ಮೈಸೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೃತಪಟ್ಟ ಇಬ್ಬರು ಬಿಜೆಪಿ ಕಾರ್ಯಕರ್ತರ ಮನೆ ಗಳಿಗೆ ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯ ದರ್ಶಿ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.ಹೃದಯಾಘಾತದಿಂದ ಮೃತಪಟ್ಟ ಕಲ್ಮಳ್ಳಿಯ ಕುಮಾರ್ ಹಾಗೂ ಆತ್ಮಹತ್ಯೆ ಮಾಡಿಕೊಂಡ ಸರಗೂರಿನ ಗುರುಸ್ವಾಮಿ ಅವರ ಮನೆ ಗಳಿಗೆ ಭೇಟಿ ನೀಡಿದ ವಿಜಯೇಂದ್ರ, ಕುಟುಂಬದವರಿಗೆ ಧೈರ್ಯ ತುಂಬಿದರು. ಚುನಾವಣಾ ಪೂರ್ವದಲ್ಲಿ ಬಿ.ವೈ. ವಿಜಯೇಂದ್ರ ಅವರು, ಸುಮಾರು 20 ದಿನಗಳ ಕಾಲ ವರುಣಾ ಕ್ಷೇತ್ರದಲ್ಲಿ ಪ್ರವಾಸ ಮಾಡಿ, ಪಕ್ಷ ಸಂಘಟಿಸಿದ್ದರು. ಇದರಿಂದ…
ಮರಗಳ ಹನನದಿಂದ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ: ಸಿಎಸ್ಆರ್ಟಿಐ ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಎಚ್ಚರಿಕೆ
June 4, 2018ಮೈಸೂರು: ಪ್ರಪಂಚದಲ್ಲಿ ವರ್ಷಕ್ಕೆ 15 ಬಿಲಿಯನ್ ಮರಗಳ ಹನನ ನಡೆಯುತ್ತಿದ್ದು, ಇದರಿಂದ ಪರಿಸರದಲ್ಲಿ ಅಸಮತೋಲನ ಹೆಚ್ಚುತ್ತಿದೆ. ಇದು ಹೀಗೆಯೇ ಮುಂದುವರೆದರೆ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ ಎಂದು ಕೇಂದ್ರೀಯ ರೇಷ್ಮೆ ಕೃಷಿ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ (ಸಿಎಸ್ಆರ್ಟಿಐ) ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದರು. ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ `ಹಸಿರು-ಉಸಿರು’ ಶೀರ್ಷಿಕೆಯಡಿ ಭಾನುವಾರ ಹಮ್ಮಿಕೊಂಡಿದ್ದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ಅವರ ರಚನೆಯ ಪರಿಸರ ಜಾಗೃತಿ ಚಿತ್ರಕಲಾ ಪ್ರದರ್ಶನಕ್ಕೆ…
ಸ್ವಚ್ಛ ನಗರಿ ಮೈಸೂರಿನಲ್ಲಿ ಹೊಸದಾಗಿ 12 ಇ-ಟಾಯ್ಲೆಟ್ ಸ್ಥಾಪನೆಗೆ ಕ್ರಮ
June 4, 2018ಕಳೆದ ವರ್ಷ 15 ಇ-ಶೌಚಾಲಯ ನಿರ್ಮಿಸಲಾಗಿತ್ತು ಬಯಲು ಶೌಚಮುಕ್ತಕ್ಕೆ ಕ್ರಮ ಬಹು ಬೇಡಿಕೆಯ ಸ್ಥಳಗಳಲ್ಲಿ ಜೋಡಣೆ – ಎಂ.ಟಿ.ಯೋಗೇಶ್ ಕುಮಾರ್ ಮೈಸೂರು: ಮೂರನೇ ಬಾರಿಯೂ ಸ್ವಚ್ಛನಗರಿಯ ಬಿರುದು ಪಡೆದಿರುವ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಹೊಸದಾಗಿ 12 ಇ-ಟಾಯ್ಲೆಟ್ ಅಳವಡಿಸುವುದಕ್ಕೆ ನಗರ ಪಾಲಿಕೆ ಉದ್ದೇಶಿಸಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಸ್ವಚ್ಛ ಸರ್ವೇಕ್ಷಣೆಯ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ಸ್ವಚ್ಛ ನಗರಿ ಪಟ್ಟ ದೊರಕಿಸುವುದಕ್ಕಾಗಿ ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯ ನಿಯಮಕ್ಕನುಸಾರವಾಗಿ ಮೈಸೂರಿನ ವಿವಿಧೆಡೆ 15 ಇ-ಟಾಯ್ಲೆಟ್ ನಿರ್ಮಿಸಲಾಗಿತ್ತು. ಕಳೆದು…
ಪ್ರತಿ ರಂಜಾನ್ಗೆ 20,000 ಕೆಜಿಯಷ್ಟು ಖರ್ಜೂರ ಮಾರಾಟ!
