ಎಂ.ಎಸ್.ಕಿರಣ ಮೂಗೂರು ಗ್ರಾಪಂ ನೂತನ ಉಪಾಧ್ಯಕ್ಷ
ಮೈಸೂರು

ಎಂ.ಎಸ್.ಕಿರಣ ಮೂಗೂರು ಗ್ರಾಪಂ ನೂತನ ಉಪಾಧ್ಯಕ್ಷ

November 24, 2018

ತಿ.ನರಸೀಪುರ: ತಾಲೂಕಿನ ಮೂಗೂರು ಗ್ರಾಪಂ ನೂತನ ಉಪಾಧ್ಯಕ್ಷ ರಾಗಿ ಎಂ.ಎಸ್.ಕಿರಣ ಆಯ್ಕೆಯಾದರು.
ತಾಲೂಕಿನ ಮೂಗೂರು ಗ್ರಾಪಂನಲ್ಲಿ ಹಿಂದಿನ ಉಪಾಧ್ಯಕ್ಷ ಎಂ.ಬಿ.ಅರವಿಂದ ರಮೇಶ ನಿಧನರಾಗಿದ್ದ ಹಿನ್ನೆಲೆಯಲ್ಲಿ ಇಂದು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆ ಯಿತು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಎಂ.ಎಸ್.ಕಿರಣ ಹಾಗೂ ಎಂ.ಎನ್. ರಾಜು ನಾಮಪತ್ರ ಸಲ್ಲಿಸಿದ್ದರು. 14 ಮತ ಗಳನ್ನು ಪಡೆದ ಎಂ.ಎಸ್.ಕಿರಣ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡರೆ, ಪ್ರತಿಸ್ಪರ್ಧಿ ಎಂ.ಎನ್.ರಾಜು 10 ಮತ ಪಡೆದು ಪರಾಭವ ಗೊಂಡರು. ಒಂದು ಕುಲಗೆಟ್ಟ ಮತವಾಗಿ ಚಲಾವಣೆಯಾಗಿತ್ತು. ಚುನಾವಣಾಧಿಕಾರಿ ಯಾಗಿ ಕಾವೇರಿ ನೀರಾವರಿ ನಿಗಮದ ಎಇಇ ಸಿ.ಕೆ.ಕೃಷ್ಣಯ್ಯ ಕಾರ್ಯ ನಿರ್ವಹಿಸಿ ದರು. ಚುನಾವಣೆ ವೇಳೆ 25 ಸದಸ್ಯರು ಹಾಜರಿದ್ದರು.
ಮೂಗೂರು ಗ್ರಾಪಂನಲ್ಲಿ ಹಿಡಿತ ಸಾಧಿ ಸುವಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಬಸವ ರಾಜು ಯಶಸ್ವಿಯಾಗಿರುವುದರಿಂದ ಫಲಿ ತಾಂಶ ಪ್ರಕಟಗೊಳ್ಳುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋ ತ್ಸವ ಆಚರಿಸಿದರು.
ಫಲಿತಾಂಶದ ನಂತರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಬಸವರಾಜು ಮಾತ ನಾಡಿದರು. ಜಿಪಂ ಮಾಜಿ ಸದಸ್ಯೆ ಎಂ.ಸುಧಾ ಮಹದೇವಯ್ಯ, ಅಧ್ಯಕ್ಷೆ ಪಿ.ಶೊಭಾ ಪುಟ್ಟ ಮಾದನಾಯಕ, ಸದಸ್ಯರಾದ ಎಂ.ಪಿ. ನಿಂಗಪ್ಪ, ಎಂ.ಬಿ.ಸಾಗರ್, ಎಂ.ಶಿವಮೂರ್ತಿ, ಮಾದೇಶ, ಎಸ್.ಮಹದೇವಸ್ವಾಮಿ, ಎಂ. ಎಂ.ದಿಲೀಪ್ ಕುಮಾರ್, ಚಿನ್ನಸ್ವಾಮಿ ಶೆಟ್ಟಿ, ಮಂಜುಳಾ, ಎಂ.ಶಶಿಕಲಾ, ಎಂ.ರಾಜಮ್ಮ, ಸವಿತಾ ಕುಮಾರಸ್ವಾಮಿ, ನೀಲಮ್ಮ, ಅರ್ಚಕ ಎಂ.ಡಿ.ಸುಂದರಪ್ಪ, ಮಾಜಿ ಅಧ್ಯಕ್ಷ ಎಂ. ಎನ್.ಸೋಮಣ್ಣ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಪಿ.ಮರಿಸ್ವಾಮಿ, ಡೈರಿ ಕಾರ್ಯದರ್ಶಿ ಎಂ.ನಾಗೇಂದ್ರ, ಮಾಜಿ ಅಧ್ಯಕ್ಷ ಎಂ.ಬಿ.ಕೆಂಪಣ್ಣ, ಮುಖಂಡರಾದ ನಾಗಪ್ಪ, ಗುರುಸ್ವಾಮಿ, ಎಂ.ಬಿ.ನಾಗರಾಜ ಮೂರ್ತಿ, ನಂಜುಂಡನಾಯಕ, ಬಂಡಿ ಬೀದಿ ಶೇಖರ, ಮಾರ್ಕೆಟ್ ನಾಗರಾಜು, ಮಹದೇವಯ್ಯ, ಎಸ್ಟೇಟ್ ನಾಗರಾಜು ಹಾಗೂ ಇನ್ನಿತರರಿದ್ದರು.

Translate »