ಮೈಸೂರು

ವಾಲ್ಮೀಕಿ ಜಯಂತಿ ಸಾಂಪ್ರದಾಯಿಕ ಆಚರಣೆ
ಮೈಸೂರು

ವಾಲ್ಮೀಕಿ ಜಯಂತಿ ಸಾಂಪ್ರದಾಯಿಕ ಆಚರಣೆ

October 23, 2018

ಎಚ್.ಡಿ. ಕೋಟೆ:  ವಾಲ್ಮೀಕಿ ಜಯಂತಿ ಆಚರಣೆಯನ್ನು ಸಂಪ್ರದಾಯಬದ್ಧವಾಗಿ ಆಚರಿಸಲು ತಾಲೂಕಿನ ಎಲ್ಲಾ ಜನತೆ ಸಹಕರಿಸುವಂತೆ ಶಾಸಕ ಸಿ.ಅನಿಲ್ ಚಿಕ್ಕಮಾದು ಮನವಿ ಮಾಡಿದರು. ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ತಾಲೂಕಿನ ಜನತೆ ಆಶೀರ್ವಾದ ಮಾಡಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿ ದ್ದಾರೆ. ಈ ಬಾರಿ ಪ್ರಥಮ ಬಾರಿಗೆ ತಾಲೂಕಿ ನಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದರು. ಅ.24ರಂದು ನಡೆಯಲಿರುವ ವಾಲ್ಮೀಕಿ ಜಯಂತಿ ಆಚರಣೆಗೆ ತಾಲೂಕಿ ನಾದ್ಯಂತ ಎಲ್ಲಾ…

ದಲಿತರಿಗೆ ಸಾಮಾಜಿಕ ಸಮಾನತೆ ಇನ್ನೂ ಸಿಕ್ಕಿಲ್ಲ: ರಾಜ್ಯ ದಸಂಸ ಮುಖಂಡ ಎನ್.ಮುನಿಸ್ವಾಮಿ ವಿಷಾದ
ಮೈಸೂರು

ದಲಿತರಿಗೆ ಸಾಮಾಜಿಕ ಸಮಾನತೆ ಇನ್ನೂ ಸಿಕ್ಕಿಲ್ಲ: ರಾಜ್ಯ ದಸಂಸ ಮುಖಂಡ ಎನ್.ಮುನಿಸ್ವಾಮಿ ವಿಷಾದ

October 23, 2018

ಹುಣಸೂರು: ಸಾವಿರಾರು ವರ್ಷಗಳಿಂದ ಸಾಮಾಜಿಕ ಸಮಾನತೆ ಗಾಗಿ ಅನೇಕ ಮಹಾನ್ ವ್ಯಕ್ತಿಗಳು ಹೋರಾ ಡುತ್ತಾ ಬಂದಿದ್ದರೂ ಅದು ಇನ್ನೂ ಸಿಕ್ಕಿಲ್ಲ ಎಂದು ರಾಜ್ಯ ದಸಂಸ ಮುಖಂಡರಾದ ಎನ್.ಮುನಿಸ್ವಾಮಿ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ದಸಂಸ ಏರ್ಪಡಿಸಿದ್ದ ಸಾಮಾ ಜಿಕ ನ್ಯಾಯದ ನಿರಾಕರಣೆ ಮತ್ತು ದಲಿತ ಸಂಘರ್ಷದ ಸವಾಲುಗಳು ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಸರ್ವರಿಗೂ ಸಮಾನತೆ ಕಲ್ಪಿಸುವ ಅವಕಾಶವಿದ್ದರೂ, ಸ್ವಾತಂತ್ರ್ಯ ದೊರೆತು 70 ವರ್ಷ ಕಳೆದರೂ ಈವರೆವಿಗೂ ಸಾಮಾಜಿಕ ಸಮಾನತೆ ಕಲ್ಪಿ…

