ಮೂಕ ಅಭಿನಯದ ಮೂಲಕ ನಗಿಸುತ್ತಿದ್ದ `ಚಾರ್ಲಿ ಚಾಪ್ಲಿನ್’
ಮೈಸೂರು

ಮೂಕ ಅಭಿನಯದ ಮೂಲಕ ನಗಿಸುತ್ತಿದ್ದ `ಚಾರ್ಲಿ ಚಾಪ್ಲಿನ್’

May 20, 2019

ಮೈಸೂರು: ತನ್ನ ಮೂಕ ಅಭಿಯ ನದ ಮೂಲಕವೇ ಜನ ರನ್ನು ನಕ್ಕು ನಲಿಸುವ ಚಾರ್ಲಿ ಚಾಪ್ಲಿನ್ ವಿಶ್ವದ ಶ್ರೇಷ್ಠ ಮಟ್ಟದ ಕಲಾವಿದ. ಮನ ರಂಜನೆಯ ಜೊತೆಗೆ ಸಮಾಜಕ್ಕೆ ಸದುದ್ದೇ ಶದ ಸಂದೇಶ ಸಾರುತ್ತಿದ್ದ ವಿಭಿನ್ನ ರೀತಿಯ ಕಲಾವಿದ ಎಂದು ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ತಿಳಿಸಿದರು.

ಮೈಸೂರು ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನು ವಾರ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ, ಸ್ನೇಹ ಸಿಂಚನ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಕೆ.ಎಸ್.ಪ್ರದೀಪ್‍ಕುಮಾರ್ ಅವರ `ಚಾರ್ಲಿ ಚಾಪ್ಲಿನ್’ ಕೃತಿ ಬಿಡುಗಡೆ ಮಾಡಿ ಮಾತ ನಾಡಿದರು. ಅವರ ಚಿತ್ರಗಳಲ್ಲಿ ಮಾತಿಲ್ಲ.. ಆದರೂ ಜನ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು. ಇಂದಿಗೂ ಅವರ ಚಿತ್ರಗಳ ಜನಪ್ರಿಯತೆ ನೋಡಿದರೆ ಅವರದ್ದು ಅಳಿಸ ಲಾಗದ ನಟನೆ. ಅಂತಹ ಕಲಾವಿದನನ್ನು ಕುರಿತು ಪ್ರದೀಪ್‍ಕುಮಾರ್ ಕೃತಿ ತರುವ ಮೂಲಕ ಚಾರ್ಲಿ ಚಾಪ್ಲಿನ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಸಮಾಜಕ್ಕೆ ಸಂದೇಶ ಸಾರುವ ಇನ್ನಷ್ಟು ಸಾಹಿತ್ಯ ಕೃತಿಗಳು, ಲೇಖನಗಳು ಕನ್ನಡ ಸಾಹಿತ್ಯದಲ್ಲಿ ಮೂಡಿ ಬರಲಿ ಎಂದು ಆಶಿಸಿದರು.

ಸಾಹಿತಿ ಮಂಜುಳಾ ಉಮೇಶ್ ಮಾತ ನಾಡಿ, ಒಂದು ಕಾಲದಲ್ಲಿ ಪುಸ್ತಕಗಳನ್ನು ಓದುವುದರಲ್ಲಿ ಮೊದಲಿಗರಾಗಿದ್ದ ಮಹಿಳೆ ಯರು ಇಂದು ಪುಸ್ತಕಗಳನ್ನೇ ಓದುತ್ತಿಲ್ಲ. ಮಹಿಳೆಯರು ಪುಸ್ತಕಗಳನ್ನು ಓದಿದರೆ ಅದರಿಂದ ಮಕ್ಕಳಿಗೆ ಅನೇಕ ಅಮೂಲ್ಯ ಸಂಗತಿಗಳನ್ನು ಹೇಳಿಕೊಡಲು ಸಹಕಾರಿ ಯಾಗಿ ಮಕ್ಕಳ ಬುದ್ಧಿಶಕ್ತಿಯನ್ನು ಚುರುಕು ಮಾಡಬಹುದಾಗಿದೆ ಎಂದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಮ್ಮಂದಿರ ದಿನದ ಅಂಗವಾಗಿ ಏರ್ಪಡಿ ಸಿದ್ದ ಕವಿಗೋಷ್ಠಿಯಲ್ಲಿ `ಅಮ್ಮ’ನನ್ನು ಕುರಿತು ಹಲವು ಕವಿಗಳು ಕವನಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಾಹಿತಿಗಳಾದ ಶ್ಯಾಮಲಾ ಮೂರ್ತಿ, ಡಾ.ಪುಷ್ಪಾ ಅಯ್ಯಂಗಾರ್, ಕೆ.ಎಸ್.ಪ್ರದೀಪ್‍ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮ.ನ.ಲತಾ ಮೋಹನ್ ಇನ್ನಿತರರು ಉಪಸ್ಥಿತರಿದ್ದರು.

Translate »