ಮೈಸೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದ ಜಯಚಾಮ ರಾಜೇಂದ್ರ ಒಡೆಯರ್ ಅವರ ಕೊನೆಯ ಪುತ್ರಿ ವಿಶಾಲಾಕ್ಷಿ ದೇವಿ ಅವರು ಪ್ರಾಣಿಪ್ರಿಯರೂ ಆಗಿದ್ದು, ಈ ಹಿಂದೆ ತಮ್ಮ ಮನೆಯಲ್ಲಿಯೇ ಚಿರತೆಗಳನ್ನು ಸಾಕಿದ್ದರು. ಬಂಡೀಪುರ ಅಭಯಾರಣ್ಯದ ಸಮೀಪವಿರುವ ತಮ್ಮ ರೆಸಾರ್ಟ್ನಲ್ಲಿ ಈ ಹಿಂದೆ ಹಲವು ಚಿರತೆಗಳನ್ನು ಸಾಕಿ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಸಿ ಕೊಂಡಿದ್ದರು. ಅಲ್ಲದೆ ಬಂಡೀಪುರ ಕ್ಯಾಂಪ್ನಲ್ಲಿದ್ದ ದಸರಾ ಆನೆ ಚೈತ್ರ, ಲಕ್ಷ್ಮೀ, ಜಯಪ್ರಕಾಶ ಸೇರಿದಂತೆ ಇನ್ನಿತರ ಆನೆಗಳಿಗೆ ಆಹಾರ ಪದಾರ್ಥಗಳನ್ನು ತಂದು ಕೊಡುವ ಮೂಲಕ ಸಾಕಾನೆ ಗಳನ್ನು…
ಈ ಬಾರಿ ದಸರಾ ಉತ್ಸವದ ಬಗ್ಗೆ ಸಮಗ್ರ ತನಿಖೆ ಆಗಬೇಕು: ಶಾಸಕ ತನ್ವೀರ್ ಸೇಠ್ ಆಗ್ರಹ
October 21, 2018ಮೈಸೂರು: ದಸರಾ ಮಹೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತು ವಾರಿ ಸಚಿವರ ಕೈಗೊಂಬೆಯಂತೆ ಮೈಸೂರು ಜಿಲ್ಲಾಡಳಿತ ನಡೆದುಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ್ದು, ಪಾಸ್ ವಿತರಣೆ, ಶಿಷ್ಟಾಚಾರ ಪಾಲನೆ ಸೇರಿದಂತೆ ಈ ಬಾರಿ ದಸರಾ ಮಹೋತ್ಸವ ಸಂಬಂಧ ಸಮಗ್ರ ತನಿಖೆಯಾಗಬೇಕೆಂದು ಶಾಸಕರೂ ಆದ ಮಾಜಿ ಸಚಿವ ತನ್ವೀರ್ಸೇಠ್ ಆಗ್ರಹಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಾಡಹಬ್ಬ ದಸರಾದಲ್ಲಿ ಕಾಂಗ್ರೆಸ್ನ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ದಸರಾ ಮಹೋತ್ಸವ…
ವಿಶ್ವಸಂಸ್ಥೆಯ ಭಾರತದ ಮೊದಲ ಯಂಗ್ ಬ್ಯುಸಿನೆಸ್ ಚಾಂಪಿಯನ್ ಆಗಿ ಮಾನಸಿ ಕಿರ್ಲೋಸ್ಕರ್ ನೇಮಕ
October 21, 2018ಮೈಸೂರು: ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್ನ ಕಾರ್ಯಕಾರಿ ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಮಾನಸಿ ಕಿರ್ಲೋಸ್ಕರ್ ಅವರು ವಿಶ್ವ ಸಂಸ್ಥೆ ಯಲ್ಲಿ ಭಾರತದ ಮೊದಲ ಸುಸ್ಥಿರ ಅಭಿವೃದ್ಧಿ ಗುರಿಗಳ ಯುವ ಬ್ಯುಸಿನೆಸ್ ಚಾಂಪಿಯನ್ (ಯಂಗ್ ಬ್ಯುಸಿನೆಸ್ ಚಾಂಪಿ ಯನ್ ಫಾರ್ ದಿ ಎಸ್ಡಿಜಿ) ಆಗಿ ನೇಮಕಗೊಂಡಿದ್ದಾರೆ. ಯುವ ಉದ್ಯಮ ನಾಯಕಿ ಯಾಗಿ ನೇಮಕಗೊಂಡಿರುವ ಮಾನಸಿ ಕಿರ್ಲೋಸ್ಕರ್ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ತಾವು ಸಾಧಿಸಿದ ಸಾಧನೆ, ತಲುಪಿದ ಗುರಿಗಳ ಬಗ್ಗೆ ಎಸ್ಡಿಜಿಗಳಿಗೆ ಅರಿವು ಮೂಡಿಸಲಿದ್ದಾರೆ….
