ಮೈಸೂರು: ರಾಜ್ಯ ಸರ್ಕಾರದ ಸೌಲಭ್ಯಗಳ ಸಮಗ್ರ ಮಾಹಿತಿ ಒಂದೇ ಸೂರಿನಡಿ ಅನಾವರಣಗೊಂಡಿದೆ. ರಾಜ್ಯದ ಮೈತ್ರಿ ಸರ್ಕಾರದ ಹತ್ತು ಹಲವು ಯೋಜನೆಗಳು ಹಾಗೂ ಸವ ಲತ್ತುಗಳ ಮಾಹಿತಿ ಒದಗಿಸುವ ಸಲು ವಾಗಿ ವಸ್ತುಪ್ರದರ್ಶನ ಪ್ರಾಧಿಕಾರದ ಆವ ರಣದಲ್ಲಿ ನಿರ್ಮಿಸಿರುವ ಮಳಿಗೆ ತನ್ನ ವಿಶೇಷ ವಿನ್ಯಾಸದಿಂದಲೇ ಜನರ ಗಮನ ಸೆಳೆಯುತ್ತಿದೆ. ದಸರಾ ಮಹೋತ್ಸವದ ಅಂಗವಾಗಿ ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ವತಿಯಿಂದ ಈ ಮಳಿಗೆಯನ್ನು ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಜನತೆಗೆ ಮೈತ್ರಿ…
ಶಿಕ್ಷಕರು, ಉಪನ್ಯಾಸಕರಿಗೆ ಮೂಲ ವೇತನದಲ್ಲಿ ಹೆಚ್ಚುವರಿ ಬಡ್ತಿ ವೇತನ ವಿಲೀನ
October 22, 2018ಬೆಂಗಳೂರು: ಶಿಕ್ಷಕರು ಹಾಗೂ ಉಪನ್ಯಾಸಕರ ಬೇಡಿಕೆಗೆ ರಾಜ್ಯ ಸರಕಾರ ಕೊನೆಗೂ ಮಣಿದಿದ್ದು, ಸರಕಾರಿ, ಅನುದಾನಿತ ಪ್ರೌಢಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ 2016ರ ಜೂ.1ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಿದ್ದ ಒಂದು ಹೆಚ್ಚುವರಿ ವಿಶೇಷ ಬಡ್ತಿ ವೇತನವನ್ನು ಅವರ ಮೂಲ ವೇತನದೊಂದಿಗೆ ವಿಲೀನಗೊಳಿಸಿ ನ.1ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ರಾಜ್ಯ ಸರಕಾರಿ, ಅನು ದಾನಿತ ಪ್ರೌಢಶಾಲಾ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಹಾಗೂ ಪದವಿ ಪೂರ್ವ ಕಾಲೇಜುಗಳ…
ಚೈತ್ರ ಆನೆಯ ಮಾವುತ ಮಹದೇವುಗೆ ಕಡೆಯ ದಸರಾ
October 22, 2018ಮೈಸೂರು: ದಸರಾ ಮಹೋತ್ಸವದಲ್ಲಿ ಸಾಲಾನೆಯಾಗಿ ಹೆಜ್ಜೆ ಹಾಕಿದ ಸೌಮ್ಯ ಸ್ವಭಾವದ ಚೈತ್ರ ಆನೆಯ ಮಾವುತರಾಗಿ ಯಶಸ್ವಿಯಾಗಿ ಮುನ್ನಡೆಸಿದ ಮಹದೇವು ಅವರಿಗೆ ಇದು ಕಡೆಯ ದಸರಾ. ಐದಾರು ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಕಳೆದ 22 ವರ್ಷಗಳಿಂದ ಅರಣ್ಯ ಇಲಾಖೆಯ ಸಾಕಾನೆಗಳಿಗೆ ಮಾವುತರಾಗಿ ಸೇವೆಸಲ್ಲಿಸುತ್ತಿರುವ ಮಹದೇವು ಅವರು