ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಆರ್.ಅಶೋಕ್ ಹುಟ್ಟುಹಬ್ಬ ಆಚರಣೆ
ಮೈಸೂರು

ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಆರ್.ಅಶೋಕ್ ಹುಟ್ಟುಹಬ್ಬ ಆಚರಣೆ

July 2, 2019

ಮೈಸೂರು,ಜು.1(ಎಂಟಿವೈ)- ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ತಮ್ಮ ಹುಟ್ಟುಹಬ್ಬವನ್ನು ಮೈಸೂರಿನ ಜ್ಯೋತಿ ನಗರದಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿರುವವರಿಗೆ ಅನ್ನ ಸಂತರ್ಪಣೆ ಏರ್ಪಡಿಸುವ ಮೂಲಕ ಆಚರಿಸಿಕೊಂಡರು.

ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊ ಳ್ಳಲು ಭಾನುವಾರ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಶಾಸಕ ಆರ್.ಅಶೋಕ್ ಇಂದು ಬೆಳಿಗ್ಗೆ ಕೆ.ಟಿ.ಸ್ಟ್ರೀಟ್‍ನಲ್ಲಿರುವ ಕಾಲ ಭೈರವೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಪಕ್ಷದ ಮುಖಂಡ ರೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡ ದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬೆಟ್ಟದಿಂದ ಮೈಸೂರಿಗೆ ಬಂದ ಶಾಸಕರು ನಜರ್‍ಬಾದ್‍ನಲ್ಲಿರುವ ಖಾಸಗಿ ಹೊಟೇಲ್‍ಗೆ ಆಗಮಿಸಿ ಹಿತೈಷಿ ಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿ ಕೊಂಡರು. ಈ ವೇಳೆ ವಿದಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡರಾದ ಹೆಚ್.ವಿ.ರಾಜೀವ್, ಅರುಣ್ ಕುಮಾರ್‍ಗೌಡ ಹಾಗೂ ಇನ್ನಿ ತರರು ಶುಭ ಕೋರಿದರು.

ಅನ್ನಸಂತರ್ಪಣೆ: ಜ್ಯೋತಿನಗರದಲ್ಲಿ ರುವ ನಿರಾಶ್ರಿತರ ಪುನರ್ವಸತಿ ಕೇಂದ್ರ ದಲ್ಲಿ ಪಾಲಿಕೆ ಸದಸ್ಯ ಎಂ.ಸತೀಶ್ ಆಯೋ ಜಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಕೇಂದ್ರದಲ್ಲಿರುವ 450 ನಿರಾಶ್ರಿತರಿಗೆ ಒಬ್ಬಟ್ಟಿನೊಂದಿಗೆ ಊಟ ಬಡಿ ಸುವ ಮೂಲಕ ಜನ್ಮದಿನವನ್ನು ಆಚರಿ ಸಿದರು. ಸಂಸ್ಥೆಯ ಆವರಣದಲ್ಲಿ ಕೇಕ್ ಕತ್ತರಿಸಿ ಬೆಂಬಗಲಿಗರು ಹಾಗೂ ನಿರಾಶ್ರಿತ ರಿಗೆ ವಿತರಿಸಿದರು. ಇದೇ ವೇಳೆ ಪತ್ರಕರ್ತ ರೊಂದಿಗೆ ಆರ್.ಅಶೋಕ್ ಮಾತನಾಡಿ, ಆಡಂಬರವಿಲ್ಲದೆ ಜನ್ಮ ದಿನವನ್ನು ನಿರಾ ಶ್ರಿತರ ಕೇಂದ್ರದಲ್ಲಿ ಆಚರಿಸಿಕೊಂಡಿದ್ದೇನೆ. ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದೇನೆ ಎಂದರು.

Translate »