ಮೈಸೂರು: ಮೈಸೂರಿನ ಮಾಯಕಾರ ಗುರುಕುಲ ವತಿಯಿಂದ ಜು.28 ಮತ್ತು 29ರಂದು ಮೈಸೂರಿನ ರೈಲ್ವೆ ಆಟದ ಮೈದಾನದಲ್ಲಿ ಜ್ಯೋತಿಷಿ ಹಾಗೂ ಪುರೋಹಿತರ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಸದಾ ಮಂತ್ರ, ಹೋಮ, ಹವನ, ಪೂಜೆ, ಅಭಿಷೇಕ ಇನ್ನಿತರ ವಿಧಿ ವಿಧಾನಗಳಲ್ಲೇ ಕಾಲ ಕಳೆಯುವ ಪೌರೋಹಿತ್ಯರದ್ದು ಒತ್ತಡದ ಜೀವನವಾಗಿದೆ. ಈ ಒತ್ತಡದಿಂದ ಅವರನ್ನು ಹೊರ ತರುವ ನಿಟ್ಟಿನಲ್ಲಿ ಈ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಮಾಯಕಾರ ಗುರುಕುಲದ ಅಧ್ಯಕ್ಷ ಡಾ.ಮೂಗೂರು ದೀಕ್ಷಿತ್ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ…
ಭಾರತೀಯ ವಿದ್ಯಾಭವನದ ಬಿಪಿಬಿಇಎಂನಲ್ಲಿ ಜಪಾನೀ ಭಾಷಾ ಕಲಿಕೆ ಕೋರ್ಸ್
July 24, 2018ಮೈಸೂರು: ಮೈಸೂರಿನ ವಿಜಯನಗರದ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದ ಭವನ್ಸ್ ಪ್ರ್ರಿಯಂವದಾ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಬಿಪಿಬಿಇಎಂ)ನಲ್ಲಿ ಜಪಾನ್ ಭಾಷಾ ಕಲಿಕೆಯ ನೂತನ ಕೋರ್ಸ್ ಆರಂಭಿಸಲಾಗುತ್ತಿದೆ ಎಂದು ಬಿಪಿಬಿಇಎಂನ ಪ್ರೊ.ಹೆಚ್.ಎಂ.ವಾಣಿ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಸ್ನಲ್ಲಿ ದಿನನಿತ್ಯದ ವ್ಯವಹಾರಗಳಾದ ಸುಲಭ ಸಂಭಾಷಣೆ, ಒಬ್ಬರನ್ನೊಬ್ಬರು ಪರಿಚಯಿಸುವುದು ಇನ್ನಿತರ ವಿಷಯಗಳನ್ನು ಬೋಧಿಸಲಾಗುವುದು. ಕೋರ್ಸ್ನ ಕೊನೆಯಲ್ಲಿ ವಿದ್ಯಾರ್ಥಿಗಳೂ ಜಪಾನೀ ಭಾಷೆಯಲ್ಲಿ ಸಾಮಾನ್ಯ ವ್ಯವಹಾರ ನಡೆಸುವ ಪರಿಣಿತಿ ಹೊಂದಲಿದ್ದಾರೆ. 20 ವಾರಗಳ ಕೋರ್ಸ್…
ಕಬ್ಬಿನ ಬಾಕಿ ಹಣ, ವೈಜ್ಞಾನಿಕ ಬೆಲೆಗೆ ಬೆಳೆಗಾರರ ಒತ್ತಾಯ
July 24, 2018ಮೈಸೂರು: ಕಬ್ಬಿನ ಬಾಕಿ ಹಣ ನೀಡಬೇಕು. ಪ್ರಸಕ್ತ ಸಾಲಿನ ಕಬ್ಬು ಬೆಳೆಗೆ ಸೂಕ್ತ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ. ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಳೆ ಮಿರ್ಲೆ ಸುಜಯ್ ಗೌಡ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಲ್ಲಿ ವಿಫಲವಾಗಿದೆ. ಎಫ್ಆರ್ಪಿಗೆ ಕೊಡುವುದಾಗಿ ಹೇಳಿದ್ದು, ಕೇವಲ 200 ರೂ. ಮಾತ್ರ ಹೆಚ್ಚಿಸಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು. ಪ್ರತಿ…
