ಮದ್ಯದಂಗಡಿ ತೆರೆಯುವುದಕ್ಕೆ ವಿರೋಧ
ಮೈಸೂರು

ಮದ್ಯದಂಗಡಿ ತೆರೆಯುವುದಕ್ಕೆ ವಿರೋಧ

June 19, 2018

ಮೈಸೂರು: ಮದ್ಯದಂಗಡಿ ತೆರೆಯಲು ಪರವಾನಗಿ ನೀಡಬಾರದೆಂದು ಆಗ್ರಹಿಸಿ ತಾಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಸೋಮವಾರ ಪರಿಶಿಷ್ಠ ಜನಾಂಗದ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಮದ್ಯದಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದಲ್ಲಿ ಕಾಂಗ್ರೆಸ್ ಮುಖಂಡ ಡಿ.ರಾಜಶೇಖರ್ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಮದ್ಯದಂಗಡಿ ತೆರೆಯದಂತೆ ಘೋಷಣೆ ಕೂಗಿದರು.

ಗ್ರಾಮಕ್ಕೆ ಹೊಂದಿಕೊಂಡತಿರುವ ಹೊರವರ್ತುಲ ರಸ್ತೆ ಪಕ್ಕದಲ್ಲಿ ಮದ್ಯದಂಗಡಿ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಇಲ್ಲಿ ವೃದ್ಧಾಶ್ರಮ, ಸೇರಿದಂತೆ ಗ್ರಾಮಗಳಿಗೆ ಹಾದು ಹೋಗುವ ರಸ್ತೆಗಳಿದ್ದು, ಆಗಾಗ್ಗೆ ಅಪಘಾತಗಳು ಸಂಭವಿಸಿ, ಪ್ರಾಣಹಾನಿಗಳಾಗುತ್ತಿವೆ. ಹೀಗಾಗಿ ಇಲ್ಲಿ ಮದ್ಯದಂಗಡಿ ತೆರೆಯಲು ಅಬಕಾರಿ ಇಲಾಖೆ ಹಾಗೂ ಜಿಲ್ಲಾಡಳಿತ ಪರವಾನಿಗೆ ನೀಡಬಾರದೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಆಲನಹಳ್ಳಿ ಗ್ರಾಮಸ್ಥರಾದ ಆರ್.ಮಹದೇವ್, ಸೋಮಣ್ಣ, ರಾಕೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Translate »