ಮೈಸೂರು, ಮಾ.8(ಎಂಕೆ)- ಮೈಸೂ ರಿನ ಕಲಾಮಂದಿರದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗದಿಂದ ಭಾನು ವಾರ ಏರ್ಪಡಿಸಿದ್ದ ‘ಮಹಾಸಾಧ್ವಿ ಹೇಮ ರೆಡ್ಡಿ ಮಲ್ಲಮ್ಮ ನೃತ್ಯರೂಪಕ’ ಅತ್ಯಾಕರ್ಷಕ ಸಂಗೀತ ಸಂಯೋಜನೆ, ಭರತನಾಟ್ಯ ಮತ್ತು ಭಾವಾಭಿನಯದೊಂದಿಗೆ ಕಲಾ ಭಿಮಾನಿಗಳ ಮನಗೆದ್ದಿತು. ವಿದುಷಿ ಜ್ಯೋತಿ ಶಂಕರ್ ಪರಿಕಲ್ಪನೆ ಮತ್ತು ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರದ ನಿರ್ದೇ ಶಕಿ ವಿದುಷಿ ಕೃಪಾ ಪಡ್ಕೆ ನೃತ್ಯ ನಿರ್ದೇಶನ ದಲ್ಲಿ ನೃತ್ಯ ರೂಪಕ ಮೂಡಿಬಂದಿತು. ನಾಗರೆಡ್ಡಿ-ಗೌರಮ್ಮ ದಂಪತಿಯ ಮಗ ಳಾಗಿ ಮಲ್ಲಮ್ಮ ಜನನ, ಶಿವನ ಆರಾಧನೆ,…
ಶಾಸಕ ಎಲ್.ನಾಗೇಂದ್ರರಿಗೆ ಪಿತೃವಿಯೋಗ
March 9, 2020ಉಪಮುಖ್ಯಮಂತ್ರಿ ಅಶ್ವಥ್ನಾರಾಯಣ ಸೇರಿ ಹಲವು ಗಣ್ಯರಿಂದ ಯಜಮಾನ್ ಲಿಂಗಪ್ಪರ ಪಾರ್ಥಿವ ಶರೀರದ ಅಂತಿಮ ದರ್ಶನ ಮೈಸೂರು,ಮಾ.8(ಆರ್ಕೆ)-ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರ ತಂದೆ ಯಜಮಾನ್ ಲಿಂಗಪ್ಪ (96) ಅವರು ಕೆ.ಜಿ. ಕೊಪ್ಪಲಿನ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ನಿಧನರಾದರು. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಿಂಗಪ್ಪ ಅವರು ಮುಂಜಾನೆ ಸುಮಾರು 4.20 ಗಂಟೆ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ಶ್ರೀಮತಿ ಪುಟ್ಟಲಿಂಗಮ್ಮ (ಕರಗಮ್ಮ), ಪುತ್ರರಾದ ಶಾಸಕ ಎಲ್.ನಾಗೇಂದ್ರ, ಎಲ್.ಮಾದಪ್ಪ, ಎಲ್.ಚೌಡಪ್ಪ, ಎಲ್.ಮಂಜುನಾಥ,…
ವಿದ್ಯಾಭವನದಲ್ಲಿ ಆರ್ಟಿಕ್ಯುಲೇಟ್ ನೃತ್ಯೋತ್ಸವ
March 9, 2020ಮೈಸೂರು, ಮಾ.8- ಮೈಸೂರಿನ ಭಾರತೀಯ ವಿದ್ಯಾಭವನದಲ್ಲಿ ಇತ್ತೀಚೆಗೆ ನಡೆದ ಆರ್ಟಿಕ್ಯುಲೇಟ್ ನೃತ್ಯೋ ತ್ಸವದ 50ನೇ ಸರಣಿ ಕಾರ್ಯಕ್ರಮದಲ್ಲಿ ಭರತನಾಟ್ಯ ಹಾಗೂ ಕಥಕ್ ನೃತ್ಯ ವೈಭವ ಮೇಳೈಸಿತ್ತು. ಭವನದ ತಾತಾ ಚಾರಿ ಸಭಾಂಗಣದಲ್ಲಿ ಇತ್ತೀಚೆಗೆ ವಿದ್ವಾನ್ ಮೈಸೂರು ಬಿ.ನಾಗ ರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜಾಶ್ರೀ ಹಾಗೂ ವೈದೇಹಿ 4 ನೃತ್ಯ ವಿಭಾಗ ಗಳಲ್ಲಿ ಪ್ರದರ್ಶನ ನೀಡಿದರು. ಕಥಕ್ ಶೈಲಿಯಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮಗಳ ಸಾಮರಸ್ಯ ಅನಾವರಣಗೊಳಿಸಿದರು. ಶಕುಂತಲಾ ಪ್ರಭಾತ್ ಹಾಗೂ ವಿದ್ವಾನ್ ಪಾಶ್ರ್ವನಾಥ್ ಅವರ…
ಮೈಸೂರಲ್ಲಿ ಮತ್ತೆ ಸರಗಳ್ಳರ ಕಾಟ
March 9, 2020ಮೈಸೂರು, ಮಾ.8(ಎಂಕೆ)- ಬೈಕ್ ನಲ್ಲಿ ಬಂದ ಖದೀಮರಿಬ್ಬರು ಮಹಿಳೆಯ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ಎಗರಿಸಿದ ಘಟನೆ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿ ನಡೆ ದಿದೆ. ಇಲ್ಲಿನ ನಿವಾಸಿ ಲೀಲಾವತಿ ಚಿನ್ನದ ಸರ ಕಳೆದುಕೊಂಡವರು. ಲೀಲಾವತಿ ಅವರು ಶನಿವಾರ ರಾತ್ರಿ ಮೊಸರು ತರ ಲೆಂದು ಜಯಲಕ್ಷ್ಮಿಪುರಂನ ರಾಘವೇಂದ್ರ ಮಠದ ಹಿಂಭಾಗದ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬೈಕ್ನಲ್ಲಿ ಬಂದ ಖದೀಮರಿಬ್ಬರು ಲೀಲಾವತಿ ಅವರ ಕುತ್ತಿಗೆಯಲ್ಲಿದ್ದ 1.23 ಲಕ್ಷ ರೂ. ಮೌಲ್ಯದ 30 ಗ್ರಾಂ ತೂಕದ ಚಿನ್ನದ…
ನಿಶ್ಚಿತಾರ್ಥ ಆಗಿಲ್ಲವೆಂದು ನೊಂದು ಬಾವಿಗೆ ಬಿದ್ದು ಶಿಕ್ಷಕಿ ಆತ್ಮಹತ್ಯೆ!
March 9, 2020ಬೀದರ್, ಮಾ.8- ಮಕ್ಕಳಿಗೆ ಬುದ್ಧಿ ವಾದ ಹೇಳಿ, ತಿದ್ದ ಬೇಕಿದ್ದ ಶಿಕ್ಷಕಿಯೊ ಬ್ಬರು ತನಗೆ ನಿಶ್ಚಿ ತಾರ್ಥ ಆಗಲಿಲ್ಲ ಎಂಬ ಕಾರಣಕ್ಕೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ನಲ್ಲಿ ನಡೆದಿದೆ. 24 ವರ್ಷದ ಪೂಜಾ ಎಂಬುವರು ಭಾಲ್ಕಿ ತಾಲೂಕಿನ ಭಾಲ್ಕೇಶ್ವರ ದೇವಸ್ಥಾನದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಡೆತ್ನೋಟ್ನಲ್ಲಿ ಪೂಜಾ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿಟ್ಟಿ ದ್ದಾರೆ. ಪೂಜಾ ಭಾಲ್ಕಿಯ ಖಾಸಗಿ ಚನ್ನ ಬಸವ ಪದವಿ ಕಾಲೇಜಿನಲ್ಲಿ ರಾಸಾ ಯನಿಕ ಶಾಸ್ತ್ರದ…
ಕೀಳರಿಮೆಯಲ್ಲಿದ್ದ ಹಳ್ಳಿ ಹುಡುಗರು ಲಂಕೇಶರನ್ನೇ ಗುರುವಾಗಿಸಿಕೊಂಡಿದ್ದರು
March 9, 2020`ಮೈಸೂರು ಗೆಳೆಯರ ಬಳಗ’ ಆಯೋಜಿಸಿದ್ದ `ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ದಿನೇಶ್ ಅಮೀನ್ಮಟ್ಟು ನೆನಪಿನ ಝರಿ ಮೈಸೂರು, ಮಾ.8(ಎಂಟಿವೈ)- ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ಕೀಳರಿಮೆಗೆ ಒಳ ಗಾಗಿದ್ದ ಹಲವಾರು ಮಂದಿ ಪಿ.ಲಂಕೇಶ್ ಅವರನ್ನು (ಏಕಲವ್ಯನಂತೆ) ಗುರುವಾಗಿ ಆಯ್ಕೆ ಮಾಡಿ ಕೊಂಡಿದ್ದರೆ, ಮತ್ತೆ ಕೆಲವರು ಶಿಕ್ಷಕರಂತೆ (ಮೇಷ್ಟ್ರು) ಸ್ವೀಕರಿಸಿದ್ದರು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ಮಟ್ಟು ನೆನಪಿಸಿಕೊಂಡರು. ಮೈಸೂರಿನ ಸಮಾನ ಮನಸ್ಕರ `ಮೈಸೂರು ಗೆಳೆಯರ ಬಳಗ’ ಕಲಾಮಂದಿರ ಆವರಣದ ಮನೆಯಂಗಳದಲ್ಲಿ ಭಾನುವಾರ ಆಯೋಜಿಸಿದ್ದ `ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ಮಾತ…
ರಾಮಕೃಷ್ಣ ಆಶ್ರಮ ಸುತ್ತುಹಾಕಿ, ಅರಮನೆ ಕಣ್ತುಂಬಿಕೊಂಡ ಕಾಶ್ಮೀರಿ ಯುವಚೇತನರು!