June 4, 2018ಮೈಸೂರಲ್ಲಿ 50ಕ್ಕೂ ಹೆಚ್ಚು ವಿವಿಧ ಜಾತಿಯ ಸ್ವಾಧಿಷ್ಟಭರಿತ ಖರ್ಜೂರ ಲಭ್ಯ ಮೈಸೂರು: ಮೈಸೂರಿನಲ್ಲಿ ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಎಲ್ಲಾ ಜಾತಿ ಹಾಗೂ ಪ್ರಭೇದದ ಒಟ್ಟಾರೆ 20,000 ಕೆಜಿಗೂ ಹೆಚ್ಚಿನ ಖರ್ಜೂರ ಮಾರಾಟವಾಗಲಿದೆಯಂತೆ. ಅಂದರೆ ಪ್ರತಿ ಕೆಜಿಗೆ ಸರಾಸರಿ 500 ರೂ. ಇಟ್ಟುಕೊಂಡರೂ ಹಲವು ಕೋಟಿಗಳಷ್ಟು ವಹಿವಾಟು ನಡೆಯುತ್ತದೆ. ಮುಸ್ಲೀಮರ ಪವಿತ್ರ ರಂಜಾನ್ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ರಾಶಿ ರಾಶಿ ಖರ್ಜೂರ ಕಾಣ ಸಿಗುತ್ತದೆ. ಹಬ್ಬದ ಮುನ್ನ ಒಂದು ತಿಂಗಳ ಉಪವಾಸ ವ್ರತ ಕೈಗೊಳ್ಳುವ ಮುಸ್ಲೀಮರು…
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದಿನಿಂದ 9ರವರೆಗೆ ವಿಶ್ವಶಾಂತಿಗಾಗಿ ವೈರಾಜ ಮಹಾ ನಾರಾಯಣ ಯಜ್ಞ
June 4, 2018ಮೈಸೂರು: ವಿಶ್ವಶಾಂತಿ ಹಾಗೂ ಜನತೆಯ ಕ್ಷೇಮಾಭಿವೃದ್ಧಿಗಾಗಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜೂ.4ರಿಂದ 9ರವರೆಗೆ ವೈರಾಜ ಮಹಾ ನಾರಾಯಣ ಯಜ್ಞ ನಡೆಸಲಾಗುತ್ತಿದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಆಶ್ರಮದ ಪೌಂಡರೀಕ ರಂಗ ಸ್ಥಳದಲ್ಲಿ ನಡೆಯುವ ಈ ಯಜ್ಞದಲ್ಲಿ 400 ವೇದ ಪಂಡಿತರು ಪುರುಷ ಸೂಕ್ತವನ್ನು ಒಂದು ಲಕ್ಷ ಬಾರಿ ನಾಲ್ಕು ವೇದಗಳಿಂದ ಹಾಗೂ ನಾರಾಯಣ ಅಷ್ಟಾಕ್ಷರ ಮಂತ್ರ, ಸುದರ್ಶನ ಮಂತ್ರ, ನರಸಿಂಹ ಮಂತ್ರಗಳನ್ನು ಪಠಿಸುತ್ತಾರೆ. ಜೊತೆಗೆ ರಾಮಾಯಣ, ಭಾಗವತ,…
ಆದರ್ಶ ವಿದ್ಯಾಲಯದಲ್ಲಿ ಶಿಕ್ಷಕರ ಮುಸುಕಿನ ಗುದ್ದಾಟ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಪೋಷಕರ ತೀರ್ಮಾನ
