`ಸಮಕಾಲೀನ ಕನ್ನಡ ಸಾಹಿತ್ಯ’ ವಿಚಾರ ಸಂಕಿರಣದಲ್ಲಿ ಪ್ರೊ.ನೀಲಗಿರಿ ಎಂ.ತಳವಾರ್ ವಿಷಾದ ಮೈಸೂರು, ಮಾ.3(ಪಿಎಂ)- ಮಾನ ವನ ವೇಗದ ವ್ಯವಹಾರಿಕ ಬದುಕಿನಲ್ಲಿ ಸೃಜನಶೀಲ ಸಾಹಿತ್ಯ ಕಡಿಮೆಯಾಗುತ್ತಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧÀ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ಎಂ.ತಳವಾರ್ ವಿಷಾದಿಸಿದರು. ಮೈಸೂರಿನ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಸ್ನಾತಕೋತ್ತರ ಮತ್ತು ಸ್ನಾತಕ ವಿಭಾಗದ ವತಿಯಿಂದ ಯುಜಿಸಿ ಪ್ರಾಯೋಜಿತ `ಸಮಕಾಲೀನ ಕನ್ನಡ ಸಾಹಿತ್ಯ-ಸವಾಲು ಮತ್ತು ಸಾಧÀ್ಯತೆಗಳು’ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ…
ವಾರ್ಡ್ 21ರ ಉದ್ಯಾನಗಳಿಗಾಗಿ 3 ಹೊಸ ಕೊಳವೆ ಬಾವಿ
March 4, 2020ಮೈಸೂರು,ಮಾ.3(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ 21ರಲ್ಲಿ ಸಾರ್ವಜನಿಕ ಬಳಕೆ ಹಾಗೂ ಉದ್ಯಾನವನಗಳ ನಿರ್ವಹಣೆಗಾಗಿ 3 ಹೊಸ ಕೊಳವೆ ಬಾವಿ ಕೊರೆಸುವ ಕಾಮಗಾರಿಗೆ ಪಾಲಿಕೆ ಸದಸ್ಯೆ ಸಿ.ವೇದಾವತಿ ಮಂಗಳವಾರ ಚಾಲನೆ ನೀಡಿದರು. ಕೆಲ ದಿನಗಳಿಂದ ವಾರ್ಡ್ 21ರಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಉದ್ಯಾನವನಗಳ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ 15 ಲಕ್ಷ ರೂ. ವೆಚ್ಚದಲ್ಲಿ ವಾಗ್ದೇವಿ ನಗರ, ಕುದುರೆ ಮಾಳ ಹಾಗೂ ಸರಸ್ವತಿಪುರಂ ಪಾರ್ಕ್ನಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಲಾಯಿತು ಎಂದು ವೇದಾವತಿ ಹೇಳಿದರು. 21ನೇ ವಾರ್ಡ್…
ಮೊಬೈಲ್ ಅತೀ ಬಳಕೆಯಿಂದ ಯುವಜನರಲ್ಲಿ ಖಿನ್ನತೆ
March 4, 2020ಯುವಜನ ಕ್ರೀಡಾಕೂಟದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧÀ್ಯಕ್ಷ ಹೆಚ್.ವಿ.ರಾಜೀವ್ ಕಳವಳ ಮೈಸೂರು,ಮಾ.3(ಎಂಟಿವೈ)- ಅತಿ ಯಾದ ಮೊಬೈಲ್ ಬಳಕೆಯಿಂದ ಯುವ ಸಮುದಾಯ ಖಿನ್ನತೆಗೆ ಒಳಗಾಗುತ್ತಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧÀ್ಯಕ್ಷ ಹೆಚ್.ವಿ.ರಾಜೀವ್ ಕಳವಳ ವ್ಯಕ್ತಪಡಿಸಿದರು. ಕೇಂದ್ರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶ್ರೀ ತಲಕಾವೇರಿ ಮಹಿಳಾ ವಿದ್ಯಾ ಸಂಸ್ಥೆ ಹಾಗೂ ತಲಕಾವೇರಿ ಯುವಜನ ಸೇವಾ ಮತ್ತು ಕ್ರೀಡಾ ಸಾಂಸ್ಕøತಿಕ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಚಾಮುಂಡಿವಿಹಾರ…
