ಮೈಸೂರು, ಜೂ.21(ಆರ್ಕೆಬಿ)- ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ `ಯೋಗದೊಂದಿಗೆ ಇರಿ, ಮನೆಯಲ್ಲೇ ಇರಿ’ ಘೋಷಣೆಯೊಂದಿಗೆ ಯೋಗ ದಿನವನ್ನು ಆಚರಿಸಲಾಯಿತು. ಚಾಮುಂಡಿ ಅಧಿಕಾರಿಗಳ ಅತಿಥಿಗೃಹ ದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಪತಂಜಲಿ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿ ಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಯೋಗಾಭ್ಯಾಸದಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿ, ರೈಲ್ವೆ ನೌಕರರು ಮತ್ತು ಕುಟುಂಬ ಸದಸ್ಯರಿಗೆ ನಿಯಮಿತವಾಗಿ ಯೋಗಾ ಭ್ಯಾಸ ಮಾಡುವಂತೆ…
ಕವಿ ಸಿದ್ದಲಿಂಗಯ್ಯ ಋಣ ತೀರಿಸಲಾಗದು: ಬನ್ನೂರು ರಾಜು
June 22, 2021ಮೈಸೂರು,ಜೂ.21(ಎಸ್ಪಿಎನ್)-ನಾಡೋಜ ಸಿದ್ದಲಿಂಗಯ್ಯ ಕನ್ನಡ ಕಾವ್ಯ ಕ್ಷೇತ್ರದ ಅಪರೂಪದ ಕ್ರಾಂತಿಕಾರಿ ಕವಿ ಎಂದೇ ಗುರುತಿಸಿಕೊಂಡು ಶೋಷಿತರ ಹೃದಯದಲ್ಲಿ ಸ್ಥಾನಪಡೆದರು. ಸಮಾಜದ ಅನಿಷ್ಟ ಪದ್ಧತಿ ಹೋಗಲಾಡಿಸಲು ತಮ್ಮ ಬರಹ ಮತ್ತು ಭಾಷಣಗಳ ಮೂಲಕ ಯತ್ನಿಸಿದರು. ಅದು ತೀರಿಸಲಾಗದ ಋಣ ಎಂದು ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು. ದಟ್ಟಗಳ್ಳಿಯ ನಾಗಮಾರ್ಷಲ್ ಆಟ್ರ್ಸ್ ಅಕಾಡೆಮಿ ಆವರಣದಲ್ಲಿ ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ಮತ್ತು ಪದ್ಮಪಾಣಿ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ ಕವಿ ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದ ಅವರು, ಸಿದ್ದಲಿಂಗಯ್ಯ ಅವರು ಕಾವ್ಯವನ್ನೇ…
ಯೋಗದಿಂದ ಸುಂದರ, ಸ್ವಾಸ್ಥ್ಯ ಬದುಕು ಸಾಧ್ಯ
June 22, 2021ಮೈಸೂರು,ಜೂ.21-ಭಾರತ ಸಾಂಸ್ಕøತಿಕವಾಗಿ ಸಂಪದ್ಭರಿತ ವಾದ ರಾಷ್ಟ್ರ. ಭಾರತೀಯ ಪರಂಪರೆಯು ಬದುಕನ್ನು ತಪಸ್ಸೆಂಬಂತೆ ಸ್ವೀಕರಿಸಿದೆ. ಹುಟ್ಟಿನಿಂದ ಸಾಯು ವವರೆಗೂ ನಾವು ಪಾಲಿಸಬೇಕಾದ ಸಂಸ್ಕಾರಗಳು, ರೀತಿ, ನೀತಿ, ನಿಯಮಗಳನ್ನು ನಮ್ಮ ಹಿರಿಯರು ನಮಗೆ ನೀಡಿದ್ದಾರೆ. ಅವುಗಳಲ್ಲಿ ಯೋಗವೂ ಒಂದು. ಯೋಗದಿಂದ ಸುಂದರ ಮತ್ತು ಸ್ವಾಸ್ಥ್ಯ ಬದುಕನ್ನು ಸಾಗಿಸಲು ಸಾಧ್ಯ ಎಂದು ಜೆಎಸ್ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಹೇಳಿದರು. ಮೈಸೂರು ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಏಳನೇ ಅಂತಾ ರಾಷ್ಟ್ರೀಯ ಯೋಗ…
ಮೈಸೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ಸಾವಿರ ಎಲ್ಪಿಎಂ ಆಕ್ಸಿಜನ್ ಜನರೇಟರ್ ಪ್ಲಾಂಟ್ ಸ್ಥಾಪನೆ
June 22, 2021ಮೈಸೂರು,ಜೂ.21(ಪಿಎಂ)- ಮೈಸೂರಿನ ಮೇಟ ಗಳ್ಳಿಯ ಕೆಆರ್ಎಸ್ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆ ಆವ ರಣದಲ್ಲಿ ಸಾವಿರ ಎಲ್ಪಿಎಂ (ಲೀಟರ್ ಪರ್ ಮಿನಿಟ್) ಸಾಮಥ್ರ್ಯದ ಆಕ್ಸಿಜನ್ ಜನರೇಟರ್ ಪ್ಲಾಂಟ್ ಸ್ಥಾಪಿಸುವ ಸಂಬಂಧ ಸೋಮವಾರ ಸಂಸದ ಪ್ರತಾಪ್ ಸಿಂಹ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಸಂಸದರು, ಕೇಂದ್ರ ಸರ್ಕಾರದ ವತಿಯಿಂದ ಇಡೀ ದೇಶಾದ್ಯಂತ 1,200ಕ್ಕಿಂತಲೂ ಹೆಚ್ಚು ಪಿಎಸ್ಎ ತಂತ್ರಜ್ಞಾನ ಆಧಾರಿತ ಆಕ್ಸಿಜನ್ ಜನರೇಟರ್ ಪ್ಲಾಂಟ್ ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಅದರ ಭಾಗವಾಗಿ ಮೈಸೂರಿನ ಕೆಆರ್ ಆಸ್ಪತ್ರೆ ಆವರಣ…
ಮೈಸೂರಲ್ಲಿ ಅತ್ಯುತ್ಸಾಹದ ಯಶಸ್ವಿ ಯೋಗ ದಿನಾಚರಣೆ
June 22, 2021ಮೈಸೂರು, ಜೂ. 21(ಆರ್ಕೆ)- ಕೊರೊನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮನೆ -ಮನೆಗಳಲ್ಲೇ ಯೋಗಾಭ್ಯಾಸ ಮಾಡುವ ಮೂಲಕ ಮೈಸೂರಲ್ಲಿ 7ನೇ ಅಂತರ ರಾಷ್ಟ್ರೀಯ ಯೋಗ ದಿನವನ್ನು ಅತ್ಯು ತ್ಸಾಹದಿಂದ ಆಚರಿಸಲಾಯಿತು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಆಯುಷ್ ಇಲಾಖೆ ನಿರ್ದೇಶಕಿ ಡಾ.ಸೀತಾ ಲಕ್ಷ್ಮಿ, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಶಾಸಕ ಎಲ್.ನಾಗೇಂದ್ರ ಸೇರಿ ದಂತೆ ಹಲವು ಅಧಿಕಾರಿಗಳು, ಜನಪ್ರತಿ ನಿಧಿಗಳು, ಯೋಗಾಸಕ್ತರು, ವಿವಿಧ ಯೋಗ ತರಭೇತಿ ಸಂಸ್ಥೆಗಳ ಮುಖ್ಯಸ್ಥರು ತಮ್ಮ ನಿವಾಸ, ಯೋಗ ಶಾಲೆಗಳಲ್ಲಿ ಇಂದು ಬೆಳಗ್ಗೆ 7ರಿಂದ…
ವಿದ್ಯಾರ್ಥಿಗಳಿಗೆ ಕೌಶಲ್ಯ, ಉದ್ಯೋಗ ತರಬೇತಿಗೆ ಅನುಕೂಲಕಾರಿಯಾಗಿ ಕೋಡಿಂಗ್ ಅಕಾಡೆಮಿ, ಇನ್ಕ್ಯುಬೇಷನ್ ಸ್ಥಾಪನೆ
