ಬಾಲ್ಯಾವಸ್ಥೆಯಲ್ಲಿ ಎಚ್ಚರ ಅಗತ್ಯ
ಕೊಡಗು

ಬಾಲ್ಯಾವಸ್ಥೆಯಲ್ಲಿ ಎಚ್ಚರ ಅಗತ್ಯ

November 17, 2018

ವಿರಾಜಪೇಟೆ: ಮಕ್ಕಳು ಬಾಲ್ಯಾವಸ್ಥೆಯ ಸುಮಧುರ ಕ್ಷಣಗಳನ್ನು ಕಳೆಯುವಾಗ ಎಚ್ಚರಿಕೆ ವಹಿಸುವುದು ಅಗತ್ಯ, ಮಕ್ಕಳಿಗಾಗಿ ವಿಶೇಷ ಕಾನೂನುಗಳಿವೆ. ಅದನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಜಯಪ್ರಕಾಶ್ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ವಿರಾಜಪೇಟೆ, ಮಕ್ಕಳ ಸಹಾಯ ವಾಣಿ 1098 ಸಂಯುಕ್ತ ಆಶ್ರಯದಲ್ಲಿ ”ಚೈಲ್ಡ್ ಲೈನ್ ಸೇ ದೋಸ್ತಿ” ಮತ್ತು ಬಾಲ್ಯಾ ವಸ್ಥೆ ಕಾನೂನುಗಳು ಹಾಗೂ ಮಕ್ಕಳ ನಿಗಾ ಕೇಂದ್ರಗಳ ಬಗ್ಗೆ ವಿರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ, ಮಕ್ಕಳಿಗೆ ದೌರ್ಜನ್ಯಗಳು ನಡೆದರೆ ಕೂಡಲೇ ಶಿಕ್ಷಕರಿಗೆ, ತಮ್ಮ ಪೋಷಕರಿಗೆ ಅಥವ ಪೊಲೀಸ್ ಠಾಣೆಗೆ ತಿಳಿಸುವಂತಾ ಗಬೇಕು. ತಂದೆ-ತಾಯಿ ಮಕ್ಕಳಿಗೆ ವಿದ್ಯೆ ಬುದ್ದಿ ಕಲಿಸಿ ದೊಡ್ಡವರನ್ನಾಗಿ ತಮಗೆ ಆಸರೆ ಯಾಗಲೆಂದು ಎಚ್ಚರಿಕೆಯಿಂದ ಬೆಳೆಸುತ್ತಾರೆ. ಅದನ್ನು ಅರಿತುಕೊಂಡು ಮಕ್ಕಳು ಹಿರಿಯ ರಿಗೆ ಗೌರವ ನೀಡುವುದರೊಂದಿಗೆ ತಮ್ಮ ಗುರಿ ಮುಟ್ಟುವಂತಾಗಬೇಕು. ಮಕ್ಕಳಿಗಾಗಿಯೇ ಇರುವ ಕಾನೂನುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ವಿ.ಎಸ್.ರಾಯ್‍ಡೇವಿಡ್ ಮಾತನಾಡಿ, ಮಕ್ಕಳಿಗೆ ಯಾವುದೇ ತೊಂದರೆಯಾದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದು. ಸಹಾಯ ವಾಣಿ ಸಂಖ್ಯೆ 1098 ನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವೇದಿಕೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾದ ಜೋತಿ, ಮಕ್ಕಳ ಕಲ್ಯಾಣ ಜಿಲ್ಲಾ ಸಮಿತಿಯ ನಮಿತಾರಾವ್, ಮಕ್ಕಳ ಕಲ್ಯಾಣ ಸಮಿತಿಯ ಉಷಾ ಅಣ್ಣಯ್ಯ, ಮತ್ತು ಲತೀಫ್ ಮುಂತಾದವರು ಉಪಸ್ಥಿತರಿದ್ದರು.

Translate »