ಮಡಿಕೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಪ್ರತಿಭಟನೆ
ಕೊಡಗು

ಮಡಿಕೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಪ್ರತಿಭಟನೆ

April 30, 2019

ಮಡಿಕೇರಿ: ಸರಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ಕಾರ್ಮಿಕ ರನ್ನು ತೆಗೆದುಹಾಕುವ ತೀರ್ಮಾನವನ್ನು ಕೈಬಿಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸ್ವಚ್ಚತಾ ಸಿಬ್ಬಂದಿಗಳು ಪತ್ರಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಿದ ಸ್ವಚ್ಚತಾ ಸಿಬ್ಬಂದಿಗಳು ಜಿಲ್ಲೆಯ ಮಡಿಕೇರಿ, ಕುಶಾಲ ನಗರ, ನಾಪೆÇೀಕ್ಲು, ಸೋಮವಾರಪೇಟೆ, ವಿರಾಜಪೇಟೆ, ಪಾಲಿಬೆಟ್ಟ, ಕುಟ್ಟ, ಗೋಣಿಕೊಪ್ಪ ಸೇರಿದಂತೆ ಇನ್ನಿತರ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಡಿ ದರ್ಜೆ ಹಾಗೂ ನಾನ್ ಕ್ಲೀನಿಂಗ್ ಕಾರ್ಮಿಕರನ್ನು ತೆಗೆದು ಹಾಕುವ ನಿರ್ಧಾರವನ್ನು ಕೈ ಬಿಡುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಐಎನ್‍ಟಿಯುಸಿ ಅಧ್ಯಕ್ಷ ಭರತ್ ಮಾತನಾಡಿ, ಪ್ರಸಕ್ತ ಸಾಲಿನ ಮಾ.22 ರಂದು ಸರ್ಕಾರ ಆದೇಶ ವೊಂದನ್ನು ಹೊರಡಿಸಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ಸಿಬ್ಬಂದಿಗಳಲ್ಲಿ ಅಂದಾಜು ಅರ್ಧದಷ್ಟು ಮಂದಿಯನ್ನು ತೆಗೆಯುವುದಾಗಿ ತಿಳಿಸಿತ್ತು. ಇದೀಗ ಈ ಆದೇಶವನ್ನು ಮೇ-ಜೂನ್ ತಿಂಗಳ ವರೆಗೆ ತಡೆಹಿಡಿಯಲಾಗಿದೆ. ಆದರೂ ಸರ್ಕಾರ ತನ್ನ ಆದೇಶ ವನ್ನು ಜಾರಿ ಮಾಡುವ ಆತಂಕವಿದೆ ಎಂದು ಹೇಳಿದರು.

ಗುತ್ತಿಗೆ ಆಧಾರದ ನೌಕರರ ನೇಮಕದಲ್ಲಿ ನಡೆಯುತ್ತಿ ರುವ ಭ್ರಷ್ಟಾಚಾರದಿಂದ ನಷ್ಟವಾಗುತ್ತಿದೆಯಾದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಸರ್ಕಾರ ಕಾರಣವನ್ನು ನೀಡುತ್ತಿದೆ. ಹೊರ ಜಿಲ್ಲೆಗಳಲ್ಲಿ ಇಂತಹ ಪ್ರಸಂಗಗಳು ನಡೆದಿರಬಹುದು. ಆದರೆ, ಪ್ರಾಮಾಣಿಕವಾಗಿ ಹಲವಾರು ವರ್ಷಗಳಿಂದ ಆಸ್ಪತ್ರೆಗಳಲ್ಲಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಬದುಕು ಇದರಿಂದ ಸಂಕಷ್ಟಕ್ಕೆ ಸಿಲುಕಲಿದೆ. ಪ್ರಸ್ತುತ ಮಡಿಕೇರಿಯ ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿರುವ ಅಂದಾಜು 220 ನೌಕರರಲ್ಲಿ 30 ರಿಂದ 40 ಮಂದಿ ನೌಕರರನ್ನು, ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿನ 36 ಸಿಬ್ಬಂದಿಗಳಲ್ಲಿ 15 ಮಂದಿಯನ್ನು, ಸೋಮವಾರಪೆಟೆ ಆಸ್ಪತ್ರೆಯ ಅಂದಾಜು 30 ಸಿಬ್ಬಂದಿಗಳಲ್ಲಿ 15 ಮಂದಿ ಯನ್ನು ಕೆಲಸದಿಂದ ತೆಗೆದು ಹಾಕುವ ಹುನ್ನಾರಗಳು ನಡೆದಿದೆಯೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಯಾವುದೇ ಕಾರಣಕ್ಕೂ ನೌಕರರನ್ನು ಕೆಲಸ ದಿಂದ ತೆಗೆದು ಹಾಕಬಾರದೆಂದು ಭರತ್ ಆಗ್ರಹಿಸಿದರು.

ಬೇಡಿಕೆಗಳು: ಗುತ್ತಿಗೆದಾರರು ಕಾರ್ಮಿಕರ ವೇತನವನ್ನು ತಿಂಗಳ 5ನೇ ತಾರೀಖಿನಂದು ಸಮರ್ಪಕವಾಗಿ ನೀಡಬೇಕು, ಬಾಕಿ ಇರುವ ವೇತನ ಕೂಡಲೇ ನೀಡಬೇಕು, ಗುತ್ತಿಗೆದಾರರು ಕಾರ್ಮಿಕರ ವೇತನದಿಂದ ಕಡಿತಗೊಳಿಸುವ ಪಿಎಫ್ ಹಣ ವನ್ನು, ಮಾಲೀಕರು ನೀಡಬೇಕಾದ ಹಣವನ್ನು ಪಿಎಫ್ ಕಛೇರಿಗೆ ಸಮಯಕ್ಕೆ ಸರಿಯಾಗಿ ಪಾವತಿಸಿ ಪಿಎಫ್ ಸಂಖ್ಯೆ ನೀಡಬೇಕು, ವರ್ಷಕ್ಕೆ 2 ಜೊತೆ ಸಮವಸ್ತ್ರ ಕಡ್ಡಾಯವಾಗಿ ನೀಡಬೇಕು, ಸರ್ಕಾರ ನಿಗಧಿ ಪಡಿಸಿರುವ ವೇತನ ಸರಿ ಯಾದ ರೀತಿಯಲ್ಲಿ ನೀಡಬೇಕು, ಮಾಸಿಕ 18 ಸಾವಿರ ಕನಿಷ್ಟ ವೇತನ ನೀಡಬೇಕು, ಕಾರ್ಮಿಕರಿಂದ ಇಎಸ್‍ಐ ಹಣವನ್ನು ಕಡಿತಗೊಳಿಸಿದ್ದು, ಆಸ್ಪತ್ರೆಯಲ್ಲಿ ಇದುವರೆಗೂ ಗುರುತಿಸಿಲ್ಲ ಆದ್ದರಿಂದ ತಕ್ಷಣ ಗುರುತಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಕಾರ್ಯದರ್ಶಿ ಜಾನಕಿ, ಖಜಾಂಚಿ ಲೋಕೇಶ್, ಸದಸ್ಯರುಗಳಾದ ನವೀನ್, ಮಂಜುಳಾ, ಓಮನ ಉಪಸ್ಥಿತರಿದ್ದರು.

Translate »