ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಮಾಜಿ ಶಾಸಕ ಎಂಕೆಎಸ್ 2 ಲಕ್ಷ ನೆರವು
ಮೈಸೂರು

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಮಾಜಿ ಶಾಸಕ ಎಂಕೆಎಸ್ 2 ಲಕ್ಷ ನೆರವು

August 9, 2019

ಮೈಸೂರು, ಆ.8(ಪಿಎಂ)-ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗಾಗಿ ವೈಯ ಕ್ತಿಕವಾಗಿ 2 ಲಕ್ಷ ರೂ. ನೀಡುತ್ತಿರುವುದಾಗಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಯಕ್ತಿಕ ನೆರವು ನೀಡುವ ಜೊತೆಗೆ ಎಂಕೆಎಸ್ ಬ್ರಿಗೇಡ್ ಹಾಗೂ ಜನಸ್ಪಂದನಾ ಟ್ರಸ್ಟ್ ಸಹಯೋಗ ದಲ್ಲಿ ನೆರೆ ಸಂತ್ರಸ್ತರ ನೆರವಿಗಾಗಿ ಅಗತ್ಯ ಸಾಮಗ್ರಿಗಳನ್ನು ಸಂಗ್ರಹ ಮಾಡಲು ಉದ್ದೇಶಿಸಲಾಗಿದೆ. ಸಹಾಯ ಮಾಡಲಿಚ್ಛಿಸುವವರು ಕುವೆಂಪು ನಗರದ ಚಿಕ್ಕಮ್ಮಾನಿಕೇತನ ಮಂಟಪಕ್ಕೆ ತಲುಪಿಸಬಹುದು. ವಿವರ ಗಳಿಗೆ ಮೊ.ಸಂ. 9886752274, 9449841010 ಅನ್ನು ಸಂಪರ್ಕಿಸಬಹುದು ಎಂದರು. ಪಾಲಿಕೆ ಸದಸ್ಯ ಲೋಕೇಶ್‍ಪಿಯಾ, ಮಾಜಿ ಸದಸ್ಯ ಎಂ.ಸುನೀಲ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »