ಬೆಂಗಳೂರು, ಅ. 3(ಕೆಎಂಶಿ)- ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾ ಜಿಕ, ಆರ್ಥಿಕ ಹಾಗೂ ಶೈಕ್ಷ ಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಸ್ವೀಕಾರ ಮಾಡಬೇಕು ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ಹಿಂದು ಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವರದಿ ಸ್ವೀಕಾರ ಮಾಡಲು ಸರ್ಕಾರ ಹಿಂದೇಟು ಹಾಕಿದರೆ ಒಕ್ಕೂಟ ಬೀದಿಗಿಳಿದು ಹೋರಾಟ ನಡೆಸು ವುದು ಅನಿವಾರ್ಯವಾಗುತ್ತದೆ. ಈ…
ಅಧಿಕಾರಿಗಳೊಂದಿಗೆ ಮನೆ ಬಾಗಿಲಿಗೆ ಬಂದ ಜಿಟಿಡಿ ಮನವಿಗೆ ನಿವಾಸಿಗಳ ಭಾರೀ ಸ್ಪಂದನೆ: ಹಲವರಿಂದ ಸ್ವಯಂ ತೆರಿಗೆ ಪಾವತಿ
October 4, 2020ಮೈಸೂರು, ಅ.3 (ಆರ್ಕೆ)- ಕೊರೊನಾ ಸೋಂಕು ಹರಡುವ ಭೀತಿಯಿಂದ ಜನರು ಆಸ್ತಿ ತೆರಿಗೆ ಪಾವತಿಸಲು ಮೈಸೂರು ಮಹಾ ನಗರ ಪಾಲಿಕೆಯ ವಲಯ ಕಚೇರಿ ಕೌಂಟರ್ಗಳಿಗೆ ತೆರಳಲು ಹಿಂದೇಟು ಹಾಕುತ್ತಿರುವ ಕಾರಣ ಅವರ ಅನುಕೂಲ ಕ್ಕಾಗಿ ಇದೀಗ ಅಧಿಕಾರಿಗಳೇ ಜನರ ಬಳಿಗೆ ಹೋಗಿ ತೆರಿಗೆ ವಸೂಲಿ ಮಾಡುವ ವಿನೂತನ ಪ್ರಯೋಗ ಆರಂಭಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-3ರ ವ್ಯಾಪ್ತಿಯಲ್ಲಿ ಬರುವ ರಾಮಕೃಷ್ಣನಗರದ ಸಾಲುಮರದ ತಿಮ್ಮಕ್ಕ ಪಾರ್ಕ್ನಲ್ಲಿ ಇಂದಿನಿಂದ `ಪಾಲಿಕೆ ನಡೆ-ಜನತೆಯ ಕಡೆ’ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದು, ಚಾಮುಂಡೇಶ್ವರಿ…
ಉ.ಪ್ರ ಸರ್ಕಾರ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ಮೈಸೂರು ನಗರ-ಜಿಲ್ಲಾ ಘಟಕದಿಂದ ರಾಷ್ಟ್ರಪತಿಗೆ ಪತ್ರ
October 4, 2020ಮೈಸೂರು, ಅ.3(ಪಿಎಂ)- ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ಹಾಗೂ ಉತ್ತರ ಪ್ರದೇಶದ ಪರಿಶಿಷ್ಟ ಜಾತಿ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಅಲ್ಲಿನ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮೈಸೂರು ನಗರ ಹಾಗೂ ಜಿಲ್ಲಾ ಘಟಕದ ನಿಯೋಗ ಶನಿವಾರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಗಳಿಗೆ ಮನವಿಪತ್ರ ಸಲ್ಲಿಸಿತು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಭೇಟಿ ಮಾಡಿ 6 ಪುಟಗಳ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು….
