ಬಸವ ಪಥದತ್ತ ನಮ್ಮ ಹೆಜ್ಜೆ
ಮೈಸೂರು

ಬಸವ ಪಥದತ್ತ ನಮ್ಮ ಹೆಜ್ಜೆ

May 7, 2019

ಮೈಸೂರು: ಬಸವ ಜಯಂತಿ ಪ್ರಯುಕ್ತ ಅಖಿಲ ಭಾರತ ವೀರಶೈವ ಮಹಾ ಸಭಾ ವತಿಯಿಂದ ಹಮ್ಮಿಕೊಂಡಿದ್ದ ಬಸವ ಪಥದತ್ತ ನಮ್ಮ ಹೆಜ್ಜೆ ಜಾಗೃತಿ ಕಾರ್ಯ ಕ್ರಮವು ಯಶಸ್ವಿಯಾಗಿ ಜರುಗಿತು. ಗುಂಡ್ಲುಪೇಟೆ ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್ ಈ ಕಾರ್ಯಾಗಾರದ ನೇತೃತ್ವ ವಹಿಸಿ, ಜಾಥಾ ಪೂರ್ಣಗೊಳಿಸಿದರು.

ಅಗ್ರಹಾರದ ಬಸವ ಪುತ್ಥಳಿಯಿಂದ ಹೊರಟ `ನಮ್ಮ ನಡೆ ಬಸವ ಪಥದೆಡೆ, ಜಾಥಾವು ರಾಮಸ್ವಾಮಿ ವೃತ್ತದಿಂದ ನ್ಯಾಯಾಲಯದ ಮುಂಭಾಗ ತಲುಪಿ ಅಲ್ಲಿಂದ ಅಗ್ರಹಾರದ ವೃತ್ತ, ನೂರ ಒಂದು ಗಣಪತಿ ದೇವಸ್ಥಾನ ಅಲ್ಲಿಂದ ಜೆ.ಎಸ್.ಎಸ್. ಆಸ್ಪತ್ರೆಯ ಮಾರ್ಗವಾಗಿ ಮರಳಿ ಬಸವ ಪುತ್ಥಳಿ ತಲುಪಿತು.

ಈ ಸಂದರ್ಭದಲ್ಲಿ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರಾದ ಕಾನ್ಯ ಶಿವಮೂರ್ತಿ, ಪ್ರ.ಸಮಿತಿ ಅಧ್ಯಕ್ಷ ಮಂಜುನಾಥ್, ನಗರ ಅಧ್ಯಕ್ಷ ಮಾರ್ಬಳ್ಳಿ ಚಂದ್ರು, ಜಯಶಂಕರ ಸ್ವಾಮಿ, ಆಲನಹಳ್ಳಿ ಮಹದೇವಸ್ವಾಮಿ, ಜಯಾಗೌಡ, ಮಾಜಿ ನಗರ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್, ಯುವಮುಖಂಡರುಗಳಾದ ರಘು, ಸುನೀಲ್, ಮಹದೇವಪ್ರಸಾದ್, ನಾಗೇಂದ್ರ, ಸಂತೋಷ್, ಪ್ರಸನ್ನ, ಜಯಶಂಕರ್, ಕೀರ್ತಿ ಇನ್ನಿತರರು ಉಪಸ್ಥಿತರಿದ್ದರು,

Translate »