ಮೈಸೂರು, ಮಾ.11 (ವೈಡಿಎಸ್)- ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪುಸ್ತಕ ಗಳನ್ನು ಮೋಡದ ಮರೆಯಲ್ಲಿ ಇಡು ವಂತಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತ ಕುಮಾರ್ ಹೇಳಿದರು. ಜೆಎಲ್ಬಿ ರಸ್ತೆಯ ರೋಟರಿ ಸಭಾಂ ಗಣದಲ್ಲಿ ಕನ್ನಡ ಸಾಹಿತ್ಯ ಕಲಾಕೂಟ, ಇನೊವೇಟಿವ್, ಪ್ರೇಮಾ ಪ್ರಕಾಶನ, ಮಹಿಮಾ ಪ್ರಕಾಶನದ ಸಂಯುಕ್ತಾಶ್ರಯದ ಕಾರ್ಯಕ್ರಮದಲ್ಲಿ ಮೈಲಹಳ್ಳಿ ರೇವಣ್ಣ ಸಂಪಾದಿತ ಜಿ.ಎಸ್.ಭಟ್ಟರ `ಸಾಹಿತ್ಯಾವ ಲೋಕನ’, ಡಾ.ಎಸ್.ಎನ್.ಹೆಗಡೆ ಅವರ `ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರ ಸ್ಕøತರು ಸಂಪುಟ-1’ ಹಾಗೂ `ಕಳೆದು ಹೋದ ಕೊಂಡಿ ಮತ್ತು ಕೆಲವು…
ಮೈಸೂರು ಜೆಎಸ್ಎಸ್ ವೈದ್ಯಕೀಯ ಕಾಲೇಜಿನ `ಸಿಮ್ಯುಲೇಶನ್ ಕೇಂದ್ರ’ ಮಾ.14ಕ್ಕೆ ಉದ್ಘಾಟನೆ
March 12, 2020ಮೈಸೂರು, ಮಾ.11(ಪಿಎಂ)- ವೈದ್ಯ ಕೀಯ ಶಿಕ್ಷಣದಲ್ಲಿ ಪರಿಣಾಮಕಾರಿ ಪ್ರಾಯೋ ಗಿಕ ಕಲಿಕೆಗೆ ನೆರವಾಗುವ `ವೈದ್ಯಕೀಯ ಸ್ಕಿಲ್ ಅಂಡ್ ಸಿಮ್ಯುಲೇಶನ್ ಸೆಂಟರ್’ ಅನ್ನು ಮೈಸೂರಿನ ಎಂಜಿ ರಸ್ತೆಯ ಹಳೇ ಜೆಎಸ್ಎಸ್ ಆಸ್ಪತ್ರೆಯ 3ನೇ ಅಂತಸ್ತಿನಲ್ಲಿ ಸ್ಥಾಪಿಸ ಲಾಗಿದೆ. ಇದಕ್ಕಾಗಿ ಕಟ್ಟಡ ಹೊರತಾಗಿ 22 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಪರಿಣಾಮಕಾರಿ ಕಲಿಕೆಗೆ ಹಾಗೂ ವೃತ್ತಿಪರರ ಜ್ಞಾನ ವಿಸ್ತರಣೆಗೆ ಅನು ಕೂಲವಾಗಲೆಂದು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ವತಿಯಿಂದ 12 ಸಾವಿರ…
ಮೈಸೂರು ತಾಲೂಕಿನ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಹದ್ದುಬಸ್ತು ಆಂದೋಲನ ಆರಂಭ