ಜಾತಿವಾರು ಜನಗಣತಿ ವರದಿ ಬಿಡುಗಡೆಗೆ ಆಗ್ರಹಿಸಿ ಮೈಸೂರಲ್ಲಿ ಸಹಿಸಂಗ್ರಹ ಅಭಿಯಾನ
October 4, 2020ಮೈಸೂರು, ಅ.3(ಎಂಟಿವೈ)- ರಾಜ್ಯದಲ್ಲಿ ವರ್ಷಗಳ ಹಿಂದೆ ನಡೆಸಿದ ಜಾತಿವಾರು ಜನಗಣತಿ ಹಾಗೂ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ಮೈಸೂರಿನಲ್ಲಿ ಶನಿವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು. ಜಾತಿವಾರು ಜನಗಣತಿ ವರದಿ ಜಾರಿಗೆ ಒತ್ತಾಯಿಸಿ ಪುರಭವನದ ಆವರಣದಲ್ಲಿ ರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪ ಡಿಸಿದರು. ಸಹಿ ಸಂಗ್ರಹ ಅಭಿಯಾನಕ್ಕೆ ಪ್ರೊ.ಕೆ.ಎಸ್.ಭಗವಾನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಹಿಂದೆ…
ಎಸ್ಪಿಬಿ ಸ್ಮರಣಾರ್ಥ ಗಾನ ನಮನ
October 4, 2020ಮೈಸೂರು, ಅ.3(ವೈಡಿಎಸ್)- ಸ್ವರ ಸಾಮ್ರಾಟ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು `ಮುಂದಿನ ಜನ್ಮ ಇದ್ದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ಹೇಳಿದ್ದು ಕೇಳಿ ಸಂತೋಷವಾಯಿತು. ಯಾವುದೇ ಗಾಯಕ ರನ್ನೂ ಅವರಿಗೆ ಸಾಟಿ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು. ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಜನಜಾಗೃತಿ ಸೇವಾ ಟ್ರಸ್ಟ್, ಇಂಡಿಯನ್ ಟಿವಿ ಮತ್ತು ಬಸವ ಮಾರ್ಗ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ಆಯೋಜಿಸಿದ್ದ `ಗಾನನಮನ’ ಕಾರ್ಯ ಕ್ರಮದಲ್ಲಿ ಎಸ್ಪಿಬಿ ಅವರ ಭಾವಚಿತ್ರಕ್ಕೆ ಪುಷ್ಪ…
ಇಂದು ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಲು ನಿಷೇಧಾಜ್ಞೆ
October 4, 2020ಮೈಸೂರು, ಅ3- ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಯು ಅ.4ರಂದು ಮೈಸೂರು ನಗರದ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ಮೈಸೂರು ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಮೈಸೂರು ನಗರದ ವಿ.ವಿ.ಮೊಹಲ್ಲಾದಲ್ಲಿ ರುವ ನಿರ್ಮಲ ಪ್ರೌಢಶಾಲೆ, ಕೃಷ್ಣಮೂರ್ತಿಪುರಂನಲ್ಲಿರುವ ಎಂ.ಎಂ.ಕೆ ಅಂಡ್ ಎಸ್ಡಿಎಂ ಬಾಲಕಿಯರ ಪಿ.ಯು ಕಾಲೇಜು, ಮರಿಮಲ್ಲಪ್ಪ ಪಿ.ಯು ಕಾಲೇಜು, ಮಹಾರಾಜ ಸರ್ಕಾರಿ ಪಿ.ಯು ಕಾಲೇಜು, ಸರ್ಕಾರಿ ಆದರ್ಶ ವಿದ್ಯಾಲಯ,…
ಹೋಟೆಲ್ ಪೈ ವಿಸ್ತಾದಲ್ಲಿ ರಿಯಾಯಿತಿ ದರದಲ್ಲಿ ಆಕರ್ಷಕ ಉಡುಪುಗಳ ಮಾರಾಟ
October 4, 2020ಮೈಸೂರು, ಅ.3-ಮೈಸೂರು-ನೀಲಗಿರಿ ರಸ್ತೆಯಲ್ಲಿರುವ ಹೋಟೆಲ್ ಪೈ ವಿಸ್ತಾದಲ್ಲಿ ಆಕರ್ಷಕ ಉಡುಪುಗಳ ಭಾರೀ ರಿಯಾಯಿತಿ ಹಾಗೂ ಮಾರಾಟ ಮೇಳ ಏರ್ಪಡಿಸಲಾಗಿದೆ. ಇಂದಿನಿಂದ ಆರಂಭವಾಗಿರುವ ಈ ಮೇಳ ಅ.6ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದ್ದು, ವಿವಿಧ ಪ್ರಕಾರಗಳ ಮಹಿಳೆಯರ ಮತ್ತು ಪುರುಷರ ಉಡುಪುಗಳು, ಮಕ್ಕಳ ಬಟ್ಟೆಗಳು, ಶರ್ಟ್, ಟಿ-ಶರ್ಟ್, ಪ್ಯಾಂಟ್, ಟಾಪ್, ವೆಸ್ಟರ್ನ್ ಬಟ್ಟೆ, ಕುರ್ತಿ, ಹೆಣ್ಣು ಮಕ್ಕಳ ಒಳ ಉಡುಪುಗಳು, ಕಾಟನ್, ಲೆನಿನ್, ಜಾರ್ಜೆಟ್, ಶಿಫಾನ್ ಸೀರೆಗಳು, ರಾಜಾಸ್ಥಾನ್ ಡಿಸೈನರ್ ಹಾಗೂ ವಿವಿಧ ಕುರ್ತಿಗಳು ಲಭ್ಯ ವಿದೆ….
