ನಂಜನಗೂಡು: ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮ ಗಣ ಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಶಾಸಕ ಬಿ.ಹರ್ಷವರ್ಧನ್ ಅವರು ಸ್ಥಳಕ್ಕೆ ದಿಢೀರ್ ಭೇಟಿ ನೀಡಿ, 2 ಟಿಪ್ಪರ್, 2 ಹಿಟಾಚಿ ಮತ್ತು ಒಂದು ಟ್ರ್ಯಾಕ್ಟರ್ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ತಾಲೂಕಿನ ಹರತಲೆ ಗ್ರಾಮದ ಸಮೀಪವಿರುವ ಕಬಿನಿ ಬಲದಂಡೆ ನಾಲೆ ಏರಿಯಲ್ಲಿ ಕೆಲವು ವರ್ಷ ಗಳಿಂದ ನಿರಂತರವಾಗಿ ಕಲ್ಲು ಮಿಶ್ರಿತ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಶಾಸಕರಿಗೆ ಗ್ರಾಮಸ್ಥರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಶಾಸಕರು ಬುಧವಾರ…
ಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಗೆಲುವಿನ ವಿಶ್ವಾಸ
June 8, 2018ತಿ.ನರಸೀಪುರ: ಸಮಾನ ವೇತನ ಸೇರಿದಂತೆ ಶಿಕ್ಷಣ ನೀತಿ ಹಾಗೂ ನಿವೃತ್ತಿ ವೇತನದ ತಾರತಮ್ಯದ ಬಗ್ಗೆ ಹೋರಾಟ ಮಾಡುವ ಬದ್ಧತೆ ಯನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿ ಬಿ. ನಿರಂಜನಮೂರ್ತಿ ಗೆಲುವು ಖಚಿತವೆಂದು ಹಿರಿಯ ಮುಖಂಡ, ರಾಜ್ಯ ಸಮಿತಿ ಸದಸ್ಯ ಕರುಹಟ್ಟಿ ಮಹಾದೇವಯ್ಯ ಹೇಳಿದರು. ಪಟ್ಟಣದ ವಿದ್ಯೋದಯ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಸಂಜೆ ಶಿಕ್ಷಕ ಮತದಾರರನ್ನು ಭೇಟಿ ಮಾಡಿ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ ಅವರ ಪರ ಮತಯಾಚಿಸಿ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್…
ಕೋಳಿ ಸಾಕಾಣಕೆ ಕೇಂದ್ರದ ನೀರಿನಿಂದ ಕೆರೆ ಕಲುಷಿತ; ಮೀನುಗಳ ಸಾವು
June 8, 2018ಪಿರಿಯಾಪಟ್ಟಣ: ಕೋಳಿ ಸಾಕಾಣ ಕೆ ಕೇಂದ್ರದಿಂದ ಕಲುಷಿತ ನೀರು ಕೆರೆಗೆ ಸೇರುತ್ತಿರುವುದರಿಂದ ದುರ್ವಾಸನೆ ಬರುತ್ತಿರುವುದಲ್ಲದೆ ಮೀನುಗಳು ಮರಣ ಹೊಂದುತ್ತಿವೆ ಎಂದು ರೈತ ರಮೇಶ್ ಆರೋಪಿಸಿದ್ದಾರೆ. ತಾಲೂಕಿನ ಹುಣಸವಾಡಿ ಗ್ರಾಮಕ್ಕೆ ಸೇರಿದ ಅಯ್ಯನಕೆರೆಯಲ್ಲಿ ಸಾಕಲಾದ ಮೀನು ಮರಣ ಹೊಂದುತ್ತಿದ್ದು, ದುರ್ವಾಸನೆ ಸುತ್ತಮುತ್ತಲ ಗ್ರಾಮಗಳಿಗೆ ವ್ಯಾಪಿಸುತ್ತಿದೆ ಎಂದು ಅವರು ದೂರಿದ್ದಾರೆ. ನಂದಿನಾಥಪುರ ಸಮೀಪವಿರುವ ಕೋಳಿ ಸಾಕಾಣ ಕೆ ಕೇಂದ್ರದಿಂದ ಬಂದ ಘನ ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸದೇ ಹರಿಯಲು ಬಿಟ್ಟು ಕೆರೆಗಳನ್ನು ಸೇರಿರುವುದರಿಂದ ಈ ಪರಿಣಾಮ ಎದುರಾಗಿದೆ ಎಂದು…
ಪರಿಸರ ರಕ್ಷಣೆ ಎಲ್ಲರ ಹೊಣೆ