March 9, 2020ಮೈಸೂರು, ಮಾ.8(ಎಂಕೆ)- ರಾಮಕೃಷ್ಣ ಪರಮ ಹಂಸ, ಸ್ವಾಮಿ ವಿವೇಕಾನಂದ ಮತ್ತು ತಾಯಿ ಶಾರದಾ ದೇವಿ ಅವರ ಕುರಿತ ಮಹತ್ವದ ವಿಚಾರಗಳನ್ನು ಅರಿತು ಕೊಂಡ ‘ಕಾಶ್ಮೀರದ ಯುವ ಸಮೂಹ’ ಭಾನುವಾರ ವಿಶ್ವಪ್ರಸಿದ್ಧ ಮೈಸೂರು ಅರಮನೆ ಸೌಂದರ್ಯವನ್ನು ಕಣ್ತುಂಬಿಕೊಂಡಿತು. ‘ಕಾಶ್ಮೀರಿ ಯುವಜನ ವಿನಿಮಯ’ ಕಾರ್ಯಕ್ರಮದಡಿ ಮೈಸೂರಿಗೆ ಆಗಮಿಸಿರುವ ಕಾಶ್ಮೀರದ 132 ಯುವಕ-ಯುವತಿಯರು ಭಾನುವಾರ ರಾಮಕೃಷ್ಣ ಆಶ್ರಮ, ರಾಮಕೃಷ್ಣ ವಿದ್ಯಾಶಾಲೆ, ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಮತ್ತು ಮೈಸೂರು ಅರಮನೆಗೆ ಭೇಟಿ ನೀಡಿದ್ದರು. ಆಶ್ರಮದ ಕಾರ್ಯವೈಖರಿ ತಿಳಿಯುವುದರ ಜತೆಗೆ…
ವಿಜ್ಞಾನ ನಾಟಕ `ನಿಲುಕದ ನಕ್ಷತ್ರ’ ಬಲು ಜನಪ್ರಿಯ
March 9, 2020ಮೈಸೂರು,ಮಾ.8(ವೈಡಿಎಸ್)-ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಪ್ರದರ್ಶನಗೊಂಡ `ನಿಲುಕದ ನಕ್ಷತ್ರ’ ವಿಜ್ಞಾನ ನಾಟಕವನ್ನು ಜನರು ಮುಗಿಬಿದ್ದು ವೀಕ್ಷಿಸಿದರು. ಮೈಸೂರು ವಿಜ್ಞಾನ ನಾಟಕೋತ್ಸವ ಸಮಿತಿ ಭಾನುವಾರ ಪ್ರಸ್ತುತಪಡಿಸಿದ ಭದ್ರಪ್ಪ ಶಿ.ಹೆನ್ಲಿ ರಚನೆಯ ಪ್ರಶಾಂತ್ ಮೈಸೂರ್ ನಿರ್ದೇಶನದ `ನಿಲುಕದ ನಕ್ಷತ್ರ’ ವಿಜ್ಞಾನ ನಾಟಕದಲ್ಲಿ ಮೊದಲಿಗೆ ವಿದ್ಯಾರ್ಥಿಗಳು ಶಾಲೆಯಲ್ಲಿ ಜಗಳವಾಡುತ್ತಿರುತ್ತಾರೆ. ಅಷ್ಟರಲ್ಲಿ ಶಾಲೆಗೆ ಬಂದ ಶಿಕ್ಷಕರು, ಗದರಿಸಿದಾಗ ಎಲ್ಲರೂ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಶಿಕ್ಷಕರು, ಶ್ರೀನಿವಾಸ ರಾಮಾನುಜನ್ ಎಂಬ ವಿದ್ಯಾರ್ಥಿ ಯನ್ನು ಎಲ್ಲೋ ಟೋಪಿ? ಎಂದು ಪ್ರಶ್ನಿಸಿ ದಾಗ, ಗಾಳಿಗೆ ಹಾರಿಹೋಯಿತೆಂದು ಉತ್ತರಿ ಸುತ್ತಾನೆ. ಸರಿ,…
ಮೈಸೂರು ಜಿಲ್ಲಾಡಳಿತದಿಂದ ಕಾರ್ಮಿಕ ಸಮ್ಮಾನ ದಿನಾಚರಣೆ
March 9, 2020ಅಸಂಘಟಿತ 100 ಕಾರ್ಮಿಕರಿಗೆ `ವಿಶೇಷ ಪುರಸ್ಕಾರ’, 36 ಕಾರ್ಮಿಕರಿಗೆ `ಶ್ರಮ ಸಮ್ಮಾನ ಪ್ರಶಸ್ತಿ’ ಪ್ರದಾನ ಮೈಸೂರು, ಮಾ.8(ಪಿಎಂ)- ಬಸವಣ್ಣನವರ ನುಡಿಯಂತೆ `ಕಾಯಕವೇ ಕೈಲಾಸ’ ಎಂದು ದುಡಿಯುವ ಅಸಂಘ ಟಿತ ಕಾರ್ಮಿಕರಿಗೆ ಭಾನುವಾರ ಹಮ್ಮಿ ಕೊಂಡಿದ್ದ `ಕಾರ್ಮಿಕ ಸಮ್ಮಾನ ದಿನಾ ಚರಣೆ’ಯಲ್ಲಿ ಮೇಯರ್ ತಸ್ನೀಂ `ಶ್ರಮ ಸಮ್ಮಾನ ಪ್ರಶಸ್ತಿ’ ಪ್ರದಾನ ಮಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಜಂಟಿಯಾಗಿ ಮೈಸೂರಿನ ಶಾರದಾವಿಲಾಸ ಕಾಲೇಜು ಶತಮಾ ನೋತ್ಸವ ಭವನದಲ್ಲಿ…
ನಿರ್ಭಯಾ: ಅಪರಾಧಿಗಳ ನಿಗದಿತ ದಿನವೇ ಗಲ್ಲಿಗೇರಿಸುವಂತೆ ಆಗ್ರಹ
March 9, 2020ಮೈಸೂರು,ಮಾ.8(ಎಂಟಿವೈ)- ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ನಿಗದಿತ ದಿನವೇ ಗಲ್ಲಿಗೇರಿಸುವಂತೆ ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಭಾನುವಾರ ಮೈಸೂರಿನಲ್ಲಿ ಪ್ರತಿಭಟಿಸಿದರು. ಅಂತಾ ರಾಷ್ಟ್ರೀಯ ಮಹಿಳಾ ದಿನ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿ, ಗನ್ಹೌಸ್ ಬಳಿ ನೇಣಿಗೇರಿಸುವ ಅಣಕು ಪ್ರದರ್ಶನ ನಡೆಸಿದರು. ನಿಗದಿತ ದಿನದಂದೇ ಗಲ್ಲುಶಿಕ್ಷೆ ಜಾರಿಗೊಳಿಸಿ ನ್ಯಾಯಾಂಗದ ಮೌಲ್ಯ ಎತ್ತಿ ಹಿಡಿಯಬೇಕು ಎಂದು ವೇದಿಕೆ ಅಧÀ್ಯಕ್ಷ ಎಸ್.ಬಾಲಕೃಷ್ಣ ಒತ್ತಾಯಿಸಿದರು. ಪದಾಧಿಕಾರಿಗಳಾದ ನಾಲಾಬೀದಿ ರವಿ, ಗುರುಬಸಪ್ಪ, ಗೋಪಿ, ಪ್ಯಾಲೇಸ್ ಬಾಬು, ಮಹದೇವಸ್ವಾಮಿ, ಬೀಡಾಬಾಬು, ಅರವಿಂದ, ಸ್ವಾಮಿ ಗೈಡ್, ಪರಿಸರ ಚಂದ್ರು,…