ಉ.ಪ್ರ. ಅತ್ಯಾಚಾರ ಪ್ರಕರಣ ಅಪರಾಧಿಗಳಿಗೆ ಗಲ್ಲುಶಿಕ್ಷೆಗೆ ಆಗ್ರಹಿಸಿ ಜನಸ್ಪಂದನ ಪ್ರತಿಭಟನೆ
October 4, 2020ಮೈಸೂರು, ಅ.3(ವೈಡಿಎಸ್)- ಉತ್ತರ ಪ್ರದೇಶದಲ್ಲಿ ಮನೀಶಾ ಎಂಬ ಯುವತಿಯ ಮೇಲೆ ಅತ್ಯಾಚಾರ ಎಸಗಿ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಪಿಜಿ ಜನಸ್ಪಂದನ ಫೌಂಡೇಷನ್ ನಿಂದ ಸ್ವಾತಂತ್ರ್ಯ ಹೋರಾಟ ಗಾರ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಗಾಂಧಿ ಜಯಂತಿ ಪ್ರಯುಕ್ತ ಪಿಜಿ ಜನಸ್ಪಂದನ ಫೌಂಡೇಷನ್ ಸದಸ್ಯರು ಉದ್ಯಾನದಲ್ಲಿರುವ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮನೀಶಾ ಮೇಲೆ ಅತ್ಯಾಚಾರ ಎಸಗಿ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ವಕೀಲರು ಇಂತಹ ದುಷ್ಕರ್ಮಿಗಳ ಪರ ವಕಾಲತು…
ಮೈಸೂರಲ್ಲಿ ವಿವಿಧ ಸಂಘಟನೆಗಳ ಸರಣಿ ಪ್ರತಿಭಟನೆ
October 4, 2020ಮೈಸೂರು, ಅ. 3(ಆರ್ಕೆ)- ಉತ್ತರಪ್ರದೇಶ ದಲ್ಲಿ ಮಹಿಳೆಯರ ಮೇಲಿನ ದೈಹಿಕ ದೌರ್ಜನ್ಯ ಖಂಡಿಸಿ ದಸಂಸ, ಬಿಎಸ್ಪಿ, ಎಬಿವಿಪಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಇಂದು ಮೈಸೂರಿನಲ್ಲಿ ಸರಣಿ ಪ್ರತಿಭಟನೆ ನಡೆಸಿದರು. ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾಜಿ ಮಹಾಪೌರ ಪುರುಷೋತ್ತಮ್ ನೇತೃತ್ವ ದಲ್ಲಿ ಮೈಸೂರಿನ ಗಾಂಧಿಸ್ಕ್ವೇರ್ ಮತ್ತು ಪುರ ಭವನ ಆವರಣದಲ್ಲಿ ಪ್ರತಿಭಟನೆ ನಡೆಸಿದ ಸಂಘ ಟನೆಗಳ ಕಾರ್ಯಕರ್ತರು, ಅತ್ಯಾಚಾರಿಗಳನ್ನು ಗಲ್ಲಿ ಗೇರಿಸಿ ಅವರ ಆಸ್ತಿಗಳನ್ನು ಉತ್ತರ ಪ್ರದೇಶ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಅತ್ಯಾಚಾರಿ ಗಳನ್ನು ಬೆಂಬಲಿಸುತ್ತಿರುವ…
ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆಗಳ ಸಹಕಾರ ಅಗತ್ಯ
October 4, 2020ಮೈಸೂರು,ಅ.3-ಕೋವಿಡ್ ನಿಯಂತ್ರಣಕ್ಕೆ ಸರ್ಕಾ ರದ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಹಕಾರ ಹಾಗೂ ಹೊಂದಾಣಿಕೆ ಅಗತ್ಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ಅವರು ರಾಜೇಂದ್ರ ಶ್ರೀಗಳ 105ನೇ, ಮಹಾತ್ಮ ಗಾಂಧೀಜಿಯವರ 151ನೇ ಹಾಗೂ ಲಾಲ್ ಬಹ ದ್ದೂರ್ ಶಾಸ್ತ್ರೀಯವರ 116ನೆಯ ಜಯಂತಿ ಪ್ರಯುಕ್ತ ಜೆಎಸ್ಎಸ್ ಎಹೆಚ್ಇಆರ್ನಿಂದ ಏರ್ಪಡಿಸಲಾಗಿದ್ದ ಲೀಡಿಂಗ್ ಕೋವಿಡ್-19 ಮ್ಯಾನೇಜ್ಮೆಂಟ್- ಲೆಸನ್ಸ್ ಅಂಡ್ ಲನ್ರ್ಸ್ ವಿಷಯದ ವೆಬಿನಾರ್ನ್ನು ಮೈಸೂ ರಿನ ಸುತ್ತೂರು ಶಾಖಾಮಠದಿಂದ ಉದ್ಘಾಟಿಸಿದರು. ಮೈಸೂರಿನಲ್ಲಿ ಕೋವಿಡ್ ನಿಯಂತ್ರಣ ಬಹಳ ಕಷ್ಟವಾಗುತ್ತಿದೆ, ಅಕ್ಕ-ಪಕ್ಕದ ಜಿಲ್ಲೆಯವರು…










