ಮೈಸೂರು

ನಾಟಕ ಮನರಂಜನೆ ಮಾತ್ರವಲ್ಲ ತರಾವರಿ ವಸ್ತುಗಳ ಖರೀದಿಸುವ ಅವಕಾಶವೂ ಉಂಟು
ಮೈಸೂರು

ನಾಟಕ ಮನರಂಜನೆ ಮಾತ್ರವಲ್ಲ ತರಾವರಿ ವಸ್ತುಗಳ ಖರೀದಿಸುವ ಅವಕಾಶವೂ ಉಂಟು

January 13, 2019

ಮೈಸೂರು: ಒಂದೆಡೆ ಗ್ರಾಮೀಣ ಪ್ರದೇಶದ ಯುವಕರು, ಮಹಿಳಾ ರೈತರು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ತಮ್ಮ ಭೂಮಿ -ಬದುಕಿನ ಅಭಿವ್ಯಕ್ತಿ ಫೋಟೋಗಳು. ಕಾರಾಗೃಹವಾಸಿಗಳು ತಯಾರಿಸಿದ ಮ್ಯಾಟ್, ಬೆಡ್‍ಶೀಟ್, ಹೂವಿನ ಹಾರ, ಶರ್ಟ್‍ಗಳು. ಮತ್ತೊಂದೆಡೆ ನಾಲಗೆಗೆ ರುಚಿ ನೀಡುವ ನವಣೆದೋಸೆ, ಕಜ್ಜಾಯ, ನವಣೆ ಚಕ್ಕಲಿ, ದಾಳಿಂಬೆ, ಅವರೇಕಾಳು ಚುರುಮುರಿ, ಹೋಳಿಗೆ, ಜೋಳದ ರೊಟ್ಟಿಗಳು. ಮಣ್ಣಿ ನಿಂದ ತಯಾರಿಸಿದ ಮ್ಯಾಜಿಕ್ ದೀಪಗಳು. ಜ್ಞಾನ ಭಂಡಾರ, ಸಿದ್ಧ ಉಡುಪುಗಳು… ಇವೆಲ್ಲವೂ ಜನರನ್ನು ತನ್ನತ್ತ ಆಕರ್ಷಿಸುತ್ತಿವೆ. ಇಂದಿನಿಂದ ಆರಂಭವಾದ ಬಹು ರೂಪಿ ರಾಷ್ಟ್ರೀಯ ನಾಟಕೋತ್ಸವ ಹಿನ್ನೆಲೆ…

ಬಾಯಲ್ಲಿ ನೀರೂರಿಸುವ ತಿಂಡಿ-ತಿನಿಸು
ಮೈಸೂರು

ಬಾಯಲ್ಲಿ ನೀರೂರಿಸುವ ತಿಂಡಿ-ತಿನಿಸು

January 13, 2019

ಮೈಸೂರು: ಬಹುರಾಷ್ಟ್ರೀಯ ನಾಟಕೋತ್ಸವದಲ್ಲಿ ನಾಟಕಗಳಿಗಿಂತ ಹೆಚ್ಚಾಗಿ ಬಾಯಲ್ಲಿ ನೀರುಣಿಸುವ ಬಗೆ ಬಗೆಯ ಸಿಹಿ, ಇತರೆ ತಿಂಡಿ ತಿನಿಸು ಖಾದ್ಯ ಪ್ರಿಯರನ್ನು ಆಕರ್ಷಿಸುತ್ತಿವೆ. ಮೈಸೂರಿನ ರಂಗಾಯಣದ ಆವರಣದಲ್ಲಿ ತೆರೆದಿರುವ ಮಳಿಗೆಗಳಲ್ಲಿ 9 ಆಹಾರ ಮಳಿಗೆಗಳಿದ್ದು, ದಾಳಿಂಬೆ, ಅವರೇಕಾಳು ಚುರುಮುರಿ, ದತ್ತ ಸ್ಪೆಷಲ್ ಕೊಬ್ಬರಿ ಮಿಠಾಯಿ, ಹೋಳಿಗೆ, ಜೋಳದ ರೊಟ್ಟಿ, ಗಿರ್ಮಿಟ್ಟು, ಬೆಣ್ಣೆದೋಸೆ ಮತ್ತಿ ತರೆ ತಿನಿಸುಗಳು ಜನರ ಬಾಯಲ್ಲಿ ನೀರುಣಿಸಲಿವೆ. ರಾಮಣ್ಣ ಅಂಡ್ ಸನ್ಸ್ ಚುರು ಮುರಿ ಕಾರ್ನರ್ ಮಳಿಗೆ ಮಾಲೀಕ ಪರ ಮೇಶ ಅವರು ತಯಾರಿಸುವ ದಾಳಿಂಬೆ…

