ಮೈಸೂರು,ಜ.23-ಮೈಸೂರಿನ ಕುಂಬಾರ ಕೊಪ್ಪಲಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಗಳಿಗೆ ಸುಜೀವ್ ಸಂಸ್ಥೆ ವತಿಯಿಂದ ಸ್ಮಾರ್ಟ್ ಕ್ಯಾಂಪೇನ್ ಅಡಿಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಲಾಯಿತು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದಲ್ಲಿ ಬಡ ಮತ್ತು ದುರ್ಬಲ ವರ್ಗದವರ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಶಾಲೆಯ ಕಂಪ್ಯೂ ಟರ್ ಪ್ರಯೋಗಾಲಯಕ್ಕೆ 15ಕ್ಕೂ ಹೆಚ್ಚು ಕಂಪ್ಯೂಟರ್ಗಳನ್ನು ರಿಪೇರಿ ಮಾಡುವ ಮೂಲಕ ಮತ್ತು…
`ಅಂಬಾರಿ’ ಪ್ರಯೋಗಾರ್ಥ ಸಂಚಾರ ಯಶಸ್ವಿ
January 24, 2021ಮೈಸೂರು, ಜ.23(ಎಂಟಿವೈ)- ಪ್ರವಾ ಸಿಗರು ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶವಾಗುವಂತೆ ಡಬಲ್ ಡೆಕ್ಕರ್ ಬಸ್ `ಅಂಬಾರಿ’ ಶನಿ ವಾರ ಪ್ರಾಯೋಗಿಕವಾಗಿ ಸಂಚಾರ ನಡೆ ಸಿತು. ಕೆಎಸ್ಆರ್ಟಿಸಿ ಸಹಯೋಗದಲ್ಲಿ `ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’(ಕೆಎಸ್ಟಿಡಿಸಿ) ತೆರೆದ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದೆ. 20 ಅಡಿ ಎತ್ತರವಿರುವ `ಅಂಬಾರಿ’ ಬಸ್ ನಗರದ 15 ಪ್ರವಾಸಿ ತಾಣಗಳಿಗೆ ತೆರಳು ವುದರಿಂದ ಮೈಸೂರಿನ ರಸ್ತೆಗಳಲ್ಲಿ ಸುಗಮ ಸಂಚಾರದ ಸಲುವಾಗಿ ಇಂದು ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿತು. ವಿದ್ಯುತ್ ತಂತಿ…
`ಪಾಲಿಕೆ-ಜನತೆ ನಿತ್ಯ ಸ್ವಚ್ಛತೆಗೆ ಆದ್ಯತೆ’
January 22, 2021ಮೈಸೂರು, ಜ.21(ವೈಡಿಎಸ್)- ಸ್ವಚ್ಛತೆ ಎಂಬುದು ನಮ್ಮ ಸ್ವಭಾವ ಹಾಗೂ ಸಂಸ್ಕøತಿ ಆಗಬೇಕು. ಶಾಲೆಗಳಲ್ಲಿ ಶಿಕ್ಷಕರ ಮೂಲ ಕವೇ ಮಕ್ಕಳಿಗೆ ಸ್ವಚ್ಛತೆಯ ಜಾಗೃತಿ ಮೂಡಿ ಸಬೇಕು. ವಾಣಿಜ್ಯ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಸರ್ವೇಕ್ಷಣೆ ದೃಷ್ಟಿಯಿಂದ ಮಾತ್ರವಲ್ಲದೆ ಸ್ವಚ್ಛತೆಗೆ ನಿತ್ಯ ಆದ್ಯತೆ ನೀಡಬೇಕು. ಸ್ವಚ್ಛ ಸರ್ವೇಕ್ಷಣೆ-2021 ಆರಂಭವಾಗಿ ರುವ ಹಿನ್ನೆಲೆಯಲ್ಲಿ ಮೈಸೂರು ಮಹಾ ನಗರ ಪಾಲಿಕೆಯ ಜಯಚಾಮ ರಾಜೇಂದ್ರ ಸಭಾಂಗಣ(ಹಳೇ ಕೌನ್ಸಿಲ್ ಹಾಲ್)ದಲ್ಲಿ ಗುರುವಾರ ನಡೆದ ಪಾಲುದಾರರ ಸಭೆಯಲ್ಲಿ ನಾಗರಿಕರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇಂಥ ಹಲವು ಮಹತ್ವದ…
ಲಸಿಕೆಯಿಂದ ಮಾತ್ರವೇ ಕೊರೊನಾಗೆ ಅಂತ್ಯ ಹೃದಯ ತಜ್ಞ ಡಾ.ಮಂಜುನಾಥ್ ಅಭಿಮತ
January 22, 2021ಬೆಂಗಳೂರು, ಜ.21- ಲಸಿಕೆ ತೆಗೆದುಕೊಳ್ಳುವುದರಿಂದ ಮಾತ್ರವೇ ಕೊರೊನಾ ವೈರಸ್ ಅಂತ್ಯಗೊಳಿಸಲು ಸಾಧ್ಯ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಗುರುವಾರ ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ಸುದ್ದಿಗಾರರ ಮಾತನಾಡಿದ ಅವರು, ಕೊರೊನಾ ವೈರಸ್ಗೆ ಲಸಿಕೆ ಮಾತ್ರ ಮದ್ದು. ನಾನು ಅದನ್ನು ತೆಗೆದುಕೊಂಡಿದ್ದೇನೆ, ಚೆನ್ನಾಗಿ ದ್ದೇನೆ. ಆರೋಗ್ಯ ಕಾರ್ಯಕರ್ತರು ಭಯ ಮತ್ತು ಆತಂಕವಿಲ್ಲದೆ ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು ಎಂದರು. ಲಸಿಕೆ ಸುರಕ್ಷಿತವಾಗಿದೆ ಮತ್ತು ಯಾವುದೇ ಅಡ್ಡ ಪರಿಣಾಮ ಇಲ್ಲ. ಸ್ವಲ್ಪ…
ಡ್ರಗ್ಸ್ ಪ್ರಕರಣ: ನಟಿ ರಾಗಿಣಿಗೆ ಸುಪ್ರೀಂಕೋರ್ಟ್ನಿಂದ ಕಡೆಗೂ ಸಿಕ್ತು ಜಾಮೀನು!
January 22, 2021ನವದೆಹಲಿ: ಮಾದಕ ವಸ್ತು ಜಾಲದ ನಂಟು ಹೊಂದಿರುವ ಆರೋಪದ ಮೇಲೆ ಜೈಲುಪಾಲಾಗಿದ್ದ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಮಂಜೂರಾಗಿದೆ. ಆ ಮೂಲಕ ಅವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಕಳೆದ ನಾಲ್ಕೂವರೆ ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿದ್ದ ನಟಿ ರಾಗಿಣಿ ದ್ವಿವೇದಿ ಅವರಿಗೆ ಸುಪ್ರೀಂಕೋರ್ಟ್ ಗುರುವಾರ (ಜ.21) ಜಾಮೀನು ನೀಡಿದೆ. 2020ರ ಸೆ.14ರಂದು ರಾಗಿಣಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ನವೆಂಬರ್ನಲ್ಲಿ ಕರ್ನಾಟಕ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ…
ಗೋಕರ್ಣ ಬೀಚ್ನಲ್ಲಿ ಕೊಳ್ಳೇಗಾಲ ಯುವತಿ ಸೇರಿ ಮೂವರು ಸಮುದ್ರ ಪಾಲು