ಮೈಸೂರಲ್ಲಿ ಮಾ.13ರಿಂದ ಜನಪದ, ಬುಡಕಟ್ಟು ಕಲೆ ಉತ್ಸವ
March 4, 2020ಮೈಸೂರು, ಮಾ.3(ಪಿಎಂ)- ಮೈಸೂರಿ ನಲ್ಲಿ ಮಾ.13ರಿಂದ 3 ದಿನಗಳ ಅಖಿಲ ಭಾರತ ಜನಪದ ಮತ್ತು ಬುಡಕಟ್ಟು ಕಲೆ ಉತ್ಸವ ಹಾಗೂ ವಿಚಾರ ಸಂಕಿರಣ ಆಯೋ ಜಿಸಲಾಗಿದೆ. ಸ್ಥಳೀಯ ಜನಪದ, ಬುಡ ಕಟ್ಟು ಕಲಾವಿದರು ಪಾಲ್ಗೊಳ್ಳಲು ಅವ ಕಾಶವಿದೆ ಎಂದು ಉತ್ಸವದ ಸಂಚಾಲಕ ಕೆ.ವಸಂತ್ಕುಮಾರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಖಿಲ ಭಾರತ ಜನಪದ ಮತ್ತು ಬುಡ ಕಟ್ಟು ಕಲಾ ಪರಿಷತ್, ಕರ್ನಾಟಕ ಸಾಹಸ ಕಲಾ ಅಕಾಡೆಮಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಹಾವೇರಿಯ ಕರ್ನಾಟಕ ಜನಪದ ವಿಶ್ವವಿದ್ಯಾನಿಲಯ ಹಾಗೂ…
ಮೈಸೂರಲ್ಲಿ ‘ಫ್ಲಾರೆನ್ಸ್ ನೈಟಿಂಗೇಲ್’ 200ನೇ ಜನ್ಮದಿನ ಆಚರಣೆ
March 4, 2020ಮೈಸೂರು, ಮಾ.3(ಎಂಕೆ)- ‘ಫ್ಲಾರೆನ್ಸ್ ನೈಟಿಂಗೇಲ್’ ಅವರ 200ನೇ ಜನ್ಮ ದಿನೋತ್ಸವವನ್ನು ಮೈಸೂರು ಜಿಲ್ಲಾ ಶುಶ್ರೂಷ ಶಿಕ್ಷಕರು ಹಾಗೂ ಶುಶ್ರೂಷಕರ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘದ ಜಿಲ್ಲಾ ಘಟಕ, ದಿ ಟ್ರೈನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಆಚರಣೆ ಮಾಡಲಾಯಿತು. ಮೈಸೂರಿನ ಅರಮನೆ ಉತ್ತರ ದ್ವಾರ ದಲ್ಲಿರುವ ಕೋಟೆ ಆಂಜನೇಯ ದೇವ ಸ್ಥಾನದ ಎದುರು ಕಾರ್ಯಕ್ರಮ ಉದ್ಘಾಟಿ ಸಿದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, ರೋಗಿಗಳ ಬಗ್ಗೆ ನಿರ್ಲಕ್ಷ್ಯ ಮಾಡದೇ, ಅಸಡ್ಡೆ ತೋರದೆ…
ಕೊರೊನಾ ಭೀತಿ; ಮಾಸ್ಕ್ ಧರಿಸಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಅವಕಾಶ
March 4, 2020ಬೆಂಗಳೂರು, ಮಾ.3- ದ್ವಿತೀಯ ಪಿಯು ಪಬ್ಲಿಕ್ ಪರೀಕ್ಷೆ ಬುಧವಾರ ಆರಂಭವಾಗಲಿದೆ. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಗಳಿಗೆ `ಮಾಸ್ಕ್’ಗಳನ್ನು ಧರಿಸಿ ಬರಬಹುದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಜ್ವರ, ಕೆಮ್ಮು, ಶೀತ, ನೆಗಡಿ ಮೊದ ಲಾದ ರೋಗ ಲಕ್ಷಣಗಳಿರುವ ವಿದ್ಯಾರ್ಥಿ ಗಳು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗ ಬಹುದು. ಇದರಿಂದ ಬೇರೆ ವಿದ್ಯಾರ್ಥಿ ಗಳಿಗೆ ಸೋಂಕು ಹರಡುವುದನ್ನು ತಡೆಯಲು ಸಾಧ್ಯ ಎಂದರು….
ವಿಶ್ವ ಶ್ರವಣ ದಿನಾಚರಣೆ: ನವಜಾತ ಶಿಶುಗಳ ಶ್ರವಣದೋಷ ಪರೀಕ್ಷಾ ಶಿಬಿರಕ್ಕೆ ನಟಿ ಅಮೂಲ್ಯ ಚಾಲನೆ
March 4, 2020ಮೈಸೂರು, ಮಾ. 3 (ಆರ್ಕೆ)- ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಮೈಸೂ ರಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿ ಸುವ ಹಲವು ಕಾರ್ಯಕ್ರಮಗಳನ್ನು ಇಂದು ಆಯೋಜಿಸಲಾಗಿತ್ತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಿಂದ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಮಕ್ಕಳ ವಿಭಾಗ ದಲ್ಲಿ ಇಂದು ಆಯೋಜಿಸಿದ್ದ ನವಜಾತ ಶಿಶುಗಳಿಗೆ ಶ್ರವಣದೋಷ ಪರೀಕ್ಷಾ ಶಿಬಿರ ವನ್ನು ಶ್ರವಣ ದೋಷ ಜಾಗೃತಿ, ನಿವಾ ರಣಾ ರಾಯಭಾರಿಯೂ ಆದ ಚಲನ ಚಿತ್ರ ನಟಿ ಅಮೂಲ್ಯ ಉದ್ಘಾಟಿಸಿದರು. ಓಟೋಕಾಸ್ಟಿಕ್ ಎಮಿಷನ್ (ಒಎಇ) ಉಪ…
ವನ್ಯಜೀವಿ ಸಂರಕ್ಷಣೆಗಾಗಿ ಹುತಾತ್ಮರಾದವರು ಸೂರ್ಯನಂತೆ ಸ್ಮರಣೀಯರು
March 4, 2020`ವಿಶ್ವ ವನ್ಯಜೀವಿಗಳ ದಿನಾಚರಣೆ’, ಸಿಎಫ್ ಮಣಿಕಂದನ್ ಸ್ಮರಣೆ ಕಾರ್ಯಕ್ರಮದಲ್ಲಿ ಸಿಸಿಎಫ್ ಟಿ.ಹೀರಾಲಾಲ್ ಬಣ್ಣನೆ ಮೈಸೂರು,ಮಾ.3(ಎಂಟಿವೈ)- ವನ್ಯ ಜೀವಿ ಸಂರಕ್ಷಣೆಗಾಗಿ ಹಗಲಿರುಳು ಶ್ರಮಿಸಿ ಹುತಾತ್ಮರಾಗಿರುವ ಮಹನೀಯರು ಇಲಾ ಖೆಗೆ ಸದಾ ಬೆಳಕು ನೀಡುವ ಸೂರ್ಯ ನಂತೆ ಸ್ಮರಣೀಯರು ಎಂದು ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್ ಬಣ್ಣಿಸಿದರು. ಮೈಸೂರು ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಮಂಗಳವಾರ `ವಿಶ್ವ ವನ್ಯಜೀವಿಗಳ ದಿನಾಚರಣೆ’ ಹಾಗೂ ಆನೆ ದಾಳಿಗೆ ತುತ್ತಾಗಿ ಸಾವಿಗೀಡಾದ ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಣಿಕಂದನ್ 2ನೇ ವರ್ಷದ ಸ್ಮರಣೆ…
ಶ್ರವಣಶಕ್ತಿ ಸಂರಕ್ಷಣೆ ಜಾಗೃತಿಗೆ ಸೈಕಲ್ ಜಾಥಾ
March 4, 2020`ವಿಶ್ವ ಶ್ರವಣ ದಿನ’ ಹಿನ್ನೆಲೆ ಜೆಎಸ್ಎಸ್ ವಾಕ್ ಶ್ರವಣ ಸಂಸ್ಥೆಯಿಂದ ಆಯೋಜನೆ ಮೈಸೂರು, ಮಾ.3(ಪಿಎಂ)- `ವಿಶ್ವ ಶ್ರವಣ ದಿನ’ದಂಗವಾಗಿ ಶ್ರವಣಶಕ್ತಿಯ ಮೇಲೆ ಭಾರೀ ಶಬ್ದದ ದುಷ್ಪರಿಣಾಮ ತಡೆ, ಶ್ರವಣ ಸಂರಕ್ಷಣೆ ಮತ್ತು ಶ್ರವಣ ಪರೀಕ್ಷೆಯ ಅಗತ್ಯತೆ ಕುರಿತು ಜೆಎಸ್ಎಸ್ ವಾಕ್ ಶ್ರವಣ ಸಂಸ್ಥೆಯಿಂದ ನಗರದಲ್ಲಿ ಮಂಗಳವಾರ ಸೈಕಲ್ ಜಾಥಾ ನಡೆಸಲಾಯಿತು. `ಉತ್ತಮ ಬದುಕು ಸಾಗಿಸಲು ಶ್ರವಣ ಸಂರಕ್ಷಣೆ ಅತ್ಯಂತ ಅಗತ್ಯ’, `ಮನಸು ಮಾಡಿದರೆ ಶ್ರವಣ ರಕ್ಷಣೆ ಸುಲಭ’, `ಶ್ರವಣ ಪರೀಕ್ಷೆಯ ಅಗತ್ಯತೆ ಅರಿಯಿರಿ’ ಘೋಷಣಾ ಫಲಕಗಳೊಂದಿಗೆ ನೂರಾರು…
ಐಎಸ್ಟಿಇ ವಿದ್ಯಾರ್ಥಿಗಳ ಪಾಲಿಟೆಕ್ನಿಕ್ ಸಮಾವೇಶ
March 4, 2020ಮೈಸೂರು, ಮಾ. 3- ಎರಡನೇ ರಾಜ್ಯ ಮಟ್ಟದ ಐಎಸ್ಟಿಇ ವಿದ್ಯಾರ್ಥಿಗಳ ಪಾಲಿಟೆಕ್ನಿಕ್ ಸಮಾವೇಶವನ್ನು ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್ನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಜಂಟಿ ನಿರ್ದೇಶಕ ರವಿಚಂದ್ರನ್ ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ತಂತ್ರಜ್ಞಾನ ಸಾರ್ಥಕತೆ ಸಾಮಾನ್ಯ ಜನರನ್ನು ತಲುಪಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಇಂತಹ ಸಮಾವೇಶಗಳು ವಿದ್ಯಾ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಕೊಟ್ಟಂತೆ ಆಗುತ್ತದೆ. ನರೇಂದ್ರ ನಾರಾಯಣ ಪ್ರಧಾನ ವಿಷಯ ಭಾಷಣಕಾರರಾಗಿ ಆಗಮಿಸಿದ್ದು, ದೈನಂದಿನ ಜೀವನದಲ್ಲಿ…