June 4, 2018ಹೆಚ್.ಡಿ.ಕೋಟೆ: ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಕರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದಲ್ಲಿ ಗುಣಮಟ್ಟದ ಶಿಕ್ಷಣದಿಂದ ಮಕ್ಕಳು ವಂಚಿತರಾಗಿದ್ದು ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ಸರಿಪಡಿಸದೇ ಇದ್ದಲ್ಲಿ ಸಾಮೂಹಿಕವಾಗಿ ಬೇರೆ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಬೇಕಾಗುತ್ತದೆ ಎಂದು ಪೋಷಕರು ಮತ್ತು ಎಸ್ಡಿಎಂಸಿ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಎಸ್ಡಿಎಂಸಿ ಪದಾಧಿಕಾರಿ ಗಳು ಮತ್ತು ಕೆಲ ಪೋಷಕರು ತುರ್ತು ಸಭೆ ನಡೆಸಿದರು. ಆದರ್ಶ ಶಾಲೆಯಲ್ಲಿ ಐದರಿಂದ ಆರು ಶಿಕ್ಷಕರುಗಳು ಕಿತಾಪತಿ ಬೇಜವಾಬ್ದಾರಿಗೆ ಶಾಲೆಯಲ್ಲಿ ಶಿಕ್ಷಣ ವ್ಯವಸ್ಥೆಯೇ ಹದಗೆಟ್ಟಿದೆ. ಮುಖ್ಯ…
ಭಾರೀ ಮಳೆಗೆ ಕೊಚ್ಚಿ ಹೋದ ಬೆಳೆ
June 4, 2018ಹನಗೋಡು: ಹನಗೋಡು ಹೋಬಳಿಯ ಗ್ರಾಮಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹತ್ತಾರು ಗ್ರಾಮಗಳಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಜಲಾವೃತವಾಗಿ, ಕೆರೆಗಳಂತೆ ಗೋಚರಿಸುತ್ತಿದ್ದರೆ, ಕೆಲವೆಡೆ ಕೊಚ್ಚಿ ಹೋಗಿದೆ. ಹತ್ತಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿದೆ. ಹನಗೋಡಿಗೆ ಸಮೀಪದ ಕಿರಂಗೂರು, ಹಿಂಡಗುಡ್ಲು, ದಾಸನಪುರ, ದೊಡ್ಡ ಹೆಜ್ಜೂರು, ಭಾರತವಾಡಿ, ಮಾದಹಳ್ಳಿ, ಹರಳಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ 1.30 ರಿಂದ 2.30ರವರೆಗೆ ಸುರಿದ ಭಾರೀ ಮಳೆಯು ಸಾಕಷ್ಟು ಅನಾಹುತ ಸೃಷ್ಟಿಸಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮುಸುಕಿನ ಜೋಳ, ತಂಬಾಕು, ಶುಂಠಿ,…
ಕೊನೆಗೂ ‘ಪವರ್’ ಕಳೆದುಕೊಂಡ ಡಿಕೆಶಿ, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ
June 2, 2018ಬೆಂಗಳೂರು: ಸಮ್ಮಿಶ್ರ ಸರ್ಕಾರದ ಖಾತೆ ಹಂಚಿಕೆ ವಿವಾದ ಬಗೆಹರಿದಿದ್ದು, ಕೊನೆಗೂ ಡಿ.