ಮೈಸೂರು: ಮನೆಯ ಬಾಗಿಲು ಮೀಟಿ, ಲಕ್ಷಾಂತರ ರೂ. ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿರುವ ಘಟನೆ ಮೈಸೂರಿನ ರಾಮಕೃಷ್ಣನಗರದಲ್ಲಿ ನಡೆದಿದೆ. ರಾಮಕೃಷ್ಣನಗರ ಜಿ ಬ್ಲಾಕ್, 18ನೇ ಕ್ರಾಸ್ ನಿವಾಸಿ ವೀಣಾ ಗಣೇಶ್ ಅವರ ಮನೆಯಲ್ಲಿ ಘಟನೆ ನಡೆದಿದ್ದು, ಸುಮಾರು 214 ಗ್ರಾಂ ತೂಕದ ಚಿನ್ನಾಭರಣ, ಸುಮಾರು 4 ಕೆಜಿ ತೂಕದ ಬೆಳ್ಳಿ ವಸ್ತುಗಳು, 18 ಸಾವಿರ ರೂ. ನಗದು ಹಾಗೂ 10 ವಾಚ್ಗಳು ಸೇರಿದಂತೆ ಸುಮಾರು 5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಖದೀಮರು ಕದ್ದೊಯ್ದಿದ್ದಾರೆ….
ಗಾಂಧೀ ವಿಚಾರ ತಿಳಿದವರ ಸಂತತಿ ಕ್ಷೀಣಿಸುತ್ತಿದೆ
October 23, 2018ಮೈಸೂರು: ಮಹಾತ್ಮ ಗಾಂಧೀಜಿಯವರ ಬಗ್ಗೆ ಅಪಾರ ಅನು ಭವ ಪಡೆದಿರುವವರ ಸಂತತಿ ಕ್ಷೀಣಿಸು ತ್ತಿದ್ದು, ಇದರಿಂದಾಗಿ ಮುಂದಿನ ಪೀಳಿಗೆಗೆ ಗಾಂಧೀಜಿಯವರ ಬಗ್ಗೆ ತಿಳಿಸುವವರ ಕೊರತೆ ಉಂಟಾಗುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಮಾನಸಗಂಗೋತ್ರಿ ಗಾಂಧೀ ಭವನದಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾ ಟಕ ಶಿಲ್ಪಕಲಾ ಅಕಾಡೆಮಿ, ಮೈಸೂರು ರಂಗಾಯಣ, ಗಾಂಧಿ ಅಧ್ಯಯನ ಕೇಂದ್ರ…
ವಾಹನ ಎಕ್ಸ್ಚೇಂಜ್ ನೆಪದಲ್ಲಿ ಕಾರಿನೊಂದಿಗೆ ಪರಾರಿಯಾದ ಭೂಪ!
October 23, 2018ಪೊಲೀಸರಲ್ಲಿ ಪ್ರಕರಣ ದಾಖಲು ಮೈಸೂರು: ಓಎಲ್ಎಕ್ಸ್ ಅಂತರ್ಜಾಲ ಮಾರುಕಟ್ಟೆಯಲ್ಲಿ ಪರಿಚಯವಾದ ವ್ಯಕ್ತಿಯೋರ್ವ ವಾಹನಗಳ ಬದಲಾವಣೆ(ಎಕ್ಸ್ಚೇಂಜ್) ನೆಪದಲ್ಲಿ ಕಾರಿನೊಂದಿಗೆ ಪರಾರಿಯಾಗಿರುವುದಾಗಿ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಎನ್.ಆರ್.ಮೊಹಲ್ಲಾದ ಮೆಹಬೂಬ್ ಖಾನ್ ಕಾರು ಕಳೆದು ಕೊಂಡವರಾಗಿದ್ದು, ಈ ಸಂಬಂಧ ಅರ್ಜುನ್ ಎಂಬುವರ ವಿರುದ್ಧ ವಂಚನೆ ದೂರು ನೀಡಿದ್ದಾರೆ. ಮೆಹಬೂಬ್ಖಾನ್ ಅವರು ತಮ್ಮ ಸ್ಕೋಡಾ ಅಕ್ಟೋವಿಯಾ ಕಾರನ್ನು (ಕೆಎ-01, ಡಿ-1227) ಮಾರಾಟ ಮಾಡಲು 15 ದಿನಗಳ ಹಿಂದೆ ಓಎಲ್ಎಕ್ಸ್ನಲ್ಲಿ ಪ್ರಕಟಿಸಿದ್ದರು. ಹಾಗೆಯೇ ರಾಯಲ್ ಎನ್ಫೀಲ್ಡ್(ಕೆಎ-13, ಇಡಿ-0045) ಮಾರಾಟಕ್ಕಿದೆ…
ನಾಳೆ ಡಾ.ವೈ.ಡಿ.ರಾಜಣ್ಣ ಅಭಿನಂದನಾ ಗ್ರಂಥ ಬಿಡುಗಡೆ
October 23, 2018ಮೈಸೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ ಅವರ 50ನೇ ಹುಟ್ಟುಹಬ್ಬದ ಅಂಗ ವಾಗಿ ಡಾ.ವೈ.ಡಿ.ರಾಜಣ್ಣರವರ ಅಭಿನಂದನಾ ಸಮಿತಿ ವತಿಯಿಂದ ಅ.24ರಂದು ಅಭಿನಂದನೆ ಹಾಗೂ ಅಭಿ ನಂದನಾ ಗ್ರಂಥ ಬಿಡುಗಡೆ ಸಮಾರಂಭ ಏರ್ಪಡಿಸ ಲಾಗಿದೆ ಎಂದು ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಹಾಗೂ ರಂಗಕರ್ಮಿ ರಾಜಶೇಖರ ಕದಂಬ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಅಂದು ಸಂಜೆ…
