ಕೆದಮುಳ್ಳೂರಿನಲ್ಲಿ ನಿರಾಶ್ರಿತರ ಮನೆ ನಿರ್ಮಾಣಕ್ಕೆ ಭೂಮಿಪೂಜೆ
ಕೊಡಗು

ಕೆದಮುಳ್ಳೂರಿನಲ್ಲಿ ನಿರಾಶ್ರಿತರ ಮನೆ ನಿರ್ಮಾಣಕ್ಕೆ ಭೂಮಿಪೂಜೆ

March 3, 2020

ವೀರಾಜಪೇಟೆ,ಮಾ.2-ಪರಿಶಿಷ್ಟ ಪಂಗ ಡದ ಯೋಜನೆಯಡಿಯಲ್ಲಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಎಕರೆ ಪೈಸಾರಿ ಜಾಗದ ಬಾರಿಕಾಡುವಿನಲ್ಲಿ ನಿರಾ ಶ್ರಿತ ಫಲಾನುಭವಿಗಳಿಗೆ 129 ಮನೆಗಳ ನಿರ್ಮಾಣ ಮಾಡಲು ಮತ್ತು ಮೂಲ ಭೂತ ಸೌಲಭ್ಯಗಳನ್ನು ಒದಗಿಸಲು ಒಟ್ಟು ರೂ,13 ಕೋಟಿ ಅನುದಾನದ ಯೋಜನೆ ತಯಾರಿಸಿರುವುದಾಗಿ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿ ಕಾಡುವಿನಲ್ಲಿ ನಿರಾಶ್ರಿತರ ಮನೆಗಳ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಬೋಪಯ್ಯ, ಪೈಸಾರಿ ಜಾಗದಲ್ಲಿ ಸರಕಾರದ ನಿಯಮ ದಂತೆ ರೂ.5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗುವುದು. ಅಧಿಕಾರಿ ಗಳು 129 ಮಂದಿ ಫಲಾನುಭವಿಗಳಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಮನೆಗಳನ್ನು ನಿಗಧಿತ ಅವಧಿಯಲ್ಲಿ ಮುಗಿಸಬೇಕು. ಸ್ಥಳೀಯ ಫಲಾನುಭವಿ ಗಳಿಗೂ ಮನೆ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು. ಈಗಾಗಲೇ 78 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡ ಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ಗಳನ್ನು ಹಸ್ತಾಂತರಿಸಲಾಗುವುದು. ಪ್ರತಿಯೊ ಬ್ಬರು ಸ್ವಂತ ನೆಲೆಗಟ್ಟಿನಲ್ಲಿ ಶಾಶ್ವತವಾಗಿ ಸೂರು ಒದಗಿಸಬೇಕೆಂಬುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಉದ್ದೇಶ ವಾಗಿದೆ. ಸರಕಾರದ ಯೋಜನೆಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿ ಕೊಳ್ಳುವಂತಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಅವರು ಮಾತನಾಡಿ, ಸರಕಾರ ನಿರಾಶ್ರಿತರಿಗೆ ಯೋಜನೆಯಂತೆ ಮನೆ ಕಟ್ಟಿಕೊಡಲು ಬಾರಿಕಾಡು ಪೈಸಾರಿ ಯನ್ನು ಆಯ್ಕೆ ಮಾಡಿಕೊಂಡಿದ್ದು, ಈ ಯೋಜನೆಯಿಂದ ಆಯ್ದ ಫಲಾನುಭವಿ ಗಳಿಗೆ ಶಾಶ್ವತ ಸೂರು ದೊರೆಯಲಿದೆ. ಇದನ್ನು ಫಲಾನುಭವಿಗಳು ಸದುಪಯೋ ಗಪಡಿಸಿಕೊಳ್ಳಬೇಕು. ಇಂತಹ ಯೋಜನೆ ಗಳ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದರು.

ಭೂಮಿ ಪೂಜೆ ನಂತರ ನಡೆದ ಸಮಾ ರಂಭದಲ್ಲಿ ಪ,ಪಂಗಡದ ಯೋಜನೆಯ ಸಮನ್ವಯಾಧಿಕಾರಿ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ನಿರ್ದೇಶಕ ರಘು ನಾಣಯ್ಯ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್, ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಕೆದಮುಳ್ಳೂರು ಗ್ರಾಮ ಪಂಚಾ ಯಿತಿ ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷೆ ಅನಿತಾ, ಸದಸ್ಯರುಗಳಾದ ಎಂ.ಎಂ.ಪರ ಮೇಶ್ವರ, ಇಸ್ಮಾಯಿಲ್, ಕಿರಣ್ ಕುಮಾರ್, ಚುಕ್ಕು ದೇವಯ್ಯ, ಎನ್.ಯು. ತೇಜ, ಅರುಣ್, ಗ್ರಾಮದ ಪ್ರಮುಖರಾದ ಮಾಳೇಟಿರ ಕಾವೇರಪ್ಪ, ಚೋಟು ಬಿದ್ದಪ್ಪ, ಪ್ರವೀಣ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಗುತ್ತಿಗೆದಾರ ಪಾರು ವಂಗಡ ರಾಜಪ್ಪ. ಐ.ಟಿ.ಡಿಪಿ ಅಧಿಕಾರಿ ಪ್ರಮೋದ್, ಜಿಲ್ಲಾ ಪಂಚಾಯಿತಿ ಸಹಾಯಕ ಅಭಿಯಂತರ ಮಹದೇವ್, ಮಡಿಕೇರಿಯ ಕೆ.ಆರ್.ಐ.ಡಿ.ಎಲ್‍ನ ಸಹಾಯಕ ಅಭಿಯ ಂತರ ಪ್ರಮೋದ್ ಹಾಗೂ ಗ್ರಾಮಸ್ಥರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

Translate »