ಮೈಸೂರು: ಖಾಯಂ ಮಾತಿಗೆ ಆಗ್ರಹಿಸಿ ಪೌರಕಾರ್ಮಿಕರು ನಡೆಸುತ್ತಿ ರುವ ಮುಷ್ಕರಕ್ಕೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಮಾತನಾಡಿದ ಎಲ್. ನಾಗೇಂದ್ರ ಅವರು, ನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಮರ್ಪಕ ವಾಗಿ ವೇತನ ಸಿಗುತ್ತಿಲ್ಲ. ಇಎಸ್ಐ, ಪಿಎಫ್ ಸೇರಿ ದಂತೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಈ ಕಾರಣದಿಂದಲೇ ಪೌರಕಾರ್ಮಿಕರಿಗೆ ಚೆಕ್ ಮೂಲಕವೇ ವೇತನ ನೀಡಬೇಕೆಂದು…
ಸ್ವಚ್ಛತಾ ಕಾರ್ಯಕ್ಕಿಳಿದ ಕಾರ್ಪೊರೇಟರ್ ಕೆ.ವಿ.ಶ್ರೀಧರ್
October 5, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದು, ನಗರದಾದ್ಯಂತ ತ್ಯಾಜ್ಯಕ್ಕೆ ಮುಕ್ತಿ ನೀಡುವವರಿಲ್ಲದೆ, ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗುತ್ತಿದೆ. ಈ ನಡುವೆ ಪಾಲಿಕೆ ವಾರ್ಡ್ ನಂ.3ರ ಸದಸ್ಯ ಕೆ.ವಿ.ಶ್ರೀಧರ್ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಗುರುವಾರ ತಾವೇ ಸ್ವಚ್ಛತಾ ಕೆಲಸ ಮಾಡಿದ್ದಾರೆ. ತಮ್ಮ ನವಭಾರತ್ ನಿರ್ಮಾಣ ಸೇವಾ ಟ್ರಸ್ಟ್ನ ಕಾರ್ಯಕರ್ತರು, ವಾರ್ಡಿನ ಸಾರ್ವಜನಿಕರು ಹಾಗೂ ಅಂಗಡಿ-ಮುಂಗಟ್ಟುಗಳ ಸಿಬ್ಬಂದಿಯನ್ನು ಜೋಡಿಸಿಕೊಂಡು ರಾಶಿ ಬಿದ್ದಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದಾರೆ. ಜನರು ಕೊಟ್ಟ ಅವಕಾಶಕ್ಕೆ ತಕ್ಕಂತೆ ಸಾರ್ಥಕ…
ಲ್ಯಾನ್ಸ್ಡೌನ್ ಬಿಲ್ಡಿಂಗ್ ಬಳಿಯ ಶೌಚಾಲಯಕ್ಕೆ ನೀರು, ಯುಜಿಡಿ ಸಂಪರ್ಕಕ್ಕೆ ಶಾಸಕ ನಾಗೇಂದ್ರ ಸಲಹೆ
October 5, 2018ಮೈಸೂರು: ಲ್ಯಾನ್ಸ್ಡೌನ್ ಬಿಲ್ಡಿಂಗ್ ನಲ್ಲಿರುವ ಶೌಚಾಲಯಕ್ಕೆ ಕೂಡಲೇ ನೀರು ಮತ್ತು ಯುಜಿಡಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಶಾಸಕ ಎಲ್.ನಾಗೇಂದ್ರ ಸ್ಥಳದಲ್ಲಿದ್ದ ಅಧಿಕಾರಿ ಗಳಿಗೆ ಸೂಚಿಸಿದರು. ಗುರುವಾರ ಚಾಮ ರಾಜ ಕ್ಷೇತ್ರದ 23ನೇ ವಾರ್ಡ್ನಲ್ಲಿ ಪಾದಯಾತ್ರೆ ನಡೆಸಿದ ಎಲ್. ನಾಗೇಂದ್ರ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಲ್ಯಾನ್ಸ್ಡೌನ್ ಬಿಲ್ಡಿಂಗ್ಗೆ ಭೇಟಿ ನೀಡಿದ ವೇಳೆ ಅಚ್ಚರಿ ಕಾದಿತ್ತು. ಮನುಷ್ಯರು ಓಡಾಡಲು ಸಾಧ್ಯವಿಲ್ಲದಷ್ಟು ಮೂತ್ರ ನಿಸರ್ಜನೆಯ ದುರ್ನಾತ. ಶೌಚಾಲಯ ಇದ್ದರೂ ನೀರು -ನಿರ್ವಹಣೆ ಇಲ್ಲ. ವ್ಯಾಪಾರಿಗಳಿಗೆ ನೀಡಿರುವ ತಾತ್ಕಾಲಿಕ ಮಳಿಗೆಯ ಮುಂದೆಯೇ ಕಸ, ಗ್ಲಾಸ್ಪೀಸ್ಗಳನ್ನು…
ಶಿವರಾಂಪೇಟೆ ರಸ್ತೆಯ ಮೂರು ಅಂಗಡಿಗಳಲ್ಲಿ 1.85 ಲಕ್ಷ ರೂ. ನಗದು ಕಳವು
October 5, 2018ಮೈಸೂರು: ಮೂರು ಅಂಗಡಿಗಳ ಬಾಗಿಲು ಮುರಿದು 1.85 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಮೈಸೂರಿನ ಶಿವರಾಂಪೇಟೆ ರಸ್ತೆಯ ಮನ್ನಾರ್ಸ್ ಮಾರ್ಕೆಟ್ ಎದುರು ಕಳೆದ ರಾತ್ರಿ ಸಂಭವಿಸಿದೆ. ಪ್ರಕಾಶ ಜೈನ್ ಎಂಬುವರ ಕಮಲ್ ಸೂಪರ್ ಬಜಾರ್, ಪ್ರತಾಪ್ ಚಂದ್ ಅವ ರಿಗೆ ಸೇರಿದ ಮಾರುತಿ ಟಾಯ್ಸ್ ಅಂಗಡಿ ಹಾಗೂ ಚಂದ್ರಶೇಖರ್ ಅವರ ವಂದನಾ ಎಂಟರ್ಪ್ರೈಸಸ್ಗಳಿಗೆ ಖದೀಮರು ಲಗ್ಗೆ ಹಾಕಿ ನಗದು ಕಳವು ಮಾಡಿದ್ದಾರೆ. ಹಿಂಬದಿಯ ಆಂಜನೇಯ ಸ್ವಾಮಿ ದೇವ ಸ್ಥಾನದ ಕಡೆಯಿಂದ ಬಂದು ಒಂದೇ ಕಟ್ಟಡ…
ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಎಲ್ಲಾ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ
October 5, 2018ಮೈಸೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದ ತನಿಖೆಯಲ್ಲಿ ಪ್ರಪಂಚದಲ್ಲಿರುವ ಎಲ್ಲಾ ರೀತಿಯ ತಂತ್ರಜ್ಞಾನವನ್ನು ಬಳಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರರಾವ್ ತಿಳಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಮಾಧ್ಯಮ ಮತ್ತು ಆರಕ್ಷಕ ವ್ಯವಸ್ಥೆ’ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು, ನನ್ನ 18 ವರ್ಷದ ಪೊಲೀಸ್ ವೃತ್ತಿಯಲ್ಲಿ ಹಲವಾರು ತನಿಖೆಗಳನ್ನು ನೋಡಿದ್ದೇವೆ. ಆದರೆ, ಗೌರಿ…
ಯುವ ಸಂಭ್ರಮ: ಕನ್ನಡ ನಾಡು-ನುಡಿ ಕಟ್ಟಿಕೊಟ್ಟ ಗಾಯನ, ನೃತ್ಯ
October 5, 2018ಮೈಸೂರು: ಇಳಿ ಸಂಜೆಯ ಮಬ್ಬಿನಲಿ. ಚುಮು-ಚುಮು ಚಳಿಯ ತುಂತುರು ಮಳೆಯ ಸಿಂಚನದ ನಡುವೆಯೂ ಕನ್ನಡ ನಾಡು-ನುಡಿ ಕುರಿತ ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಮೈಸೂರು ದಸರಾ ಎಷ್ಟೊಂದು ಸುಂದರ ಹಳೆ ಹಾಡುಗಳ ನೃತ್ಯ ಝೇಂಕಾರ, ಮಹಿಳಾ ಸಬಲೀಕರಣ, ದೇಶಪ್ರೇಮ, ಪರಿಸರ ನಾಶ-ಮನು ಷ್ಯನ ವಿನಾಶ ಸಂದೇಶಗಳು ಮಾರ್ಧನಿಸಿದವು. ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿರುವ `ಯುವ ಸಂಭ್ರಮ’ದ 5ನೇ ದಿನವಾದ ಗುರುವಾರ ಸಂಜೆ ತುಂತುರು ಮಳೆಯ…
ಆರೋಗ್ಯ ಸೇವೆ ಬೇಕಿದ್ದರೆ ಸದ್ಯಕ್ಕೆ ಪಡಿತರ ಚೀಟಿ, ಆಧಾರ್ ಹಾಜರುಪಡಿಸಿದರೆ ಸಾಕು
October 5, 2018ಮೈಸೂರು: ರಾಜ್ಯ ಸರ್ಕಾರದ `ಆರೋಗ್ಯ ಕರ್ನಾಟಕ’ ಯೋಜನೆ ಜಾರಿಯಾಗಿ ಐದಾರು ತಿಂಗಳು ಕಳೆದಿ ದ್ದರೂ, ಈ ಯೋಜನೆಯ ಕಾರ್ಡ್ ಎಲ್ಲಿ?, ಹೇಗೆ?, ಯಾವ ಸಮಯದಲ್ಲಿ? ಮಾಡಿಸ ಬೇಕು. ಯಾವ ದಾಖಲೆಗಳನ್ನು ಒದಗಿಸ ಬೇಕು? ಹೀಗೆ ಹಲವು ಗೊಂದಲಗಳು ಸಾರ್ವ ಜನಿಕರಲ್ಲಿವೆ. ಆದರೆ ಈ ಯೋಜನೆಯ ಸೌಲಭ್ಯ ಪಡೆಯಲು ಸದ್ಯಕ್ಕೆ ಯಾವುದೇ ಕಾರ್ಡ್ ಅಗತ್ಯವಿಲ್ಲ. ಆಸ್ಪತ್ರೆಗೆ ಹೋಗು ವಾಗ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಕೊಂಡೊಯ್ದರೆ ಸಾಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ…