ಮಹಾನ್ ಪುರುಷರ ಜಯಂತಿ ಆಚರಣೆ ಒಂದೇ ವೇದಿಕೆಯಲ್ಲಿ ಆಗಲಿ
ಮೈಸೂರು

ಮಹಾನ್ ಪುರುಷರ ಜಯಂತಿ ಆಚರಣೆ ಒಂದೇ ವೇದಿಕೆಯಲ್ಲಿ ಆಗಲಿ

October 23, 2018

ಚಾಮರಾಜನಗರ:  ಮಹಾನ್ ಪುರುಷರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಆಚರಿಸುವಂತಾಗಬೇಕು ಎಂದು ಮಾಜಿ ಸಚಿವ, ಶಾಸಕ ಎನ್. ಮಹೇಶ್ ಆಶಯ ವ್ಯಕ್ತಪಡಿಸಿದರು. ಇಂದಿಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಈ ಒಂದೇ ವೇದಿಕೆಯಲ್ಲಿ ನಾಲ್ಕು ದಿನಗಳು ಒಂದೊಂದು ದಿನ ಅಂಬೇಡ್ಕರ್, ಬಸವ, ಭಾಗೀರಥ, ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದ್ದೇವೆ. ಇಂತಹ ವಿಚಿತ್ರ ಸನ್ನಿವೇಶ ದಲ್ಲಿ ನಾವಿದ್ದೇವೆ. ಬಸವ ಅಭಿಮಾನಿಯಾಗಿ, ಅನುಯಾಯಿ ಯಾಗಿರುವ ನನಗೆ ಇದು ನೋವು ತರಿಸಿದೆ ಎಂದರು. ನಾಲ್ಕೈದು ಮಹಾನ್ ಪುರುಷರ ಜಯಂತಿಯನ್ನು ಒಂದೇ…

ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಲ್ದೂರು ರಾಜಶೇಖರ್ ಆಯ್ಕೆ
ಮೈಸೂರು

ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಲ್ದೂರು ರಾಜಶೇಖರ್ ಆಯ್ಕೆ

October 23, 2018

ಚಾಮರಾಜನಗರ:  ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗ ನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ನಗರದ ಎಪಿಎಂಸಿ ಮಾಜಿ ಅಧ್ಯಕ್ಷ ಆಲ್ದೂರು ಸಿ. ರಾಜ ಶೇಖರ ಆಯ್ಕೆ ಆಗಿದ್ದಾರೆ. ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಪ್ರಥಮ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆ ಯಿತು. ಬಿಳಿಗಿರಿರಂಗನಾಥಸ್ವಾಮಿ ದೇವ ಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಗಿ ಸರ್ಕಾರ ಆಲ್ದೂರು ಸಿ. ರಾಜಶೇಖರ್, ಕಂದಹಳ್ಳಿ ಮಹೇಶ್, ಮರಿಸ್ವಾಮಿ,…

ನಾವು ಹೋಗಿ ಬರ್ತೇವೆ, ಬೈ ಬೈ…
ಮೈಸೂರು

ನಾವು ಹೋಗಿ ಬರ್ತೇವೆ, ಬೈ ಬೈ…

October 22, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಯಶಸ್ವಿಯಾಗಿ ಪಾಲ್ಗೊಂಡು ಕಳೆದ ಎರಡು ದಿನಗಳಿಂದ ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಅರ್ಜುನ ನೇತೃತ್ವದ ಗಜಪಡೆಯ 12 ಆನೆಗಳಲ್ಲಿ 9 ಆನೆಗಳು ಭಾನುವಾರ ಮಧ್ಯಾಹ್ನ ಸ್ವಸ್ಥಾನಗಳಿಗೆ ಜಿಲ್ಲಾಡಳಿತ ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಪ್ರಯಾಣ ಬೆಳೆಸಿದವು. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕೆ ಈ ಬಾರಿ ವಿವಿಧ ಆನೆ ಕ್ಯಾಂಪ್‍ಗಳಿಂದ ಒಟ್ಟು 12 ಆನೆಗಳನ್ನು ಕರೆತರಲಾಗಿತ್ತು. ಕಳೆದ 45 ದಿನಗಳಿಂದ ಅರಮನೆಯ ಅಂಗಳದಲ್ಲಿ ಬೀಡುಬಿಟ್ಟಿದ್ದ ದಸರಾ ಆನೆಗಳು ಇಂದು ಮಾವುತರು, ಕಾವಾಡಿಗಳ ಕುಟುಂಬದ ಸದಸ್ಯರೊಂದಿಗೆ ತಾವು ವಾಸಿಸುವ ಆನೆ…

ಪ್ರವಾಸಿಗರಿಂದ ತುಂಬಿ ತುಳುಕಿದ ಮೈಸೂರು
ಮೈಸೂರು

ಪ್ರವಾಸಿಗರಿಂದ ತುಂಬಿ ತುಳುಕಿದ ಮೈಸೂರು

October 22, 2018

ಮೈಸೂರು: ದಸರಾ ಮಹೋತ್ಸವ ಮುಗಿದರೂ ಸಾಲು-ಸಾಲು ರಜೆಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರವೂ ಪ್ರವಾಸಿಗರ ದಂಡು ಹೆಚ್ಚಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಮೈಸೂರಿನಲ್ಲಿಯೇ ಬೀಡು ಬಿಟ್ಟಿರುವ ಪ್ರವಾಸಿಗರು ಇಂದು ಮೈಸೂರಿನ ವಿವಿಧ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು. ಪರಿಣಾಮ ಹಲವೆಡೆ ಜನಜಂಗುಳಿ ಹಾಗೂ ವಾಹನ ದಟ್ಟಣೆ ಕಂಡು ಬಂದಿತು. ಶುಕ್ರವಾರ ಜಂಬೂ ಸವಾರಿ ವೀಕ್ಷಿಸಿ ಆನಂದಿಸಿದ್ದ ಪ್ರವಾಸಿಗರು ಶನಿವಾರ ಮತ್ತು ಭಾನುವಾರ ಅರಮನೆ, ಚಾಮುಂಡಿಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಕೆಆರ್‍ಎಸ್, ನಂಜನಗೂಡು, ಶ್ರೀರಂಗಪಟ್ಟಣ, ಶಿಂಷಾ…

ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ `ಆಕಾಶ ಅಂಬಾರಿ’ ವಿಮಾನಯಾನ ಮುಂದುವರಿಕೆ
ಮೈಸೂರು

ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ `ಆಕಾಶ ಅಂಬಾರಿ’ ವಿಮಾನಯಾನ ಮುಂದುವರಿಕೆ

October 22, 2018

ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆ ಯಲ್ಲಿ ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿರುವ `ಆಕಾಶ ಅಂಬಾರಿ’ ವಿಮಾನ ಯಾನಕ್ಕೆ ಜನರ ಪ್ರತಿ ಕ್ರಿಯೆ ಮನಗಂಡು ಸೇವೆ ಮುಂದುವರಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ದಸರಾ ಆನೆಗಳಿಗೆ ಭಾನುವಾರ ಪೂಜೆ ಸಲ್ಲಿಸಿ ಬೀಳ್ಕೊಟ್ಟ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಸರಾ ಹಿನ್ನೆಲೆಯಲ್ಲಿ ಮೈಸೂರು- ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಆಕಾಶ ಅಂಬಾರಿ ವಿಮಾನಯಾನಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಯಾಣ ದರ ಒಬ್ಬರಿಗೆ 999 ರೂ ನಿಗದಿ ಮಾಡಲಾಗಿತ್ತು. ಇದರಿಂದ…

ರಾಜ್ಯದಲ್ಲಿ ಜಾತಿ, ಧರ್ಮದ ಹೆಸರಲ್ಲಿ ಸಂಘರ್ಷ ಸೃಷ್ಟಿಸುವವರ ಮಟ್ಟಹಾಕಿ
ಮೈಸೂರು

ರಾಜ್ಯದಲ್ಲಿ ಜಾತಿ, ಧರ್ಮದ ಹೆಸರಲ್ಲಿ ಸಂಘರ್ಷ ಸೃಷ್ಟಿಸುವವರ ಮಟ್ಟಹಾಕಿ

October 22, 2018

ಬೆಂಗಳೂರು: ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಜಾತಿ, ಧರ್ಮ ಗಳ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸಲು ಇವರು ಸಂಚು ರೂಪಿಸುತ್ತಿದ್ದಾರೆ. ಇಂತಹ ಶಕ್ತಿಗಳನ್ನು ಪೊಲೀಸರು ಮಟ್ಟಹಾಕಿ ರಾಜ್ಯದ ಪ್ರತಿ ಪ್ರಜೆಗೂ ಕಾನೂನಿನಲ್ಲಿ ರಕ್ಷಣೆ ನೀಡಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಪೊಲೀಸ್ ಹುತಾತ್ಮ ದಿನಾಚರಣೆ ಅಂಗ ವಾಗಿ ನಗರದ ಕೋರಮಂಗಲದ ಕೆಎಸ್‌ ಆರ್‌ಪಿ ಮೈದಾನದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ವಂದನೆ ಸಲ್ಲಿಸಿ ಮಾತನಾಡಿದ ಅವರು, ಸ್ವಾರ್ಥ ಹಿತಾಸಕ್ತಿಗಾಗಿ…

ಹುತಾತ್ಮ ಪೊಲೀಸರ ಸ್ಮರಣೆ, ಗೌರವ ವಂದನೆ
ಮೈಸೂರು

ಹುತಾತ್ಮ ಪೊಲೀಸರ ಸ್ಮರಣೆ, ಗೌರವ ವಂದನೆ

October 22, 2018

ಮೈಸೂರು: ಕರ್ತವ್ಯ ಸಲ್ಲಿಸು ತ್ತಿದ್ದಾಗಲೇ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭಾನುವಾರ ಮೈಸೂರಿನ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಪೊಲೀಸ್, ನಗರ ಪೊಲೀಸ್, ಕರ್ನಾ ಟಕ ಪೊಲೀಸ್ ಅಕಾಡೆಮಿ ಜಂಟಿಯಾಗಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು. ಡಿವೈಎಸ್‍ಪಿ ಎಚ್.ಎಂ.ಚಂದ್ರಶೇಖರ್ ನೇತೃತ್ವದ ತಂಡ ಕಳೆದ ಒಂದು ವರ್ಷದ ಅವಧಿಯಲ್ಲಿ ನಿಧನ ರಾದ ಪೊಲೀಸ್…

ಅರಮನೆ ಆನೆಗಳ ಕಣ್ಣೀರು ಒರೆಸಿದ ಅರ್ಜುನ
ಮೈಸೂರು

ಅರಮನೆ ಆನೆಗಳ ಕಣ್ಣೀರು ಒರೆಸಿದ ಅರ್ಜುನ

October 22, 2018

ಮೈಸೂರು: ಸ್ವಸ್ಥಾನಗಳಿಗೆ ದಸರಾ ಆನೆಗಳು ತೆರಳುವ ವೇಳೆ ಅರಮನೆ ಆವರಣದಲ್ಲಿ ಭಾವನಾತ್ಮಕ ಸನ್ನಿವೇಶಗಳು ಕಂಡುಬಂದವು. ಅರಮನೆ ಆವರಣದಿಂದ ಆನೆಗಳು ಲಾರಿ ಏರಿ ಕಾಡಿನತ್ತ ಪಯಣ ಬೆಳೆಸುವುದಕ್ಕೆ ಮುಂದಾಗುತ್ತಿದ್ದಂತೆ ಅಲ್ಲಿದ್ದ ಕೆಲವರಲ್ಲಿ ಕಣ್ಣಾಲಿಗಳು ತೇವಗೊಂಡವು. ಅಂಬಾರಿ ಆನೆ ಅರ್ಜುನ ಲಾರಿ ಏರುವ ಮುನ್ನ ಅರಮನೆಯ ಆನೆಗಳ ಕಣ್ಣೀರು ಒರೆಸಿ ತಾನೂ ಭಾವುಕನಾದ. ಪ್ರತೀ ವರ್ಷದಂತೆ ಈ ಬಾರಿಯೂ ದಸರಾ ಆನೆ ಅರ್ಜುನನ ಮೇಲೆ ಅರಮನೆಯ ಆನೆಗಳು ವ್ಯಾಮೋಹ ಬೆಳೆಸಿಕೊಂಡಿದ್ದವು. ಪ್ರತೀ ದಿನ ತಮ್ಮ ಕಣ್ಣ ಮುಂದೆಯೇ ಇರುತ್ತಿದ್ದ ಅರ್ಜುನನನ್ನು…

1 1,319 1,320 1,321 1,322 1,323 1,611
Translate »