ಭೇರ್ಯ: ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಯಿಂದ 50 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಕೃಷ್ಣರಾಜನಗರ ತಾಲೂಕು ಮೂಡಲ ಬೀಡು ಗ್ರಾಮದಲ್ಲಿ ಗ್ರಾಮಸ್ಥರಿಂದ ಅಭಿ ನಂದನೆ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನ ಬಹುತೇಕ ಪ್ರಮುಖ ರಸ್ತೆಗಳು ಅಭಿವೃದ್ಧಿಗೊಂಡಿವೆ. ಈಗ ಬಿಡು ಗಡೆಯಾಗಿರುವ ಅನುದಾನದಲ್ಲಿ ಮಂಚನ ಹಳ್ಳಿ-ಬಾಲೂರು, ಮಿರ್ಲೆ-ಅಂಕನಹಳ್ಳಿ ಸೇರಿದಂತೆ ಉಳಿದೆಲ್ಲಾ ರಸ್ತೆಗಳು ಸಮಗ್ರ ವಾಗಿ ಅಭಿವೃದ್ಧಿಯಾಗಲಿದೆ ಎಂದರು. ರೇಷ್ಮೆ ಮಾರುಕಟ್ಟೆ ಸ್ಥಾಪನೆ: ರೇಷ್ಮೆ ಬೆಳೆಗೆ ಉತ್ತೇಜನ…
ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆ ಮಾಡಿದ್ದೇ ಟಿಪ್ಪು
November 11, 2018ನಂಜನಗೂಡು: ಸ್ವಾತಂತ್ರ್ಯ ಹೋರಾಟದ ಪರಿ ಕಲ್ಪನೆ ಶುರುವಾದುದ್ದೇ ಟಿಪ್ಪುವಿನಿಂದ. ಅವರ ಹೋರಾಟ ಸ್ವಾಭಿ ಮಾನದ ಸಂಕೇತ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಟಿಪ್ಪು ಸುಲ್ತಾನ್ 269ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸರ್ಕಾರ ಟಿಪ್ಪು ಜಯಂತಿ ಮಾತ್ರವಲ.್ಲ ಮೂವತ್ತಕ್ಕೂ ಹೆಚ್ಚು ಮಹನೀಯರ ಜಯಂತಿ ಆಚರಣೆ ಮಾಡಿದೆ. ಆದರೆ ಟಿಪ್ಪು ಜಯಂತಿಗೆ ಮಾತ್ರ ವಿರೋಧ ಸಲ್ಲದು ಎಂದ ಅವರು, ಭಯದ ವಾತಾವರಣದಲ್ಲಿ…
ಪರಂಪರೆ ಬಿಂಬಿಸಿದ ಕಂಡಾಯ, ನೀಲಗಾರರ ಮೆರವಣಿಗೆ
November 11, 2018ಮೈಸೂರು: ಮಂಟೇಸ್ವಾಮಿ ಪರಂಪರೆಯನ್ನು ಬಿಂಬಿಸುವ ಕಂಡಾಯಗಳ ಹಾಗೂ ನೀಲಗಾರರ ಮೆರ ವಣಿಗೆ ಶನಿವಾರ ವಿಜೃಂಭಣೆಯಿಂದ ನಡೆಯಿತು. ತೋಟಗಾರಿಕಾ ಇಲಾಖೆ ಕರ್ಜನ್ಪಾರ್ಕ್ ಆವರಣ ದಲ್ಲಿ ಚಾಮರಾಜನಗರ, ಮಂಡ್ಯ, ಮೈಸೂರು ಸೇರಿ ದಂತೆ ಮತ್ತಿತರೆ ಕಡೆಗಳಿಂದ ಆಗಮಿಸಿದ್ದ ಮಂಟೇಸ್ವಾಮಿ ಪರಂ ಪರೆಯ ಸಿದ್ದಪ್ಪಾಜಿ, ರಾಚಪ್ಪಾಜಿ, ಚೆನ್ನಾಜಮ್ಮ, ದೊಡ್ಡಮ್ಮ ತಾಯಿ ಹೀಗೆ 40ಕ್ಕೂ ಹೆಚ್ಚು ಕಂಡಾಯಗಳನ್ನು ಹೂವಿ ನಿಂದ ಅಲಂಕರಿಸಿ, ಪೂಜೆ ನೆರವೇರಿಸಲಾಯಿತು. ನಂತರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕೊಂಬು ಕಂಸಾಳೆ, ಡೊಳ್ಳು ಕುಣಿತ, ನಗಾರಿ-ತಮಟೆ ಯೊಂದಿಗೆ ಹೊರಟ ಕಂಡಾಯ ಹಾಗೂ…
ಟಿಪ್ಪು ಸುಲ್ತಾನ್ ರೈತ ಪರ ಆಡಳಿತಗಾರ
November 11, 2018ಹುಣಸೂರು: ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆ ಯನ್ನು ಸೃಷ್ಟಿ ಮಾಡಿದ್ದೇ ಟಿಪ್ಪು. ರೈತರ ಬಗ್ಗೆ ಕಾಳಜಿಯಿಂದ ಭೂಮಿ ಒಡೆತನ, ಆರ್ಟಿಸಿ ವಿಧಾನ ಜಾರಿಗೆ ತಂದ ಮಹಾನ್ ರಾಷ್ಟ್ರನಾಯಕ ಎಂದು ಶಾಸಕ ಎ.ಎಚ್.ವಿಶ್ವನಾಥ್ ಬಣ್ಣಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಿದ್ದ 269ನೇ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ರಾಷ್ಟ್ರಕ್ಕೆ ಸಕ್ಕರೆ ಮತ್ತು ಪರ್ಶಿಯನ್ ದೇಶದಿಂದ ರೇಷ್ಮೆ ತಂದಿದ್ದು, ಭೂ ಸುಧಾರಣೆ, ದಲಿತರಿಗೆ ಭೂಒಡೆತನ, ಹಿಂದೂ ದೇವಾಲಯ ಗಳ…
ಮೂವರು ದುಷ್ಕರ್ಮಿಗಳಿಂದ ವ್ಯಕ್ತಿ ಸುಲಿಗೆ
November 11, 2018ಮೈಸೂರು: ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ವ್ಯಕ್ತಿಯೊಬ್ಬರನ್ನು ಬೆದರಿಸಿ, ಸುಲಿಗೆ ಮಾಡಿರುವುದಾಗಿ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರು ಮೂಲದ ಅರವಿಂದ್ ದೂರು ನೀಡಿದ್ದು, ನ.9ರ ರಾತ್ರಿ ಸುಮಾರು 12 ಗಂಟೆ ವೇಳೆಯಲ್ಲಿ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ, ಮೂವರು ಅಪರಿಚಿತರು ಸರ್ಕಾರಿ ಅತಿಥಿ ಗೃಹದ ಕಾಂಪೌಂಡ್ ಒಳಗೆ ಕರೆದು ಕೊಂಡು ಹೋಗಿ ಬ್ಲೇಡ್ ತೋರಿಸಿ, ಪರ್ಸ್ನಲ್ಲಿದ್ದ 2 ಸಾವಿರ ರೂ. ಹಣ, ಮೊಬೈಲ್, ಚಾರ್ಜರ್, ಹೆಡ್ಫೋನ್ ಹಾಗೂ ಬೆಳ್ಳಿ ಉಂಗುರವನ್ನು ಕಿತ್ತುಕೊಂಡರು. ಅಲ್ಲದೆ…
ಮೈಸೂರಲ್ಲಿ ಇಂದಿನಿಂದ 6 ದಿನ `ಗಾನಸಿರಿ-ವೇದಾಂತ ಲಹರಿ’
November 11, 2018ಮೈಸೂರು: ಮೈಸೂರಿನ ಕೃಷ್ಣಮೂರ್ತಿಪುರಂ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನ.11ರಿಂದ 16ರವರೆಗೆ `ಗಾನಸಿರಿ-ವೇದಾಂತ ಲಹರಿ’ ಭಾಗ -3 ಭಾವಿಸಮೀರ ಶ್ರೀ ವಾದಿರಾಜ ವೈಭವಂ ಸಂಗೀತ ಕಾರ್ಯಕ್ರಮ ನಡೆಯಲಿದೆ. ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಕಾರ್ಯಕ್ರಮ ಆಯೋ ಜಿಸಿದ್ದು, ಪರಮಪೂಜ್ಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳ ಸಾನ್ನಿಧ್ಯದಲ್ಲಿ ನವೆಂಬರ್ 11ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಪ್ರತಿದಿನ ಸಂಜೆ 5ರಿಂದ 8ರವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಾದಿರಾಜರು ರಚಿಸಿರುವ ಸಾಹಿತ್ಯಕ್ಕೆ ಸಂಗೀತ ನೀಡಿ, ಕಾರ್ಯಕ್ರಮದಲ್ಲಿ ಗಾಯನ ನಡೆಯಲಿದೆ…
ನ.12ರಿಂದ 17ರವರೆಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರ
November 11, 2018ಮೈಸೂರು: ಮೈಸೂರಿನ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ನವೆಂಬರ್ 12ರಿಂದ 17ರವರೆಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯುವ ಶಿಬಿರದಲ್ಲಿ ನಮ್ಮ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಕೆ.ಎಸ್. ಸದಾನಂದ ಸೇರಿದಂತೆ 7 ಮಂದಿ ಹೃದ್ರೋಗ ತಜ್ಞರು ಭಾಗವಹಿಸಿ, ತಪಾಸಣೆ ನಡೆಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ. ಶಿಬಿರದಲ್ಲಿ ಇಸಿಜಿ,…
