ಮೈಸೂರು: ಮೀ ಟೂ, ಮೀ ಟೂ ಎಂದು ಎಲ್ಲರೆದೆಯ ಭಾವನೆಗಳ ಮೀಟುತ್ತಿರಲ್ಲ.., ಎಂದೋ ತಿಳಿದೋ, ತಿಳಿಯದೋ ಮಾಡಿದ ತಪ್ಪಿಗೆ ಇಂದು ಮಾನ ಹರಾಜು ಹಾಕುವುದು ಎಷ್ಟು ಸರಿ ಎಂಬುದು ಶ್ರೀಕಂಠೇಶ್ ರಚಿತ ಕವನ ಸಾರವಿದು. ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ಭಾನುವಾರ ಸಿರಿಗನ್ನಡ ವೇದಿಕೆ ವತಿಯಿಂದ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಯಲ್ಲಿ ಯುವ ಕವಿಗಳು ಪ್ರಕೃತಿ, ದಸರಾ, ಮೀ ಟೂ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಳಾಗಿ ವಾಚನ ಮಾಡಿ ಕೇಳುಗರ ಹೃದಯ ಕೆರಳಿಸಿದರು. ಮಲಿಯೂರು…
ಬಿಜೆಪಿ ವಿರುದ್ಧ ದೋಸ್ತಿ ರಣಕಹಳೆ
October 21, 2018ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ಮಟ್ಟ ಹಾಕಲು ಕರ್ನಾಟಕ ದಿಂದಲೇ ಜಾತ್ಯಾತೀತ ಶಕ್ತಿಗಳು ಒಂದಾಗಿ ಹೋರಾಟ ಮಾಡಲು ಭೂಮಿಕೆ ಸಿದ್ಧಗೊಂಡಿದೆ. ಹಾವು ಮುಂಗುಸಿಯಂತೆ ಬೆನ್ನ ಹಿಂದೆಯೇ ರಾಜಕೀಯ ಮಾಡುತ್ತಿದ್ದ ಹಾಗೂ ಕಡುವೈರಿಗಳೆಂದೇ ಬಣ್ಣಿಸಲಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಬಿಜೆಪಿಯ ವಿರುದ್ಧ ಸಮರ ಸಾರಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ 3 ಲೋಕಸಭೆ, 2 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ ಬಿಜೆಪಿಯ ವಿರುದ್ಧ…
ಇಂದು ಸ್ವಸ್ಥಾನಗಳಿಗೆ ಮರಳಲಿರುವ ಜಂಬೂ ಸವಾರಿ ಯಶಸ್ಸಿನ ರೂವಾರಿಗಳು
October 21, 2018ಮೈಸೂರು: ಅಪಾರ ಸಂಖ್ಯೆಯ ಜನಸಾಗರದ ನಡುವೆ ಜಂಬೂಸವಾರಿ ಮೆರವಣಿಗೆಯಲ್ಲಿ ಯಶಸ್ವಿ ಯಾಗಿ ಹೆಜ್ಜೆ ಹಾಕಿದ್ದ ಅರ್ಜುನ ನೇತೃ ತ್ವದ ಗಜಪಡೆ ನಾಳೆ (ಭಾನುವಾರ) ಸ್ವಸ್ಥಾನಗಳಿಗೆ ಮರಳಲಿದೆ. ಜಂಬೂ ಸವಾರಿ ಮಾರನೇ ದಿನವಾದ ಶನಿವಾರ ಇಡೀ ದಿನ ರಿಲ್ಯಾಕ್ಸ್ ಮೂಡ್ನಲ್ಲಿತ್ತು. ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಸೆ.2ರಂದು ಹುಣಸೂರು ತಾಲೂ ಕಿನ ವೀರನಹೊಸಳ್ಳಿಯಿಂದ ಗಜಪಡೆಯ ನಾಯಕ ಅರ್ಜುನ ನೇತೃತ್ವದಲ್ಲಿ ಆರು ಆನೆ ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಬಂದು ಬೀಡು ಬಿಟ್ಟು, ಸೆ.5 ರಂದು ಅರಮನೆಯ ಆವರಣ ಪ್ರವೇಶಿ…
ಅರಮನೆಯಲ್ಲಿ ನಾಳೆ ವಿಜಯದಶಮಿ ಆಚರಣೆ
October 21, 2018ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದಾಗಿ ಮುಂದೂಡಲಾಗಿದ್ದ ವಜ್ರಮುಷ್ಠಿ ಕಾಳಗ, ಶಮಿಪೂಜೆ ಹಾಗೂ ವಿಜಯಯಾತ್ರೆ(ವಿಜಯದಶಮಿ)ಯನ್ನು ಅ.22ರಂದು ಅರಮನೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವಾಗ ರಾಜಮನೆತನದವರು ಕೆಲವು ಕಟ್ಟುಪಾಡುಗಳನ್ನು ಅನುಸರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯ ಪೂಜಾ ಸಂದರ್ಭದಲ್ಲಿ ಅರಮನೆಯ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಸಿದ ನಂತರ ಅರಮನೆಯ ಆವರಣದಲ್ಲಿರುವ ಭುವನೇಶ್ವರಿ ದೇವಾಲಯಕ್ಕೆ ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಪಟ್ಟದ…
