ನಂಜನಗೂಡು: ನಗರದ 19ನೇ ವಾರ್ಡ್ ನೀಲಕಂಠನಗರ ಬಡಾವಣೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ದಿ ಪಡಿಸಲು ಕ್ರಮ ವಹಿಸುವುದಾಗಿ ಶಾಸಕ ಬಿ. ಹರ್ಷವರ್ಧನ್ ತಿಳಿಸಿದ್ದಾರೆ. ಸೋಮವಾರ ನೀಲಕಂಠನಗರ ಬಡಾವಣೆಗೆ ಭೇಟಿ ನೀಡಿದಾಗ ನಾಗರಿಕರು ಬಡಾವಣೆಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲಾ, ಈ ಭಾಗದ ಸದಸ್ಯರು ಸರಿಯಾಗಿ ಕೆಲಸ ಮಾಡಿಲ್ಲ ಕಳೆದ ಹಲವು ವರ್ಷಗಳಿಂದ ಈ ಬಡಾವಣೆ ನಿರೀಕ್ಷೆಯಷ್ಟು ಅಭಿವೃದ್ಧಿ ಯಾಗಿಲ್ಲ ಎಂದು ದೂರಿದರು. ಶಾಸಕರು ಸಂಬಂಧಪಟ್ಟ ಅಧಿಕಾರಿ ಜೊತೆ ದೊರವಾಣಿ ಯಲ್ಲಿ ಚರ್ಚಿಸಿ ಬಡಾವಣೆಯ…
ಹೆಚ್.ಡಿ.ಕೋಟೆಯಲ್ಲಿ ಶ್ರೀನಾರಾಯಣ ಗುರು ಜಯಂತಿ
August 28, 2018ಹೆಚ್.ಡಿ.ಕೋಟೆ: ಜಾತಿ ವ್ಯವಸ್ಥೆಯನ್ನು ತೊಡೆದು ಹಾಕುವಲ್ಲಿ ನಾರಾಯಣ ಗುರುಗಳು ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಉಂಟು ಮಾಡಿದ್ದರು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ 164ನೇ ನಾರಾ ಯಣ ಗುರುರವರ ಜಯಂತಿ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಅಂದಿನ ದಿನಗಳಲ್ಲಿ ಸಮಾಜದಲ್ಲಿ ಕಟ್ಟುಪಾಡುಗಳು ಅತೀ ಹೆಚ್ಚಿದ್ದವು. ಜನ ಸಾಮಾನ್ಯರಿಗೆ ನರಕದ ಜೀವನ ಆಗಿತ್ತು. ಈ ನರಕದ ಜೀವನದಿಂದ ಸಾಮಾನ್ಯ ಜನತೆಯನ್ನು ದೂರ ಮಾಡಬೇಕಾದರೆ ಅವರಿಗೆ ಶಿಕ್ಷಣದ ಅವಶ್ಯಕತೆ ಇದೆ ಎನ್ನುವುದನ್ನು ಅರಿತಿದ್ದ ಅವರು,…
ಬೈಲಕುಪ್ಪೆಯಲ್ಲಿ ಕಾವೇರಿ ಮಾತೆಗೆ ಹುಣ್ಣಿಮೆ ಪೂಜೆ
August 28, 2018ಬೈಲಕುಪ್ಪೆ: ಕಾವೇರಿ ಮಾತೆಗೆ ಹುಣ್ಣಿಮೆ ವಿಶೇಷ ಪೂಜೆಯನ್ನು ಭಾನುವಾರ ರಾತ್ರಿ ನೆರವೇರಿಸಲಾಯಿತು. ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದ ಕಾವೇರಿ ನದಿ ದಡದಲ್ಲಿ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಕಾವೇರಮ್ಮನ ಪ್ರತಿಮೆಗೆ ಹುಣ್ಣಿಮೆಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ ಪ್ರಸಾದ ವಿನಿಯೋಗಿಸಲಾಯಿತುಸಂಘದ ಅಧ್ಯಕ್ಷ ಬಭೀಂದ್ರಪ್ರಸಾದ್ ಸಮ್ಮುಖದಲ್ಲಿ 65ನೇ ಹುಣ್ಣಿಮೆಯ ವಿಶೇಷ ಪೂಜೆಯಲ್ಲಿ ತೊಡಗಿದ್ದ ಅರ್ಚಕ ರಾದ ಪ್ರಸನ್ನಭಟ್ ಮತ್ತು ಪರಮೇ ಶ್ವರ್ಭಟ್ರವರು ಕಾವೇರಮ್ಮನ ಪ್ರತಿಮೆ ಯನ್ನು ಸ್ವಚ್ಛಗೊಳಿಸಿ ಹಾಲು, ತುಪ್ಪ, ಜೇನು, ಎಳನೀರಿನಿಂದ ಅಭಿಷೇಕ…
