ಗೋಣಿಕೊಪ್ಪಲು: ಹಾಕಿ ಕೂರ್ಗ್ ವತಿಯಿಂದ ನಾಳೆ (ಸೋಮವಾರ) ಯಿಂದ ಪೊನ್ನಂ ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಬಿ. ಡಿವಿಜನ್ ಹಾಕಿ ಲೀಗ್ ಆರಂಭಗೊಳ್ಳಲಿವೆ. 20 ತಂಡಗಳು ‘ಬಿ’ ಡಿವಿಜನ್ನಲ್ಲಿ ಸೆಣಸಾಟ ನಡೆಸಲಿವೆ. ಇಲ್ಲಿನ ಟಾಪ್ 4 ತಂಡಗಳು ‘ಎ’ ಡಿವಿಜûನ್ಗೆ ಲಗ್ಗೆ ಇಡಲಿವೆ. ‘ಬಿ’ ಡಿವಿಜûನ್ ಹಾಕಿ ನವೆಂಬರ್ 12 ರಿಂದ ನವೆಂಬರ್ 19 ರವರೆಗೆ ನಡೆಯ ಲಿದೆ. ಈ ಪಂದ್ಯಾವಳಿಯಲ್ಲಿ ಪೊನ್ನಂ ಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಮಹಾದೇವ ಸ್ಪೋಟ್ರ್ಸ್ ಕ್ಲಬ್, ಶ್ರಿಮಂಗಲ ನಾಡ್…
ಯಶಸ್ವಿ ಟಿಪ್ಪು ಜಯಂತಿ
November 11, 2018ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅನುಪಸ್ಥಿತಿಯಲ್ಲಿ ಸರ್ಕಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಟಿಪ್ಪು ಜಯಂತಿ ಆಚರಿಸಿತು. ಜಯಂತಿ ಆಚರಣೆಗೆ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತಾದರೂ, ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದ ಸರ್ಕಾರ ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಆಚರಣೆ ನಡೆಸಿ, ಆ ಸಮು ದಾಯವನ್ನು ತೃಪ್ತಿಪಡಿಸಿದೆ. ಕೆಲವು ಕೇಂದ್ರಗಳಲ್ಲಿ ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜಯಂತಿಗೆ…
ಕೋಮುವಾದದ ಕನ್ನಡಕ ಕಳಚಿಟ್ಟರೆ ಟಿಪ್ಪು ನೈಜ ವ್ಯಕ್ತಿತ್ವ ಕಾಣಬಹುದು
November 11, 2018ಬೆಂಗಳೂರು: ‘ಟಿಪ್ಪು ವಿರೋಧಿಗಳಿಗೆ ನಿಜವಾದ ಟಿಪ್ಪು ಸುಲ್ತಾನ್ ಕಾಣಬೇಕಾದರೆ ಕೋಮುವಾದದ ಕನ್ನಡಕ ಕಳಚಿಟ್ಟು ನೋಡಬೇಕಾಗುತ್ತದೆ ಎಂದು ಬಿಜೆಪಿ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ. ಟಿಪ್ಪು ಸುಲ್ತಾನ್ನ ಅಪ್ರತಿಮ ಸೇವೆಯನ್ನು ಕೊಂಡಾಡಿ ರುವ ಅವರು ಟ್ವೀಟ್ ಮೂಲಕ ಮತ್ತು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಯಂತಿ ವಿರೋಧಿ ಸುತ್ತಿರುವ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ದಲ್ಲಿ ಅವರು ಪ್ರಕಟಿಸಿದ ಪುಸ್ತಕವನ್ನು ಬಿಜೆಪಿ ನಾಯಕರು ಓದಿದರೆ ತಿಳಿಯುತ್ತದೆ. ಅಷ್ಟೇ ಏಕೆ ಶೆಟ್ಟರ್…
ಟಿಪ್ಪು ಜಯಂತಿ ವಿರುದ್ಧ ಕೊಡಗಲ್ಲಿ ಕರಾಳ ದಿನಾಚರಣೆ
November 11, 2018ಮಡಿಕೇರಿ: ರಾಜ್ಯ ಸರಕಾರದ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದ್ದ ಕೊಡಗು ಬಂದ್ಗೆ ನಗರದಲ್ಲಿ ಉತ್ತಮ ಸ್ಪಂದನೆ ಕಂಡು ಬಂತು. ಜನರು ಕೂಡ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್ಗೆ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಕರಾಳ ದಿನ ಆಚರಿಸುವ ಮೂಲಕ ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿದರು. ಕುಟ್ಟಪ್ಪ ಸ್ಮರಣೆ-ಬಂಧನ: 2015ರಲ್ಲಿ ಮಡಿಕೇರಿಯಲ್ಲಿ…