ಅಂತರರಾಷ್ಟ್ರೀಯ ಮಟ್ಟಕ್ಕೆ ಮೈಸೂರು ವಿಮಾನ ನಿಲ್ದಾಣ
October 21, 2018ಬೆಂಗಳೂರು: ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಅಂತಾ ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಭೂಮಿಯನ್ನು ಮೂರು ತಿಂಗಳೊಳಗಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ. ವಿಶ್ವ ವಿಖ್ಯಾತ ದಸರಾ ನಾಡಹಬ್ಬ ವೀಕ್ಷಣೆಗೆ ಪತ್ನಿ ಸಮೇತ ಆಗಮಿಸಿದ ಕೇಂದ್ರ ವಿಮಾನ ಯಾನ ಸಚಿವ ಸುರೇಶ್ ಪ್ರಭು ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆ ಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ಭರವಸೆ ನೀಡಿದ್ದಾರೆ. ಪ್ರಭು ಸಲಹೆಯಂತೆ ವಿಮಾನಯಾನ ಇಲಾಖೆ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಅಗತ್ಯ…
ಕೆಆರ್ಎಸ್ಗೆ ಪ್ರವಾಸಿಗರ ಲಗ್ಗೆ
October 21, 2018ಮೈಸೂರು: ಅದ್ಧೂರಿ ಜಂಬೂ ಸವಾರಿ ಮೆರವಣಿಗೆಯೊಂದಿಗೆ 10 ದಿನಗಳ ಮೈಸೂರು ದಸರಾ ಮಹೋತ್ಸವ ಶುಕ್ರವಾರವಷ್ಟೇ ಮುಕ್ತಾಯ ಗೊಂಡಿರುವುದರಿಂದ ಹೊರಗಿನಿಂದ ಬಂದಿರುವ ಪ್ರವಾಸಿಗರು ಕೆಆರ್ಎಸ್ನತ್ತ ಮುಖಮಾಡಿದ್ದಾರೆ. ದಸರೆ ವೀಕ್ಷಿಸಲೆಂದು ಮೈಸೂರಿಗೆ ಆಗಮಿಸಿರುವ ಪ್ರವಾಸಿ ಗರು ವೀಕೆಂಡ್ ಕಳೆಯಲು ಸುತ್ತಲಿನ ಪ್ರವಾಸಿ ತಾಣ ಗಳಿಗೆ ತೆರಳುತ್ತಿದ್ದಾರೆ. ಆಯುಧ ಪೂಜೆ ದಿನ (ಅ.18) ಕೆಆರ್ಎಸ್ಗೆ 19 ಸಾವಿರ ಮಂದಿ ಹಾಗೂ ವಿಜಯ ದಶಮಿ ದಿನ (ಅ.19) 22 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದರು. ಇಂದು (ಶನಿವಾರ) ಮತ್ತು ನಾಳೆ (ಭಾನುವಾರ) 30ರಿಂದ…
ಬಸ್, ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ
October 21, 2018ಮೈಸೂರು: ಜಂಬೂ ಸವಾರಿಯ ಮಾರನೇ ದಿನವಾದ ಶನಿವಾರ ಮೈಸೂರು ನಗರದ ಹೃದಯಭಾಗ ದಲ್ಲಿ ಹೆಚ್ಚಿನ ಜನದಟ್ಟಣೆ ಹಾಗೂ ವಾಹನ ಸಂಚಾರ ಕಂಡುಬಂದಿತು. ಅ.10ರಂದು ದಸರಾ ಮಹೋತ್ಸವ ಉದ್ಘಾಟನೆಗೊಂಡ ಬಳಿಕ ವಿಜಯದಶಮಿ ಮೆರವಣಿಗೆ ದಿನವಾದ ಶುಕ್ರವಾರದವರೆಗೂ ಮೈಸೂರು ನಗರಕ್ಕೆ ಜನಸಾಗರವೇ ಹರಿದು ಬಂದಿತ್ತು. ಜಂಬೂಸವಾರಿ ಮೆರವಣಿಗೆ ಮುಗಿ ಯುತ್ತಿದ್ದಂತೆ ಸಂಬಂಧಿಕರ ಮನೆಗಳಿಗೆ ಆಗಮಿಸಿದ್ದ ನೆಂಟರಿಷ್ಟರು, ಪ್ರವಾಸಿಗರು ಶನಿವಾರ ತಮ್ಮ ಊರುಗಳಿಗೆ ಮರಳು ತ್ತಿದ್ದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ ಹಾಗೂ ಸಬ್ ಅರ್ಬನ್ ಬಸ್ ನಿಲ್ದಾಣಗಳ ಸಂಪರ್ಕ ರಸ್ತೆಗಳಲ್ಲಿ ಸಂಚಾರ…
