ವೈನಾಡಲ್ಲಿ ರಾಹುಲ್‍ಗೆ ಎದುರಾಳಿ  ಎನ್‍ಡಿಎ ಅಭ್ಯರ್ಥಿ ತುಷಾರ್ ವೆಲ್ಲಪ್ಪಲ್ಲಿ
ಮೈಸೂರು

ವೈನಾಡಲ್ಲಿ ರಾಹುಲ್‍ಗೆ ಎದುರಾಳಿ ಎನ್‍ಡಿಎ ಅಭ್ಯರ್ಥಿ ತುಷಾರ್ ವೆಲ್ಲಪ್ಪಲ್ಲಿ

April 2, 2019

ಕೇರಳ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಜೊತೆಗೆ ಕೇರಳದ ವೈನಾಡು ಕ್ಷೇತ್ರದಿಂದಲೂ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಇವರ ಎದುರಾಳಿ ಎನ್‍ಡಿಎ ಅಭ್ಯರ್ಥಿ ಯಾರು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಕುತೂಹಲಕ್ಕೆ ತೆರೆ ಎಳೆದಿದ್ದು, ಭಾರತ್ ಧರ್ಮ ಜನ ಸೇನಾ ಪಕ್ಷದ ಅಧ್ಯಕ್ಷ ತುಷಾರ್ ವೆಲ್ಲಪ್ಪಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿ ರಾಹುಲ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ. ತುಷಾರ್ ವೆಲ್ಲಪ್ಪಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿ ರಾಹುಲ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಡೈನಾಮಿಕ್ ಯುವ ಮುಖಂಡರಾಗಿರುವ ತುಷಾರ್, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಕಡೆಗಿನ ನಮ್ಮ ಬದ್ಧತೆಯ ಪ್ರತಿನಿಧಿಯಾಗಿದ್ದಾರೆ. ಎನ್‍ಡಿಎ ಕೇರಳ ರಾಜಕಾರಣದಲ್ಲಿ ಪರ್ಯಾಯವಾಗಲಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಉತ್ತರಪ್ರದೇಶದ ಅಮೇಥಿ ಜೊತೆಗೆ ಕೇರಳದ ವೈನಾಡು ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ನಿನ್ನೆ ಹೇಳುವ ಮೂಲಕ ಈ ಬಗ್ಗೆ ಇದ್ದ ಊಹಾಪೆÇೀಹಗಳಿಗೆ ಕೊನೆ ಯಾಡಿತ್ತು. ವೈನಾಡು ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ಕಾರ್ಯಕರ್ತರ ಒತ್ತಡ ಹೆಚ್ಚಾಗಿದ್ದರಿಂದ ರಾಹುಲ್ ಗಾಂಧಿ ಅಲ್ಲಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಕೆ ಅಂಟೊನಿ ಸ್ಪಷ್ಪಪಡಿಸಿದ್ದರು.

Translate »