ಮುಂಗಾರಿನ ಆಗಸದಲ್ಲಿ ಮಿಂಚಿದ ಐದು ಯುವ ನಕ್ಷತ್ರಗಳು
July 24, 2018ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಚಳಿಯ ನಡುವೆಯೂ ಮಿಂದೆದ್ದ ಪ್ರೇಕ್ಷಕರು ಮೈಸೂರು: ಆರ್ಟಿಕ್ಯುಲೇಟ್ ನೃತ್ಯೋತ್ಸವ ಪ್ರತಿ ತಿಂಗಳ ಮೂರನೇ ಭಾನುವಾರ ಆಯೋಜಿಸಲಾಗುತ್ತದೆ. ಇದರ 26ನೇ ಸರಣಿಯು ಇತ್ತೀಚೆಗೆ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಜರುಗಿತು. ಈ ಮೂಲಕ ಭರತನಾಟ್ಯ ಹಾಗೂ ಕಥಕ್ ನೃತ್ಯ ಶೈಲಿಯಲ್ಲಿ ಐವರು ನೃತ್ಯ ಕಲಾವಿದರು ನೃತ್ಯ ವೈಭವವನ್ನು ಅನಾವರಣಗೊಳಿಸಿದರು. ನಿಖಿತಾ ಮಂಜುನಾಥ್ರವರು ಭರತನಾಟ್ಯ ಶೈಲಿಯಲ್ಲಿ ಎರಡು ನೃತ್ಯ ಪ್ರದರ್ಶನ ನೀಡಿದರು. ಇವುಗಳ ಪೈಕಿ ಒಂದು ‘ರೀತಿಗೌಲ’ ರಾಗ, ‘ಆದಿ’ ತಾಳದಲ್ಲಿದ್ದರೆ, ಮತ್ತೊಂದು ‘ಕಮಾಚ್’ ರಾಗ, ‘ಮಿಶ್ರ…
ಆ.1ರಿಂದ ಜಿಲ್ಲೆಯಾದ್ಯಂತ ಸ್ವಚ್ಛ ಸರ್ವೇಕ್ಷಣೆ ಆರಂಭ
July 24, 2018ಮೊದಲ ಬಾರಿಗೆ ಎಲ್ಲಾ ತಾಲೂಕುಗಳ ಸ್ಪರ್ಧೆ ಕ್ಷಿಪ್ರ ಕಾರ್ಯಾಚರಣೆ ಮೂಲಕ ಸಿದ್ದತೆಗೆ ಸೂಚನೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಆಧ್ಯತೆ ಮೈಸೂರು: ಈ ಬಾರಿ ಸ್ವಚ್ಛ ಸರ್ವೇಕ್ಷಣಾ ಸ್ಪರ್ದೆಯಲ್ಲಿ ಮೊದಲ ಬಾರಿಗೆ ಮೈಸೂರು ನಗರದೊಂದಿಗೆ ಜಿಲ್ಲೆಯೂ ಪಾಲ್ಗೊಳ್ಳುತ್ತಿದ್ದು, ಆಗಸ್ಟ್ 1ರಿಂದ 30ರವರೆಗೆ ನಡೆಯಲಿರುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಎಲ್ಲಾ ತಾಲೂಕುಗಳ ಜನರು ಸಕ್ರಿಯವಾಗಿ ಪಾಲ್ಗೊಂಡು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಜಿ.ಪಂ ಸಿಇಒ ಪಿ.ಶಿವಶಂಕರ್ ಮನವಿ ಮಾಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸ್ವಚ್ಛ ಸರ್ವೇಕ್ಷಣೆಯ ಕುರಿತಂತೆ ವಿವಿಧ ಇಲಾಖೆಯ ಹಿರಿಯ…
ಹೊರಳವಾಡಿ ಗ್ರಾಪಂನಲ್ಲಿ ಹಣ ದುರುಪಯೋಗ: ಕಂಪ್ಯೂಟರ್ ಆಪರೇಟರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ
July 24, 2018ನಂಜನಗೂಡು: ತಾಲೂಕಿನ ಹೊರಳವಾಡಿ ಗ್ರಾಮಪಂಚಾ ಯಿತಿ ವ್ಯಾಪ್ತಿಯಲ್ಲಿ ಬಡ ಜನರಿಗೆ ತಲುಪ ಬೇಕಾದ ಸ್ವಚ್ಚ ಭಾರತ್ದ ಅನುದಾನವನ್ನು ತನ್ನ ಸಂಬಂಧಿಕರ ಹೆಸರಿಗೆ ಹಾಕಿ, ಹಣ ವನ್ನು ದುರುಪಯೋಗ ಪಡಿಸಿಕೊಂಡಿ ರುವ ಹಿನ್ನಲೆಯಲ್ಲಿ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಬಣ್ಣ ಬಯಲಾಗಿ ಈಕೆಯ ವಿರುದ್ದ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪಿಡಿಓ ಜ್ಯೋತಿಯವರು ದೂರು ದಾಖಲಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಹೊರಳವಾಡಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಸರ್ಕಾರದಿಂದ ಬಂದಿರುವ ಎಲ್ಲ ಅನು ದಾನ ಹಾಗೂ ಕೇಂದ್ರ ಸರ್ಕಾರದ ಅನು ದಾನವನ್ನು ದುರ್ಬಳಕೆ…
ಇಂದಿನಿಂದ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಕಾನೂನು ಅರಿವು
July 24, 2018ಹೆಚ್.ಡಿ.ಕೋಟೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚಾರ ರಥದ ಮೂಲಕ ಕಾನೂನು ಮತ್ತು ಜನತಾ ನ್ಯಾಯಾಲಯ ಕುರಿತು ಅರಿವು ಮೂಡಿ ಸುವ ಕಾರ್ಯಕ್ರಮವನ್ನು ಇಂದಿನಿಂದ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳೀಯ ನ್ಯಾಯಾಧೀಶರಾದ ಕೆ.ಕೇಶವ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಅವರು ಸಂಚಾರ ರಥಕ್ಕೆ ಜುಲೈ 24(ಇಂದು) ಮಂಗಳವಾರ ಬೆಳಿಗ್ಗೆ 10.30ಕ್ಕೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಲಾಗುವುದು. ಜು.26 ಮತ್ತು 27ರಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ.ಶಂಕರ್ ಕಾರ್ಯಕ್ರಮದಲ್ಲಿ ಭಾಗಿ ಯಾಗಲಿದ್ದಾರೆ ಎಂದು…
ತಾಪಂ ನೌಕರ ಪೆಟ್ರೋಲ್ ಕದಿಯುತ್ತಿದ್ದಾಗ ಬೆಂಕಿ