ಕಳೆದ ಐದಾರು ವರ್ಷದಿಂದ ಚೈತ್ರ ಆನೆಗೆ ಮಾವುತರಾಗಿ ನಿಯೋ ಜನೆಗೊಂಡಿದ್ದರು. ಬಂಡೀಪುರ ಕ್ಯಾಂಪಸ್ನಲ್ಲಿರುವ ಕ್ವಾಟರ್ಸ್ನಲ್ಲಿ ವಾಸವಿದ್ದಾರೆ. ಗಂಗೆ ಆನೆಯ ಮಗಳಾಗಿರುವ ಚೈತ್ರ ಇದುವರೆಗೂ 12 ಮರಿಗಳಿಗೆ ಜನ್ಮ ನೀಡಿದೆ. ಹಲವು ಆನೆಗಳಿಗೆ ಮಹದೇವು…
ಅವಳ ಹಲ್ಲೇನು ಬಿಗಿಯಾಗಿದೆಯಾ? ಶೋಭಾ ಕರಂದ್ಲಾಜೆ ವಿರುದ್ಧ ಸಿದ್ದರಾಮಯ್ಯ ಕಿಡಿ
October 22, 2018ಮೈಸೂರು: ಹಲ್ಲಿಲ್ಲದ ಹಾವು ಎಂದು ತಮ್ಮನ್ನು ಟೀಕಿಸಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, `ಅವಳ ಹಲ್ಲೇನು ಬಿಗಿಯಾಗಿದೆಯಾ? ಅವಳಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಹರಿಹಾಯ್ದಿದ್ದಾರೆ. ಮೈಸೂರಿನ ತಮ್ಮ ನಿವಾಸದ ಬಳಿ ಭಾನು ವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇದೇ ಶೋಭಾ ಕರಂದ್ಲಾಜೆ ಸೋತಿಲ್ಲವೇ? ಅದನ್ನು ಮರೆತಂತಿದೆ ಎಂದು ಕಿಡಿಕಾರಿದರು. ಮೈತ್ರಿ ಸರ್ಕಾರ ಮುರಿದು ಬೀಳುತ್ತದೆ ಎಂಬ ಬಿಜೆಪಿಯವರ ಗಡುವು ಮುಗಿ…
ವಿನಾಶದ ಅಂಚಿನಲ್ಲಿ ಪ್ರಾಣಿ, ಪಕ್ಷಿ ಸಂತತಿ
October 22, 2018ಮೈಸೂರು: ಪರಿ ಸರದ ಮೇಲೆ ಮಾನವನ ಅಟ್ಟಹಾಸ ದಿಂದಾಗಿ ಇಂದು ಪರಿಸರ ಸಮತೋ ಲನ ತಪ್ಪಿದ್ದು, ಇದರಿಂದ ವಾತಾವರಣ, ಪ್ರಾಣಿ ಪಕ್ಷಿಗಳ ಸಂತತಿ ಕ್ಷೀಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಕಲಾ ಮಂದಿರ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ `ಪ್ರಾಣಿಗಳ ಅಳಿವು-ಉಳಿವು’ ಚಿತ್ರಕಲಾ ಪ್ರದರ್ಶನ ಗಮನ ಸೆಳೆಯಿತು. ವಿಶ್ವ ಪ್ರಾಣಿ ದಿನ ಹಾಗೂ ವನ್ಯ ಪ್ರಾಣಿ ಸಪ್ತಾಹದ ಅಂಗವಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟದ ಆಶ್ರಯದಲ್ಲಿ ಶಿಕ್ಷಕ ಮತ್ತು ಕಲಾವಿದ ಯು.ಜಿ.ಮೋಹನ್ಕುಮಾರ್…
ಮಹಿಳಾ ಪೊಲೀಸರಿಗೆ ಪ್ಯಾಂಟ್, ಶರ್ಟ್ ಸಮವಸ್ತ್ರ ಕಡ್ಡಾಯ
