ಅಂಬರೀಶ್‍ಗೆ ಭಾವಪೂರ್ಣ ಶ್ರದ್ಧಾಂಜಲಿ
ಮೈಸೂರು

ಅಂಬರೀಶ್‍ಗೆ ಭಾವಪೂರ್ಣ ಶ್ರದ್ಧಾಂಜಲಿ

November 26, 2018

ತಿ.ನರಸೀಪುರ: ಕಳೆದ ರಾತ್ರಿಯಷ್ಟೇ ಹೃದಯಾಘಾತದಿಂದ ನಿಧನರಾದ ಮಾಜಿ ಸಂಸದ, ಸಚಿವ ಹಾಗೂ ಮೇರುನಟ ಅಂಬರೀಶ್ ಅವರ ನಿಧನಕ್ಕೆ ಪಟ್ಟಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಪಟ್ಟಣದ ಹಳೇ ತಿರುಮಕೂಡಲು ವೃತ್ತ ದಲ್ಲಿ ಜಮಾವಣೆಗೊಂಡ ಅಭಿಮಾನಿಗಳು ಹಾಗೂ ನಿವಾಸಿಗಳು ಅಕಾಲಿಕ ಮರಣ ಹೊಂದಿದ್ದ ಊರಿನ ಮೊಮ್ಮಗ ಹಿರಿಯ ರಾಜಕಾರಣಿ ಹಾಗೂ ಚಿತ್ರನಟ ನಟ ಅಂಬ ರೀಶ್ ಅವರ ಎತ್ತರದ ಕಟೌಟ್‍ಗೆ ಹಾರ ಹಾಕಿ ಪೂಜೆ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಪಿಟೀಲು ಚೌಡಯ್ಯ ವಂಶಸ್ಥರಾದ, ಕಸಬಾ ಪಿಎಸಿಸಿಎಸ್ ನಿರ್ದೇಶಕ ಟಿ.ಸಿ.ಫಣೀಶ್ ಕುಮಾರ್ ಮಾತನಾಡಿ, ನರಸೀಪುರಕ್ಕೂ ಅಂಬರೀಶ್ ಅವರಿಗೂ ಬಾಲ್ಯದ ನಂಟಿದ್ದು, ಕಲೆಯ ಗುಣದಿಂದ ಕನ್ನಡ ಚಲನಚಿತ್ರ ದಲ್ಲಿ ಮೇರು ನಟರಾಗಿ ಬೆಳೆದರು. ಮಂಡ್ಯ ಲೋಕಸಭೆಯ ಮೂಲಕ ರಾಜಕಾರಣವನ್ನು ಪ್ರವೇಶಿಸಿ ಶಾಸಕರಾಗಿ, ಹಿಂದಿನ ಸರ್ಕಾರ ದಲ್ಲಿ ಸಚಿವರಾಗಿದ್ದ ಅಂಬರೀಶ್ ಅವರು ನೇರ ನಡೆ ನುಡಿಗೆ ಹೆಸರುವಾಸಿಯಾಗಿದ್ದರು. ಅವರ ಅಗಲಿಕೆ ರಾಜಕಾರಣ ಮತ್ತು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಸಂತಾಪದ ನುಡಿಗಳನ್ನಾಡಿದರು.

ಕೀಳನಪುರ ಗ್ರಾ.ಪಂ ಪಿಡಿಓ ಗೋವಿಂದ ರಾಜು, ಅಖಿಲ ಕರ್ನಾಟಕ ಡಿಕೆಶಿ ಅಭಿ ಮಾನಿಗಳ ಸಂಘದ ಅಧ್ಯಕ್ಷ ಆರ್.ಚೇತನ್, ಯಜಮಾನರಾದ ಟಿ.ಎಂ.ನಾಗಣ್ಣ, ಟಿ.ಪಿ.ಸೋಮಶೇಖರ್, ಮುಖಂಡರಾದ ರಾಮ, ಲಕ್ಷ್ಮಣ, ಟಿ.ಬಿ.ಸುರೇಶ. ರಜನಿ, ಕುಳ್ಳೇಗೌಡ, ಅಶೋಕ, ಬಳ್ಳಾರಿ ನಾಗ, ವಿನೋದ, ನಾಗರಾಜು(ದೊಡ್ಡಣ್ಣ), ಶೇಖರ, ಆಕಾಶ್, ಮೋಹನ್, ಕ್ವಾಲಿಟಿ ಹರೀಶ, ಮಹದೇವ, ಮಣಿಕಂಠ, ಎಂ.ರವಿಕುಮಾರ್, ಅಭಿಷೇಕ, ಕಾರ್ತಿಕ್ ಹಾಗೂ ಇನ್ನಿತರರಿದ್ದರು.

Translate »