ಮೈಸೂರು,ನ.10(ಆರ್ಕೆ)- ಪ್ರತಿ ಯೊಬ್ಬರೂ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವುದು ಅವಶ್ಯವೆಂದು ಮೈಸೂರು ನ್ಯಾಯಾಲಯದ ನ್ಯಾಯಾಧೀಶೆ ಕೆ.ವಿದ್ಯಾ ಅವರು ಸಲಹೆ ನೀಡಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ವಕೀಲರ ಸಂಘ, ಮೈಸೂರು ನಗರ ಪೊಲೀಸ್ ಹಾಗೂ ಆಲನಹಳ್ಳಿ ಪೊಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಆಲನಹಳ್ಳಿಯಲ್ಲಿರುವ ವೈದ್ಯರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ‘ಕಾನೂನು ಅರಿವು-ನೆರವು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಂದು ಮನುಷ್ಯನ ಜೀವನದಲ್ಲಿ ಪ್ರತಿ ಯೊಂದು ವ್ಯವಹಾರಕ್ಕೂ ಜನನ ಮತ್ತು ಮರಣ ಪ್ರಮಾಣ ಪತ್ರ…
ಮೇಕೆದಾಟು ಅಣೆಕಟ್ಟು ಕಾಮಗಾರಿ ಆರಂಭಕ್ಕೆ ಸರ್ಕಾರದ ವಿಳಂಬ: ಸಿದ್ದರಾಮಯ್ಯ ಟೀಕೆ
November 10, 2021ಮೈಸೂರು, ನ.9(ಆರ್ಕೆಬಿ)- ಮೇಕೆದಾಟು ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಡಿಪಿಆರ್ ಮಾಡುವುದು ತಡವಾಗಿತ್ತು. ಆದರೂ ನಾವು ಡಿಪಿಆರ್ ಮಾಡಿ ಮುಗಿಸಿದ್ದೇವೆ. ಆದರೆ ಈಗಿನ ಸರ್ಕಾರ ಕಾಮಗಾರಿ ಆರಂಭಿಸಲು ವಿಳಂಬ ಮಾಡುತ್ತಿದೆ. ಕಾಂಗ್ರೆಸ್ನವರು ತಡವಾಗಿ ಡಿಪಿಆರ್ ಮಾಡಿ ದ್ದಾರೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಅರ್ಥವಿಲ್ಲ ಎಂದು ವಿರೋಧಪಕ್ಷದ ನಾಯಕರೂ ಆದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು. ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೇಕೆದಾಟು ಕಾಮಗಾರಿ ಆರಂಭಿಸುವಂತೆ ನಾವು ಕೇಳುತ್ತಿದ್ದೇವೆ. ಸರ್ಕಾರ ವಿಳಂಬ ಮಾಡುತ್ತಿದೆ. ಒತ್ತಡ ಏರಲೇಬೇಕಾದ…
ಅತಿವೃಷ್ಟಿ ಹಾನಿಯ ಪರಿಹಾರ ಕಾಮಗಾರಿಗೆ 283 ಕೋಟಿ ರೂ. ಅನುದಾನ ಕೋರಿಕೆ
November 10, 2021ಮೈಸೂರು, ನ.9(ಆರ್ಕೆ)-ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಉಂಟಾಗಿರುವ ಹಾನಿಯ ಪರಿಹಾರ ಕಾಮಗಾರಿಗೆ 283.35 ಕೋಟಿ ರೂ.ಗಳ ವಿಶೇಷ ಅನುದಾನ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಉಸ್ತುವಾರಿ ಸಚಿವರು, ನವೆಂಬರ್ 1ರಂದು ಮಳೆ ಹಾನಿ ಸಂಬಂಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತುರ್ತು ಕಾಮಗಾರಿ ಕೈಗೊಳ್ಳಲು ಅಗತ್ಯವಿರುವ ಅನುದಾನದ ಬಗ್ಗೆ ವರದಿ ಸಿದ್ಧಪಡಿಸು ವಂತೆ ಸೂಚನೆ…
ಆಸ್ತಿ ತೆರಿಗೆ ವಸೂಲಿಗೆ ಮೈಸೂರು ಪಾಲಿಕೆಯಿಂದ ಬ್ಯಾನರ್ ಚಳವಳಿ
November 10, 2021ಮೈಸೂರು, ನ. 9(ಆರ್ಕೆ)- ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ವಸೂಲಿ ಮಾಡಲು ಮೈಸೂರು ಮಹಾನಗರ ಪಾಲಿಕೆಯು ಬ್ಯಾನರ್ ಚಳವಳಿ ಆರಂಭಿಸಿದೆ. ವಾಸದ ಮನೆ, ವಾಣಿಜ್ಯ ಕಟ್ಟಡ, ಕಲ್ಯಾಣ ಮಂಟಪ, ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಬಗೆಯ ಕಟ್ಟಡಗಳ ಆಸ್ತಿ ತೆರಿಗೆ ವಸೂಲಿ ಅಭಿಯಾನ ತೀವ್ರ ಗೊಳಿಸಿರುವ ಪಾಲಿಕೆ ಕಂದಾಯ ವಿಭಾ ಗದ ಅಧಿಕಾರಿಗಳು, 10-15 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವವರ ಕಟ್ಟಡದ ಮುಂದೆ ನೋಟಿಸ್ ಬ್ಯಾನರ್ ಅಳವಡಿ ಸುವ ಹೊಸ ಚಳವಳಿ ಆರಂಭಿಸಿದ್ದಾರೆ. ‘ಸದರಿ…