October 22, 2018ಬೆಂಗಳೂರು: ಇನ್ನು ಮುಂದೆ ರಾಜ್ಯದ ಮಹಿಳಾ ಪೊಲೀಸರು ಸಮವಸ್ತ್ರವಾಗಿ ಪ್ಯಾಂಟ್-ಶರ್ಟ್ ಧರಿಸಲೇಬೇಕು ಎಂದು ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಶನಿ ವಾರ ಆದೇಶ ಹೊರಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಹಿಳಾ ಪೊಲೀಸರು ಖಾಕಿ ಸೀರೆ ಧರಿಸುತ್ತಿದ್ದರು. ಅದಕ್ಕೆ ಇಲಾಖೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹೊಸ ಸುತ್ತೋಲೆಯಲ್ಲಿ ಖಾಕಿ ಸೀರೆ ಧರಿಸುವ ಪದ್ಧತಿಗೆ ಅಂತ್ಯ ಹಾಡಲಾಗಿದೆ. 2018ರ ಸೆ.3ರಂದು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಡಿಜಿಪಿ ನೀಲಮಣಿ ರಾಜು ಅವರ ನೇತೃತ್ವದ ಸಮವಸ್ತ್ರದ ಕುರಿತಾದ ಸಮಿತಿ ಸಭೆಯಲ್ಲಿ…
ವರ್ಣರಂಜಿತ ದಸರಾ ಫಲಪುಷ್ಪ ಪ್ರದರ್ಶನಕ್ಕೆ ತೆರೆ
October 22, 2018ಮೈಸೂರು: ಪೆಂಗ್ವಿನ್, ಅಶೋಕ ಸ್ತಂಭ, ಆನೆ ಗಾಡಿ, ಟೀ ಕೆಟಲ್, ಲೋಟಸ್ ಟೆಂಪಲ್ ಸೇರಿದಂತೆ ಹಲವು ಕಲಾಕೃತಿಗಳು ಅನಾವರಣ ಗೊಂಡು ಲಕ್ಷಾಂತರ ಜನರನ್ನು ಮನಸೂರೆ ಗೊಳಿಸಿದ್ದ ದಸರಾ ಫಲಪುಷ್ಪ ಪ್ರದರ್ಶನ- 2018ಕ್ಕೆ ಭಾನುವಾರ ತೆರೆಬಿದ್ದಿತು. ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಿಶಾದ್ ಬಾಗ್ನ ಕುಪ್ಪಣ್ಣ ಪಾರ್ಕ್ನ ಆವರಣದಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾ ಯತ್ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ 12 ದಿನಗಳ ಕಾಲ ಆಯೋ ಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ 4.5 ಲಕ್ಷ ಮಂದಿ…
ಪ್ರವಾಸಿಗರ ಚಿನ್ನಾಭರಣ, ಮೊಬೈಲ್ ಕಳವು
October 22, 2018ಮೈಸೂರು: ದಸರಾ ಸಂಭ್ರಮದ ನಡುವೆ ಮೈಸೂರಿನ ಹಲ ವೆಡೆ ಚಿನ್ನಾಭರಣ, ನಗದು, ಮೊಬೈಲ್ ಗಳನ್ನು ಕಳವು ಮಾಡಲಾಗಿದೆ. ಬೆಂಗ ಳೂರಿನಿಂದ ಅ.18ರಂದು ಮೈಸೂರಿಗೆ ಆಗಮಿಸಿದ್ದ ಮಲ್ಲಿಕಾ ಎಂಬುವರ ವ್ಯಾನಿಟಿ ಬ್ಯಾಗ್ನಲ್ಲಿದ್ದ 50 ಸಾವಿರ ರೂ. ನಗದು ಹಾಗೂ ಸುಮಾರು 106 ಗ್ರಾಂ ತೂಕದ ಚಿನ್ನಾ ಭರಣವನ್ನು ಸಿಟಿ ಬಸ್ನಲ್ಲಿ ಕಳವು ಮಾಡ ಲಾಗಿದೆ. ಅಂದು ಸಂಜೆ 5.30ಕ್ಕೆ ರೈಲಿನಲ್ಲಿ ಮೈಸೂರು ತಲುಪಿದ ಅವರು, ಅಲ್ಲಿಂದ ಸಿಟಿ ಬಸ್ನಲ್ಲಿ ನಗರ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಬಸ್ನಿಂದ ಇಳಿದು ಬ್ಯಾಗ್ನ್ನು…
`ದಸರಾ ಬೊಂಬೆ’ ಮುಂದಿನ ಪೀಳಿಗೂ ಪರಿಚಯಿಸಿ
October 22, 2018ಮನೆಮನೆ ಬೊಂಬೆ ಪ್ರದರ್ಶನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದ ರಘುರಾಂ ಮೈಸೂರು: ದಸರಾ ಮಹೋತ್ಸವದ ಬೊಂಬೆ ಪ್ರದ ರ್ಶನದಲ್ಲಿ ವೇದಶಾಸ್ತ್ರಗಳನ್ನು ಸಾರುವ ಬೊಂಬೆಗಳಿದ್ದವು. ಇಂಥ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸವಾಗಬೇಕಾಗಿದೆ ಎಂದು ವಿಪ್ರ ಮುಖಂಡ ಕೆ.ರಘುರಾಂ ಅಭಿಪ್ರಾಯಪಟ್ಟರು. ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ದಸರಾ ಮಹೋತ್ಸವದ ಅಂಗವಾಗಿ ವಿಪ್ರ ಸಹಾಯವಾಣಿ ಸಂಘವು ಆಯೋಜಿಸಿದ್ದ `ಮನೆಮನೆ ಬೊಂಬೆ ಪ್ರದರ್ಶನ’ ಸ್ಪರ್ಧೆಯಲ್ಲಿ ವಿಜೇತರಾ ದವರಿಗೆ ಬಹುಮಾನ ವಿತರಿಸಿ, ಅವರು ಮಾತನಾಡಿದರು. ಭಾರತೀಯ ಪರಂಪರೆ ಉಳಿವಿಗೆ ದಸರಾ ಬೊಂಬೆ ಪದರ್ಶನದಂಥ ಕಾರ್ಯ…
ಮಠದ ಆವರಣದಲ್ಲಿ ತೋಂಟದಾರ್ಯ ಶ್ರೀಗಳ ಅಂತ್ಯಕ್ರಿಯೆ
October 22, 2018ಗದಗ: ತೋಂಟದಾರ್ಯ ಸ್ವಾಮೀಜಿ ಕ್ರಿಯಾ ಸಮಾಧಿ ಬಳಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ, ಲಿಂಗಾಯತ ಧರ್ಮದ ವಿಧಿ-ವಿಧಾನ ಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ತೋಂಟ ದಾರ್ಯ ಶ್ರೀಗಳು ಮಣ್ಣಲ್ಲಿ ಮಣ್ಣಾದರು. ಪೆÇಲೀಸ್ ಪಡೆಗಳು ಶ್ರೀಗಳ ಅಂತ್ಯಕ್ರಿಯೆ ವೇಳೆ ನಾಡಗೀತೆಯೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸೂಚಿಸಿವೆ. ಲಿಂಗಾಯತ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ತೋಂಟದಾರ್ಯ ಮಠದ ಆವರಣದಲ್ಲಿ ಶ್ರೀಗಳ ಅಂತ್ಯಸಂಸ್ಕಾರವು ಪುಷ್ಪ, ವಿಭೂತಿ ಉಂಡೆಗಳನ್ನು ಅರ್ಪಿ ಸುವ ಮೂಲಕ ವಿಧಿ-ವಿಧಾನ ಪೂರ್ಣ…