ನಂಜನಗೂಡಿಗೆ ಪ್ರಪ್ರಥಮವಾಗಿ ಕೊರೋನ ಎಂಬ ಮಹಾಮಾರಿ ವೈರಸ್ ತಂದು  ಹಂಚಿದ ಕೀರ್ತಿ ಜುಬೀಲಂಟ್ ಕಾರ್ಖಾನೆಗೆ  ಸಲ್ಲುತ್ತದೆ
ಮೈಸೂರು

ನಂಜನಗೂಡಿಗೆ ಪ್ರಪ್ರಥಮವಾಗಿ ಕೊರೋನ ಎಂಬ ಮಹಾಮಾರಿ ವೈರಸ್ ತಂದು ಹಂಚಿದ ಕೀರ್ತಿ ಜುಬೀಲಂಟ್ ಕಾರ್ಖಾನೆಗೆ ಸಲ್ಲುತ್ತದೆ

March 29, 2020

ಮೈಸೂರು,ಮಾ.29: ನಂಜನಗೂಡು ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಜುಬೀಲಂಟ್ ಔಷಧಿ ತಯಾರಿಕಾ ಕಾರ್ಖಾನೆ.

ಈ ಕಾರ್ಖಾನೆಯಲ್ಲಿ ನೌಕರನಾಗಿದ್ದ ವ್ಯಕ್ತಿಯೊಬ್ಬನಿಗೆ ಕರೋನವೈರಸ್ ದೃಢಪಟ್ಟಿದ್ದು ಜಿಲ್ಲೆಯ ಮೂರನೇ ಸೋಂಕಿತ ವ್ಯಕ್ತಿ ಯಾಗಿದ್ದ. ಇದರಿಂದ ಬೆಚ್ಚಿಬಿದ್ದ ಜಿಲ್ಲಾ ಮತ್ತು ತಾಲೂಕು ಆಡಳಿತ ಕಾರ್ಖಾನೆಗೆ ತೆರಳಿ ಆತನ ಜೊತೆ ಸಂಪರ್ಕದಲ್ಲಿದ್ದ ವರನ್ನು ಸೇರಿದಂತೆ ಅಲ್ಲಿನ ಸಾವಿರಾರು ಕಾರ್ಮಿಕರಿಗೆ ಕ್ವಾರಂಟೈನ್ ಸೀಲ್ ಹಾಕಿ ಎಲ್ಲರನ್ನೂ ಹೋಂ ಕ್ವಾರಂಟೈನ್ನಲ್ಲಿರುವಂತೆ ಕಟ್ಟುನಿಟ್ಟಿನ ಆದೇಶ ಮಾಡಿ ಕಾರ್ಖಾನೆಗೂ ಸಹ ಬೀಗ ಜಡಿಯಲಾಗಿತ್ತು

ವಿಪರ್ಯಾಸವೆಂದರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊದಲಿನ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ವರನ್ನು ತಪಾಸಣೆಗೆ ಒಳಪಡಿಸಿದಾಗ ಮತ್ತೆ ಐವರಿಗೆ ಸೋಂಕು ದೃಡಪಟ್ಟಿದೆ.

ಇದರಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ ಯಲ್ಲದೆ ನಂಜನಗೂಡನ್ನು ಕೋರೋನ redzone ಎಂದು ಘೋಷಣೆ ಮಾಡಿ ಎಲ್ಲಾ ಕಡೆಯಿಂದ ನಂಜನಗೂಡಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಇದರಿಂದ ನಂಜನಗೂಡು ಮತ್ತು ಸುತ್ತಮುತ್ತಲಿನ ಜನತೆ ದಿಗ್ಭ್ರಮೆಗೆ ಒಳಗಾಗಿ ಭಯಭೀತರಾಗಿದ್ದಾರೆ.

ಕಾರ್ಖಾನೆಯ ನೌಕರರು ನಂಜನಗೂಡು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ ಆದರೆ ಅದರಲ್ಲಿ ಕೆಲವರು ಇದ್ಯಾವುದನ್ನು ಲೆಕ್ಕಿಸದೆ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಿರು ಗಾಡುತ್ತಿರುವುದರಿಂದ ಜನರು ಗಾಬರಿಯಾಗಿದ್ದಾರೆ.

ಈ ಸೋಂಕಿತ ಆರು ಜನರಿಂದ ಇನ್ನೆಷ್ಟು ಅಮಾಯಕ ಜನರಿಗೆ ಹರಡಿದೆಯೋ ಎಂಬ ಆತಂಕ ನಂಜನಗೂಡಿನ ಜನತೆಗೆ ಎದುರಾಗಿ ಮನೆಯಿಂದ ಹೊರ ಬರಲು ಹಿಂದೇಟು ಹಾಕಿ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

ಈ ಸೂಕ್ಷ್ಮ ಘಟನೆಯಿಂದ ಎಚ್ಚೆತ್ತ ನಂಜನಗೂಡು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಮುಚ್ಚಿಸಿ ಯಾವುದೇ ವಾಹನಗಳು ಮತ್ತು ಸಾರ್ವಜನಿಕರು ರಸ್ತೆಗೆ ಇಳಿಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿದೆ.

ಈ ಘಟನೆಯಿಂದ ಇಡೀ ನಂಜನಗೂಡು ಸ್ತಬ್ಧವಾಗಿ ಒಂದುರೀತಿ ಸ್ಮಶಾನ ಮೌನ ಆವರಿಸಿದಂತಾಗಿದೆ.

ಒಟ್ಟಾರೆ ಇಂತಹ ದೊಡ್ಡ ದೊಡ್ಡ ಕಾರ್ಖಾನೆಗಳು ಜನತಾ ಕರ್ಫ್ಯೂ ಮತ್ತು ಇಂಡಿಯಾ ಲಾಕ್ ಡೌನ್ ಅಂತಹ ಕಾರ್ಯಕ್ರಮಗಳನ್ನು ಪರಿಪಾಲಿಸಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲವೇನೋ ಎಂಬುದು ಸಾರ್ವಜನಿಕರ ಅಭಿಪ್ರಾಯ

Translate »