ಉಗ್ರಪ್ಪ ಎಂಪಿಯಾಗಿದ್ದು ಸುದಿನವೇ?; ಹಾಸನದಲ್ಲಿ ಸಿ.ಸಿ.ಪಾಟೀಲ್ ತರಾಟೆ
ಮೈಸೂರು

ಉಗ್ರಪ್ಪ ಎಂಪಿಯಾಗಿದ್ದು ಸುದಿನವೇ?; ಹಾಸನದಲ್ಲಿ ಸಿ.ಸಿ.ಪಾಟೀಲ್ ತರಾಟೆ

February 7, 2020

ಹಾಸನ, ಫೆ.6- ತೆಲಂಗಾಣ ಮಾದರಿ ಮರಳು ನೀತಿ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ.ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದರು. ಹಿಂದಿನ ಸರ್ಕಾರದ ತಪ್ಪು ನೀತಿಯಿಂದ ಮರಳು ಸರಿ ಯಾಗಿ ಸಿಗುತ್ತಿಲ್ಲ. ಹೀಗಾಗಿ ತೆಲಂಗಾಣ ಮಾದರಿ ಮರಳು ನೀತಿ ಜಾರಿಗೆ ಚಿಂತನೆ ನಡೆದಿದೆ. ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಬೇಕು. ಹಾಗಾಗಿ, ಅಕ್ರಮ ಗಣಿಗಾರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನೈಸರ್ಗಿಕ ಖನಿಜ ಸಂಪತ್ತು ಲೂಟಿಕೋರರ ವಶವಾಗದ ರೀತಿ ಕೆಲಸ ಮಾಡುತ್ತಿದ್ದೇವೆ ಎಂದರು.

ಉಗ್ರಪ್ಪಗೆ ತಿರುಗೇಟು:, ಸಚಿವ ಸಂಪುಟ ವಿಸ್ತರಣೆ ಕರಾಳ ದಿನ ಎಂಬ ಉಗ್ರಪ್ಪ ಹೇಳಿಕೆಗೆ ತಿರುಗೇಟು ನೀಡಿ, ಮನೆಯವರು ಅವರಿಗೆ ಏನೆಂದು ಹೆಸರಿಟ್ಟಿದ್ದಾರೆ?. ಉಗ್ರಪ್ಪ ಅವರು ಯಾರನ್ನಾದರೂ ಹೊಗಳಿ ರುವ ಉದಾ ಹರಣೆ ಇದೆಯೇ? ಬಿಜೆಪಿಯವರು ಮಂತ್ರಿಯಾಗಿದ್ದು ಕರಾಳ ದಿನ ಎಂದರೆ ಅವರು ಎಂಪಿಯಾದ ದಿನ `ಸುದಿನ’ವೇ? ಎಂದು ಕಿಡಿಕಾರಿದರು.

ಇದೇ ವೇಳೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಏಕಾಂಗಿಯಾಗಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಸಾವಿರಾರು ಹೋರಾಟ ಮಾಡಿ ಈ ಸ್ಥಾನ ತಲುಪಿದ್ದಾರೆ. ಅವರು ಎಲ್ಲವನ್ನೂ ಸರಿ ಮಾಡುತ್ತಾರೆ ಎಂದರು

Translate »