March 12, 2020ಮೈಸೂರು,ಮಾ.11(ಆರ್ಕೆ)- ಮೈಸೂರು ತಾಲೂಕಿನ 15 ಗ್ರಾಮಗಳಲ್ಲಿ ಸರ್ಕಾರಿ ಜಮೀನುಗಳನ್ನು ಅಳತೆ ಮಾಡಿ ಹದ್ದುಬಸ್ತು ಗಡಿ ಗುರುತಿಸುವ ಆಂದೋಲನ ಇಂದು ಆರಂಭ ವಾಯಿತು. ತಹಸೀಲ್ದಾರ್ ರಕ್ಷಿತ್ ತುರ್ತು ಜ್ಞಾಪನ ನೀಡಿದ ಹಿನ್ನೆಲೆ ಯಲ್ಲಿ ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್ಪೆಕ್ಟರ್, ವಿಲೇಜ್ ಅಕೌಂಟೆಂಟ್ ಹಾಗೂ ಸರ್ವೆಯರ್ಗಳು ಇಂದು ಜಂಟಿಯಾಗಿ ಅಳತೆ ಮಾಡಿ ಸರ್ಕಾರಿ ಜಮೀನು, ಕೆರೆ, ಕಟ್ಟೆ, ಓಣಿ, ಸ್ಮಶಾನ, ಶಾಲಾ ಪ್ರದೇಶ, ರಸ್ತೆಗಳ ಹದ್ದುಬಸ್ತು ಗಡಿ ಗುರುತಿಸಿ ಕಲ್ಲು ನೆಟ್ಟರು. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಧನಗಳ್ಳಿ, ಮಾವಿನಹಳ್ಳಿ, ಚಿಕ್ಕಕಾನ್ಯ,…
ಕವಿತೆ ಅರ್ಥವಾಗದಿರಲು ಓದಿನ ಕೊರತೆ ಕಾರಣ
March 12, 2020ಮೈಸೂರು, ಮಾ.11(ಆರ್ಕೆಬಿ)- ಕವಿ ಏಕಾಗ್ರತೆಯಿಂದ ಕವಿತೆ ಸೃಷ್ಟಿಸಿರುತ್ತಾನೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ನಮ್ಮಲ್ಲಿನ ಓದಿನ, ಆಸಕ್ತಿಯ ಕೊರತೆ ಅಡ್ಡಿಯಾಗುತ್ತದೆ ಎಂದು ವಿಮರ್ಶಕ ಡಾ.ಸಿ.ನಾಗಣ್ಣ ಅಭಿಪ್ರಾಯಪಟ್ಟರು. ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯ ಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ `ಪ್ರಾಯೋಗಿಕ ವಿಮರ್ಶೆ’ ಕಾರ್ಯಾ ಗಾರಕ್ಕೆ ಬುಧವಾರ ಚಾಲನೆ ನೀಡಿದ ಅವರು, ಕವಿತೆಯನ್ನು ನಾವು ಒಂದೊಂದು ಬಗೆಯಲ್ಲಿ ಅರ್ಥಮಾಡಿಕೊಳ್ಳುತ್ತೇವೆ. ಆಳವಾದ ಅಭ್ಯಾಸ ನಡೆಸಿ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸುವ ರೀತಿಯೇ ಕವಿತೆಯನ್ನು ಅರ್ಥೈಸಿಕೊಳ್ಳಲು ಹೆಚ್ಚಿನ ತರಬೇತಿ ಅವಶ್ಯ. ಪ್ರತಿಪದದ ತರ್ಕಬದ್ಧ ಅರ್ಥ ಗ್ರಹಿಕೆ,…
ಮಹಿಳೆಯರಿಗಿನ್ನೂ ಸಿಗದ ಸೂಕ್ತ ಸ್ಥಾನಮಾನ: ವಿಷಾದ
March 12, 2020ಮೈಸೂರು, ಮಾ.11(ಆರ್ಕೆಬಿ)- ಮಹಿಳೆಯರು ನ್ಯಾಯಕ್ಕಾಗಿ ಅಲೆವ ಸ್ಥಿತಿ, ಅಸಮಾ ನತೆ, ಹೆಣ್ಣು ಭ್ರೂಣ ಹತ್ಯೆ ಘಟನೆಗಳು ಮಹಿಳೆಯರಿಗಿನ್ನೂ ಸೂಕ್ತ ಗೌರವ, ಸ್ಥಾನಮಾನ ದೊರೆತಿಲ್ಲ ಎಂಬುದನ್ನು ತಿಳಿಸುತ್ತವೆ ಎಂದು ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯಲ್ಲಿ ಮಾತನಾಡಿ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಆತ್ಮಹತ್ಯೆ, ಕೊಲೆ ಪ್ರಕರಣ ನಿರಂತರವಾಗಿವೆ. ಎಲ್ಲಿದೆ ಮಹಿಳೆಯರ ಸಬಲೀಕರಣ? ಎಂದು ಪ್ರಶ್ನಿಸಿದರು. ನ್ಯಾಯಾಂಗ ವ್ಯವಸ್ಥೆ ಬದಲಾಗದೇ ಮಹಿಳೆಯರ ರಕ್ಷಣೆ…
ವರುಣಾ ಕೆರೆಗೆ ಹಾರಿ ಯುವಕ ಆತ್ಮಹತ್ಯೆ
March 12, 2020ಮೈಸೂರು, ಮಾ. 11(ಆರ್ಕೆ)- ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೋರ್ವ ವರುಣಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಮೈಸೂರು ತಾಲೂಕು, ಭುಗತ ಗಳ್ಳಿ ನಿವಾಸಿ ಬಸವಣ್ಣ(28) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಂಗಳವಾರ ಮಧ್ಯಾಹ್ನ ಮನೆಯಿಂದ ಹೊರಟಿದ್ದ ಆತ ಕೆಲ ಸ್ನೇಹಿತರಿಗೆ ಫೋನ್ ಮಾಡಿ ಬೇಸರ ವ್ಯಕ್ತಪಡಿಸಿದ್ದ. ಅಂದು ರಾತ್ರಿ ಮನೆಗೆ ಬಾರದಿದ್ದ ಬಸವಣ್ಣನ ಮೃತದೇಹ ವರುಣಾ ಕೆರೆಯಲ್ಲಿ ಪತ್ತೆಯಾಯಿತು. ಸಾರ್ವಜನಿಕರು ನೀಡಿದ ದೂರಿನನ್ವಯ ಸ್ಥಳಕ್ಕೆ ಧಾವಿಸಿದ ವರುಣಾ ಠಾಣೆ ಪೊಲೀಸರು, ಮಹಜರು ನಡೆಸಿ ಮೃತದೇಹ…
ಮೈಸೂರು ರಂಗಾಯಣ ಕ್ರಿಯಾಶೀಲವಾಗಿದೆ: ಅಡ್ಡಂಡ ಕಾರ್ಯಪ್ಪ
March 11, 2020ಏ.11ರಿಂದ ಚಿಣ್ಣರ ಮೇಳ ರಂಗ ತರಬೇತಿ ಶಿಬಿರ ವಾರಾಂತ್ಯದಲ್ಲಿ `ಗಾಂಧಿ ವರ್ಸಸ್ ಗಾಂಧಿ’ ಮೈಸೂರು, ಮಾ.10(ಎಂಟಿವೈ)- ಮೈಸೂರು ರಂಗಾಯಣ ಕ್ರಿಯಾಶೀಲವಾ ಗಿದ್ದು, ನಿರಂತರ ರಂಗಪ್ರಯೋಗಗಳ ಮಾಡುವ ಮೂಲಕ ಗ್ರಾಮೀಣ ಪ್ರದೇಶ ಸೇರಿದಂತೆ ರಾಜ್ಯದ ಮೂಲೆ ಮೂಲೆಗೂ ತಲುಪಿದೆ ಎಂದು ರಂಗಾಯಣದ ನಿರ್ದೇ ಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ. ರಂಗಾಯಣದ ಶ್ರೀರಂಗ ಸಭಾಂಗಣ ದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಆಧುನಿಕ ಕನ್ನಡ ರಂಗಭೂಮಿ ಕಟ್ಟುವ ನಿಟ್ಟಿನಲ್ಲಿ ಮೈಸೂರು ರಂಗಾಯಣ ವಿವಿಧ ಕಾರ್ಯ ಕ್ರಮ ರೂಪಿಸಿದೆ….
