ಮೈಸೂರು,ಏ.19(ಪಿಎಂ)- ಕೋವಿಡ್ ನಿಯಮ ಪಾಲನೆ ಬಗ್ಗೆ ದೇಶದ ಜನತೆಗೆ ಪಾಠ ಹೇಳುವ ಪ್ರಧಾನಿ ನರೇಂದ್ರ ಮೋದಿಯವರೇ ಪಶ್ಚಿಮಬಂಗಾಳದ ಚುನಾ ವಣಾ ಪ್ರಚಾರ ಸಭೆಯಲ್ಲಿ ಹೆಚ್ಚು ಜನ ಸೇರಿಸಿ, ಭಾಷಣ ಮಾಡಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ಕರ್ನಾ ಟಕ ರಾಜ್ಯ ರೈತಸಂಘ, ಈ ಸಂಬಂಧ ನ್ಯಾಯಾಂಗ ವ್ಯವಸ್ಥೆಯಾದರೂ ಸುಮೊಟೊ (ಸ್ವಯಂಪ್ರೇರಿತ) ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಧಾನಿ ಸೇರಿದಂತೆ ಹಲವು…
ಏಪ್ರಿಲ್ ಮಾಸದಲ್ಲಿ ತೆರಿಗೆ ಪಾವತಿಗೆ ನೀಡುವ ಶೇ.5ರಷ್ಟು ವಿನಾಯಿತಿ ಇನ್ನೂ 3 ತಿಂಗಳಿಗೆ ವಿಸ್ತರಿಸಿ
April 20, 2021ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಒತ್ತಾಯ ಮೈಸೂರು,ಏ.19(ಪಿಎಂ)- ಕೋವಿಡ್ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಪ್ರಸಕ್ತ ಸಾಲಿನಿಂದ ಶೇ.15ರಷ್ಟು ಹೆಚ್ಚಿಸಿರುವ ಆಸ್ತಿ ತೆರಿಗೆಯನ್ನು ಈ ಬಾರಿ ಕೈಬಿಡುವುದು ಒಳ್ಳೆಯದು. ಜೊತೆಗೆ ಪ್ರತಿ ವರ್ಷ ಏಪ್ರಿಲ್ ಮಾಸದಲ್ಲಿ ತೆರಿಗೆ ಪಾವತಿಗೆ ನೀಡುವ ಶೇ.5ರಷ್ಟು ವಿನಾಯಿತಿ ಯನ್ನು ಹೆಚ್ಚುವರಿಯಾಗಿ ಇನ್ನೂ ಮೂರು ತಿಂಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದ ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ತೆರಿಗೆ ಸಂಗ್ರಹ ಸಂಬಂಧ ಆಸ್ತಿಗಳ ಸಮೀಕ್ಷೆ ಕಾರ್ಯವನ್ನು ಇನ್ಫೋಸಿಸ್ ಸಂಸ್ಥೆ ಮೂಲಕ ಮಾಡಿಸಬೇಕೆಂದು ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ…
ಮೈಸೂರು ಯಾದವಗಿರಿ ಕೊಳಚೆ ಪ್ರದೇಶದ ಸೀಟ್ ಮನೆಗಳ ತೆರವು
April 20, 2021ಮೈಸೂರು,ಏ.19(ಪಿಎಂ)- ಮೈಸೂರಿನ ಮಹಾನಗರ ಪಾಲಿಕೆ ವಾರ್ಡ್ 18ರ ವ್ಯಾಪ್ತಿಯ ಯಾದವಗಿರಿ ಕೊಳಚೆ ಪ್ರದೇಶದ (ಹಾಸನ ರೈಲ್ವೆ ಹಳಿ ಪಕ್ಕ) ಸೀಟ್ ಮನೆಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ತೆರವುಗೊಳಿಸಲಾಯಿತು. ಇಲ್ಲಿನ ನಿವಾಸಿಗಳ ವಿರೋಧದ ನಡುವೆಯೂ ಪೊಲೀಸ್ ಭದ್ರತೆಯೊಂದಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಜಿ.ಹರೀಶ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಮೈಸೂರು ನಗರದ ಕೆಸರೆ ಸರ್ವೇ ನಂ. 484/1 ಮತ್ತು 484/2 ಬಡಾವಣೆಯಲ್ಲಿ ಜೆಎನ್ ನರ್ಮ್ ಬಿಎಸ್ ಯುಪಿ ಯೋಜನೆಯಡಿ ನಿರ್ಮಿಸಿರುವ ಮನೆಗಳಿಗೆ ಇಲ್ಲಿನ…
ಕಚೇರಿಗೆ ಸಾರ್ವಜನಿಕರು ಭೇಟಿ ನೀಡದಂತೆ ಮುಡಾ ಆಯುಕ್ತರ ಮನವಿ
April 20, 2021ಮೈಸೂರು, ಏ.19- ಕೊರೊನಾ ಸೋಂಕು ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಸಾರ್ವಜನಿಕರು ಭೇಟಿ ನೀಡದಂತೆ ಪ್ರಾಧಿಕಾರದ ಆಯುಕ್ತ ಡಿ.ಬಿ.ನಟೇಶ್ ಮನವಿ ಮಾಡಿ ದ್ದಾರೆ. ಬಡ್ಡಿ ರಹಿತವಾಗಿ 2021-2022ನೇ ಸಾಲಿನ ಕಂದಾಯ ಪಾವತಿಸಲು 2022ರ ಮಾ.31 ರವರೆಗೂ ಕಾಲಾವಕಾಶವಿದೆ. ಆದರೂ ಹಿರಿಯ ನಾಗರಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನ ತೆರಿಗೆ ಪಾವತಿಗೆ ಪ್ರಾಧಿಕಾರದ ಕಚೇರಿಗೆ ಬರುತ್ತಿದ್ದಾರೆ. ತೆರಿಗೆ ಪಾವತಿಗೆ ಇನ್ನೂ ಸಾಕಷ್ಟು ಸಮಯಾ ವಕಾಶವಿದೆ. ಅಲ್ಲದೆ ಶೀಘ್ರ ಆನ್ಲೈನ್ ಸೇವೆಯೂ ಜಾರಿ ಯಾಗುವುದರಿಂದ ತುರ್ತಾಗಿ…
ನಾಳೆಯಿಂದ ಟ್ರಾಮಾ ಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ
April 20, 2021ಮೈಸೂರು,ಏ.19(ಆರ್ಕೆ)- ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚು ತ್ತಿರುವುದರಿಂದ ಏಪ್ರಿಲ್ 21ರಿಂದ ಮೈಸೂರಿನ ಕೆಆರ್ಎಸ್ ರಸ್ತೆಯ ಪಿಕೆ ಟಿಬಿ ಆಸ್ಪತ್ರೆ ಆವರಣದಲ್ಲಿ ರುವ ಟ್ರಾಮಾ ಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆ ಕೊರತೆ ಉಂಟಾಗದಂತೆ ಮುಂಜಾಗ್ರತೆ ಯಾಗಿ ಪ್ರಸ್ತುತ ಕೊರೊನಾ ಲಸಿಕೆ ನೀಡು ತ್ತಿರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಧೀನ ದಲ್ಲಿರುವ ಕೇರ್ ಸೆಂಟರ್ ಹೊಸ ಟ್ರಾಮಾ ಕಟ್ಟಡವನ್ನು…
ಕೊರೊನಾ ಎರಡನೇ ಅಲೆ ಆತಂಕ: ಸ್ವಯಂಪ್ರೇರಣೆಯಿಂದ ಪರೀಕ್ಷೆಗೆ ಮುಗಿಬಿದ್ದ ಜನ
April 20, 2021ಮೈಸೂರು,ಏ.19(ಎಂಟಿವೈ)- ಮುಂಜಾ ಗ್ರತಾ ಕ್ರಮವಾಗಿ ಪರೀಕ್ಷೆ ಮಾಡಿಸಿ, ಸುರ ಕ್ಷತೆ ಖಾತರಿಪಡಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ ಕಿವಿಗೊಡದ ಜನತೆ ಈಗ ಅವರಾಗಿಯೇ ಪರೀಕ್ಷೆ ಮಾಡಿಸಿಕೊಳ್ಳಲು ತವಕಿಸುತ್ತಿದ್ದಾರೆ. ಕೊರೊನಾ ಎರಡನೇ ಅಲೆಯ ಅಬ್ಬರದಿಂದ ಮೈಸೂರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಜನತೆ ಸ್ವಯಂಪ್ರೇರಣೆಯಿಂದ ಕೋವಿಡ್ ಪರೀಕ್ಷೆಗೆ ಮುಗಿಬೀಳುತ್ತಿದ್ದಾರೆ. ಈ ಹಿಂದೆ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಎಷ್ಟೇ ಮನವಿ ಮಾಡಿದರೂ ಹಿಂದೇಟು ಹಾಕು ತ್ತಿದ್ದರು. ಆದರೆ, ಎರಡನೇ ಅಲೆ…
ಕೊರೊನಾ ಮಾರ್ಗಸೂಚಿ ಪಾಲಿಸದವರ ವಿರುದ್ಧ ಇಂದಿನಿಂದ ಕಠಿಣ ಕ್ರಮ
April 19, 2021ಮೈಸೂರು,ಏ.18(ಎಂಟಿವೈ)-ಕೊರೊನಾ ಎರಡನೇ ಅಲೆ ಸಾಂಸ್ಕøತಿಕ ನಗರಿ ಮೈಸೂ ರನ್ನು ತತ್ತರಿಸುವಂತೆ ಮಾಡುತ್ತಿದ್ದು, ಜನರನ್ನು ಆತಂಕಕ್ಕೀಡುಮಾಡಿದೆ. ಕೊರೊನಾ ಮಾರ್ಗ ಸೂಚಿ ಪಾಲಿಸದೇ ಸೋಂಕು ಹರಡುವಿಕೆಗೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಾಲಿಕೆ ಹಾಗೂ ಪೊಲೀಸರು ಮುಂದಾಗಿದ್ದು, ನಾಳೆಯಿಂದ (ಏ.19) ಒಂಭತ್ತು ವಲಯ ಕಚೇರಿ ವ್ಯಾಪ್ತಿಯಲ್ಲಿಯೂ ಕಾರ್ಯಾಚರಣೆ ನಡೆಸಲಿದ್ದಾರೆ. ಎರಡನೇ ಹಂತದ ಕೊರೊನಾ ತೀವ್ರತೆ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುವಂತೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳು ವಂತೆ ತಿಳಿಹೇಳಿದರೂ,…
ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ ಮುಂಡಂಡ ಅನುಪಮ ಇನ್ನಿಲ್ಲ
April 19, 2021ಮಡಿಕೇರಿ, ಏ.18- ಕೊಡಗಿನ ಹೆಸರಾಂತ ಹಾಕಿ ತಾರೆ ಭಾರತದ ಮೊಟ್ಟ ಮೊದಲ ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ 41 ವರ್ಷದ ಮುಂಡಂಡ (ಪುಚ್ಚಿಮಂಡ) ಅನುಪಮ ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 88ಕ್ಕೂ ಅಧಿಕ ಅಂತರರಾಷ್ಟ್ರೀಯ ಹಾಕಿ ಪಂದ್ಯಾ ವಳಿಗಳಲ್ಲಿ ಭಾಗವಹಿಸಿದ್ದ ಅನುಪಮ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ “ಫೆಡರೇಷನ್ ಆಫ್ ಇಂಟರ್ನ್ಯಾಷನಲ್ ಹಾಕಿ” ಪಂದ್ಯಾವಳಿಗಳ ತೀರ್ಪುಗಾರರಾಗಿ ಆಯ್ಕೆಯಾಗುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದರು. ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ 1980 ಜುಲೈ 8ರಂದು ಜನಿಸಿದ ಅನುಪಮ, ಪತಿ ಮುಂಡಂಡ…
ಖಾಸಗಿ ವಾಹನ ಮಾಲೀಕರು, ಚಾಲಕರ ಪ್ರತಿಭಟನೆ
April 19, 2021ಮೈಸೂರು, ಏ.18(ಎಂಟಿವೈ)-ಸಾರಿಗೆ ಸಂಸ್ಥೆ ಬಸ್ಗಳ ಸಂಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಚಾಲಕರು ಹಾಗೂ ನಿರ್ವಾಹಕರು ಸೇವೆ ಸ್ಥಗಿತಗೊಳಿಸಿ ಪ್ರತಿಭಟಿಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ಕಳೆದ 12 ದಿನದಿಂದ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಿಂದ ವಿವಿಧ ನಗರ ಹಾಗೂ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಕರನ್ನು ಕರೆದೊಯ್ಯು ತ್ತಿದ್ದ ಸುಮಾರು 156ಕ್ಕೂ ಹೆಚ್ಚು ಖಾಸಗಿ ಬಸ್, ಟಿಟಿ ಹಾಗೂ ಮಿನಿ ಬಸ್ಸುಗಳು ಸಾರಿಗೆ ಇಲಾಖೆಯ ಬಸ್ ಸಂಚಾರದಲ್ಲಿ ಹೆಚ್ಚಳವಾದುದನ್ನು ಖಂಡಿಸಿ ಗ್ರಾಮಾಂತರ ಬಸ್ ನಿಲ್ದಾಣ…
ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ಹಕ್ಕ-ಬುಕ್ಕರ ಕುರಿತ ಮತ್ತಷ್ಟು ಸಂಶೋಧನೆ ಅಗತ್ಯ: ಎಎಸ್ಪಿ ಶಿವಕುಮಾರ್ ಸಲಹೆ
April 19, 2021ಮೈಸೂರು, ಏ.18(ಆರ್ಕೆಬಿ)- ಹಕ್ಕ-ಬುಕ್ಕರ ಇತಿಹಾಸದ ಕುರಿತು ಮತ್ತಷ್ಟು ಸಂಶೋಧನೆ ನಡೆಸಬೇಕಾಗಿದೆ ಎಂದು ಮೈಸೂರು ಜಿಲ್ಲಾ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಆರ್.ದಂಡಿನ ಸಲಹೆ ನೀಡಿದರು. ಮೈಸೂರಿನ ಜೆಎಲ್ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ನಾಯಕ ರತ್ನಗಳಾದ ಹಕ್ಕ-ಬುಕ್ಕರ ವಿಜಯ ನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿ ದರು. ವಿಜಯನಗರ ಸಾಮ್ರಾಜ್ಯದ ಆಳ್ವಿಕೆ, ಹಂಪಿಯ ಬಗ್ಗೆ ಸಂಶೋಧನೆಗಳು ನಡೆದಿರುವಷ್ಟು ಬೇರೆ ಯಾರ ಆಡಳಿತ ಬಗ್ಗೆಯೂ ನಡೆದಿಲ್ಲ ಎಂದು…










