ನಾಗಮಣಿ ಮಾರಾಟ ಯತ್ನ: ವ್ಯಕ್ತಿ ಬಂಧನ
ಚಾಮರಾಜನಗರ

ನಾಗಮಣಿ ಮಾರಾಟ ಯತ್ನ: ವ್ಯಕ್ತಿ ಬಂಧನ

November 29, 2018

ಹನೂರು: ತಾಲೂಕಿನಲ್ಲಿ ಅಮಾಯಕರನ್ನು ವಂಚಿಸಿ ನಾಗಮಣಿ ಮಾರಾ ಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಜಿಲ್ಲಾ ಸಿಇಎನ್ ಪೊಲೀಸರು ಮಂಗಳವಾರ ಬಂಧಿಸಿ ದ್ದಾರೆ. ತಾಲೂಕಿನ ಎಂ.ಜಿ.ದೊಡ್ಡಿ ಗ್ರಾಮದ ಮುತ್ತು ಬಂಧಿತ ಆರೋಪಿ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರಿಗೆ ದೊರೆತ ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಸಿ.ಇ.ಎನ್ ಇನ್‍ಸ್ಪ್ಪೆಕ್ಟರ್ ರವೀಂದ್ರ ಹಾಗೂ ಎಎಸ್‍ಐಗಳಾದ ಜಯಶಂಕರ್, ಮಹದೇವಪ್ಪ, ಪೇದೆಗಳಾದ ಹೆಚ್.ಡಿ.ಸ್ವಾಮಿ, ಸಿದ್ದ ಮಲ್ಲಶೆಟ್ಟಿ, ವ್ಯಾಪಾರಿಗಳ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಮುತ್ತು ಎಂಬುವನನ್ನು ಬಂಧಿಸಿ ಆತನಿಂದ ಒಂದು ನಾಗಮಣಿಯನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಹನೂರು ಪೆÇಲೀಸ್ ಠಾಣೆ ಸುರ್ಪದಿಗೆ ವಹಿಸಿದ್ದು ಈ ಸಂಬಂಧ ಹನೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »