್ದು, ಶಿಕ್ಷಕರು ವಿದ್ಯಾ ರ್ಥಿಗಳನ್ನು ತಿದ್ದಿತೀಡಿ ಸರಿಹಾದಿಗೆ ತರುವಂತೆ ವ್ಯವಸ್ಥೆಯಲ್ಲಿ ಕಂಡುಬರುವ ಲೋಪದೋಷಗಳನ್ನು ಸರಿಪಡಿಸಲು ಪತ್ರಕರ್ತರು ಮುಂದಾಗಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಆರ್.ಸೋಮಸುಂದರ್ ಹೇಳಿದರು. ಅವರು ಭಾನುವಾರ ನಗರದ ಪತ್ರಕರ್ತರ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘ ದಿಂದ ಹೊರತಂದಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗವನ್ನು ನಾಲ್ಕನೇ ಅಂಗ ಎಂದು ಪರಿಗಣಿಸಲಾಗಿದ್ದು ವ್ಯವಸ್ಥೆಯಲ್ಲಿ ಕಂಡು ಬರುವ ಲೋಪದೋಷಗಳನ್ನು ಸರಿಪಡಿ…
ಬಿಎಸ್ಪಿಯಿಂದ ‘ಆರ್ಥಿಕ್ ಸಹಯೋಗ ದಿವಸ್’
January 14, 2019ಹುಣಸೂರು: ಮಾಯಾ ವತಿಯವರ ಹುಟ್ಟುಹಬ್ಬದ ಅಂಗವಾಗಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಸಂವಿಧಾನ ತಿಳಿಸಿ ದೇಶ ಉಳಿಸಿ ಜನಜಾಗೃತಿ ಜಾಥವನ್ನು“ಆರ್ಥಿಕ್ ಸಹಯೋಗ ದಿವಸ್” ಅಗಿ ನಡೆಸಿದರು. “ಆರ್ಥಿಕ್ ಸಹಯೋಗ ದಿವಸ್” ಅಂಗ ವಾಗಿ ಇಂದು ಹುಣಸೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಪಕ್ಷದ ಆರ್ಥಿಕ ಸಹಯೋಗಕ್ಕೆ ಸಾರ್ವಜನಿಕರಿಂದ ಒಂದು ನೋಟು ಕೊಡಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಡಾ.ಮಹದೇವ್ ಮಾತನಾಡಿ ನವೆಂಬರ್ 26 ಸಂವಿಧಾನ ಅರ್ಪಿಸಿದ ದಿನದಿಂದ ಜನವರಿ 26 ಸಂವಿಧಾನ…
ಉದ್ಯಾನವನ, ಸ್ವಾಮಿ ವಿವೇಕಾನಂದ ಪತ್ರಿಮೆ ಸ್ಥಾಪನೆಗೆ ಗುದ್ದಲಿ ಪೂಜೆ
January 14, 2019ಸರಗೂರು: ಪಟ್ಟಣದ ಕೆರೆಯ ಬಳಿ ನೂತನವಾಗಿ ಉದ್ಯಾನವನ ನಿರ್ಮಿಸಿ, ಅಲ್ಲಿಯೇ ಸ್ವಾಮಿ ವಿವೇಕಾನಂದರ ಪ್ರತಿಮೆ ಪ್ರತಿಷ್ಟಾಪಿಸುವ ಕಾಮಗಾರಿಗೆ ಸಂಸದ ಧ್ರುವ ನಾರಾಯಣ್ ಗುದ್ದಲಿ ಪೂಜೆಯ ನೆರ ವೇರಿಸಿದರು. ಈ ಸಂದರ್ಭದಲ್ಲಿ ಪಡವಲು ವಿರಕ್ತ ಮಠದ ಮಹದೇವಸ್ವಾಮಿ, ಶಾಸಕ ಅನಿಲ್ ಚಿಕ್ಕಮಾದು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಯೋಗೀಶ್, ಮತ್ತು ಸ್ವಾಮಿ ವಿವೇಕಾನಂದ ಸಂಸ್ಥೆಯ ಸಂಸ್ಥಾಪಕರಾದ ಡಾ.ಆರ್.ಬಾಲಸುಬ್ರಹ್ಮಣ್ಯಂ ಹಾಜರಿದ್ದರು. ಉದ್ಯಾನ ಹಾಗೂ ವಿವೇಕಾನಂದರ ಪ್ರತಿ ಮೆಯ ಪ್ರತಿಷ್ಠಾಪನೆಗೆ ಶ್ರಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಕಾರ್ಯಕ್ಕೆ 5 ಲಕ್ಷ…