July 24, 2018ತಿ.ನರಸೀಪುರ: ತಾಲೂಕು ಪಂಚಾಯಿತಿ ನೌಕರನೊಬ್ಬ ದ್ವಿಚಕ್ರ ವಾಹನದಲ್ಲಿ ಪೆಟ್ರೋಲ್ ಕದಿಯುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಮೂರು ವಾಹನ ಗಳು ಬೆಂಕಿಗಾಹುತಿಯಾಗಿರುವ ಘಟನೆ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ನಡೆದಿದೆ. ಸೋಮವಾರ ಬೆಳಿಗ್ಗೆ 10 ಗಂಟೆ ಸಮಯ ದಲ್ಲಿ ಪಟ್ಟಣದ ಮಿನಿ ವಿಧಾನಸೌಧದ ನೆಲ ಮಾಳಿಗೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್ನಲ್ಲಿ ತಾ.ಪಂ ಬೊರ್ವೆಲ್ ರಿಪೇರಿ ಮಾಡುವ ನೌಕರ ಜಾಫರ್ ಪೆಟ್ರೋಲ್ ಕದಿಯುತ್ತಿದ್ದ ಸಂದರ್ಭ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸ್ಕೂಟರ್ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ತಹಸೀಲ್ದಾರ್ ಕಚೇರಿಗೆ ಸೇರಿದ ಹಳೆಯ…
ರೈತ ಹೋರಾಟಕ್ಕೆ ಹೊಸ ರೂಪ: ದರ್ಶನ್ ಪುಟ್ಟಣ್ಣಯ್ಯ
July 24, 2018ನಂಜನಗೂಡು: ಹೊಸ ತಲೆ ಮಾರಿನ ರೈತರನ್ನು ಸಂಘಟನೆಗೊಳಿಸಿ ರೈತ ಹೋರಾಟಕ್ಕೆ ಹೊಸ ರೂಪವನ್ನು ನೀಡುವ ಮೂಲಕ ತಂದೆಯ ರೈತ ಹೋರಾಟದ ಹಾದಿಯನ್ನು ಮುಂದುವರೆಸುತ್ತೇನೆ ಎಂದು ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು. ಅವರು ನಂಜನಗೂಡು ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ರಾಜ್ಯದಲ್ಲಿ ರೈತರು ಸಮಸ್ಯೆಗಳಿಂದ ನರಳಾಡುತ್ತಿದ್ದರೆ. ನಾನು ವಿದೇಶದಲ್ಲಿ ಉದ್ಯಮಿ ಯಾಗಿ ಐಷರಾಮಿ ಜೀವನ ನಡೆಸುವುದು ಸರಿಯಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ರಾಜಕಾರಣಿ ಮತ್ತು ಅಧಿಕಾರಿಗಳ…
ಹದಗೆಟ್ಟ ರಸ್ತೆ ಸರಿಪಡಿಸಲು ಒತ್ತಾಯಿಸಿ ದಸಂಸ ರಸ್ತೆ ತಡೆ
July 24, 2018ಹೆಚ್.ಡಿ.ಕೋಟೆ: ಹದಗೆಟ್ಟಿರುವ ರಸ್ತೆಗಳನ್ನು ಸರಿ ಪಡಿಸು ವಂತೆ ಒತ್ತಾಯಿಸಿ ದಲಿತ ಸಂರ್ಘಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ಸ್ಥಳೀಯ ಗ್ರಾಮಸ್ಥರ ಸಹಯೋಗದೊಂದಿಗೆ ಸೋಮ ವಾರ ರಸ್ತೆಯಲ್ಲಿ ಶಾಮಿಯಾನ ಹಾಕಿ ಪ್ರತಿಭಟನೆ ಧರಣಿ ನಡೆಸಿದರು. ತಾಲೂಕಿನ ನಾಗನಹಳ್ಳಿ ಮತ್ತು ಹೆಗ್ಗಡ ಪುರ ನಡುವೆ ಇರುವ ರಸ್ತೆಯಲ್ಲಿ 200ಕ್ಕೂ ಹೆಚ್ಚು ಜನರು ಜಮಾಯಿಸಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ರಸ್ತೆ ತಡೆ ಮಾಡಿದರು. ತಾಲೂಕಿನಲ್ಲಿ ರಸ್ತೆಗಳ ಸ್ಥಿತಿ ಅಧೋಗತಿ ಯಲ್ಲಿದ್ದು, ರಸ್ತೆ ನಿರ್ಮಾಣ ಮಾಡುವಂತೆ ಹಲವಾರು…