ಏಷಿಯನ್ ಪೇಯಿಂಟ್ಸ್‍ಗೆ ಸಚಿವ ಜಾರ್ಜ್ ಭೇಟಿ
ಮೈಸೂರು

ಏಷಿಯನ್ ಪೇಯಿಂಟ್ಸ್‍ಗೆ ಸಚಿವ ಜಾರ್ಜ್ ಭೇಟಿ

July 25, 2018

ನಂಜನಗೂಡು: ಮಂಗಳ ವಾರ ಬೆಳಿಗ್ಗೆ ಇಲ್ಲಿನ ಕೈಗಾರಿಕಾ ಪ್ರದೇಶದ ಲ್ಲಿರುವ ಏಷಿಯನ್ ಪೇಯಿಂಟ್, ಕಾರ್ಖಾನೆಗೆ ಭೇಟಿ ನೀಡಿದ್ದ ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್‍ರವರು ಮಳೆ ಕಾರಣ ಕೇವಲ 5 ನಿಮಿಷದಲ್ಲಿ ಪ್ರವಾಸವನ್ನು ಮೊಟಕು ಗೊಳಿಸಿದರು.

ಇದೇ ವೇಳೆ ಸಚಿವರಿಗೆ ವರುಣಾ ಕ್ಷೇತ್ರದ ಶಾಸಕ ಡಾ. ಎಸ್.ಯತೀಂದ್ರ ಸಿದ್ದರಾಮಯ್ಯ, ಹೂಗುಚ್ಚ ನೀಡಿ ಬರಮಾಡಿ ಕೊಂಡರು. ಹಾಗೂ ಈ ಭಾಗದ ನಿರುದ್ಯೋಗ ಸಮಸ್ಯೆಯನ್ನು ಸಚಿವರಿಗೆ ಮನವರಿಕೆ ಮಾಡಿದರು. ಸಚಿವ ಜಾರ್ಜ್ ಮಾತನಾಡಿ ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗಿದ್ದು, ಚರ್ಚಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳು ವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಮಹೇಶ್ ಪ್ರಸಾದ್, ಜಿ.ಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ತಾ.ಪಂ ಸದಸ್ಯೆ ಲಕ್ಷ್ಮಿ ಬಿ.ಪಿ. ಮಹದೇವು, ರಾಜ್ಯ ಗೃಹ ಮಂಡಳಿ ಮಾಜಿ ಸದಸ್ಯ ಟಿ.ಕೆ.ಮಾಲೇ ಗೌಡ, ಗ್ರಾ.ಪಂ ಸದಸ್ಯರಾದ ಪಿ.ಗಿರೀಶ್, ಕಾಂಗ್ರೆಸ್ ಮುಖಂಡ ಇಮ್ಮಾವು ಶಿವಣ್ಣ, ಹೆಬ್ಯಾ ರಾಜು, ಮಾಜಿ ಸದಸ್ಯ ಪ್ರಭು, ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Translate »