ನಾಳೆ ವಾಲ್ಮೀಕಿ ಜಯಂತಿ
October 23, 2018ಮೈಸೂರು: ಮೈಸೂರು ಜಿಲ್ಲಾಡಳಿತ, ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಹಾಗೂ ಇತರ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯ ದಲ್ಲಿ ಅ.24ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪದಾಧಿಕಾರಿ ಕ್ಯಾತ ಮಾರನಹಳ್ಳಿ ವೆಂಕಟೇಶ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ಸಭಾ ಕಾರ್ಯ ಕ್ರಮ ನಡೆಯಲಿದ್ದು, ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟನೆ ನೆರವೇರಿಸಲಿ ದ್ದಾರೆ. ಶಾಸಕ ಎಲ್.ನಾಗೇಂದ್ರ ಸಮಾರಂಭದ ಅಧ್ಯಕ್ಷತೆ…
10 ದಿನಗಳ ಮಾನವಶಾಸ್ತ್ರ ಸಂಶೋಧನಾ ವಿಧಾನ ಕೋರ್ಸ್ ಕಾರ್ಯಾಗಾರಕ್ಕೆ ಚಾಲನೆ
October 23, 2018ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ಮಾನವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರೀಸರ್ಚ್ (ಐಸಿಎಸ್ಎಸ್ಆರ್) ಆಶ್ರಯದಲ್ಲಿ ಆಯೋಜಿಸಿದ್ದ 10 ದಿನಗಳ ಎಂಫಿಲ್, ಪಿಹೆಚ್.ಡಿ, ಪಿಡಿಎಫ್ ಸಂಶೋಧಕರ ಸಂಶೋಧನಾ ವಿಧಾನ ಕೋರ್ಸ್ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ದೊರೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ.ಆಯಿಷಾ ಎಂ.ಶರೀಫ್, 10 ದಿನಗಳ ಕಾರ್ಯಾ ಗಾರದಲ್ಲಿ ಮಾನವಶಾಸ್ತ್ರದ ಮೂಲಕ ಎಲ್ಲಾ ಸಮುದಾಯ ಗಳನ್ನು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನ ನಡೆಸಲಾಗು ತ್ತದೆ. ಇದರಿಂದ ಸಮುದಾಯಗಳು ಮತ್ತು…
ವೀರವನಿತೆ ಮಹಾದೇವಿ ಪಾತ್ರ ಸನ್ನಿ ಲಿಯೋನ್ ನಿರ್ವಹಣೆÉ ವಿರೋಧಿಸಿ ಪ್ರತಿಭಟನೆ
October 23, 2018ಮೈಸೂರು: ಕನ್ನಡ ಚರಿತ್ರೆಯ ವೀರವನಿತೆ ಮಹಾದೇವಿ ಪಾತ್ರ ದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅಭಿ ನಯಿಸುತ್ತಿರುವುದನ್ನು ಖಂಡಿಸಿ ಕರ್ನಾ ಟಕ ರಕ್ಷಣಾ ವೇದಿಕೆಯ ಯುವಸೇನೆ ವತಿ ಯಿಂದ ಸೋಮವಾರ ಪ್ರತಿಭಟನೆ ನಡೆಸ ಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ಕನ್ನಡ ನಾಡಿನ ಇತಿಹಾಸದಲ್ಲಿ ವೀರವನಿತೆ ಮಹಾದೇವಿಯವರು ತನ್ನದೇ ಛಾಪು ಮೂಡಿಸಿದ್ದಾರೆ. ಇಂತಹ ಮಹಾಸಾಧ್ವಿಗೆ ಸಂಬಂಧಿಸಿದಂತೆ ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ 5 ಭಾಷೆಗಳಲ್ಲಿ ಸಿನಿಮಾ ನಿರ್ಮಿಸಲಾಗು ತ್ತಿದೆ. ಆದರೆ ಮಹಾದೇವಿ ಪಾತ್ರದಲ್ಲಿ…