ಕಾಂಗ್ರೆಸ್ ಸೇರುವ ನಿರ್ಧಾರ ಜಿ.ಟಿ.ದೇವೇಗೌಡರಿಗೆ ಸೇರಿದ್ದು
November 10, 2021ಮೈಸೂರು, ನ.9(ಎಸ್ಬಿಡಿ)- ಜಿ.ಟಿ. ದೇವೇಗೌಡರು ರಾಜಕೀಯ ಎದು ರಾಳಿಯೇ ಹೊರತು ನನ್ನ ವೈರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಹೇಳಿದರು. ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೇರ್ಗಳ್ಳಿ ಗ್ರಾಮ ದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಹೊಂಬಾಳಮ್ಮ ಮತ್ತು ಶ್ರೀ ಸಿದ್ದರಾಮೇ ಶ್ವರ ಸಮುದಾಯ ಭವನವನ್ನು ಶಾಸಕ ಜಿಟಿಡಿ ಅವರೊಂದಿಗೆ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಚಾಮುಂಡೇಶ್ವರಿ ಕ್ಷೇತ್ರದ ಜನ ನನಗೆ ರಾಜಕೀಯವಾಗಿ ಶಕ್ತಿ ತುಂಬಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಗೆ ಇಲ್ಲಿನ ಜನರ ಆಶೀರ್ವಾದವೇ…
LKG,UKG ಆರಂಭ: ಮೊದಲ ದಿನವೇ ಶೇ.50.10ರಷ್ಟು ಹಾಜರಿ
November 9, 2021ಮೈಸೂರು, ನ.8(ಎಂಟಿವೈ)-ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಸ್ಥಗಿತ ಗೊಳಿಸಲಾಗಿದ್ದ ಪೂರ್ವ ಪ್ರಾಥಮಿಕ ಶಾಲೆ (ಎಲ್ಕೆಜಿ, ಯುಕೆಜಿ) ತರಗತಿಗಳು ಸೋಮವಾರ ದಿಂದ ಪುನರಾರಂಭವಾಯಿತು. ಮೊದಲ ದಿನವೇ ನೋಂದಾಯಿತ 15,041 ಮಕ್ಕಳಲ್ಲಿ ಶೇ.50.10ರಂತೆ 7617 ಮಕ್ಕಳು ತರಗತಿಗೆ ಹಾಜರಾಗುವ ಮೂಲಕ ಕಲಿಕಾ ಆಸಕ್ತಿಯನ್ನು ಪ್ರದರ್ಶಿಸಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಶಾಲಾ-ಕಾಲೇಜನ್ನು ಹಂತ ಹಂತವಾಗಿ ಪುನರಾರಂಭಿಸಿದ ಬೆನ್ನಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ತಜ್ಞರ ಅಭಿಪ್ರಾಯದಂತೆ ಇಂದಿನಿಂದ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ…
ಮೇಕ್ ಇನ್ ಇಂಡಿಯಾ ಮಾದರಿ ‘ಮೇಕ್ ಇನ್ ಕರ್ನಾಟಕ’
November 8, 2021ಬೆಂಗಳೂರು, ನ.೭-ಎಲೆಕ್ಟಾçನಿಕ್ ತಯಾರಿಕಾ ಕಂಪನಿ ಗಳಿಗೆ ಒತ್ತು ನೀಡುವ ಮೂಲಕ `ಮೇಕ್ ಇನ್ ಇಂಡಿಯಾ’ ಮಾದರಿಯಲ್ಲಿ `ಮೇಕ್ ಇನ್ ಕರ್ನಾಟಕ’ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಮಾತನಾಡಿರುವ ಐಟಿ-ಬಿಟಿ ಸಚಿವ ಡಾ.ಅಶ್ವಥ್ ನಾರಾಯಣ್ ಅವರು, ‘ಎಲೆ ಕ್ಟಾçನಿಕ್ ತಯಾರಿಕಾ ಕಂಪನಿಗಳಿಗೆ ಒತ್ತು ನೀಡುವ ಮೂಲಕ ಮೇಕ್ ಇನ್ ಇಂಡಿಯಾ ಮಾದರಿ ಯಲ್ಲಿ ಮೇಕ್ ಇನ್ ಕರ್ನಾಟಕ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಮುಂದಿನ ೫ ವರ್ಷಗಳಲ್ಲಿ ೧೦ ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದರು….
