ಮಾ.6, ಪುರಾತತ್ಪ ಆಧಾರ ಕುರಿತ ವಿಚಾರಗೋಷ್ಠಿ
ಕೊಡಗು

ಮಾ.6, ಪುರಾತತ್ಪ ಆಧಾರ ಕುರಿತ ವಿಚಾರಗೋಷ್ಠಿ

March 3, 2019

ವಿರಾಜಪೇಟೆ: ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಮಾ.6 ರಂದು ವಿಶ್ವವಿದ್ಯಾನಿಲಯ ಮಟ್ಟದ ಕೊಡಗಿನ ಇತಿಹಾಸ ಅಧ್ಯಯನದಲ್ಲಿ ಪುರಾತತ್ಪ ಆಧಾರಗಳ ಮಹತ್ವ ವಿಷಯದ ಬಗ್ಗೆ ಒಂದು ದಿನದ ವಿಚಾರ ಗೋಷ್ಠಿಯನ್ನು ಆಯೋಜಿಸಲಾಗಿದೆ.

ಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ.ಪೆನ್ನೆಕರ್ ನೆರವೇರಿಸಲಿದ್ದು, ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವಿಶ್ವವಿದ್ಯಾ ನಿಲಯ ಕಾಲೇಜಿನ ಪ್ರೊ. ಡಾ.ಗಣಪತಿ ಗೌಡ ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಟಿ.ಕೆ.ಬೋಪಯ್ಯ ವಹಿಸಲಿದ್ದಾರೆ.

ನಂತರ ನಡೆಯುವ ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗಕ್ಕೆ ಸಂಬಂಧಿಸಿದಂತೆ ತೋಟ, ಬೈಲು, ಪಾರ್ವತಿ, ಮೋಹನ್ ಅವರಿಂದ ಪಾರಂಪರಿಕ ವಸ್ತುಗಳ ಪ್ರದರ್ಶನ, ಎಂ.ಅಜಯ್ ನಾರಾಯಣ ರಾವ್ ಮತ್ತು ದನುಷ್ ರಾವ್ ಅವರಿಂದ ದೇಶ-ವಿದೇಶಿ ನಾಣ್ಯ, ಕರೆನ್ಸಿ ಹಾಗೂ ಅಂಚೆ ಚೀಟಿಗಳ ಪ್ರದರ್ಶನ ಏರ್ಪಡಿಸ ಲಾಗಿದೆ ಎಂದು ಪ್ರಥಮ ದರ್ಜೆ ಕಾಲೇಜಿನ ಪ್ರಕಟಣೆ ತಿಳಿಸಿದೆ.

Translate »