ಕೂಡಿಗೆ ಬಳಿ ಯುವಕನಿಗೆ ಚೂರಿ ಇರಿತ
November 11, 2018ಕುಶಾಲನಗರ: ಸಮೀಪದ ಕೂಡಿಗೆ ಗ್ರಾ.ಪಂ.ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕೇವಲ ಶನಿವಾರ ಸಂಜೆ ಯುವಕನೋರ್ವನಿಗೆ ಚೂರಿಯಿಂದ ಇರಿದ ಪ್ರಕರಣ ವರದಿಯಾಗಿದೆ. ಹುದುಗೂರು ಗ್ರಾಮದ ನಿವಾಸಿ ಕಿರಣ್ (26 ವರ್ಷ)ಹಲ್ಲೆಗೆ ಒಳಗಾದ ಯುವಕ. ಈತ ಸಿದ್ದಾಪುರ ಬಳಿಯ ರೇಸಾರ್ಟ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ರಜೆ ಮೇಲೆ ತವರೂರಿಗೆ ಬಂದಿದ್ದ. ಶನಿವಾರ ಸಂಜೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲೆಗೆ ಹೆಲ್ಮೆಟ್ ಹಾಕಿಕೊಂಡಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಿರಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭ ಕಿರಣ್ ಹೊಟ್ಟೆ ಭಾಗಕ್ಕೆ…
ಗುಂಪು ಕೃಷಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ನಿರ್ಧಾರ
November 10, 2018ಬೆಂಗಳೂರು: ಕೃಷಿಯಿಂದ ರೈತರು ವಿಮುಖ ರಾಗುವುದನ್ನು ತಡೆದು, ಹೆಚ್ಚು ಉತ್ಪಾದನೆಗೆ ಒತ್ತು ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ `ಗುಂಪು ಕೃಷಿ ಯೋಜನೆ’ ಅನುಷ್ಠಾನಗೊಳಿಸಲು ಮುಂದಾಗಿದೆ. ಇದರ ಜೊತೆಗೆ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಲು ಮಹಿಳಾ ಸ್ವಸಹಾಯ ಸಂಘಗಳಿಗೆ ಹತ್ತು ಲಕ್ಷ ರೂ.ವರೆಗೆ ಸಹಾಯ ಸೌಲಭ್ಯ ಒದಗಿಸುವ ‘ಕಾಯಕ’ ಯೋಜನೆ ಡಿಸೆಂಬರ್ ಮೊದಲ ವಾರದಿಂದ ಜಾರಿಗೊಳ್ಳಲಿದೆ. ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಸಣ್ಣ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಹತ್ತು ಸಾವಿರ ರೂ.ವರೆಗೆ ಸಾಲ…
ರೆಡ್ಡಿ ಶರಣಾಗತಿ?
November 10, 2018ಬೆಂಗಳೂರು: ಆಂಬಿಡೆಂಟ್ ವಂಚನೆ ಪ್ರಕರಣದ ಆರೋಪಿ ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಯಾವುದೇ ಕ್ಷಣದಲ್ಲಿ ಶರಣಾಗತಿಯಾಗುವ ಸಾಧ್ಯತೆ ಇದೆ. ಬಿಜೆಪಿಯ ಹಿರಿಯ ನಾಯಕರೊಬ್ಬರು ಇಂದು ತನಿಖಾಧಿಕಾರಿಯನ್ನು ಸಂಪರ್ಕಿಸಿ, ರೆಡ್ಡಿ ಅವರನ್ನು ಶರಣಾಗತಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಅನಗತ್ಯವಾಗಿ ಅವರ ಕುಟುಂ ಬದವರಿಗೆ ತೊಂದರೆ ನೀಡಬೇಡಿ, ರೆಡ್ಡಿ ಎಲ್ಲಿದ್ದಾರೆ ಎಂಬುದನ್ನು ಹುಡುಕಿ, ಕರೆ ತರುವುದಾಗಿಯೂ ಕೋರಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಮಧ್ಯೆ ಜನಾರ್ದನ ರೆಡ್ಡಿ ಪರ ವಕೀಲ ಚಂದ್ರಶೇಖರ್ ಅವರು ಹೈಕೋರ್ಟ್ನಲ್ಲಿ 2…