ಇಂದಿನಿಂದ ಎಲ್ಕೆಜಿ, ಯುಕೆಜಿ ತರಗತಿ ಆರಂಭ
November 8, 2021ಮೈಸೂರು, ನ.೭(ಎಂಟಿವೈ)- ಕೊರೊನಾ ಅಲೆಯ ಕಾರಣ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಪೂರ್ವ ಪ್ರಾಥಮಿಕ ಶಾಲೆ (ಎಲ್ಕೆಜಿ, ಯುಕೆಜಿ) ತರಗತಿ ಗಳು ನಾಳೆ (ನವೆಂಬರ್ ೮) ಯಿಂದ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ೨೫೩೬ ವಿದ್ಯಾರ್ಥಿ ಗಳು ಎಲ್ಕೆಜಿಗೂ, ೩೩೪೦ ವಿದ್ಯಾರ್ಥಿಗಳು ಯುಕೆಜಿ ತರಗತಿಗೂ ಹಾಜರಾಗುವ ಸಂಭವವಿದೆ. ಮೈಸೂರು ಜಿಲ್ಲೆಯಲ್ಲಿ ೧,೮೭೬ ಸರ್ಕಾರಿ ಪ್ರಾಥಮಿಕ ಶಾಲೆ, ೧೩೨ ಅನುದಾನಿತ, ೫೮೨ ಅನುದಾನ ರಹಿತ ಹಾಗೂ ಇನ್ನಿತರ ೩೧ ಶಾಲೆಗಳು ಸೇರಿದಂತೆ ೨,೬೨೫ ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ ೧೨ ಸರ್ಕಾರಿ ಪ್ರಾಥಮಿಕ…
ಇಂದು ಪುನೀತ್ ರಾಜ್ಕುಮಾರ್ ಪುಣ್ಯ ಸ್ಮರಣೆ
November 8, 2021ಬೆಂಗಳೂರು, ನ.೭-ಕಳೆದ ಶುಕ್ರವಾರ (ಅ.೨೯) ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ೧೧ನೇ ದಿನದ ಪುಣ್ಯ ಸ್ಮರಣೆ ಕಾರ್ಯ ನಾಳೆ (ನ.೮) ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಸದಾಶಿವನಗರದಲ್ಲಿರುವ ಪುನೀತ್ ರಾಜ್ ಕುಮಾರ್ ಅವರ ಮನೆಯ ಕಾಂಪೌಂಡ್ ಒಳಗೆ ಮತ್ತು ಹೊರಗೆ ಬೃಹತ್ ಶಾಮೀಯಾನಾ ಅಳವಡಿಸ ಲಾಗಿದ್ದು, ಪುನೀತ್ಗೆ ಇಷ್ಟವಾದ ಖಾದ್ಯಗಳ ತಯಾರಿ ನಡೆಯುತ್ತಿದೆ. ಪುನೀತ್ ರಾಜ್ಕುಮಾರ್ ಕುಟುಂಬ, ರಾಘವೇಂದ್ರ ರಾಜ್ಕುಮಾರ್, ಶಿವರಾಜ್ ಕುಮಾರ್ ಮತ್ತು ಸಹೋದರಿಯರ ಕುಟುಂಬದವರು ಸೇರಿ ದಂತೆ…
ಕಾರ್ಯಕರ್ತರು ಪಕ್ಷ, ಜನರ ನಂಬಿಕೆ ಸೇತುವೆಯಾಗಬೇಕು
November 8, 2021ನವದೆಹಲಿ,ನ.೭-ಎರಡು ವರ್ಷದ ನಂತರ ಬಿಜೆಪಿ ರಾಷ್ಟೀಯ ಕಾರ್ಯಕಾರಿಣಿ ಸಭೆ ಭಾನುವಾರ ನವ ದೆಹಲಿಯಲ್ಲಿ ನಡೆಯಿತು. ವರ್ಚುವಲ್ ಸ್ವರೂಪ ದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವರು, ರಾಷ್ಟೀಯ ಕಾರ್ಯಕಾರಿಣಿ ಸದಸ್ಯರು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ರಾಷ್ಟೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತ ನಾಡಿದ ಪ್ರಧಾನಿ ಮೋದಿ, ಬಿಜೆಪಿ ಕುಟುಂಬ ಸುತ್ತ ಸುತ್ತುವ ಪಕ್ಷವಲ್ಲ. ಇದು ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದಿರುವ ಪಕ್ಷ ಎಂದು ಹೇಳಿದರು. ಬಿಜೆಪಿ ಕಾರ್ಯಕರ್ತರು ಸಾಮಾನ್ಯ ಜನರು ಮತ್ತು ಪಕ್ಷದ ನಂಬಿಕೆಯ ಸೇತುವೆಯಾಗಬೇಕು, ಪಂಚ…










