ಮೈಸೂರು, ಸೆ.೧೯(ಆರ್ಕೆಬಿ)- ಮೈಸೂರು ಡಾಗ್ ಬ್ರೀಡ್ಸ್ ವೆಲ್ಫೇರ್ ಅಸೋಸಿಯೇಷನ್ ಆಶ್ರಯದಲ್ಲಿ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಭಾನುವಾರ ಮೈಸೂರಿನ ಚಾಮುಂಡಿಪುರ ಮಾನಂದವಾಡಿ ರಸ್ತೆಯಲ್ಲಿರುವ ಪಶು ಆಸ್ಪತ್ರೆಯಲ್ಲಿ ಶ್ವಾನಗಳಿಗೆ ಉಚಿತ ಲಸಿಕಾ ಶಿಬಿರ ನಡೆಸಲಾಯಿತು. ಸುಮಾರು ೩೦೦ಕ್ಕೂ ಹೆಚ್ಚು ಶ್ವಾನಗಳಿಗೆ ಎರಡು ರೀತಿಯ ಲಸಿಕೆಗಳನ್ನು ನೀಡಲಾಯಿತು. ಸಾಕು ಪ್ರಾಣ ಗಳ ಮಾಲೀಕರು ನಾನಾ ತಳಿಯ ತಮ್ಮ ಮುದ್ದಿನ ಶ್ವಾನಗಳೊಂದಿಗೆ ಶಿಬಿರಕ್ಕೆ ಬಂದು ರೋಗ ನಿರೋಧಕ ಲಸಿಕೆ ಹಾಕಿಸಿದರು. ಪಶು ವೈದ್ಯ ಅಧಿಕಾರಿ ಡಾ.ಸಿ.ಪಿ.ತಿಮ್ಮಯ್ಯ ಮತ್ತು ವೈದ್ಯರ ತಂಡ ಶ್ವಾನಗಳಿಗೆ ಮೆಗಾ…
ಸಮಿತಿ ಅವಲೋಕನ ನಂತರ ಸೂಕ್ತ ನಿರ್ಧಾರ
September 19, 2021ಮೈಸೂರು,ಸೆ.18(ಆರ್ಕೆ)- ಆಸ್ತಿ ತೆರಿಗೆ ಮತ್ತು ಉದ್ದಿಮೆ ರಹದಾರಿ ಶುಲ್ಕ ಪರಿ ಷ್ಕರಣೆ ಸಂಬಂಧ ಪಾಲಿಕೆ ಅಧಿಕಾರಿಗಳು ಹಾಗೂ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ನಾಲ್ವರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಿ, ಅದರಲ್ಲಿ ಅವಲೋಕಿಸಿದ ನಂತರ ಸೂಕ್ತ ಕ್ರಮಕ್ಕೆ ಕೌನ್ಸಿಲ್ ಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಮೈಸೂರು ಸಂಘ-ಸಂಸ್ಥೆಗಳ ಒಕ್ಕೂ ಟದ ಪದಾಧಿಕಾರಿಗಳೊಂದಿಗೆ ನಗರ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಸುನಂದಾ ಪಾಲನೇತ್ರ ಸಭೆ ನಡೆಸಿ, ಚರ್ಚಿ ಸಿದರು. ಈ ಸಂದರ್ಭ ಮಾತನಾಡಿದ ಒಕ್ಕೂಟದ ಉಪಾಧ್ಯಕ್ಷ ಸಿ.ನಾರಾಯಣ ಗೌಡ,…
ಮುಡಾ ಸಿಎ ನಿವೇಶನಗಳಿಗೆ ಸೆ.25ರಿಂದ ಅ.30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ
September 19, 2021ಮೈಸೂರು,ಸೆ.18(ಆರ್ಕೆ)-ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದಿಂದ ಹಂಚಿಕೆ ಮಾಡಲುದ್ದೇಶಿಸಿರುವ 301 ಸಿಎ ನಿವೇಶನ ಗಳಿಗೆ ಅರ್ಹ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮುಡಾ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ರಾಜೀವ್, ಕಚೇರಿಯ ಸ್ಪಂದನ ಕೌಂಟರ್ನಲ್ಲಿ 1,000 ರೂ. ಶುಲ್ಕ ಪಾವತಿಸಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 22ರವರೆಗೆ ಪಡೆದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 30ರೊಳಗಾಗಿ ಸ್ಪಂದನ ಕೌಂಟರ್ನಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದೆಂದು ತಿಳಿಸಿದರು. ಧ್ಯೇಯೋದ್ದೇಶಗಳಿಗೆ…
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯಕ್ಕೆ ಮಾರಕ: ಧ್ರುವನಾರಾಯಣ
September 19, 2021ಮೈಸೂರು, ಸೆ.18(ಎಂಟಿವೈ)- ಕಲ್ಪನೆ ಆಧಾರಿತ ಹಾಗೂ ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯಕ್ಕೆ ಮಾರಕವಾಗಲಿದೆ. ಇದು ಯೋಜನಾಬದ್ಧವಾಗಿರದೇ ಕೇಸರೀ ಕರಣ ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯP್ಷÀ ಆರ್.ಧ್ರುವನಾರಾಯಣ ಆರೋಪಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಆತು ರಾತುರವಾಗಿ ಜಾರಿಗೊಳಿಸಲು ಮುಂದಾಗಿ ರುವುದರ ಹಿಂದೆ ಸಂಚೊಂದು ಅಡಗಿದೆ. ಈ ಹೊಸ ನೀತಿ ಹಿಮ್ಮುಖ ಚಲನೆ ಆಗು…
ವಿಷ್ಣುವರ್ಧನ್ ಪ್ರತಿಮೆ ತೆರವು: ಅಭಿಮಾನಿಗಳ ಆಕ್ರೋಶ
September 19, 2021ಮೈಸೂರು,ಸೆ.18(ಎಂಟಿವೈ)- ಮೈಸೂರು ಅರಮನೆ ಬಳಿಯ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಉದ್ಯಾನದಲ್ಲಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ಕಳೆದ ರಾತ್ರಿ ಸ್ಥಾಪಿಸಿದ್ದ 6 ಅಡಿ ಎತ್ತರದ ವಿಷ್ಣುವರ್ಧನ್ ಪ್ರತಿಮೆಯನ್ನು ಪಾಲಿಕೆ ಹಾಗೂ ಪೊಲೀಸ್ ಜಂಟಿ ಕಾರ್ಯಾ ಚರಣೆಯಲ್ಲಿ ತೆರವುಗೊಳಿಸಿದ ಹಿನ್ನೆಲೆ ಯಲ್ಲಿ ಆಕ್ರೋಶಗೊಂಡ ಅಭಿಮಾನಿಗಳು ಉದ್ಯಾನವನದ ಮುಂದೆ ಇಂದು ಪ್ರತಿ ಭಟನೆ ನಡೆಸಿದ ಪರಿಣಾಮ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಡಾ.ವಿಷ್ಣುವರ್ಧನ್ ಅಭಿಮಾನಿ ಬಳ ಗದ ವತಿಯಿಂದ ಫೈಬರ್ನ ಡಾ.ವಿಷ್ಣು ವರ್ಧನ್ ಪ್ರತಿಮೆಯನ್ನು ಅವರ…
ಕೇಂದ್ರ, ರಾಜ್ಯದ ಬೆಲೆ ಏರಿಕೆ ಖಂಡಿಸಿ ಕೆ.ಆರ್.ಕ್ಷೇತ್ರ ಕಾಂಗ್ರೆಸ್ ಪ್ರತಿಭಟನೆ