ದೇಜಗೌ ಹೆಸರೇ ಒಂದು ವಿಸ್ಮಯ ಲೋಕ
October 5, 2018ಮೈಸೂರು: ಎಲ್ಲರಲ್ಲೂ ಕನ್ನಡ ನಾಡು, ನುಡಿಯ ಪ್ರೀತಿ ತುಂಬಿದ ನಾಡೋಜ ದೇಜಗೌ ಒಂದು ವಿಸ್ಮಯ ಲೋಕವೇ ಹೌದು ಎಂದು ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ ಇಂದಿಲ್ಲಿ ಅಭಿಪ್ರಾಯಪಟ್ಟರು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾ ಟಕ ಜಾನಪದ ಪರಿಷತ್ತು ಮೈಸೂರು ಘಟಕ ಮೈಸೂರಿನ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ದೇಜಗೌ ಜನ್ಮ ಶತ ಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಸಜ್ಜನರಾದವರು ತಾವು ಪಡೆದ ಉಪ ಕಾರವನ್ನು ಮರೆಯುವುದಿಲ್ಲ. ಮೈಸೂರು ವಿವಿ ಕುಲಪತಿ, ಪ್ರಿನ್ಸಿಪಾಲ್,…
ಸೂರು ವಿವಿ ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಾತಿ ವಿರುದ್ಧ ದಸಂಸ ಅನಿರ್ದಿಷ್ಟಾವಧಿ ಪ್ರತಿಭಟನೆ
October 5, 2018ಮೈಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 124 ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಕ್ಕೆ ಸಂಬಂಧಿಸಿ ದಂತೆ ರಾಜ್ಯಪಾಲರ ಆದೇಶದನ್ವಯ ತಪ್ಪಿತ ಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖ ಲಿಸಬೇಕು, ವಿವಿ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಗುರುವಾರ ಅನಿರ್ದಿಷ್ಟಾ ವಧಿ ಪ್ರತಿಭಟನೆ ಆರಂಭಿಸಿದವು. ಮೈಸೂರು ವಿವಿಯ ಕ್ರಾಫರ್ಡ್ ಹಾಲ್ ದ್ವಾರದ ಬಳಿ ಪ್ರತಿಭಟನೆ ಆರಂಭಿಸಿರುವ ಪ್ರತಿಭಟನಾಕಾರರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು ಹಾಗೂ ರಾಷ್ಟ್ರ ಕವಿ ಕುವೆಂಪು ಅವರ…
ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಅ.7ರಂದು ಕಾಲ್ನಡಿಗೆ ಜಾಗೃತಿ ಜಾಥಾ
October 5, 2018ಮೈಸೂರು: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಕಾರ್ಡಿ ಯಾಲಜಿ ಸೊಸೈಟಿ ಆಫ್ ಇಂಡಿಯಾದ ಮೈಸೂರು ಶಾಖೆ ವತಿಯಿಂದ ಅ.7ರಂದು ಬೆಳಿಗ್ಗೆ 8 ಗಂಟೆಗೆ ಕಾಲ್ನಡಿಗೆ ಜಾಗೃತಿ ಜಾಥಾ ಹಮ್ಮಿ ಕೊಳ್ಳಲಾಗಿದೆ ಎಂದು ಶಾಖೆಯ ಕಾರ್ಯದರ್ಶಿ ಡಾ.ಎಂ.ಕೆ.ಎಸ್.ರಾಜಿತ್ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಶ್ವದ ನಂ.1 ಕಾಯಿಲೆ ಎನಿಸಿರುವ ಹೃದಯ ಸಂಬಂಧಿ ಕಾಯಿಲೆಯಿಂದ ಪ್ರತಿ ವರ್ಷ 1.5 ಕೋಟಿ ಜನರು ಬಳಲುತ್ತಿದ್ದಾರೆ. ಈ ಕುರಿತು ಜನಜಾಗೃತಿ ಮೂಡಿಸಲೆಂದೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾಥಾ ಜೆ.ಕೆ.ಮೈದಾನದಿಂದ…