ಸಿಎಂ, ಡಿಸಿಎಂ ಗೈರಿಗೆ ಶಾಸಕ ತನ್ವೀರ್ ಅಸಮಾಧಾನ
November 11, 2018ಮೈಸೂರು: ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರು ಹಾಜರಾಗಿರುವುದಕ್ಕೆ ಶಾಸಕ ತನ್ವೀರ್ ಸೇಠ್, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ವೈದ್ಯರ ಸಲಹೆಯಂತೆ ವಿಶ್ರಾಂತಿ ನೆಪದಲ್ಲಿ ಮುಖ್ಯ ಮಂತ್ರಿಗಳು ಗೈರಾದರೆ, ವಿದೇಶ ಪ್ರಯಾಣ ಕಾರಣ ಹೇಳಿ ಉಪ ಮುಖ್ಯಮಂತ್ರಿಗಳು ತಪ್ಪಿಸಿ ಕೊಂಡಿದ್ದಾರೆ. ಇದರಿಂದ ಮುಸ್ಲಿಂ ಸಮುದಾಯಕ್ಕೆ ಅಪಮಾನವಾಗಿದೆ ಎಂದರು. ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿರುವುದು ಸತ್ಯ. ಆದರೆ…
ಮೈಸೂರು ವಿವಿಯಲ್ಲಿ ಟಿಪ್ಪು ಅಧ್ಯಯನ ಪೀಠ ಸ್ಥಾಪಿಸಿ: ಶಾಸಕ ತನ್ವೀರ್ ಸೇಠ್ ಆಗ್ರಹ
November 11, 2018ಮೈಸೂರು: ನಾಡು, ನುಡಿ ಹಾಗೂ ದೇಶದ ರಕ್ಷಣೆಗಾಗಿ ಹೋರಾಡಿ, ಪ್ರಾಣತ್ಯಾಗ ಮಾಡಿದ ಹಜರತ್ ಟಿಪ್ಪು ಸುಲ್ತಾನ್ ಅವರ ಬಗ್ಗೆ ಸಂಶೋಧನೆ ನಡೆಸಲು ಮೈಸೂರು ವಿಶ್ವವಿದ್ಯಾನಿಲಯ ದಲ್ಲಿ ಟಿಪ್ಪು ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಶಾಸಕ ತನ್ವೀರ್ ಸೇಠ್ ಅವರು ಇಂದಿಲ್ಲಿ ಒತ್ತಾಯಿಸಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಶಿಕ್ಷಣ ನೀತಿ, ಸಾರಾಯಿ ನಿಷೇಧ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಕೆಆರ್ಎಸ್ ಶಂಕುಸ್ಥಾಪನೆಯಂತಹ ಮಹಾ ಯೋಜನೆಗಳನ್ನು ಅಂದೇ ಜಾರಿಗೆ ತಂದಿದ್ದ ಟಿಪ್ಪು…
ಟಿಪ್ಪು ಸುಲ್ತಾನ್ ಮೊದಲು ತಿಪ್ಪೇಸ್ವಾಮಿ ಆಗಿದ್ದ!
November 11, 2018ಬಳ್ಳಾರಿ: ಮೈಸೂರಿನ ಟಿಪ್ಪು ಸುಲ್ತಾನ್ನ ಮುಂಚಿನ ಹೆಸರು ತಿಪ್ಪೇಸ್ವಾಮಿ ಎಂದಾಗಿತ್ತು! ಹೀಗೊಂದು ಆಶ್ಚರ್ಯಕರವಾದ ಮಾತು ಹೇಳಿದ್ದು ಬೇರಾರೂ ಅಲ್ಲ, ಬಳ್ಳಾರಿಯಲ್ಲಿ ಇತ್ತೀಚೆಗಷ್ಟೇ ನಡೆದ ಉಪ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ. ಟಿಪ್ಪು ಸುಲ್ತಾನ್ ನಾಯಕನಹಟ್ಟಿಯ ತಿಪ್ಪೇಸ್ವಾಮಿ ವರಪ್ರಸಾದ ದಿಂದ ಹುಟ್ಟಿದವರು. ಅದಕ್ಕೇ ಅವರಿಗೆ ತಿಪ್ಪೇಸ್ವಾಮಿ ಅಂತಾ ಮೊದಲು ಹೆಸರಿಟ್ಟಿದ್ದರು. ಇದನ್ನು ಅಲ್ಲಿನ ಜನರೇ ಹೇಳುತ್ತಾರೆ. ಬಳಿಕ ಅವರ ಹೆಸರು ಟಿಪ್ಪು ಎಂದು ಪರಿವರ್ತನೆಯಾಗಿದೆ ಎಂದು ನೂತನ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು. ಜಿಲ್ಲಾಡಳಿತ, ಜಿ.ಪಂ, ಕನ್ನಡ…
ಮಾದೇಶ್ವರ, ಮಂಟೇಸ್ವಾಮಿ ಕಾವ್ಯಗಳ ಅಹೋರಾತ್ರಿ ಕಥಾ ಗಾಯನಕ್ಕೆ ಸಂಭ್ರಮದ ಚಾಲನೆ
November 11, 2018ಮೈಸೂರು: ಆಗಸದ ಸೂರ್ಯ ಮರೆಯಾಗಿ ಕಾರ್ಮೋಡ ಕವಿ ದಂತೆ ಇಳಿ ಸಂಜೆಯ ಮಬ್ಬಿನಲಿ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದ ವೇದಿಕೆ ಯಲ್ಲಿ ಜನಪದ ಗಾಯನದ ಮಾಧು ರ್ಯದ ಕಂಪು ಎಲ್ಲೆಡೆ ಪಸರಿಸಿತು. ಕಲಾಮಂದಿರದ ಆವರಣದಲ್ಲಿ `ಧರೆಗೆ ದೊಡ್ಡವರು’ ಶೀರ್ಷಿಕೆಯಡಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಶನಿವಾರ ಆಯೋಜಿಸಿದ್ದ ಮಾದೇಶ್ವರ ಹಾಗೂ ಮಂಟೇಸ್ವಾಮಿ ಕಾವ್ಯಗಳ ಆಹೋರಾತ್ರಿ ಕಥಾ ಗಾಯನ ಕಾರ್ಯಕ್ರಮದಲ್ಲಿ ಮಾದೇಶ್ವರ ಹಾಗೂ ಮಂಟೇಸ್ವಾಮಿ ಅವರನ್ನು ಕುರಿತ ಹಾಡು ಗಳು ಪ್ರೇಕ್ಷಕರ ಮನ ತಣಿಸಿದವು. ಮೊದಲಿಗೆ ಮೈಸೂರು ಗುರುರಾಜು ಮತ್ತು…
ಪ್ರತಿಭಾನ್ವಿತ ಕ್ಯಾಥೋಲಿಕ್ ವಿದ್ಯಾರ್ಥಿಗಳಿಗೆ ಅಭಿನಂದನೆ
November 11, 2018ಮೈಸೂರು: ಮೈಸೂರಿನ ಬನ್ನಿಮಂಟಪದಲ್ಲಿರುವ ಸೆಂಟ್ ಫಿಲೋ ಮಿನಾ ಕಾಲೇಜು ಸಭಾಂಗಣದಲ್ಲಿ ಎಸ್ಎಸ್ ಎಲ್ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್ಡಿ ಪದವಿ ಮತ್ತು ಇತರೆ ವೃತ್ತಿಪರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡಿದ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಪ್ರತಿಭಾನ್ವಿತ ಕ್ಯಾಥೋಲಿಕ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮೈಸೂರು ಧರ್ಮಕ್ಷೇತ್ರ ಶಿಕ್ಷಣ ಸಂಸ್ಥೆ (ಎಂಡಿಇಎಸ್) ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿಯಲ್ಲಿ 73, ಪಿಯುಸಿಯ 40, ಬಿಇಡಿ ಮತ್ತು ಯುಜಿ ವಿಭಾಗದ 66, ಪಿಹೆಚ್ಡಿ, ಸ್ನಾತಕೋತ್ತರ ಹಾಗೂ ಡಿಪ್ಲೊಮೊ ವಿಭಾಗದಲ್ಲಿ…
ಸಾಮಾಜಿಕ ನ್ಯಾಯದ ಪರವಾಗಿರುವವರನ್ನೇ ಬೆಂಬಲಿಸಿ
November 11, 2018ಮೈಸೂರು: ಕಾಯಕ ಹಾಗೂ ಶೋಷಿತ ಸಮುದಾಯದವರು, ಯಾರು ಸಾಮಾಜಿಕ ನ್ಯಾಯದ ಪರ-ವಿರುದ್ಧ ಇದ್ದಾರೆ ಎನ್ನುವುದನ್ನು ಚಿಂತಿಸಿ, ಪರ ಇದ್ದವರ ಬೆನ್ನಿಗೆ ನಿಲ್ಲಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು. ಮೈಸೂರಿನ ಪುರಭವನದ ಆವರಣದಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂ ಟದ ಉದ್ಘಾಟನಾ ಸಮಾರಂಭದಲ್ಲಿ ಮಾತ ನಾಡಿದ ಅವರು, ಕೆಲವರು ಸ್ವಾರ್ಥಕ್ಕಾಗಿ ಶೋಷಿತರು ಹಾಗೂ ಕಾಯಕ ಸಮಾಜ ಗಳ ವಿರುದ್ಧ ಷಡ್ಯಂತ್ರ ಹೆಣೆಯುತ್ತಾ ಬಂದಿದ್ದಾರೆ. ರಾಜಕೀಯ ಲಾಭಕ್ಕಾಗಿ ಕೇವಲ ಕಾಯಕ ಸಮಾಜದ ಪರವಾಗಿರುವುದಾಗಿ ಮೊಸಳೆ ಕಣ್ಣೀರು ಸುರಿಸಿ…