September 19, 2021ಮೈಸೂರು,ಸೆ.18(ಎಸ್ಪಿಎನ್)-ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆಯೇರಿಕೆ ಹಾಗೂ ಕೋಮುವಾದಿ ನಿಲುವು ಗಳ ವಿರುದ್ಧ ಕಾಂಗ್ರೆಸ್ ಕೆ.ಆರ್.ಕ್ಷೇತ್ರದ ಕಾರ್ಯಕರ್ತರು ಜಿಲ್ಲಾ ನ್ಯಾಯಾಲಯದ ಎದುರಿನ ಮಹಾತ್ಮ ಗಾಂಧಿ ಪುತ್ತಳಿ ಬಳಿ ಶನಿವಾರ ಪ್ರತಿಭಟನೆ ನಡೆಸಿದರು. ನಮ್ಮ ತ್ರಿವರ್ಣ ಧ್ವಜದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣ ಗಳು ರಾರಾಜಿಸುತ್ತವೆ. ಹಾಗೆಯೇ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಇತರೆ ಧರ್ಮೀಯರು ಎಲ್ಲರೊಂದಿಗೆ ಬೆರೆತು ಒಟ್ಟಾಗಿ ಜೀವನ ನಡೆಸುತ್ತಿದ್ದಾರೆ. ಆದರೆ, ಬಿಜೆಪಿ ತನ್ನ ದ್ವೇಷ ರಾಜಕಾರಣಕ್ಕೆ ಸಮಾಜದಲ್ಲಿ ಕೋಮು ದ್ವೇಷ ಬಿತ್ತಲು ಯತ್ನಿಸುತ್ತಿದೆ ಎಂದು…
ಕೆ.ಆರ್.ಕ್ಷೇತ್ರದಲ್ಲಿ ಅ.6ರವರೆಗೆ `ಮೋದಿ ಯುಗ್ ಉತ್ಸವ್’ ವೈವಿಧ್ಯಮಯ ಕಾರ್ಯಕ್ರಮ
September 19, 2021ಮೈಸೂರು,ಸೆ.18(ಎಂಟಿವೈ)-ಮೈಸೂರಿನ ಕೆ.ಆರ್.ವಿಧಾನ ಸಭಾ ಕ್ಷೇತ್ರದಲ್ಲಿ `ಮೋದಿ ಯುಗ್ ಉತ್ಸವ’ ಕಾರ್ಯಕ್ರಮದ ಅಂಗ ವಾಗಿ ಸೆ.17ರಿಂದ ಅ.6ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳು ವುದರೊಂದಿಗೆ ಕ್ಷೇತ್ರದ ಜನರಲ್ಲಿ ವರ್ಷವಿಡೀ ಸಕಾರಾತ್ಮಕ ಬೆಳವಣಿಗೆ ಬೆಳೆಸÀಲು ಆರೋಗ್ಯ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿರುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಅ.6ಕ್ಕೆ 20 ವರ್ಷಗಳಾಗುತ್ತಿದೆ. ಇದರ ಸಂಭ್ರಮಾಚರಣೆಗಾಗಿ ಈಗಾಗಲೇ 20 ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅ.1ರಿಂದ…
ಡಿಸಿ, ತಹಸೀಲ್ದಾರ್ ತಲೆದಂಡದೊಂದಿಗೆ ದೇವಸ್ಥಾನ ಪುನರ್ ನಿರ್ಮಿಸಬೇಕು
September 17, 2021ಮೈಸೂರು,ಸೆ.16(ಪಿಎಂ)- ದೇವಾ ಲಯ ನೆಲಸಮ ಸಂಬಂಧ ಜಿಲ್ಲಾಧಿಕಾರಿ, ತಹಸೀಲ್ದಾರ್ ತಲೆದಂಡ ಆಗಲೇಬೇಕು. ದೇವಸ್ಥಾನದ ಪುನರ್ ನಿರ್ಮಾಣದ ಜೊತೆಗೆ ರಾಜ್ಯದ ಎಲ್ಲಾ ದೇವಸ್ಥಾನಗಳ ಸಂರಕ್ಷಣೆ ಹೊಣೆ ಸರ್ಕಾರದ್ದೆಂದು ಮುಖ್ಯ ಮಂತ್ರಿಗಳು ಘೋಷಿಸಬೇಕು. ಇನ್ನು ಹತ್ತು ದಿನಗಳಲ್ಲಿ ನಮ್ಮ ಈ ಬೇಡಿಕೆ ಈಡೇರಿ ಸದಿದ್ದರೆ, ಮೈಸೂರಿನಿಂದ ಪಾದಯಾತ್ರೆ ಮೂಲಕ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕ ಲಾಗುವುದೆಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಎಚ್ಚರಿಕೆ ನೀಡಿದರು. ಮೈಸೂರಿನ ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಎದುರು…
ನಾಳೆ ಉಚಿತ ರಕ್ತದಾನ ಶಿಬಿರ, ವಿಷ್ಣು ಸೇವಾ ಪ್ರಶಸ್ತಿ ಪ್ರದಾನ
September 17, 2021ಮೈಸೂರು ಸೆ.16(ಆರ್ಕೆಬಿ)- ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಅಂಗವಾಗಿ ಅಗ್ರಹಾರದ ಡಾ.ವಿಷ್ಣು ಸೇನಾ ಸಮಿತಿ (ವಿಷ್ಣುವರ್ಧನ್ ಅಭಿ ಮಾನಿಗಳ ಸಂಘ)ಯಿಂದ ಸೆ.18ರಂದು ರಕ್ತದಾನ, ಕೇಕ್ ಕತ್ತರಿಸುವುದು, ಹಿರಿಯ ವಿಷ್ಣು ಅಭಿಮಾನಿಗಳಿಗೆ ಸೇವಾ ಪ್ರಶಸ್ತಿ ಪ್ರದಾನ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ ತಿಳಿಸಿದರು ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಎದುರಿನ ಡಾ.ವಿಷ್ಣುವರ್ಧನ್ ಉದ್ಯಾನದಲ್ಲಿ ಸೇಂಟ್ ಜೋಸೆಫ್…
ರೈಲ್ವೆ ಮೈಸೂರು ವಿಭಾಗದ `ಸ್ವಚ್ಛತಾ ಪಾಕ್ಷಿಕ’ಕ್ಕೆ ಚಾಲನೆ
September 17, 2021ಮೈಸೂರು, ಸೆ.16(ಆರ್ಕೆಬಿ)- ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಇಂದು 15 ದಿನಗಳ ಸ್ವಚ್ಛತಾ ಪಖ್ವಾಡ (ಪಾಕ್ಷಿಕ) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೈಸೂರಿನ ವಿಭಾಗೀಯ ಕಚೇರಿ ಆವರಣದ ಆಂಪಿ ಥಿಯೇಟರ್ನಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಅಧಿಕಾರಿ, ಸಿಬ್ಬಂದಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು. ಪಾಕ್ಷಿಕ ಆಚರಣೆ ವೇಳೆ ಅತ್ಯಂತ ಯಶಸ್ವಿಯಾಗಿ ಅಭಿಯಾನ ಕೈಗೊಳ್ಳುವಂತೆ ಸಲಹೆ ನೀಡಿದರು. ಸೆ.30ರವರೆಗೆ ನಡೆಯುವ ಸ್ವಚ್ಛತಾ ಪಾಕ್ಷಿಕ ಸಂದರ್ಭದಲ್ಲಿ ರೈಲ್ವೆ ನಿಲ್ದಾಣ ಗಳು, ರೈಲ್ವೆ ಕಾಲೋನಿ, ರೈಲುಗಳಲ್ಲಿ ಸ್ವಚ್ಛತೆಯ ಮೇಲೆ ವಿಶೇಷ ಗಮನ…










