ವಿಶ್ವ ಕನ್ನಡ ಸಮ್ಮೇಳನಕ್ಕೆ ಕಿರುತೆರೆ ನಟಿ ಯಮುನಾ ಶ್ರೀನಿಧಿ ಸಾಂಸ್ಕøತಿಕ ರಾಯಭಾರಿ
ಮೈಸೂರು

ವಿಶ್ವ ಕನ್ನಡ ಸಮ್ಮೇಳನಕ್ಕೆ ಕಿರುತೆರೆ ನಟಿ ಯಮುನಾ ಶ್ರೀನಿಧಿ ಸಾಂಸ್ಕøತಿಕ ರಾಯಭಾರಿ

August 9, 2019

ಮೈಸೂರು, ಆ.8(ಪಿಎಂ)- ನಾವಿಕ ಸಂಸ್ಥೆ (ನಾರ್ತ್ ಅಮೆರಿಕ ವಿಶ್ವ ಕನ್ನಡಿಗರ ಆಗರ) ಹಮ್ಮಿಕೊಂಡಿರುವ 5ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ತಮ್ಮನ್ನು ಸಾಂಸ್ಕøತಿಕ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಭರತನಾಟ್ಯ ಕಲಾವಿದೆ, ಸಿನಿಮಾ ಹಾಗೂ ಕಿರುತೆರೆ ನಟಿ ವಿದುಷಿ ಯಮುನಾ ಶ್ರೀನಿಧಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲೇ ಹುಟ್ಟಿ ಬೆಳೆದ ನಾನು 17 ವರ್ಷ ಅಮೇರಿಕದ ಹೊಸ್ಟನ್ ನಗರದಲ್ಲಿ ನೆಲೆಸಿ 700ಕ್ಕೂ ಹೆಚ್ಚು ಮಂದಿಗೆ ಭರತನಾಟ್ಯ ಕಲಿಸಿದ್ದು, ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಆ.30, 31 ಹಾಗೂ ಸೆ.1ರಂದು ಅಮೇರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ನಡೆಯಲಿರುವ ನಾವಿಕ 5ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ನನ್ನನ್ನು ಸಾಂಸ್ಕøತಿಕ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದರು.

 

Translate »