June 22, 2021ಮೈಸೂರು,ಜೂ.21(ಎಂಟಿವೈ)-ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರು ವಿಶ್ವವಿದ್ಯಾನಿಯದಲ್ಲಿ ಕೋಡಿಂಗï ಅಕಾ ಡೆಮಿ ಹಾಗೂ ಇನ್ಕ್ಯುಬೇಷನ್ ಸೆಂಟರ್ ಆರಂಭಿಸಲು ಸರ್ಕಾರ ಸಮ್ಮತಿ ನೀಡಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಮೈಸೂರು ವಿವಿ ಉದ್ಯೋಗಿಗಳಿಗಾಗಿ ಆಯೋಜಿಸಿದ್ದ ಲಸಿಕಾ ಅಭಿಯಾನ ವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಫ್ರಾನ್ಸ್ನಲ್ಲಿ ಇಕೋಲ್-42 ಎಂಬ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿ ರುವ ಕೋಡಿಂಗ್ ಹಾಗೂ ಇನ್ಕ್ಯುಬೇಷನ್ ಸೆಂಟರ್ ಮಾದರಿ ಯಲ್ಲಿ, ಇಕೋಲ್-42 ಸಂಸ್ಥೆಯ ಸಹಯೋಗದಲ್ಲಿಯೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೋಡಿಂಗï ಅಕಾಡೆಮಿ ಹಾಗೂ ಇನ್ಕ್ಯುಬೇಷನ್…
ಕೊರೊನಾದಿಂದ ಪಾರಾಗಲು ಸದ್ಯಕ್ಕಿರುವ ದಾರಿ ಶೀಘ್ರ ಲಸಿಕೆ ಪಡೆಯುವುದು
June 22, 2021ಮೈಸೂರು,ಜೂ.21(ಎಂಟಿವೈ)- ಮೈಸೂರಿನ ಕೆ.ಆರ್. ಕ್ಷೇತ್ರದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕುವ ಅಭಿಯಾನಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಮೈಸೂರು ನಗರಪಾಲಿಕೆ ವಾರ್ಡ್ ನಂ.53ರ ವ್ಯಾಪ್ತಿಯ ಸಿದ್ದಾರ್ಥನಗರದ ಜೆಎಸ್ಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಆಯೋಜಿಸಿದ್ದ ಕೋವಿಡ್ ಲಸಿಕಾ ವಿಶೇಷ ಅಭಿಯಾನ ದಲ್ಲಿ 18 ವರ್ಷ ಮೇಲ್ಪಟ್ಟ ಎನ್.ಹರ್ಷಿತಾ ಹಾಗೂ ಪೂಜಾ ಸಿಂಗ್ ಅವರಿಗೆ ಲಸಿಕೆ ಹಾಕಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾ ಡಿದ ಅವರು,…
ಬೇರೆಡೆಯಿಂದ ಸಾರಿಗೆ ಬಸ್ ಬಂದರೂ ಮೈಸೂರಲ್ಲಿ ನಿಲ್ಲಲ್ಲ ಪ್ರಯಾಣಿಕರನ್ನು ಹತ್ತಿಸುವ-ಇಳಿಸುವುದಕ್ಕೆ ನಿರ್ಬಂಧ
June 21, 2021ಮೈಸೂರು, ಜೂ.20(ಎಂಟಿವೈ)-ಕೊರೊನಾ ಪಾಸಿ ಟಿವಿಟಿ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಬೆಂಗ ಳೂರು ಸೇರಿದಂತೆ ವಿವಿಧೆಡೆಯಿಂದ ಮೈಸೂರು ಮಾರ್ಗ ವಾಗಿ ಬರುವ ಸಾರಿಗೆ ಸಂಸ್ಥೆಯ ಬಸ್ಗಳನ್ನು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದ ಪ್ರವೇಶ ಹಾಗೂ ಪ್ರಯಾಣಿಕರ ಹತ್ತಿಸುವ ಮತ್ತು ಇಳಿಸುವುದಕ್ಕೆ ನಿರ್ಬಂ ಧಿಸಲಾಗಿದೆ. ರಾಜ್ಯದ 16 ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಅನ್ಲಾಕ್ ಜಾರಿ ಮಾಡಿ, ಬಸ್ ಸಂಚಾರ ಸೇರಿದಂತೆ ಬಹುತೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ…
ಮೈಸೂರಲ್ಲಿ ಜುಲೈ 5ರವರೆಗೆ ಲಾಕ್ಡೌನ್ ಮುಂದುವರಿಕೆ
June 21, 2021ಮೈಸೂರು, ಜೂ. 20(ಎಂಟಿವೈ)-ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಮತ್ತೊಮ್ಮೆ 14 ದಿನಗಳ ಕಾಲ ಲಾಕ್ಡೌನ್ ವಿಸ್ತರಿಸಿದ್ದು, ಜುಲೈ 5ರ ಮುಂಜಾನೆ 5 ಗಂಟೆವರೆಗೆ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ ಗೊಳಿಸಲಾಗಿದೆ. ಕೊರೊನಾ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ಇರುವ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನ್ಲಾಕ್ 2.0 ನಿಯಮ ಜಾರಿಗೊಳಿಸಿ ವಿವಿಧ ಚಟುವಟಿಕೆಗೆ ಅವಕಾಶ ನೀಡ ಲಾಗಿದೆ. ಆದರೆ ರಾಜ್ಯದಲ್ಲಿಯೇ ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರ ಪ್ರಮಾಣ ಶೇಕಡಾವಾರು ಅಂಕಿ-ಅಂಶ 10ಕ್ಕಿಂತ ಹೆಚ್ಚಿದ್ದು, ಸಾವಿನ…
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಮಾಜದಲ್ಲಿ ಪರಿಣಾಮಕಾರಿ ಬದಲಾವಣೆ ಸಾಧ್ಯ
June 21, 2021ಮೈಸೂರು,ಜೂ.20-ಸಮಾಜದಲ್ಲಿ ಪರಿಣಾಮಕಾರಿಯಾಗಿ ಬದಲಾವಣೆ ತರಬೇಕೆಂ ದರೆ ಅದು ಉತ್ತಮ ಗುಣಮಟ್ಟದ ಶಿಕ್ಷಣ ದಿಂದ ಮಾತ್ರ ಸಾಧ್ಯ. ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಸಾಧ್ಯವಾಗಿಸಬಹುದು ಎಂದು ಉಪಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು. ಸರಗೂರು ತಾಲೂಕಿನ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಅತ್ಯಾಧು ನಿಕ ಕೋವಿಡ್ ಕೇರ್ ಸೆಂಟರ್ ಉದ್ಘಾ ಟಿಸಿ, ಬಳಿಕ ಅವರು ಮಾತನಾಡಿದರು. ಶಿಕ್ಷಣ ಕಲಿತ ನಂತರ ಸಮಾಜಕ್ಕೆ ಏನು ಕೊಡಗೆ ನೀಡಬೇಕು ಎಂಬ ಅರಿವಿರಬೇಕು. ಎಲ್ಲವನ್ನು ಕಲಿತು ಸ್ವಾರ್ಥದಿಂದ ಬದುಕ ಬಾರದು. ಏನೇ…