ಮುಂದಿನ ಹಾದಿ ಕಂಡುಕೊಳ್ಳುವುದೇ ಮಹಿಳಾ ದಿನಾಚರಣೆಯ ಉದ್ದೇಶ
March 11, 2020ಮೈಸೂರು, ಮಾ.10(ಆರ್ಕೆಬಿ)- ಮಹಿಳಾ ದಿನಾಚರಣೆ ಎಂದರೆ ನಮ್ಮ ಮೌನ ಮುರಿ ಯುವ ದಿನ. ನಮ್ಮ ಹಕ್ಕುಗಳನ್ನು ಸ್ಥಾಪಿ ಸುವ ದಿನ. ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ದಿನ. ಮುಂದಿನ ಹಾದಿ ಕಂಡುಕೊಳ್ಳುವ ದಿನ ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ವನಜ ವೆಮ್ ಅಭಿಪ್ರಾಯಪಟ್ಟರು. ರಾಜ್ಯ ನಗರಾಭಿವೃದ್ಧಿ ಇಲಾಖೆ ಮತ್ತು ಅಭಿಯಾನ ನಿರ್ದೇಶನಾಲಯ, (ಡೇ ನಲ್ಮ್) ರಾಷ್ಟ್ರೀಯ ನಗರ ಜೀವನೋಪಾಯ ಇಲಾಖೆ ಜಂಟಿ ಆಶ್ರಯದಲ್ಲಿ ಮೈಸೂರು ಪುರಭವನ ಸಭಾಂಗಣದಲ್ಲಿ ಮಂಗಳ ವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ…
ಮಹಿಳಾ ದಿನಾಚರಣೆಯಲ್ಲಿ ಕೊರೊನಾ, ಕ್ಯಾನ್ಸರ್ ಬಗ್ಗೆ ಜಾಗೃತಿ
March 11, 2020ಮಹಿಳೆಯರು ಜಾಗೃತರಾದರೆ ಯಾವ ರೋಗವು ಸುಳಿಯದು ಮೈಸೂರು, ಮಾ.10(ಆರ್ಕೆಬಿ)- ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗ ವಾಗಿ ಮೈಸೂರಿನ ಓಡಿಪಿ ಸಂಸ್ಥೆ ಮಂಗಳ ವಾರ ಸಂತ ಫಿಲೋಮಿನಾ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋ ಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾ ಚರಣೆ ಕೊರೋನಾ ವೈರಸ್ ಮತ್ತು ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿ ಹೊರ ಹೊಮ್ಮಿತು. ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಮಹಿಳೆ ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಚೀಫ್…
ನಗರ ಬಸ್ ನಿಲ್ದಾಣ ಬಳಿ ಸಬ್ ವೇಗೆ ಪಾಲಿಕೆ ಚಿಂತನೆ
March 11, 2020ಮೇಯರ್ ತಸ್ನೀಂ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಸಬ್ ವೇಗಾಗಿ ಬಜೆಟ್ನಲ್ಲಿ 3 ಕೋಟಿ ರೂ. ಮೀಸಲಿಡಲು ಸ್ಥಳೀಯ ಕಾರ್ಪೊರೇಟರ್ ಬಿ.ವಿ.ಮಂಜುನಾಥ್ ಮನವಿ ಮೈಸೂರು, ಮಾ.10(ಎಸ್ಬಿಡಿ)- ಹೆಚ್ಚು ಜನ-ವಾಹನ ದಟ್ಟಣೆಯ ಮೈಸೂರು ನಗರ ಬಸ್ ನಿಲ್ದಾಣದ ಬಳಿ ಸಬ್ ವೇ ನಿರ್ಮಾಣಕ್ಕೆ ನಗರಪಾಲಿಕೆ ಚಿಂತನೆ ನಡೆಸಿದೆ. ಅಂಬಾವಿಲಾಸ ಅರಮನೆ ಬ್ರಹ್ಮಪುರಿ ದ್ವಾರದ ಕಡೆಯಿಂದ ಜಗನ್ಮೋಹನ ಅರಮನೆ ರಸ್ತೆ ಕಡೆಗೆ ಸಯ್ಯಾಜಿರಾವ್ ರಸ್ತೆಯಲ್ಲಿ ಸಬ್ ವೇ ನಿರ್ಮಾಣಕ್ಕೆ ಒತ್ತಾಯವಿರುವ ಹಿನ್ನೆಲೆಯಲ್ಲಿ ಮಂಗಳ ವಾರ ಮೇಯರ್ ತಸ್ನೀಂ ಅವರ ನೇತೃತ್ವ ದಲ್ಲಿ…