ಚಿಕ್ಕನೇರಳೆ ಪಿಎಸಿಸಿಗೆ ಆಯ್ಕೆ
August 28, 2018ಬೆಟ್ಟದಪುರ: ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ 12 ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಾಮಾನ್ಯ ವರ್ಗಕ್ಕೆ ವೆಂಕಟೇಶ್ ಸಿ.ವಿ.ಪುಟ್ಟರಾಜು ನಿಲವಾಡಿ, ಮಂಜುನಾಥ್.ವಿ, ಪುಟ್ಟರಾಜು, ಹಸುವಿನಕಾವಲು ಬಸವರಾಜು, ಗುರುಮಲ್ಲೇಶ್, ಡಿ.ಕೆ.ಕೃಷ್ಣೇಗೌಡ, ನಾಗನಾಯ್ಕ, ಹಿಂದುಳಿದ ವರ್ಗಕ್ಕೆ ಅಲಿಜಾನ್, ಇಲಿಯಾಸ್ ಪಾಷಾ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಮಣಿ, ಸೀತಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗಿರೀಶ್ ಘೋಷಿಸಿದರು. ಈ ಚುನಾವಣೆಯಲ್ಲಿ ನೇರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಗಳಿಗೆ ಪೈಪೋಟಿ ಇದ್ದು, ಚುನಾವಣಾ…
ಗ್ರಾಮೀಣ ಕಲಾವಿದರಿಂದ ಮಾತ್ರ ನೈಜಕಲೆ ಕಾಣಲು ಸಾಧ್ಯ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ
August 28, 2018ಭಾರತೀನಗರ: ಗ್ರಾಮೀಣ ಭಾಗದಲ್ಲಿ ಬಣ್ಣಹಚ್ಚಿ ನಾಟಕ ಪ್ರದರ್ಶನ ನೀಡುವ ಕಲಾವಿದರಿಂದ ಮಾತ್ರ ನೈಜ ಕಲೆ ಕಾಣಲು ಸಾಧ್ಯ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಇಲ್ಲಿನ ಕೇಂಬ್ರಿಡ್ಜ್ ಶಾಲಾವರಣದಲ್ಲಿ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘ, ರಂಗಭೂಮಿ ಚಾರಿಟಬಲ್ ಸೇವಾ ಟ್ರಸ್ಟ್, ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ದಕ್ಷಯಜ್ಞ ಪೌರಾಣಿಕ ನಾಟಕ ಪ್ರದರ್ಶನದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಎಷ್ಟೇ ದೊಡ್ಡ ವ್ಯಕ್ತಿಗಳಾದರೂ, ಅಹಂಕಾರ ಪಡಬಾರದು. ಅಹಂಕಾರ ಪಟ್ಟರೆ ಸರ್ವನಾಶವಾಗುತ್ತಾರೆ ಎಂಬುವುದಕ್ಕೆ ಈ…
ರೈತರ 2 ಲಕ್ಷದ ವರೆಗಿನ ಬೆಳೆ ಸಾಲ ಮನ್ನಾ ಎರಡು ತಿಂಗಳಿನಲ್ಲಿ ರೈತರಿಗೆ ಋಣಮುಕ್ತ ಪತ್ರ ವಿತರಣೆ: ಸಚಿವ ಶಿವಶಂಕರ ರೆಡ್ಡಿ ಭರವಸೆ