ತೋಂಟದಾರ್ಯ ಶ್ರೀಗಳಿಗೆ ಶ್ರದ್ಧಾಂಜಲಿ
October 23, 2018ಮೈಸೂರು: ಗದಗಿನ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗೇ ಶ್ವರ ಸ್ವಾಮೀಜಿಯವರ ನಿಧನಕ್ಕೆ ಕರ್ನಾಟಕ ದಲಿತ ಪ್ಯಾಂಥರ್ಸ್, ಜಿಲ್ಲಾ ಘಟಕ ಶ್ರದ್ಧಾಂಜಲಿ ಸಲ್ಲಿಸಿತು. ಸಭೆಯಲ್ಲಿ ಪ್ರಧಾನ ಸಂಚಾಲಕ ವಿ.ವೆಂಕಟೇಶ್ ಮಾತನಾಡಿ, ಶ್ರೀಗಳ ನಿಧನ ದಿಂದ ಪ್ರಗತಿಪರ ಹೋರಾಟಕ್ಕೆ ತುಂಬಾ ನಷ್ಟ ಉಂಟಾ ಗಿದೆ. ಶ್ರೀಗಳು ಬುದ್ಧ, ಬಸವಣ್ಣನವರು ಕಂಡಂತಹ ಸಮಾಜದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ದಲಿತರ ಮತ್ತು ಹಿಂದುಳಿದವರ ಅಭಿವೃದ್ಧಿಗಳ ಬಗ್ಗೆ ವಿಚಾರವುಳ್ಳವರಾಗಿದ್ದರು ಎಂದರು. ಜಿಲ್ಲಾ ಸಂಚಾಲಕ ರಾಮಸ್ವಾಮಿ ಮಾತನಾಡಿ, ಶ್ರೀಗಳು ಬೆತ್ತಲೆ ಸೇವೆ, ಮಡೆ ಸ್ನಾನ, ಕಿರೀಟ…
ಅಕ್ರಮವಾಗಿ ಗೂಬೆ ಸಾಗಿಸುತ್ತಿದ್ದ ಇಬ್ಬರ ಸೆರೆ
October 23, 2018ಮೈಸೂರು: ಮೈಸೂರು ಅರಣ್ಯ ಸಂಚಾರ ದಳದ ಅಧಿಕಾರಿಗಳು ಇಬ್ಬರನ್ನು ಬಂಧಿಸಿ, ಅವರು ಸಾಗಿಸುತ್ತಿದ್ದ ಗೂಬೆ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಶಿಕಾರಿಪುರದ ಎನ್.ಆರ್. ಶ್ರೀಧರ್(24) ಮತ್ತು ಕೊಡಗಿನ ವಿರಾಜಪೇಟೆ ತಾಲೂಕು ಬಿಳುಗುಂದ ಗ್ರಾಮದ ಬಿ.ಎ.ರವೀಶ್ ರಾವ್(46) ಬಂಧಿತ ರಾಗಿದ್ದು, ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ವಿವರ: ಮೈಸೂರಿನ ಅರಣ್ಯ ಸಂಚಾರ ದಳಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಅಧಿಕಾರಿ ಮತ್ತು ಸಿಬ್ಬಂದಿಗಳು ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಕಂಟ್ರಿ ಕ್ಲಬ್ ಬಳಿ…
ಶಬರಿಮಲೆ ವಿವಾದ: ರೆಹಾನ ವಿರುದ್ಧ ಶಿಸ್ತುಕ್ರಮ ಸಾಧ್ಯತೆ
October 23, 2018ಕೊಚ್ಚಿ: ಶಬರಿಮಲೆ ದೇಗುಲ ಪ್ರವೇಶಿಸಲು ಪ್ರಯತ್ನಿಸಿದ್ದ ಕೇರಳದ ಮಾನವ ಹಕ್ಕು ಹೋರಾಟಗಾರ್ತಿ ರೆಹಾನ ಫಾತಿಮಾ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿರುವ ಬಿಎಸ್ಎನ್ಎಲ್ ಇದೀಗ ಮತ್ತಷ್ಟು ಕ್ರಮ ಕೈಗೊಳ್ಳುವ ಸುಳಿವನ್ನು ನೀಡಿದೆ. ಆಂತರಿಕ ತನಿಖೆ ಬಳಿಕ ಶಿಸ್ತು ಕ್ರಮ ಕೈಗೊಂಡಿರುವ ಬಿಎಸ್ಎನ್ಎಲ್ ಫಾತಿಮಾ ಅವರನ್ನು ಕೊಚ್ಚಿಯ ರವಿಪುರಂ ಬ್ರಾಂಚ್ಗೆ ವರ್ಗಾವಣೆ ಮಾಡಿದೆ ಎಂದು ತಿಳಿದುಬಂದಿದೆ. ರೂಪದರ್ಶಿಯಾಗಿರುವ ಹೋರಾಟಗಾರ್ತಿ ರೆಹಾನ ಅವರು ಎರ್ನಾಕುಲಂ ಮೂಲದವರಾ ಗಿದ್ದು, ಕೊಟ್ಟಿ ಬೋಟ್ ಜೆಟ್ಟಿ ಬ್ರ್ಯಾಂಚ್ನಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿ ಸುತ್ತಿದ್ದರು. ಇದೀಗ ಅವರಿಗೆ…