ರಂಗಭೂಮಿಗೆ ವಾಣಿಜ್ಯ ಮೌಲ್ಯ ದೊರಕುವಂತೆ ಮಾಡಿ
ಮೈಸೂರು

ರಂಗಭೂಮಿಗೆ ವಾಣಿಜ್ಯ ಮೌಲ್ಯ ದೊರಕುವಂತೆ ಮಾಡಿ

January 13, 2019

ಮೈಸೂರು: ಸಿನಿಮಾ ಹಾಗೂ ಧಾರಾವಾಹಿಗಳಿಂದ ಬೇಸತ್ತಿರುವ ಜನರು ರಂಗಭೂಮಿಯತ್ತ ಗಮನ ಕೇಂದ್ರೀಕರಿಸುತ್ತಿ ದ್ದಾರೆ. ಈ ಹಿನ್ನೆಲೆಯಲ್ಲಿ ರಂಗಭೂಮಿಗೆ ವಾಣಿಜ್ಯ ಮೌಲ್ಯ ದೊರಕಿಸುವ ಅಗತ್ಯವಿದೆ ಎಂದು ಚಿತ್ರ ನಟ ರಮೇಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ರಂಗಾಯಣದಲ್ಲಿ ಇಂದು (ಜ.12) ಆರಂಭವಾದ ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿರುವ `ಬಹು ರೂಪಿ ಚಲನ ಚಿತ್ರೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ ಕ್ಷೇತ್ರ ಭಾವ ನಾತ್ಮಕತೆಯನ್ನು ಕಳೆದುಕೊಂಡಿದೆ. ನಟರು ಸಿನಿಮಾದಲ್ಲಿ ರೇಟು (ಸಂಭಾವನೆ) ಮತ್ತು ಡೇಟು (ದಿನಾಂಕ) ಮಾತ್ರ ನೋಡುವಂತಾಗಿದೆ….

ಮೈಸೂರು ನಗರದಲ್ಲಿ ಮುಡಾದ  2500 ಬಿಡಿ ನಿವೇಶನ ಲಭ್ಯ
ಮೈಸೂರು

ಮೈಸೂರು ನಗರದಲ್ಲಿ ಮುಡಾದ 2500 ಬಿಡಿ ನಿವೇಶನ ಲಭ್ಯ

January 13, 2019

ಮೈಸೂರು: ಬಡಾವಣೆ ನಿರ್ಮಿಸಲು ಅಗತ್ಯ ವಿರುವ ಭೂಮಿ ಖರೀದಿಸಲು ರೈತರೊಂದಿಗೆ ಬೆಲೆಯಲ್ಲಿ ಚೌಕಾಸಿ ಮಾಡುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವುದೀಗ ಮತ್ತಷ್ಟು ಸುಲಭ ಸಾಧ್ಯವಾಗಿದೆ. ಭೂಮಿ ಮೇಲೆ ಹಣ ಹೂಡಿಕೆ ಮಾಡಿ ಅಭಿವೃದ್ಧಿಗೊಳಿಸಲು ಮಾಡಿದ ವೆಚ್ಚ ಭರಿಸಲು ಅರ್ಜಿದಾರರಿಗೆ ಹಂಚಿಕೆ ಮಾಡಿದ ನಿವೇಶನಗಳ ಮೇಲೆ ಹಾಕಬೇಕಾಗುತ್ತದೆ. ಅದಕ್ಕಾಗಿ ಮುಡಾ 40:60 ಅನುಪಾತದಲ್ಲಿ ರೈತರಿಂದ ಭೂ ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದೆಯಾದರೂ, 50:50ರ ಅನುಪಾತಕ್ಕೆ ಭೂ ಮಾಲೀಕರು ಪಟ್ಟು ಹಿಡಿದಿದ್ದಾರೆ. ಅದರಿಂದಾಗಿ ಹೊಸ ಬಡಾವಣೆ ನಿರ್ಮಿಸುವುದು ಪ್ರಾಧಿಕಾರಕ್ಕೆ…

ಕೃಷಿ ಬಿಕ್ಕಟ್ಟು ಕುರಿತು ಫೆ.13ರಂದು   ಬೆಂಗಳೂರಿನಲ್ಲಿ ಚರ್ಚಾಗೋಷ್ಠಿ
ಮೈಸೂರು

ಕೃಷಿ ಬಿಕ್ಕಟ್ಟು ಕುರಿತು ಫೆ.13ರಂದು ಬೆಂಗಳೂರಿನಲ್ಲಿ ಚರ್ಚಾಗೋಷ್ಠಿ

January 13, 2019

ಕ್ಯಾತನಹಳ್ಳಿಯಲ್ಲಿ ಫೆ.18ಕ್ಕೆ ಪುಟ್ಟಣ್ಣಯ್ಯ ಕಂಚಿನ ಪ್ರತಿಮೆ ಅನಾವರಣ ಮೈಸೂರು: ರೈತ ನಾಯಕ ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 81ನೇ ನೆನಪಿನ ಅಂಗವಾಗಿ ಕೃಷಿ ಬಿಕ್ಕಟ್ಟು ಕುರಿತಂತೆ ಫೆ.13ರಂದು ಬೆಂಗ ಳೂರಿನಲ್ಲಿ ಕಮ್ಮಟ, ಚರ್ಚಾ ಕಾರ್ಯಕ್ರಮ ಹಾಗೂ ದಿ. ಕೆ.ಎಸ್. ಪುಟ್ಟಣ್ಣಯ್ಯ ಅವರ ಕಂಚಿನ ಪ್ರತಿಮೆಯನ್ನು ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಫೆ.18ರಂದು ಅನಾವರಣ ಸಮಾರಂಭ ಆಯೋ ಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ….

ಅವರೇಕಾಳು ತಿಂಡಿ-ತಿನಿಸು ಸವಿಯುವ ಸದವಕಾಶ
ಮೈಸೂರು

ಅವರೇಕಾಳು ತಿಂಡಿ-ತಿನಿಸು ಸವಿಯುವ ಸದವಕಾಶ

January 13, 2019

ಮೈಸೂರು: ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಆಲಮ್ಮ ಕಲ್ಯಾಣ ಮಂಟಪ ಆವರಣದಲ್ಲಿ ಎರಡು ದಿನಗಳ ಅವರೇ ಕಾಳು ಮೇಳ ಆರಂಭವಾಯಿತು. ನಗರದ ಚಾಟ್ಸ್ ಮನೆ ಆಯೋಜಿಸಿರುವ ಅವರೇಕಾಯಿ ಮೇಳ ದಲ್ಲಿ 5 ಮಳಿಗೆ ತೆರೆಯಲಾಗಿದ್ದು, ಅವರೇಕಾಳಿ ನಿಂದ ತಯಾರಿಸಿರುವ ಬಗೆ ಬಗೆ ಖಾದ್ಯ, ತಿಂಡಿ, ತಿನಿಸು ಗ್ರಾಹಕರ ನಾಲಿಗೆಯಲ್ಲಿ ನೀರೂರಿಸುತ್ತಿದೆ. ಸುಗ್ಗಿಕಾಲದ ಹಿನ್ನೆಲೆಯಲ್ಲಿ ಆಯೋಜಿಸಿರುವ ಈ ಮೇಳದಲ್ಲಿ ಅವರೇಕಾಳಿನ ಹೋಳಿಗೆ, ಪೊಂಗಲ್, ದೋಸೆ, ಪಲಾವ್, ಉಪ್ಪಿಟ್ಟು, ಅಕ್ಕಿರೊಟ್ಟಿ, ಪಲ್ಯ ಸೇರಿದಂತೆ ಸುಮಾರು 20 ಬಗೆಯ ತಿನಿಸು ಲಭ್ಯವಿದೆ. ಬೆಳಿಗ್ಗೆ…