June 8, 2018ಬೆಟ್ಟದಪುರ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ಪೊಲೀಸ್ ಉಪನಿರೀಕ್ಷಕ ಜಯಸ್ವಾಮಿ ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದ ಶಿಡಿಲುಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ತಪ್ಪಲಿನ ದೈವಿವನದ ಹೊರಾಂಗಣ ದಲ್ಲಿ ತಾಲೂಕು ಪತ್ರಕರ್ತರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಮಾನವನು ಉತ್ತಮವಾದ ಜೀವನ ವನ್ನು ನಡೆಸಬೇಕಾದರೆ ಪ್ರಕೃತಿದತ್ತವಾದ ಸಂಪನ್ಮೂಲಗಳು ಮೂಲಕಾರಣವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದಿನನಿತ್ಯದ…
ಮೈತ್ರಿ ಸರ್ಕಾರದಲ್ಲಿ ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ನೀಡದೇ ಅನ್ಯಾಯ ಆರೋಪ
June 8, 2018ಮೈಸೂರು: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ನ ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನಮಾನ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಹಾಲುಮತ ಮಹಾಸಭಾದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಗಾಂಧಿಚೌಕದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ನಲ್ಲಿರುವ ಕಾರಣಕ್ಕೆ ಶೇ.90ರಷ್ಟು ಕುರುಬ ಸಮುದಾಯದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಈಗ ಕಾಂಗ್ರೆಸ್ನಲ್ಲಿ ಜನಾಂಗದ ಶಾಸಕರಿಗೆ ಸಚಿವ ಸ್ಥಾನ ನೀಡದೇ ದ್ರೋಹ ಮಾಡಲಾಗಿದೆ ಎಂದು ಆರೋಪಿಸಿದರು. ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಐದು ವರ್ಷಗಳ ಪೂರ್ಣಾವಧಿಗೆ…
ಪರಿಸರ ಸ್ನೇಹಿ ಕ್ರಮಗಳಿಗೆ ಆಗ್ರಹಿಸಿ ಆರ್ಎಲ್ಹೆಚ್ಪಿ ಜನಜಾಗೃತಿ ಜಾಥಾ
June 8, 2018ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್ಎಲ್ಹೆಚ್ಪಿ)ಯು ಪರಿಸರ ಸಂರಕ್ಷಣೆಗಾಗಿ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿತು.ಆರ್ಎಲ್ಹೆಚ್ಪಿ ಸಂಸ್ಥೆ ವ್ಯಾಪ್ತಿಯ ಕೊಳಚೆ ಪ್ರದೇಶಗಳ ನೂರಾರು ಮಕ್ಕಳು ಮತ್ತು ವಿವಿಧ ಕಾಲೇಜು ವಿದ್ಯಾರ್ಥಿಗಳು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು ಪರಿಸರ ರಕ್ಷಣೆಯಲ್ಲಿ ಜನಸಾಮಾನ್ಯರ ಪಾತ್ರದ ಬಗ್ಗೆ ಜನಜಾಗೃತಿ ಮೂಡಿಸಿದರು. ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ…
ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ನ ಸದಸ್ಯರಿಗೆ ಉಚಿತ ಆರೋಗ್ಯ ಪರೀಕ್ಷೆ
June 8, 2018ಮೈಸೂರು: ಮೈಸೂರಿನ ಗಾಂಧಿ ವೃತ್ತದಲ್ಲಿರುವ ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ನ ಸದಸ್ಯರಿಗೆ ಜೂ.8ರಿಂದ 10ರವರೆಗೆ ಉಚಿತ ಕಣ್ಣಿನ ತಪಾಸಣೆ, ರಕ್ತದೊತ್ತಡ, ಮಧುಮೇಹ, ಇಸಿಜಿ ಹಾಗೂ ಇಕೋ ಪರೀಕ್ಷೆ ಶಿಬಿರವನ್ನು ಆಯೋಜಿಸಲಾಗಿದೆ. ಅನ್ನಪೂರ್ಣ ಕಣ ್ಣನ ಆಸ್ಪತ್ರೆ ಸಹಯೋಗದಲ್ಲಿ ಬ್ಯಾಂಕ್ನ ಮುಖ್ಯ ಕಚೇರಿ ಆವರಣದಲ್ಲಿ ಜೂ.8ರಂದು ಬೆಳಿಗ್ಗೆ 10ಕ್ಕೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಜೆ.ವಿಕ್ರಮರಾಜೇಅರಸ್ ಅವರು ಶಿಬಿರವನ್ನು ಉದ್ಘಾಟಿಸಲಿದ್ದು, ಬ್ಯಾಂಕ್ ಅಧ್ಯಕ್ಷ ಬಿ.ಕೆ.ಪ್ರಕಾಶ್, ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಯೋಗಣ್ಣ, ಅನ್ನಪೂರ್ಣ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಅಶ್ವಥ್ರೈ ಮತ್ತಿತರರು…