August 28, 2018ಚಾಮರಾಜನಗರದಲ್ಲಿ ಕೃಷಿ ಕಾಲೇಜು ಪ್ರಾರಂಭ ಚಾಮರಾಜನಗ: ‘ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ರೈತರ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಿದ್ದು, ಈ ಆದೇಶ ಹೊರ ಬಿದ್ದಿದೆ. ಈಗ ಎರಡನೇ ಹಂತದಲ್ಲಿ ರೈತರ ಖಾಸಗಿ ಬ್ಯಾಂಕ್ಗಳಲ್ಲಿ ಪಡೆದಿ ರುವ ಎರಡು ಲಕ್ಷ ರೂ. ವರೆಗಿನ ಬೆಳೆ ಸಾಲ ಮನ್ನಾ ಮಾಡಲು ತೀರ್ಮಾನಿಸ ಲಾಗಿದೆ. ಇನ್ನೂ ಎರಡು ತಿಂಗಳಿನಲ್ಲಿ ರೈತರಿಗೆ ಋಣ ಮುಕ್ತ ಪತ್ರ ನೀಡಲಾಗು ವುದು’ ಎಂದು ಕೃಷಿ ಸಚಿವ ಎನ್.ಹೆಚ್. ಶಿವಶಂಕರ ರೆಡ್ಡಿ ಭರವಸೆ ನೀಡಿದರು….
ಮಡಿಕೇರಿ ನಿರಾಶ್ರಿತರ ಕೇಂದ್ರದಲ್ಲಿ ಮೊಳಗಿತು ಮಂಗಳವಾದ್ಯ
August 27, 2018ಮಡಿಕೇರಿ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಜನರು ತತ್ತರಿಸಿದ್ದರು. ಮನೆ ಕಳೆದುಕೊಂಡು ಚಿಂತಾಕ್ರಾಂತರಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಹಲವು ಕುಟುಂಬಗಳು ಆಸ್ತಿ-ಪಾಸ್ತಿ ಕಳೆದುಕೊಂಡು ಚಿಂತೆಯಲ್ಲಿದ್ದ ಸಂತ್ರಸ್ತರಿಗೆ, ಭರವಸೆ ಕಲ್ಪಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ಮುಂದುವರೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಸಂತ್ರಸ್ತ ಕುಟುಂಬವೊಂದರ ಮನೆ ಮಗಳ ಮದುವೆ ಸಡಗರ, ಸಂಭ್ರಮದಿಂದ ನಿರಾಶ್ರಿತ ಕೇಂದ್ರದಲ್ಲಿ ನಡೆಯಿತು. ಮಕ್ಕಂದೂರು ಗ್ರಾಮದ ರಾಟೆ ಮನೆ ಪೈಸಾರಿ ನಿವಾಸಿ ಆರ್.ಮಂಜುಳಾ ಮತ್ತು ಕೇರಳದ ಕೂತುಪರಂಬು ನಿವಾಸಿ ರಜೀಶ್ ಅವರ ವಿವಾಹ ಈ…
ಮುಂದಿನ ತಿಂಗಳು ರಾಜ್ಯ ಸಂಪುಟ ವಿಸ್ತರಣೆ
August 27, 2018ಮಂಗಳೂರು: ಮುಂದಿನ ತಿಂಗಳು ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವೈಫಲ್ಯತೆಗಳನ್ನು ವಿವರಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವ ಜನರನ್ನು ಕಾಂಗ್ರೆಸ್ ಪಕ್ಷ ಎದುರು ನೋಡುತ್ತಿರುವುದಾಗಿ ತಿಳಿಸಿದರು. ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರ ದೇಶವನ್ನು ಅಪಾಯದ ಸ್ಥಿತಿಗೆ ತಳ್ಳುತ್ತಿದೆ. ಮಹಿಳೆಯರಿಗೆ ಸುರಕ್ಷತೆ ಇಲ್ಲ. ಉದ್ಯೋಗ ಇಲ್ಲದೆ ನಿರುದ್ಯೋಗ ಸಮಸ್ಯೆ ತೀವ್ರಗೊಂಡಿದೆ ಎಂದು ಆರೋಪಿಸಿದರು….
ಕೊಡಗಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ಗೆ ಶಿಷ್ಟಾಚಾರದಲ್ಲಿ ಲೋಪ
August 27, 2018ಬೆಂಗಳೂರು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ನಡುವಿನ ಜಟಾಪಟಿಗೆ ತೆರೆ ಎಳೆಯಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಟ್ವಿಟರ್ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಗಿನ ರಕ್ಷಣಾ ಕಾರ್ಯಗಳಿಗೆ ಸಾಧ್ಯವಾದ ಎಲ್ಲಾ ನೆರವನ್ನು ನೀಡಿದ್ದು, ಕೊಡಗಿನಲ್ಲಾಗಿರುವ ಹಾನಿ ಮತ್ತು ಪುನರ್ವಸತಿ ಕಾರ್ಯಗಳ ಪರಿಶೀಲನೆ ನಡೆಸಲು ಅವರು ಖುದ್ದು ಭೇಟಿ ನೀಡಿದ್ದರು. ವ್ಯತಿರಿಕ್ತ ಪರಿಸ್ಥಿತಿಗಳ ಮಧ್ಯೆಯೂ ಜಿಲ್ಲಾಡಳಿತ ಹಾಗೂ ಸರ್ಕಾರ ಶಿಷ್ಟಾಚಾರವನ್ನು…
ಕೊಡಗಿನ ನಿರಾಶ್ರಿತರ ಪರಿಹಾರ ಕೇಂದ್ರದ ನಿರ್ವಹಣೆಯಲ್ಲಿ ಗೊಂದಲದ ಗೂಡಾಗಿರುವ ಜಿಲ್ಲಾಡಳಿತ
August 27, 2018ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮರಣ ಮಳೆಯಿಂದ ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ವಿವಿಧೆಡೆ ತೆರೆಯಲಾಗಿರುವ 31 ನಿರಾಶ್ರಿತ ಕೇಂದ್ರಗಳಲ್ಲಿ ಒಟ್ಟು 3824 ಮಂದಿ ಆಶ್ರಯ ಪಡೆದಿದ್ದಾರೆ. ಹಲವು ಮಂದಿ ಸಂತ್ರಸ್ತರು ಸಂಬಂಧಿಕರ ಮನೆ ಸೇರಿದರೆ, ಮತ್ತೆ ಕೆಲವರು ಹೋಂ ಸ್ಟೇಗಳಲ್ಲಿ ಇಂದಿಗೂ ಆಶ್ರಯ ಪಡೆದಿದ್ದಾರೆ. ಆರ್ಎಸ್ಎಸ್ನ ಅಂಗಸಂಸ್ಥೆ ಸೇವಾ ಭಾರತೀಯ 9 ನಿರಾಶ್ರಿತ ಕೇಂದ್ರಗಳಲ್ಲಿ 1500 ಮಂದಿ ಆಶ್ರಯ ಪಡೆದಿದ್ದು, ಈ ಕೇಂದ್ರದಲ್ಲಿರುವವರಿಗೆ ಮಾತ್ರವೇ ಗುರುತಿನ ಚೀಟಿ ನೀಡಲಾಗಿದೆ. ಈ ಕೇಂದ್ರಕ್ಕೆ ದಾಖಲಾಗಿರುವ ಪ್ರತಿಯೊಬ್ಬರ ವಿವರವನ್ನು ಕೂಡ ದಾಖಲು…