ದಸರಾ ವಸ್ತು ಪ್ರದರ್ಶನದಲ್ಲಿ ಇನ್ನೂ ನಿರ್ಮಾಣವಾಗದ ವಿವಿಧ ಇಲಾಖೆ ಮಳಿಗೆಗಳು
October 21, 2018ಮೈಸೂರು: ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಮಳಿಗೆ ತೆರೆಯಲು ಮೀನಾ ಮೇಷ ಎಣಿಸುತ್ತಿರುವ ಇಲಾಖೆಗಳ ವಿರುದ್ಧ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಓ ಶಶಿಕುಮಾರ್ ಅವರು ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ದಸರಾ ವಸ್ತು ಪ್ರದರ್ಶನದಲ್ಲಿ ಮಳಿಗೆ ತೆರೆಯುವ ಸಂಬಂಧ ವಿವಿಧ ಸರ್ಕಾರಿ ಇಲಾಖೆಗಳು/ನಿಗಮ-ಮಂಡಳಿಗಳು/ ಜಿಲ್ಲಾ ಪಂಚಾಯತ್ ಹಾಗೂ ಇತರೆ ಸಂಘ-ಸಂಸ್ಥೆಗಳು ಕೋರಿಕೆ ಸಲ್ಲಿಸಿ, ಸ್ಥಳ ವನ್ನು ಕಾಯ್ದಿರಿಸಿದ್ದವು. ಆದರೆ, ಕೆಲವು ಸಂಸ್ಥೆಗಳು ಇದು ವರೆಗೂ…
#MeToo: ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಆರೋಪ
October 21, 2018ಬೆಂಗಳೂರು: ಬಾಲಿವುಡ್ನಲ್ಲಿ ಆರಂಭಗೊಂಡ ಮೀಟೂ ಇದೀಗ ಸ್ಯಾಂಡಲ್ವುಡ್ಗೂ ಕಾಲಿಟ್ಟಿದ್ದು, ಗಾಂಧಿನಗರದಲ್ಲಿ ತಲ್ಲಣ ಮೂಡಿಸಿದೆ. ನಟಿ ಶ್ರುತಿ ಹರಿಹರನ್ ಬಹು ಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಕನ್ನಡ ಚಿತ್ರರಂಗದಲ್ಲಿ ಪರ-ವಿರೋಧ ಚರ್ಚೆ ಜೋರಾಗಿದೆ. ಟೀಕೆ, ಖಂಡನೆ ಗಳ ಸುರಿಮಳೆಯೂ ಆಗುತ್ತಿದೆ. `ವಿಸ್ಮಯ’ ಸಿನಿಮಾ ಚಿತ್ರೀಕರಣದ ರಿಹರ್ಸಲ್ ವೇಳೆ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು. ಡಿನ್ನರ್ಗೆ ಹೋಗೋಣವೆಂದು ಪೀಡಿಸುತ್ತಿದ್ದರು ಎಂದು ನಟಿ ಶ್ರುತಿ ಆರೋಪಿಸಿದ್ದಾರೆ. ಶ್ರುತಿ ಹರಿಹರನ್ ಆರೋಪ ಸುಳ್ಳು. ನಾನೆಂದೂ ಆ…
ಕೇಂದ್ರ ಅನುದಾನ ಬಳಸಿಕೊಳ್ಳುವಲ್ಲಿ ರಾಜ್ಯ ಕನ್ನಡ, ಸಂಸ್ಕøತಿ ಇಲಾಖೆ ವಿಫಲ
October 21, 2018ಮೈಸೂರು: ಕೇಂದ್ರ ಸರ್ಕಾರದ ಸಂಸ್ಕøತಿ ಸಚಿವಾಲಯ ದಲ್ಲಿ ಸಾಕಷ್ಟು ಅನುದಾನವಿದೆ. ಆದರೆ ಇದನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾ ರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಿಂದುಳಿದಿದೆ ಎಂದು ಸಂಗೀತ ವಿದ್ವಾನ್ ಡಾ.ರಾ.ಸ. ನಂದಕುಮಾರ್ ತಿಳಿಸಿದ್ದಾರೆ. ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಭಾಂ ಗಣದಲ್ಲಿ ಕೇಂದ್ರ ಸಂಸ್ಕøತಿ ಸಚಿವಾಲ ಯದ ವತಿಯಿಂದ ಆಯೋಜಿಸಿದ್ದ ಎಂ.ಆರ್. ಶ್ರೀಹರ್ಷ ನೇತೃತ್ವದಲ್ಲಿ ಸಂಗೀತ-ನಾಟ್ಯ-ರೇಖಾ ಚಿತ್ರದ ರೂಪಕ ಮನಸ್ವಿನಿ `ದೃಶ್ಯ-ಶ್ರಾವ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಉತ್ತರ ಭಾರತದ ರಾಜ್ಯ ಗಳು ಹಾಗೂ ಪಕ್ಕದ ತಮಿಳುನಾಡಿನಲ್ಲಿ ಕೇಂದ್ರ…
ಸಂಸ್ಕøತ ಸಾಮ್ರಾಜ್ಞಿ ಭಾಷೆ
October 21, 2018ಮೈಸೂರು: ಸಂಸ್ಕøತದಲ್ಲಿರುವ ಋಗ್ವೇದದ ಮಂತ್ರಗಳು ಹಾಗೂ ಭಗವದ್ಗೀತೆಯ ಶ್ಲೋಕಗಳನ್ನು ಉಚ್ಛಾರಣೆ ಮಾಡುವುದರಿಂದ ಮಾತಿನ ಸಮಸ್ಯೆ ನಿವಾರಣೆಯಾಗುತ್ತದೆ. ಅದೊಂದು ಭಾಷಾ ಥೇರಪಿ ಎಂದು ಅಹಮದಾಬಾದ್ನ ಎಲ್ಡಿ ಕಲಾ ಕಾಲೇಜು ಸಂಸ್ಕøತ ಪ್ರಾಧ್ಯಾಪಕ ಡಾ. ಗಜೇಂದ್ರ ಪಾಂಡ ತಿಳಿಸಿದರು. ಮೈಸೂರಿನ ಕುವೆಂಪುನಗರದಲ್ಲಿ ಟಿಎನ್ಎಸ್ ಪ್ರತಿಷ್ಠಾನ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕøತ ಭಾಷೆಯನ್ನು ಅಭ್ಯಾಸ ಚಿಕಿತ್ಸೆಯನ್ನು ಪಡೆದುಕೊಂಡಂತೆ, ಮಾತುಗಾರಿಕೆಯಲ್ಲಿ ತೊಂದರೆ ಇರುವವರು ಸಂಸ್ಕøತ ಭಾಷೆಯನ್ನು ಉಚ್ಛಾರಣೆ ಮಾಡುವುದರಿಂದ ಅನುಕೂಲವಾಗುತ್ತದೆ ಎಂದರು. ಸರಿಯಾದ ಉಚ್ಛಾರಣೆಯು ಬರದಿದ್ದರೆ ‘ಅಮರ ಕೋಶ’ವನ್ನು…
ಕೆ.ಆರ್.ನಗರದಲ್ಲಿ ನವರಾತ್ರಿ ಉತ್ಸವ
October 21, 2018ಕೆ.ಆರ್.ನಗರ: ಪಟ್ಟಣದ ಸಿ.ಎಂ.ರಸ್ತೆಯಲ್ಲಿರುವ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಕಳೆದ 9 ದಿವಸಗಳಿಂದ ಆಚರಿಸಲಾಯಿತು. ವಿಶೇಷ ಪೂಜೆಯೊಂದಿಗೆ ಬೆಳಿಗ್ಗೆ ಲಕ್ಷ್ಮೀವೆಂಕಟೇಶ್ವರ, ಚಂದ್ರಮೌಳೇಶ್ವರ, ಆಂಜನೇಯಸ್ವಾಮಿ, ರಾಮದೇವರುಗಳ ಪಲ್ಲಕ್ಕಿ ಉತ್ಸವವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ನಡೆಸಿ ನಂತರ ದೇವಾಲಯ ದಲ್ಲಿ ವಿಶೇಷ ಪೂಜಾ ಕೈಕಂರ್ಯಗಳ ಜೊತೆಗೆ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ವಿಜಯದಶಮಿ ದಿನವಾದ ಶುಕ್ರವಾರ ಸಂಜೆ 4 ಗಂಟೆಗೆ ಪಟ್ಟಣದ ವಿವಿಧ ದೇವಾ ಲಯಗಳಿಂದ ದೇವರ ಪಲ್ಲಕ್ಕಿ ಉತ್ಸವಗಳು ಒಂದೆಡೆ ಸೇರಿ ಪ್ರಮುಖ…
ಬೋನಿಗೆ ಬಿದ್ದ ಮೂರು ವರ್ಷದ ಚಿರತೆ
October 21, 2018ಹಂಪಾಪುರ: ಹೆಚ್.ಡಿ.ಕೋಟೆ ತಾಲೂಕಿನ ಹಿರೇನಂದಿ ಗ್ರಾಮ ದಲ್ಲಿ 2 ವರ್ಷದ ಹಿಂದೆ 4 ಹೆಣ್ಣು 1 ಗಂಡು ಚಿರತೆ ಇದೇ ಗ್ರಾಮದಲ್ಲಿ ಬೋನಿಗೆ ಸೆರೆ ಸಿಕ್ಕಿದ್ದು, ಇದೆ ಮಂಗಳವಾರ (ಅ.16) ಮುಂಜಾನೆ 5 ಗಂಟೆ ಸಮಯದಲ್ಲಿ 3 ವರ್ಷದ ಮತ್ತೊಂದು ಗಂಡು ಚಿರತೆ ಸೆರೆ ಸಿಕ್ಕಿದೆ. ಗ್ರಾಮದ ಚೆಲುವ ಅವರ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಮಂಗಳವಾರ ಮುಂಜಾನೆ 5 ಗಂಟೆ ಸಮಯದಲ್ಲಿ 3 ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ. ಈ ಗ್ರಾಮದ ಜಮೀನುಗಳು…
ಬಡತನ ಸಾಧನೆಗೆ ಅಡ್ಡ ಬಾರದು
October 21, 2018ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ನಂಜನಗೂಡು: ಬಡತನ ಸಾಧನೆಗೆ ಅಡ್ಡಿಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಶ್ರೀಮತಿ ನೀಲಮಣಿ ಎನ್.ರಾಜು ತಿಳಿಸಿದರು. ಇತ್ತೀಚೆಗೆ ಸುತ್ತೂರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಮೇಘಾ ಲಯ, ಮಣಿಪುರ ಹಾಗೂ ಜಾರ್ಖಂಡ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಪಡೆಯಲು ಪೂರಕ ಪರಿಸರ ಇದೆ. ಅದರಲ್ಲೂ ಜೆಎಸ್ಎಸ್ ಸಂಸ್ಥೆಗಳಲ್ಲಿ ಸಂಸ್ಕಾರ ಸಹಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಪರಮಪೂಜ್ಯ ಸುತ್ತೂರು ಶ್ರೀಗಳವರು ಬಡಮಕ್ಕಳಿಗೆ ಸುಸಜ್ಜಿತ ವಿದ್ಯಾರ್ಥಿನಿಲಯ ದೊಂದಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ….