ಮೈಸೂರು, ಅ.22(ಆರ್ಕೆಬಿ)- ನಿಯಮಬಾಹಿರವಾಗಿ ಕಾರ್ಮಿಕರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಸಿಲ್ಕ್ ವೀವಿಂಗ್ ಫ್ಯಾಕ್ಟರಿ ಎಂಪ್ಲಾಯೀಸ್ ಯೂನಿಯನ್ ನೇತೃತ್ವದಲ್ಲಿ ಹೊರಗುತ್ತಿಗೆ ಕಾರ್ಮಿಕರು ಮೈಸೂರು ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಸಿದರು. ನ್ಯಾಯಕ್ಕಾಗಿ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೇ 39 ಕಾರ್ಮಿಕರನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರತಿಭಟನಾನಿರತರು ಘೋಷಣೆ ಕೂಗಿದರು. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಕಾರ್ಮಿಕರನ್ನು ಸೇವೆಗೆ ಮತ್ತೆ ನೇಮಿಸಿಕೊಳ್ಳು ವಂತೆ ಕೆಎಸ್ಐಸಿ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. ನ್ಯಾಯ ಸಿಗದಿದ್ದರೆ ಕುಟುಂಬದ…
ಕವಿಗಳು ಕವನಗಳಲ್ಲಿ ಹೇಳಿದ್ದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ
October 23, 2020ಮೈಸೂರು, ಅ.22(ಆರ್ಕೆಬಿ)- ಕವಿ ಗಳನ್ನು ಜಗತ್ತಿನ ಅನಭಿಷಕ್ತ ಶಾಸಕರು ಎನ್ನ ಲಾಗುತ್ತದೆ. ಹಾಗಾಗಿ ಕವಿಗಳು ತಮ್ಮ ಕವಿತೆ ಗಳ ಮೂಲಕ ಹೇಳಿದ್ದನ್ನು ಸರ್ಕಾರ ಕಿವಿ ಗೊಟ್ಟು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸು ವಂತಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಕವಿ ಗುಬ್ಬಿಗೂಡು ರಮೇಶ್ ಅಭಿಪ್ರಾಯಪಟ್ಟರು. ಮೈಸೂರಿನ ವಿಜಯನಗರ 1ನೇ ಹಂತ ದಲ್ಲಿರುವ ಕಸಾಪ ಜಿಲ್ಲಾ ಭವನದಲ್ಲಿ ಪರಿ ಷತ್ ಜಿಲ್ಲಾ ಘಟಕ ಆಯೋಜಿಸಿದ್ದ 2 ದಿನಗಳ ಮೈಸೂರು ದಸರಾ ಕವಿಗೋಷ್ಠಿಗೆ ಗುರುವಾರ ಚಾಲನೆ ನೀಡಿದ ಅವರು, ಪಂಪನಿಂದ…
ದಸರಾ: ಚಾಮುಂಡಿಬೆಟ್ಟದಲ್ಲಿ ಮೈಸೂರು ಪಾಕ್ ವಿತರಣೆ
October 23, 2020ಮೈಸೂರು, ಅ.22- ಮೈಸೂರಿನ ಅಪೂರ್ವ ಸ್ನೇಹ ಬಳಗದಿಂದ ದಸರಾ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ದೇಶ ವಿದೇಶದಿಂದ ಆಗಮಿಸಿದ ಭಕ್ತಾದಿಗಳಿಗೆ ಮೈಸೂರಿನ ಹಿರಿಮೆ ಮೈಸೂರು ಪೇಟ ಹಾಕಿಕೊಂಡು, ಮೈಸೂರು ಪಾಕ್ ವಿತರಿಸಿ ಮೈಸೂರು ಪಾಕ್ನ ಮಹತ್ವ ಹಾಗೂ ಅದರ ಇತಿಹಾಸ, ಮೈಸೂರಿನ ಸಾಂಸ್ಕೃತಿಕ ಹಿರಿಮೆಯನ್ನು ವಿವರಿಸಲಾಯಿತು. ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಈ ವೇಳೆ ಮಾತನಾಡಿ, ಸಂತೋಷದ ಸಂಕೇತ ಸಿಹಿ. ಆದರೆ ಇದು ಕೆಲವರ ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸಲಾಗುತ್ತಿದೆ. ಆದರೆ ಮೈಸೂರು ಪಾಕ್…
ಭತ್ತದ ಬೆಳೆಗೆ ಕೀಟ, ರೋಗ ಬಾಧೆಗೆ ಮುನ್ನೆಚ್ಚರಿಕಾ ಕ್ರಮ
October 23, 2020ಮೈಸೂರು,ಅ.21-ಮೈಸೂರು ಜಿಲ್ಲೆಯ ಕೆ.ಆರ್.ನಗರ, ತಿ.ನರಸೀಪುರ, ನಂಜನ ಗೂಡು ಮತ್ತು ಮೈಸೂರು ತಾಲೂಕಿನ ಕೆಲವು ಭಾಗಗಳಲ್ಲಿ ಭತ್ತದ ಬೆಳೆಗೆ ಹಳದಿ ಕಾಂಡ ಕೊರಕ, ಗರಿ ಸುತ್ತುವ ಹುಳು, ಬೆಂಕಿ ರೋಗ ಮತ್ತು ದುಂಡಾಣು ಅಂಗಮಾರಿ ರೋಗ ಕಂಡು ಬಂದಿದ್ದು, ಪ್ರಸ್ತುತ ರೋಗ/ಕೀಟಗಳು ಹೆಚ್ಚಾಗಲು ಅನುಕೂಲ ವಾತಾವರಣವಿರುವುದ ರಿಂದ ಅವುಗಳ ನಿರ್ವಹಣೆಗಾಗಿ ಮುಂಜಾಗ್ರತಾ ಕ್ರಮವಾಗಿ ಸಿಂಪಡಣೆ ಕ್ರಮಗಳನ್ನು ಅನುಸರಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಕಾಂಡ ಕೊರಕ ಹುಳು ಇದ್ದಲ್ಲಿ, ಬೆಳವಣಿಗೆಯ ಹಂತದಲ್ಲಿ ಸುಳಿ ಒಣಗುವುದು. ತೆನೆ ಬರುವ ಹಂತದಲ್ಲಿ…
ತಂಬಾಕು ಬೆಳೆಗೆ ಸೂಕ್ತ ಬೆಲೆಗೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ
October 23, 2020ಮೈಸೂರು, ಅ.22(ಆರ್ಕೆಬಿ)- ತಂಬಾಕು ಬೆಳೆಗೆ ಪ್ರತಿಕೆಜಿಗೆ 200-250 ರೂ. ಬೆಲೆ ನೀಡುವಂತೆ ಮತ್ತು ಕಾರ್ಡ್ದಾರ ಬೆಳೆಗಾರರ ಸಮಸ್ಯೆ ಗಳನ್ನು ಪರಿಹರಿಸುವಂತೆ ಆಗ್ರಹಿಸಿ ಪಿರಿಯಾಪಟ್ಟಣ ತಾಲೂ ಕಿನ ಆರ್.ತುಂಗಾ ಗ್ರಾಮದ ಪಿ.ಶ್ರೀನಿವಾಸ್ ಎಂಬುವರು ಡಿಸಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು. ಈ ಬಾರಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕಿಗೆ ಸೂಕ್ತ ಬೆಲೆ ಸಿಗದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. 1 ಕೆಜಿ ತಂಬಾಕು ಬೆಳೆಯಲು ಸುಮಾರು 195ರಿಂದ 215 ರೂ. ಖರ್ಚಾಗುತ್ತಿದೆ. ಆದರೆ ಮಾರುಕಟ್ಟೆ ನೀಡುತ್ತ್ತಿರುವುದು 130ರಿಂದ 170…
ವಿಪಕ್ಷ ನಾಯಕ ಸಿದ್ದರಾಮಯ್ಯ-ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪರಸ್ಪರ ವಾಗ್ಬಾಣ
October 23, 2020ಬೆಂಗಳೂರು, ಅ.22(ಕೆಎಂಶಿ)- ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಅವರ ವಾಕ್ಸಮರ ಬೀದಿಗೆ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ `ಒಬ್ಬ ಕಾಡು ಮನುಷ್ಯ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದರೆ, ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಅವರನ್ನು `ವಿದೂಷಕ’ ಎಂದು ಬಣ್ಣಿಸಿದೆ. ಉಪಚುನಾವಣೆಯ ನಂತರ ಹುಲಿಯಾ (ಸಿದ್ದರಾಮಯ್ಯ) ಕಾಡಿಗೆ ಹೋಗುತ್ತಾರೆ ಎಂದು ಕಟೀಲು ಜರಿದಿದ್ದರು. ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಕಟೀಲ್ `ಒಬ್ಬ ಕಾಡು…
ಇಂದಿನಿಂದ ಡಿಆರ್ಸಿ ಮಲ್ಟಿಫ್ಲೆಕ್ಸ್ನಲ್ಲಿ ದಸರಾ ವಿಶೇಷ ಚಿತ್ರ ಪ್ರದರ್ಶನ
October 23, 2020ಮೈಸೂರು, ಅ.22(ಪಿಎಂ)- ಬೆಳ್ಳಿತೆರೆ ತೆರೆಯಲು ಅವಕಾಶ ಸಿಕ್ಕರೂ ಮೈಸೂರಿನ ಚಿತ್ರಮಂದಿರಗಳು ಸಿನಿಮಾ ಪ್ರದರ್ಶನಕ್ಕೆ ಮುಂದಾಗಿಲ್ಲ. ಒಟ್ಟು ಆಸನ ಸಾಮಥ್ರ್ಯದ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿ ತೆರೆಯಲು ಸರ್ಕಾರ ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ನಷ್ಟದ ಆತಂಕದಲ್ಲಿ ಬೆಳ್ಳಿತೆರೆ ತೆರೆದಿಲ್ಲ. ಈ ನಡುವೆ ಮೈಸೂರಿನ ಜಯಲಕ್ಷ್ಮೀಪುರಂನ ಡಿಆರ್ಸಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರ ಅ.15ರಿಂದ ಪ್ರದರ್ಶನಕ್ಕೆ ತೆರೆದು ಕೊಂಡಿದೆ. ಜೊತೆಗೆ ಮೈಸೂರು ದಸರಾ ಮಹೋತ್ಸವ ಅಂಗ ವಾಗಿ ವಿಶೇಷ ಸಿನಿಮಾ ಪ್ರದರ್ಶನ ಏರ್ಪಡಿಸಿ ಮೈಸೂರಿಗರು ಹಾಗೂ ದಸರಾ ಹಿನ್ನೆಲೆಯಲ್ಲಿ ಭೇಟಿ ನೀಡಿರುವ…
ದೇಶದ ಪ್ರಗತಿಯಲ್ಲಿ ಕುರುಬ ಸಮಾಜದ ಪಾತ್ರ ಪರಿಚಯಿಸುವ ಉದ್ದೇಶ
October 23, 2020ಮೈಸೂರು, ಅ.22(ಆರ್ಕೆಬಿ)- ಸಂಸ್ಕøತಿ, ಪರಂಪರೆ, ದೇಶದ ಬೆಳವಣಿಗೆಯಲ್ಲಿ ಕುರುಬ ಸಮುದಾಯದ ಪಾತ್ರವನ್ನು ರಾಷ್ಟ್ರಕ್ಕೆ ಪರಿ ಚಯಿಸುವ ಪ್ರಮುಖ ಉದ್ದೇಶದಿಂದಲೇ ಶೆಫರ್ಡ್ ಇಂಡಿಯಾ ಇಂಟರ್ನ್ಯಾಷ ನಲ್ ಸಂಘಟನೆ ಸ್ಥಾಪಿಸಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ತಿಳಿಸಿದರು. ಮೈಸೂರಿನ ಸಿದ್ದಾರ್ಥನಗರದ ಕನಕ ಮಠದ ಸಭಾಂಗಣದಲ್ಲಿ ಶೆಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ನ ಮೈಸೂರು ಜಿಲ್ಲಾ ಮಹಿಳಾ ಘಟಕದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುರುಬ ಸಮಾಜದ ಮಹಿಳೆ ರಾಷ್ಟ್ರದ ಧಾರ್ಮಿಕ, ರಾಜಕೀಯ ಜೀವದ ಕೇಂದ್ರ ಬಿಂದುವಾಗಿ…
ಔಷಧಿ ವ್ಯಾಪಾರಿಗಳಿಗೂ ಮೊದಲಿಗೇ ಕೋವಿಡ್ ಲಸಿಕೆ ನೀಡಲು ಮನವಿ
October 23, 2020ಮೈಸೂರು, ಅ.22(ಎಂಟಿವೈ)- ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡಲು ನಿರ್ಧರಿಸಿರುವ ಸರ್ಕಾರ, ಔಷಧಿ ವ್ಯಾಪಾರಿಗಳನ್ನೂ ಆರೋಗ್ಯ ಕಾರ್ಯಕರ್ತರೆಂದು ಪರಿಗಣಿಸಿ ಮೊದಲ ಹಂತದಲ್ಲೇ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ವ್ಯಾಪಾರಿ ಗಳ ಸಂಘವು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಮನವಿ ಸಲ್ಲಿಸಿದೆ. ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವ ರನ್ನು ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ…
ಅರಮನೆ ಆವರಣದಲ್ಲಿ ಮೊಳಗಿದ ಪೊಲೀಸ್ ಬ್ಯಾಂಡ್
October 23, 2020ಮೈಸೂರು, ಅ.22(ಎಸ್ಪಿಎನ್)- ‘ಕಾಯೌ ಶ್ರೀ ಗೌರಿ’ ಹಾಗೂ `ಶ್ರೀ ಮಹಾ ಗಣಪತಿಂ’ ಮತ್ತು ಟೋನಿ ಮ್ಯಾಥ್ಯೂ ಸಂಯೋಜನೆಯ ಫೈನಲ್ ಕೌಂಟ್ಡೌನ್’ ನುಡಿಸಿದ ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ಪೊಲೀಸ್ ಸಮೂಹ ವಾದ್ಯಮೇಳ ಕಲಾರಸಿಕರÀ ಮನಸೂರೆಗೊಂಡಿತು. ದಸರಾ ಮಹೋತ್ಸವದಂಗವಾಗಿ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಗುರು ವಾರ ಆರನೇ ದಿನದÀ ಕಾರ್ಯಕ್ರಮದಲ್ಲಿ ಸಮೂಹ ವಾದ್ಯಮೇಳದಲ್ಲಿ ಶಿಸ್ತುಬದ್ಧವಾಗಿ ನುಡಿಸಿದ ಪೆÇಲೀಸ್ ವಾದ್ಯವೃಂದವು ಜನಮೆಚ್ಚುಗೆ ಗಳಿಸಿತು. ನಂತರ ಇಮ್ಯಾ ನುಯೆಲ್ ಫ್ರಾನ್ಸಿಸ್ ಮತ್ತು ಟೋನಿ ಮ್ಯಾಥ್ಯೂ ತಂಡದಿಂದ ವಯೊಲಿನ್, ಪಿಯಾನೊ ವಾದನ ಮೆಚ್ಚುಗೆ…