ಗೀತಾ ಮಂದಿರದ ರಸ್ತೆಯ ಸರ್ಕಾರಿ ಶಾಲೆ ಮಕ್ಕಳಿಗೆ ಬೆಳಗಿನ ಉಪಹಾರ ಆರಂಭ
June 8, 2018ಮೈಸೂರು: ಮೈಸೂರಿನ ಸ್ಥಾನಿಕವಾಸಿ ಜೈನ್ ಯುವ ಸಂಘಟನೆಯು ತಾನು ದತ್ತು ತೆಗೆದುಕೊಂಡಿರುವ ಗೀತಾ ಮಂದಿರ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಎರಡು ವರ್ಷಗಳ ಕಾಲ ಪ್ರತಿದಿನ ಉಪಹಾರ ವಿತರಿಸುವ ಕಾರ್ಯಕ್ರಮ ಆರಂಭಿಸಿದೆ. ಸಂಘಟನೆ ಅಧ್ಯಕ್ಷ ರಾಜನ್ ಬಾಗ್ಬಾರ್ ಸ್ವಾಗತಿಸಿದರು. ಈ ವೇಳೆ ಸಂಘಟನೆ ಕಾರ್ಯದರ್ಶಿ ರಾಕೇಶ್ ಬಾಂಟಿಯಾ ಬೆಳಗಿನ ಉಪಹಾರದ ಮಹತ್ವದ ಬಗ್ಗೆ ವಿವರಿಸಿದರು. ಮೊದಲನೇ ತಿಂಗಳ ಉಪಹಾರದ ಪ್ರಾಯೋಜಕತ್ವವನ್ನು ಮೋಹನ್ಲಾಲ್ಜೀ ಸುರೇಶ್ ಕುಮಾರ್ಜೀ ಬೋಹ್ರಾ ಕುಟುಂಬದವರು ವಹಿಸಿಕೊಂಡಿದ್ದಾರೆ ಎಂದರು. ಜಂಟಿ ಕಾರ್ಯದರ್ಶಿ ರಾಜೇಂದ್ರ ದೇಶರಾಲಾ,…
ಕುರುಬ ವಧೂ-ವರರ ಸಮಾವೇಶ
June 8, 2018ಮೈಸೂರು: ಬೆಂಗಳೂರಿನ ಕಾಟನ್ಪೇಟೆ ತೋಟದೇವರಗಲ್ಲಿಯಲ್ಲಿರುವ ಸ್ಟಾರ್ 69 ಕುರುಬರ ವಿವಾಹ ಕಲ್ಯಾಣ ಕೇಂದ್ರದಲ್ಲಿ ಜೂ.10ರಂದು ವಧು-ವರರ ಸಮಾವೇಶ ಏರ್ಪಡಿಸಲಾಗಿದ್ದು, ಉನ್ನತ ವಿದ್ಯಾರ್ಹತೆ ಹೊಂದಿರುವ, ಉದ್ಯೋಗದಲ್ಲಿರುವವರು ಸೇರಿದಂತೆ ಸಮುದಾಯದ ವಿವಾಹ ಆಕಾಂಕ್ಷಿಗಳು ಪಾಲ್ಗೊಳ್ಳಬಹುದು. ವಿಧವೆ, ವಿಧುರರು ಹಾಗೂ ವಯೋಮಿತಿ ಮೀರಿದವರಿಗೆ ವೈವಾಹಿಕ ಮಾಹಿತಿ ಸಂಪರ್ಕ ನೀಡಲಾಗುವುದು. ಆಸಕ್ತರು ಇತ್ತೀಚಿನ ಭಾವಚಿತ್ರ ಹಾಗೂ ಸ್ವ-ವಿವರಗಳೊಂದಿಗೆ ನೋಂದಣ ಮಾಡಿಕೊಳ್ಳಬಹುದೆಂದು ಕೇಂದ್ರದ ಅಧ್ಯಕ್ಷ ಆರ್.ಗೌರವ್ ಕೆಂಪಯ್ಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9880631408, 080-26701410 ಸಂಪರ್ಕಿಸಬಹುದು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂತ್ರಿ ಮಂಡಲಕ್ಕೆ 25 ಸಚಿವರ ಸೇರ್ಪಡೆ
June 7, 2018ಜೆಡಿಎಸ್ನಿಂದ ಜಿ.ಟಿ. ದೇವೇಗೌಡ, ಸಿ.ಎಸ್. ಪುಟ್ಟರಾಜು, ಸಾರಾ ಮಹೇಶ್, ಡಿ.ಸಿ. ತಮ್ಮಣ್ಣ, ಹೆಚ್.ಡಿ. ರೇವಣ್ಣ, ಬಿಎಸ್ಪಿಯ ಎನ್. ಮಹೇಶ್ ಸೇರಿ 10, ಕಾಂಗ್ರೆಸ್ನಿಂದ ಪುಟ್ಟರಂಗಶೆಟ್ಟಿ, ಡಿ.ಕೆ. ಶಿವಕುಮಾರ್ ಸೇರಿ 15 ಮಂದಿ ಸಚಿವರು ನೂತನ ಸಚಿವರಿಗೆ ರಾಜಭವನ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ ವಾಲಾ ಪ್ರಿಯಾಂಕ ಖರ್ಗೆ ಅತ್ಯಂತ ಕಿರಿಯ, ಮನಗೂಳಿ ಅತ್ಯಂತ ಹಿರಿಯ ಸಚಿವರು! ಒಕ್ಕಲಿಗರ ಪ್ರಾಬಲ್ಯ ಉಳಿಸಿಕೊಂಡ ಜೆಡಿಎಸ್ ಬೆಂಗಳೂರು: ಭಿನ್ನ ಮತದ ಬೇಗುದಿ ನಡುವೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ತಮ್ಮ…