ಎಂ.ಎಸ್.ಶೃತಿ ಗೋಕುಲ್ ಭರತನಾಟ್ಯ ರಂಗಪ್ರವೇಶ
ಮೈಸೂರು

ಎಂ.ಎಸ್.ಶೃತಿ ಗೋಕುಲ್ ಭರತನಾಟ್ಯ ರಂಗಪ್ರವೇಶ

June 7, 2019

ಮೈಸೂರು, ಜೂ. 6- ಶ್ರೀ ಉಮಾಮಹೇಶ್ವರ ನೃತ್ಯ ಕಲಾಕ್ಷೇತ್ರ ಟ್ರಸ್ಟ್ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಜೂ. 9 ರಂದು ಸಂಜೆ 6 ಗಂಟೆಗೆ ನಾಟ್ಯ ವಿದುಷಿ ಎಂ.ಎಸ್. ಶೃತಿ ಗೋಕುಲ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯ ಕ್ರಮ ಏರ್ಪಡಿಸಲಾಗಿದೆ. ವಿದುಷಿ ಲಕ್ಷ್ಮಿಕುಮಾರ್ (ನಟುವಾಂಗ), ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ (ಗಾಯನ), ಹೆಚ್.ಎಲ್.ಶಿವಶಂಕರಸ್ವಾಮಿ (ಮೃದಂಗ), ವಿದ್ವಾನ್ ದೀಪಕ್ ಹೆಬ್ಬಾರ್ (ಕೊಳಲು) ಸಹಕಾರ ನೀಡಲಿದ್ದಾರೆ. ನಗರದ ಪ್ರಮತಿ ಹಿಲ್ ವ್ಯೂ ಅಕಾಡೆಮಿ ಕಾರ್ಯದರ್ಶಿ ಹೆಚ್.ವಿ. ರಾಜೀವ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ನೃತ್ಯಗಿರಿ ನಿರ್ದೇ ಶಕರಾದ ಡಾ. ಕೃಪಾ ಫಡ್ಕೆ, ಬಲ್ಲೇನಹಳ್ಳಿ ಮಂಜುನಾಥ್ ಭಾಗವಹಿಸುವರು.

Translate »