ದಸರಾ ವಸ್ತುಪ್ರದರ್ಶನದಲ್ಲಿ ಅರಳುತ್ತಿದೆ `ಹಸಿರು ಕರ್ನಾಟಕ’
October 21, 2018ಮೈಸೂರು: ಮನೆಗೊಂದು ಮರ, ಊರಿಗೊಂದು ವನ’ ನಿರ್ಮಿಸುವ ಮೂಲಕ ರಾಜ್ಯವನ್ನು ಹಸಿರುಮಯ ವಾಗಿಸುವ ‘ಹಸಿರು ಕರ್ನಾಟಕ’ ಯೋಜ ನೆಗೆ ಒತ್ತು ನೀಡುವಂತಹ ಮಳಿಗೆಯೊಂದು ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧಗೊಳ್ಳುತ್ತಿದೆ. ಅರಣ್ಯ ಇಲಾಖೆ ಮಳಿಗೆಯಲ್ಲಿ ಈ ಬಾರಿ `ಹಸಿರು ಕರ್ನಾಟಕ’ ಯೋಜನೆ ಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಉತ್ತಮ ಮಳೆಯಾದರೆ ಕಾಡು ಸಮೃದ್ಧಿಯಾಗಿ, ಗ್ರಾಮೀಣ ಜನರ ಬದುಕು ಹಸನಾಗು ತ್ತದೆ. ರೈತರು ನೆಮ್ಮದಿಯಿಂದ ಬೆಳೆದರೆ ನಗರ ಪ್ರದೇಶದ ಜನರೂ ನೆಮ್ಮದಿ ಜೀವನ ನಡೆಸಲು ಸಾಧ್ಯ. ಈ ಕಲ್ಪನೆಯೊಂದಿಗೆ ಮಳಿಗೆ ನಿರ್ಮಾಣಗೊಳ್ಳುತ್ತಿದೆ….
ಅರಮನೆ ಅಂಗಳದಲ್ಲಿ ಕಸದ ರಾಶಿ; ಸ್ವಚ್ಛತಾ ಸಿಬ್ಬಂದಿಯಿಂದ ತೆರವು ಕಾರ್ಯ
October 21, 2018ಮೈಸೂರು: ವಿವಿಧ ಪಾಸ್ ಪಡೆದು ಅರಮನೆಯ ಆವರಣದಲ್ಲಿ ಜಂಬೂಸವಾರಿ ವೀಕ್ಷಿಸಲು ಬಂದಿದ್ದ ಸಾವಿ ರಾರು ವೀಕ್ಷಕರು ಎಸೆದು ಹೋಗಿದ್ದ ಪ್ಲಾಸ್ಟಿಕ್, ಪೇಪರ್, ನೀರಿನ ಬಾಟಲ್ ಸೇರಿದಂತೆ ಅಪಾರ ಪ್ರಮಾಣದ ಕಸದ ರಾಶಿಯನ್ನು ಶನಿವಾರ ಅರಮನೆಯ ಸ್ವಚ್ಛತಾ ಸಿಬ್ಬಂದಿಗಳು ಸಂಗ್ರಹಿಸಿ ವಿಲೇವಾರಿ ಮಾಡಿದರು. ಆ ಮೂಲಕ ಅರಮನೆಯ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಮಾಡಲು ಶ್ರಮಿಸಿದರು. ಪಾಸ್ ಹಾಗೂ ಗೋಲ್ಡ್ಕಾರ್ಡ್ ಹೊಂದಿ ರುವವರಿಗಾಗಿ ಆರಮನೆ ಆವರಣದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ವೀಕ್ಷಕರು ಜಂಬೂಸವಾರಿ ಮೆರವಣಿಗೆ ನೋಡಿದ ನಂತರ…
ಚಾಮುಂಡಿಬೆಟ್ಟದಲ್ಲಿ ಜನ ಜಾತ್ರೆ
October 21, 2018ಮೈಸೂರು: ದಸರಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದ ಪ್ರವಾಸಿಗರು ಹಾಗೂ ದಸರಾ ಕರ್ತವ್ಯಕ್ಕೆಂದು ಆಗಮಿಸಿದ್ದ ಪೊಲೀಸರು ಶನಿವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಭಾರೀ ಜನ ಹಾಗೂ ವಾಹನ ಸಂದಣಿ ಹೆಚ್ಚಾಗಿತ್ತು. ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ ಸೇರಿ ದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸಿದ್ದರು. ಏಕಕಾಲಕ್ಕೆ ನೂರಾರು ವಾಹನಗಳು ಬೆಟ್ಟಕ್ಕೆ ಬಂದ ಹಿನ್ನೆಲೆಯಲ್ಲಿ `ವ್ಯೂ ಪಾಯಿಂಟ್’ ಬಳಿಯೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೆ ದೇವಾಲಯಕ್ಕೆ ತೆರಳಲು ಭಕ್ತರು ಹಾಗೂ ಪ್ರವಾಸಿಗರು…