ಅಧಿಕಾರ ಇಲ್ಲದಿದ್ದಾಗಲೂ ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ಅಭಿಮಾನವಿತ್ತು: ಜಿಟಿಡಿ
ಮೈಸೂರು

ಅಧಿಕಾರ ಇಲ್ಲದಿದ್ದಾಗಲೂ ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ಅಭಿಮಾನವಿತ್ತು: ಜಿಟಿಡಿ

January 13, 2019

ಬನ್ನೂರು: ಮುಖ್ಯಮಂತ್ರಿ ಕುಮಾರ ಸ್ವಾಮಿ ಈ ಹಿಂದೆ ಅಧಿಕಾರ ಇಲ್ಲದಿದ್ದಾ ಗಲೂ ರೈತರ ಪರ ಅತ್ಯಂತ ಹೆಚ್ಚಿನ ಕಾಳಜಿ ಹೊಂದಿದ್ದರು. ತಮ್ಮ ಕೈಯಿಂದ ರೈತರ ಸಂಕಷ್ಟಕ್ಕೆ ನೆರವು ನೀಡುತ್ತಿದ್ದರು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡ ತಿಳಿಸಿದ್ದಾರೆ. ಅವರು ಇಂದು ಇಲ್ಲಿನ ಸರೋವರ ವೀರಾಂಜನೇಯ ಸೇವಾ ಸಮಿತಿ ಹಮ್ಮಿ ಕೊಂಡಿದ್ದ ಜೋಡಿ ಎತ್ತು ಹಾಗೂ ಹಸು ಗಳ ಗಾಡಿ ಓಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದ ಯಾವುದೇ ಭಾಗದಲ್ಲಿ…

ಮತದಾರರ ಮನೋಭಾವನೆ ಬದಲಾಗಬೇಕು
ಮೈಸೂರು

ಮತದಾರರ ಮನೋಭಾವನೆ ಬದಲಾಗಬೇಕು

January 13, 2019

ಮೈಸೂರು: ಬರೀ ಮಾತು, ಹಣ, ಜಾತಿಗೆ ಓಟು ಹಾಕುವ ಮನೋ ಭಾವವನ್ನು ಮತದಾರರು ಬೆಳೆಸಿಕೊಂಡಿ ದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಹೇಳಿದರು. ಮೈಸೂರು ನಗರ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಎನ್.ಆರ್.ಮೊಹ ಲ್ಲಾದ ರಿಲಯನ್ಸ್ ಫಂಕ್ಷನ್ ಹಾಲ್‍ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗ ವಾಗಿ ಹಮ್ಮಿಕೊಂಡಿದ್ದ ‘ವಿಭಿನ್ನ ವಿಚಾರ ಗಳ ಮುಖಾಮುಖಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದಾರತೆ ಯಿಂದ ಮತ ಹಾಕುತ್ತೇವೆ ಎಂಬ ಮನೋ ಭಾವವನ್ನು ಮತದಾರರು ಬಿಡಬೇಕು ಎಂದರು. ಹಿಂದೆ ಮಹಿಳೆಯರಿಗೆ ಮತದಾನದ…

ಮೈಸೂರಿನ ವಿವಿಧೆಡೆ ಸ್ವಾಮಿ  ವಿವೇಕಾನಂದರ ಜಯಂತಿ ಆಚರಣೆ
ಮೈಸೂರು

ಮೈಸೂರಿನ ವಿವಿಧೆಡೆ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

January 13, 2019

ಮೈಸೂರು: ಮೈಸೂರಿನ ವಿವಿಧೆಡೆ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಇಂದು ರಾಷ್ಟ್ರೀಯ ಯುವ ಜನೋತ್ಸವ ಕಾರ್ಯ ಕ್ರಮ ಏರ್ಪಡಿಸಲಾಗಿತ್ತು. ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ಕೆಆರ್‍ಎಸ್ ರಸ್ತೆಯ ಚೆಲುವಾಂಬ ಪಾರ್ಕ್ ನಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜ್ಞಾನಾ ನಂದ ಮಹಾರಾಜ್ ಅವರು ಯುವ ಜನೋತ್ಸವವನ್ನು ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದರ ಭಾವಚಿತ್ರ ಇರಿಸಿದ್ದ ರಥವನ್ನು ಶಾಲಾ ಮಕ್ಕಳು ಬ್ಯಾಂಡ್ ನೊಂದಿಗೆ ಪಡುವಾರಹಳ್ಳಿ, ಮಾತೃ ಮಂಡಳಿ ಸರ್ಕಲ್, ಟೆಂಪಲ್ ರಸ್ತೆ ಮಾರ್ಗ…

ಮೈಸೂರು ಸ್ವಚ್ಛತೆಗೆ ಕೈಜೋಡಿಸುತ್ತಿರುವ ಪೊಲೀಸರು, ಸಂಘ ಸಂಸ್ಥೆಗಳು
ಮೈಸೂರು

ಮೈಸೂರು ಸ್ವಚ್ಛತೆಗೆ ಕೈಜೋಡಿಸುತ್ತಿರುವ ಪೊಲೀಸರು, ಸಂಘ ಸಂಸ್ಥೆಗಳು

January 13, 2019

ಮೈಸೂರು: ಸ್ವಚ್ಛ ಭಾರತ ಅಭಿಯಾನದಡಿ ಮೈಸೂರು ಮಹಾನಗರಪಾಲಿಕೆ ಕೈಗೊಂಡಿರುವ ಸ್ವಚ್ಛ ಸರ್ವೇಕ್ಷಣಾ ಕಾರ್ಯದಲ್ಲಿ ಪೊಲೀಸರು, ನಾಗರಿಕರು ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸಿವೆ. ಮೈಸೂರಿನ ಲಕ್ಷ್ಮೀಪುರಂಠಾಣೆ ಇನ್ಸ್ ಪೆಕ್ಟರ್ ಜಿ.ಆರ್.ರಘು ನೇತೃತ್ವದಲ್ಲಿ ನಂಜು ಮಳಿಗೆ ಬಳಿ ಸ್ವಚ್ಛತಾ ಕಾರ್ಯ ನಡೆಸಿದರು. ಠಾಣಾ ಸಿಬ್ಬಂದಿ, ಸ್ಥಳೀಯ ಕಾರ್ಪೊರೇಟರ್ ಪ್ರಮೀಳಾಭರತ್ ಹಾಗೂ ನಾಗರಿಕರು ಬೀದಿ, ಪಾರ್ಕ್‍ಗಳನ್ನು ಇಂದು ಸ್ವಚ್ಛಗೊಳಿಸಿ ಪಾಲಿಕೆಯೊಂದಿಗೆ ಕೈ ಜೋಡಿಸಿದರು. ರಾಜೀವ್‍ನಗರದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ, ಶಾಸಕ ತನ್ವೀರ್ ಸೇಟ್ ನೇತೃತ್ವದಲ್ಲಿ ಇಂದು ಸ್ಥಳೀಯರು ಸ್ವಚ್ಛತೆ ಕಾರ್ಯ ನಡೆಸಿ…

1 1,179 1,180 1,181 1,182 1,183 1,611
Translate »