ಕೆ. ಶಿವಕುಮಾರ್ `ಪವರ್’ ಕಳೆದುಕೊಂಡಿದ್ದಾರೆ. ಹಣಕಾಸು, ಇಂಧನ (ಪವರ್), ಲೋಕೋಪಯೋಗಿಯಂತಹ ಪ್ರಮುಖ ಖಾತೆಗಳು ಜೆಡಿಎಸ್ಗೆ ದಕ್ಕಿವೆ. ಗೃಹ, ಬೃಹತ್ ನೀರಾ ವರಿ, ಬೆಂಗಳೂರು ನಗರಾಭಿವೃದ್ಧಿ, ಬೃಹತ್ ಕೈಗಾರಿಕೆ, ಕಂದಾಯ ಸೇರಿದಂತೆ ಇನ್ನಿತರೆ ಪ್ರಮುಖ ಖಾತೆಗಳು ಕಾಂಗ್ರೆಸ್ ಪಾಲಾಗಿವೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರ ಮೇಶ್ವರ್ ಹಾಗೂ ಪಕ್ಷದ ಮುಖಂಡರ ಸಮ್ಮುಖ ದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ…
ವಿಜಯಪುರದ ಗ್ರಾಮೀಣ ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಇಂಜಿನಿಯರಿಂಗ್, ಕೃಷಿಯಲ್ಲಿ ರಾಜ್ಯಕ್ಕೆ ಪ್ರಥಮ
June 2, 2018ದಕ್ಷಿಣ ಕನ್ನಡದ ನಾರಾಯಣ ಪೈ, ಬಳ್ಳಾರಿಯ ದೇಬರ್ಸೋ ಸನ್ಯಾನಿಗೆ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಬೆಂಗಳೂರು: ವಿಜಯ ಪುರದ ಗ್ರಾಮೀಣ ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಇಂಜಿನಿಯರಿಂಗ್ ಹಾಗೂ ಕೃಷಿ ಎರಡೂ ವಿಭಾಗಗಳಲ್ಲೂ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಈ ಬಾರಿ ನಾಲ್ಕು ವಿಭಾಗಗಳಲ್ಲೂ ನಗರ ಪ್ರದೇಶ ಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಶ್ರೇಣ ಪಡೆದಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟವಾಗಿದ್ದು, ಶ್ರೀಧರ್ ದೊಡ್ಡಮನಿ…
ಜುಲೈ ಅಂತ್ಯಕ್ಕೆ ಮೈಸೂರು ಜಯದೇವ ಆಸ್ಪತ್ರೆ ಹೊಸ ಕಟ್ಟಡದಲ್ಲಿ ಕಾರ್ಯಾರಂಭ
June 2, 2018ಮೈಸೂರು: ಮೈಸೂರಿನ ಕುಂಬಾರಕೊಪ್ಪಲು ಟೋಲ್ ಗೇಟ್ ಬಳಿ ಮೈಸೂರು- ಕೆಆರ್ಎಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯಲ್ಲಿ ಹೃದ್ರೋಗ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗೆ ಅಗತ್ಯ ವಾದ ಉಪಕರಣಗಳ ಜೋಡಣೆ ಕಾಮ ಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ಜುಲೈ ತಿಂಗಳಲ್ಲಿ ರೋಗಿಗಳ ಸೇವೆಗೆ ಆಸ್ಪತ್ರೆ ಸಜ್ಜಾಗಲಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ. ಆಸ್ಪತ್ರೆ ನೂತನ ಕಟ್ಟಡದಲ್ಲಿ ಉಪಕರಣ ಗಳ ಅಳವಡಿಕೆಯ ಕಾರ್ಯವನ್ನು ಶುಕ್ರ ವಾರ…