January 22, 2021ಗೋಕರ್ಣ, ಜ.21-ಬೀಚ್ನಲ್ಲಿ ಆಟವಾಡುತ್ತಿದ್ದಾಗ ಕೊಳ್ಳೇಗಾಲ ಮೂಲದ ಯುವತಿ ಸೇರಿ ಮೂವರು ಸಮು ದ್ರದ ಪಾಲಾದ ಘಟನೆ ಇಲ್ಲಿನ ಮೇನ್ ಬೀಚ್ನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಮೂಲತಃ ಕೊಳ್ಳೇಗಾಲ ತಾಲೂಕು ಉತ್ತಂಬಳ್ಳಿ ಗ್ರಾಮದ ನಿವಾಸಿ ಯಾಗಿದ್ದು, ಹಾಲಿ ಆನೆಕಲ್ ತಾಲೂಕು ಹೆಬ್ಬಗೋಡಿ ತಿರುಪಾಳ್ಯದ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಸುಮಾ(22), ಅದೇ ಗಾರ್ಮೆಂಟ್ಸ್ನ ಕಾರ್ಮಿಕ ತಿಪ್ಪೇಸ್ವಾಮಿ(21) ಮತ್ತು ಬೆಂಗಳೂರಿನ ಆದಿಗೊಂಡನಹಳ್ಳಿಯ ರವಿಕುಮಾರ್(40) ಮೃತಪಟ್ಟವರು. ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 16 ಮಂದಿಯ ತಂಡ ಆನೆಕಲ್ನಿಂದ ಗೋಕರ್ಣ ಪ್ರವಾಸಕ್ಕೆ ಹೋಗಿತ್ತು. ಇಂದು…
ನಗರ ಪಾಲಿಕೆಗೆ ಹಸ್ತಾಂತರವಾಗಿರುವ ಎಲ್ಲಾ ಬಡಾವಣೆಗಳ ಅಭಿವೃದ್ಧಿಗೂ ಕ್ರಮ ವಹಿಸಲು ಮನವಿ
January 22, 2021ಮೈಸೂರು, ಜ.21- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಗರ ಪಾಲಿಕೆಗೆ ಹಸ್ತಾಂತರವಾಗಿರುವ ಎಲ್ಲಾ ಬಡಾವಣೆಗಳ ಅಭಿವೃದ್ಧಿಗೆ ವಿಶೇಷ ಕಾರ್ಯ ಯೋಜನೆ ರೂಪಿಸುವುದು ಸೂಕ್ತ ಎಂದು ಮಾಜಿ ಮೇಯರ್ ಸಂದೇಶ್ಸ್ವಾಮಿ ಅಭಿಪ್ರಾಯಿಸಿದ್ದಾರೆ. ದಶಕಗಳ ಹಿಂದೆ ರಚನೆಯಾಗಿರುವ ವಿಜಯನಗರ 4ನೇ ಹಂತ, ಆರ್.ಟಿ.ನಗರ, ಶಾಂತವೇರಿ ಗೋಪಾಲಗೌಡನಗರ ಸೇರಿದಂತೆ ಇನ್ನಿತರೆ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಆಸಕ್ತಿ ತೋರಿರುವುದು ಸ್ವಾಗತಾರ್ಹ. ಆದರೆ ಇದೇ ರೀತಿ ಮುಡಾ ಅನುಮತಿಯೊಂದಿಗೆ ನಿರ್ಮಾಣವಾಗಿ…
ಅನಾಥ ಗೂಬೆ ಮರಿಗಳ ರಕ್ಷಣೆ
January 22, 2021ಮೈಸೂರು, ಜ.21(ಎಂಕೆ)- ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ 4 ಗೂಬೆ ಮರಿಗಳನ್ನು ಮೈಸೂರಿನ ಸಮೀಪದ ಶಿಂಡೇನಹಳ್ಳಿಯಲ್ಲಿ ರಕ್ಷಿಸಲಾಗಿದೆ. ಇಲ್ಲಿನ ಚಂದ್ರಮೌಳಿ ಎಂಬವರ ತೋಟದಲ್ಲಿ ಗೂಬೆ ಮರಿಗಳು ಪತ್ತೆ ಯಾಗಿವೆ. ಕೆಲ ದಿನಗಳ ಹಿಂದೆ ಯಷ್ಟೇ ತಾಯಿ ಗೂಬೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿತ್ತು. ಬಳಿಕ ಅನಾಥ ವಾದ ಮರಿಗಳಿಗೆ ಆಹಾರ ನೀಡಿ ದರೂ ಪ್ರಯೋಜನವಾಗದ್ದರಿಂದ ಉರಗ ಸಂರಕ್ಷಕ ಸ್ನೇಕ್ ಸೂರ್ಯ ಅವರಿಗೆ ಚಂದ್ರಮೌಳಿ ಮಾಹಿತಿ ನೀಡಿ ದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸ್ನೇಕ್ ಸೂರ್ಯ 4 ಗೂಬೆ ಮರಿಗಳನ್ನು ಸಂರಕ್ಷಿಸಿದ್ದಾರೆ….
ಕೊರೊನಾ ನಡುವೆ ಮೈಸೂರಲ್ಲಿ ಸಾಂಕ್ರಾಮಿಕ ಹೆಪಟೈಟಿಸ್ ಆತಂಕ
January 22, 2021ಮೈಸೂರು,ಜ.21-ಕೊರೊನಾ ನಡುವೆಯೇ ಈಗ ಮೈಸೂರಿನಲ್ಲಿ ಸಾಂಕ್ರಮಿಕ ಹೆಪಟೈಟಿಸ್(ಎ) ಆತಂಕ ಎದುರಾಗಿದೆ. ಒಂದೂವರೆ ತಿಂಗಳಿಂದ ಈ ರೋಗ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಎನ್.ಆರ್. ಮೊಹಲ್ಲಾ, ರಾಜೇಂದ್ರನಗರ ಸೇರಿದಂತೆ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣ ಪತ್ತೆಯಾ ಗುತ್ತಿವೆ. ಈ ಸಾಂಕ್ರಾಮಿಕ ರೋಗ ವಯಸ್ಕರನ್ನೂ ಬಾಧಿಸಲಿದ್ದು, ಅಗತ್ಯವಾಗಿ ಎಚ್ಚರಿಕೆ ವಹಿಸಬೇಕೆಂದು ಮೈಸೂರಿನ ಮಕ್ಕಳ ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಹೆಪಟೈಟಿಸ್ `ಎ’ ರೋಗ ಬಾಧಿಸುತ್ತದೆ. ಈ ರೋಗಿಗಳ ಮಲದಲ್ಲಿರುವ…
ನಡೆದಾಡುವ ದೇವರ ಪುಣ್ಯಸ್ಮರಣೆ ದಿನವನ್ನು `ದಾಸೋಹ ದಿನ’ವಾಗಿ ಆಚರಿಸಲು ಶೀಘ್ರ ಆದೇಶ
January 22, 2021ಸಿದ್ದಗಂಗೆ(ತುಮಕೂರು), ಜ.21- ಭಕ್ತರ ಪಾಲಿಗೆ ನಡೆದಾಡುವ ದೇವರೆನಿಸಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆಯ ದಿನವನ್ನು `ದಾಸೋಹ ದಿನ’ವಾಗಿ ಆಚರಿಸಲು ರಾಜ್ಯ ಸರ್ಕಾರ ಶೀಘ್ರವೇ ಆದೇಶ ಹೊರಡಿಸಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ಶಿವಕುಮಾರ ಶ್ರೀಗಳ ಅಂತರಂಗದ ಶಿಷ್ಯ ಬಿಎಸ್ವೈ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ ಮಠದಲ್ಲಿ ಶಿವ ಕುಮಾರ ಶ್ರೀಗಳ ದ್ವಿತೀಯ ಪುಣ್ಯಸಂಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿ ಯೂರಪ್ಪನವರ ಮುಖ ನೋಡಿದರೆ ಶಿವಕುಮಾರ ಶ್ರೀಗಳ ಮುಖ ಅರಳುತ್ತಿತ್ತು…










